ಅಡಿಕೆ ಮಾರುಕಟ್ಟೆ | Arecanut Market | ಚಾಲಿ ಅಡಿಕೆಯಲ್ಲಿ ಸಹಜ ಏರಿಳಿತ | ಪಠೋರ ಧಾರಣೆಯಲ್ಲಿ ಇಳಿಕೆ ಮಾಡಿದ ಕ್ಯಾಂಪ್ಕೋ | ಅಡಿಕೆ ಧಾರಣೆಯಲ್ಲಿ ಮುಂದಿರುವ ಮಾಸ್‌ |

September 22, 2022
11:02 AM

ಅಡಿಕೆ ಮಾರುಕಟ್ಟೆಯಲ್ಲಿ(Arecanut Market) ಸ್ವಲ್ಪ ಪ್ರಮಾಣದಲ್ಲಿ ಮಾರುಕಟ್ಟೆ ಸಹಜವಾದ ಏರಿಳಿದ ಕಂಡಿದೆ. ಗುರುವಾರ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಪಠೋರ ಹಾಗೂ ಇತರ ಅಡಿಕೆ ದರ 5 ರೂಪಾಯಿ ಇಳಿಕೆ ಮಾಡಿದೆ.ಸದ್ಯ 385 ರೂಪಾಯಿಗೆ ಖರೀದಿ ನಡೆಯುತ್ತಿದೆ. ಆದರೆ ಅಡಿಕೆ ಧಾರಣೆ ಕಳೆದ ಎರಡು ವಾರದಿಂದ ಸ್ಥಿರವಾಗಿದೆ. ಈ ನಡುವೆ ಸಹಕಾರಿ ಸಂಸ್ಥೆ ಮಾಸ್‌ , ವಿಟ್ಲದ ಪಿಂಗಾರ  ಸಂಸ್ಥೆ ಬಾರಿ ಅಡಿಕೆ ಧಾರಣೆಯಲ್ಲಿ ಕ್ಯಾಂಪ್ಕೋಗಿಂತ ಮುಂದಿದೆ. ಖಾಸಗಿ ವಲಯದಲ್ಲಿ ಅಡಿಕೆ ಧಾರಣೆ ಸ್ಥಿರವಾಗಿದೆ.

Advertisement
Advertisement

ಕ್ಯಾಂಪ್ಕೋದಲ್ಲಿ ಚಾಲಿ ಹೊಸ ಅಡಿಕೆ 475 ,ಮಾಸ್‌- 485 ,ಪಿಂಗಾರ ಸಂಸ್ಥೆಯಲ್ಲಿ 485 ಹಾಗೂ ಖಾಸಗಿ ಮಾರುಕಟ್ಟೆಯಲ್ಲಿ 485 ರೂಪಾಯಿಗೆ ಖರೀದಿ ನಡೆಯುತ್ತಿದೆ. ಕ್ಯಾಂಪ್ಕೋ ಧಾರಣೆ ಮಾತ್ರಾ ಉಳಿದೆಲ್ಲಾ ಸಂಸ್ಥೆಗಳು, ಖಾಸಗಿ ಮಾರುಕಟ್ಟೆಗಿಂತ 10 ರೂಪಾಯಿ ಕಡಿಮೆ ಇದೆ.  ಹಳೆ ಚಾಲಿ ಅಡಿಕೆಗೆ 560 ರೂಪಾಯಿಗೆ ಕ್ಯಾಂಪ್ಕೋ ಖರೀದಿ ಮಾಡುತ್ತಿದ್ದರೆ ಮಾಸ್‌- 560 ,ಪಿಂಗಾರ ಸಂಸ್ಥೆಯಲ್ಲಿ 565 ಹಾಗೂ ಖಾಸಗಿ ಮಾರುಕಟ್ಟೆಯಲ್ಲಿ 565-570 ರೂಪಾಯಿಗೆ ಖರೀದಿ ನಡೆಯುತ್ತಿದೆ.

ಚಾಲಿ ಪಠೋರಕ್ಕೆ ಸಹಜವಾಗಿಯೇ ಈಗ ಮಾರುಕಟ್ಟೆಯಲ್ಲಿ ಸ್ವಲ್ಪ ಬೇಡಿಕೆ ಕಡಿಮೆ ಇರುತ್ತದೆ. ಹಾಗೆಂದು ಧಾರಣೆ ಇಳಿಕೆ ಮಾಡುವಷ್ಟು ಬೇಡಿಕೆ ಕುಸಿತ ಇರುವುದಿಲ್ಲ. ಮಾರುಕಟ್ಟೆಯಲ್ಲಿ ಇಂತಹ ವ್ಯತ್ಯಾಸಗಳು ಸಹಜವಾಗಿಯೇ ಇರುತ್ತದೆ. ಅಡಿಕೆ ಧಾರಣೆ ಇನ್ನಷ್ಟು ಸ್ಥಿರತೆಯತ್ತ ಸಾಗುತ್ತಿದೆ. ಚೌತಿ ಬಳಿಕ ಹೊಸ ಅಡಿಕೆ ಮಾರುಕಟ್ಟೆ ಪ್ರವೇಶವಾಗುತ್ತದೆ. ಈ ಬಾರಿ ಮಳೆಯ ಕಾರಣದಿಂದ ಸ್ವಲ್ಪ ತಡವಾಗಿ ಅಡಿಕೆಯು ಮಾರುಕಟ್ಟೆ ಪ್ರವೇಶ ಮಾಡುತ್ತದೆ. ಈ ಸಂದರ್ಭದಲ್ಲಿ ಒಮ್ಮೆ ಅಡಿಕೆ ಮಾರುಕಟ್ಟೆಯಲ್ಲಿ ವ್ಯತ್ಯಾಸವಾಗುವುದನ್ನು ಅಡಿಕೆ ಬೆಳೆಗಾರರು ಗಮನಿಸುವುದು ಉತ್ತಮ.

 

Advertisement

Advertisement
Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬಾಹ್ಯಾಕಾಶ ನಿಲ್ದಾಣದಲ್ಲಿರುವ ಶುಕ್ಲಾ ಜೊತೆ ಪ್ರಧಾನಿ ವಿಡಿಯೋ ಸಂವಾದ
June 29, 2025
8:36 PM
by: The Rural Mirror ಸುದ್ದಿಜಾಲ
ಗ್ರಾಮೀಣರಿಗೆ ಆಧುನಿಕ ತಂತ್ರಜ್ಞಾನದ ಮೂಲಕ ಸೇವೆ | ಸಿಎಸ್‌ಸಿ ಮೊಬೈಲ್‌ ವಾಹನ |
June 29, 2025
8:24 PM
by: The Rural Mirror ಸುದ್ದಿಜಾಲ
ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಸೌಲಭ್ಯಕ್ಕೆ ರೈತರ ಸೌಲಭ್ಯಕ್ಕೆ ಆಹ್ವಾನ
June 29, 2025
8:10 PM
by: The Rural Mirror ಸುದ್ದಿಜಾಲ
ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ನೈರುತ್ಯ ಮುಂಗಾರು ಸಾಮಾನ್ಯ
June 29, 2025
8:03 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group