ಅಡಿಕೆ ಮಾರುಕಟ್ಟೆ | ಅಡಿಕೆ ಆಮದು ನಿಷೇಧ ಮಾಡಿದ ನೇಪಾಳ | ಅಡಿಕೆ ಕಳ್ಳ ಸಾಗಾಣಿಕೆಗೆ ಇನ್ನೊಂದು ತಡೆ | ಅಡಿಕೆ ಮಾರುಕಟ್ಟೆ ಮತ್ತೆ ಚೇತರಿಕೆ ಸಾಧ್ಯತೆ ? |

October 5, 2021
9:57 PM

ಅಡಿಕೆಯನ್ನು ನೇಪಾಳ ಸರಕಾರ ಆಮದು ನಿಷೇಧಗಳ ಪಟ್ಟಿಯಲ್ಲಿ ಸೇರಿಸಿದೆ. ಅಡಿಕೆ ಆಮದಿಗಾಗಿ ಯಾವುದೇ ವಿದೇಶಿ ವಿನಿಮಯ ಸೌಲಭ್ಯಗಳನ್ನು ಒದಗಿಸುವುದಿಲ್ಲ ಎಂದೂ ನೇಪಾಳ ಸರಕಾರ ಹೇಳಿದೆ. ಇದರಿಂದ ಭಾರತದೊಳಕ್ಕೆ ನೇಪಾಳ ಮೂಲಕವಾಗಿ ಆಗಮಿಸುತ್ತಿದ್ದ ಅಡಿಕೆಗೆ ತಡೆಯಾಗಬಹುದಾಗಿದೆ. ಹೀಗಾಗಿ ಮತ್ತೆ ಅಡಿಕೆ ಮಾರುಕಟ್ಟೆಯಲ್ಲಿ ಸಂಚಲನ ಉಂಟಾಗಿದೆ.

ಕಳೆದ ಮಾರ್ಚಲ್ಲಿ,  ನೇಪಾಳ  ಸರಕಾರವು  ಕೃಷಿ ಉತ್ಪನ್ನಗಳ ಆಮದಿನ ಮೇಲಿನ ನಿರ್ಬಂಧವನ್ನು ಷರತ್ತುಬದ್ಧವಾಗಿ ಸಡಿಲಿಸಿತು. ಇದರಿಂದಾಗಿ ವ್ಯಾಪಾರಿಗಳು ತಲಾ 15,000 ಟನ್‌ಗಳಷ್ಟು ಅಡಿಕೆ ಮತ್ತು ಕಾಳುಮೆಣಸು ಮತ್ತು 5,000 ಟನ್‌ಗಳಷ್ಟು ಖರ್ಜೂರವನ್ನು  ಕೈಗಾರಿಕಾ ಉದ್ದೇಶಗಳಿಗಾಗಿ ಬಳಸಲು ಆಮದು ಮಾಡಿಕೊಳ್ಳಬಹುದಾಗಿತ್ತು. ಹೀಗೆ ನೇಪಾಳಕ್ಕೆ ಬಂದ ಅಡಿಕೆಯ ಬಹುಪಾಲು ಕಳ್ಳಸಾಗಾಣಿಯ ಮೂಲಕ ಭಾರತಕ್ಕೆ ಸಾಗಾಟ ಮಾಡಿರುವುದನ್ನು ನೇಪಾಳ ಪತ್ತೆ ಮಾಡಿದೆ.

ಕೊರೋನಾ ಕಾರಣದಿಂದ  2019-20 ರ ಮಾರ್ಚ್ 24 ರಂದು ಲಾಕ್‌ಡೌನ್ ಹೇರಿದ ನಂತರ ವಿದೇಶಿ ಕರೆನ್ಸಿ ಕುಸಿತವನ್ನು ತಡೆಗಟ್ಟಲು, ಐಷಾರಾಮಿ ವಾಹನಗಳ ಜೊತೆಗೆ ದುಬಾರಿ ಖಾದ್ಯಗಳ ಆಮದನ್ನು ಸರಕಾರ ಸಂಪೂರ್ಣವಾಗಿ ನಿಷೇಧಿಸಿತು. ನಂತರ,  ಒತ್ತಡಕ್ಕೆ ಮಣಿದ ಸರಕಾರವು ಈ ನಿಟ್ಟಿನಲ್ಲಿ ಕೆಲವು ಸಡಿಲಿಕೆ ಮಾಡಿತ್ತು. ಅದರಲ್ಲಿ ಅಡಿಕೆ, ಕಾಳುಮೆಣಸು ಸೇರಿದಂತೆ ವಿವಿಧ ಕೃಷಿ ವಸ್ತುಗಳು ಇದ್ದವು. ಇತ್ತೀಚಿನವರೆಗೂ ಹೀಗೆ ಆಮದಾದ  ಸರಕುಗಳನ್ನು ಮೂರನೇ ದೇಶಗಳಿಂದ ಆಮದು ಮಾಡಿಕೊಂಡು ಗಮನಾರ್ಹ ಪ್ರಮಾಣದಲ್ಲಿ ಈ ಆಮದುಗಳನ್ನು ಭಾರತಕ್ಕೆ ಕಳ್ಳಸಾಗಣೆ ಮಾಡಿರುವುದು ಕಂಡುಬಂದಿತ್ತು.

ಈಗ ಕಾಳುಮೆಣಸು, ಖರ್ಜೂರ, ಮತ್ತು ಅಡಿಕೆ ಸೇರಿದಂತೆ ಇನ್ನಿತರ ವಸ್ತುಗಳ ಆಮದನ್ನು ನೇಪಾಳ ಸರಕಾರ ಸಂಪೂರ್ಣವಾಗಿ ನಿಷೇಧಿಸಿದ್ದು ಆಮದು ನಿಷೇಧಿತ ಪಟ್ಟಿಯಲ್ಲಿರುವ ವಸ್ತುಗಳಿಗೆ  ವಿದೇಶಿ ವಿನಿಮಯ ಸೌಲಭ್ಯಗಳನ್ನು ಒದಗಿಸದಂತೆ ವಾಣಿಜ್ಯ ಇಲಾಖೆಯು ಪತ್ರವನ್ನೂ ಹೊರಡಿಸಿದೆ. ಹೀಗಾಗಿ ಸದ್ಯ ನೇಪಾಳ ಮೂಲಕ ಭಾರತಕ್ಕೆ ಅಡಿಕೆ ಬರುವ ಸಾಧ್ಯತೆಗಳು ಇನ್ನಷ್ಟು ಕಡಿಮೆಯಾಗಿದೆ.

ಈ ನಡುವೆಯೇ ಅಸ್ಸಾಂ ಗಡಿಯಲ್ಲಿ  ಮತ್ತೆ ಅಡಿಕೆ ಕಳ್ಳಸಾಗಾಟವನ್ನು ಅಸ್ಸಾಂ ಗಡಿಭದ್ರತಾ ಪಡೆಯುವ ವಶಕ್ಕೆ ಪಡೆದುಕೊಂಡಿದೆ. ಮಿಜೋರಾಂನಲ್ಲಿ ನಿಯೋಜಿಸಲಾಗಿರುವ ಅಸ್ಸಾಂ ಗಡಿಭದ್ರತಾ ಸಿಬ್ಬಂದಿ ಚಂಪೈ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ  13.99 ಲಕ್ಷ ಮೌಲ್ಯದ ಅಡಿಕೆ  ವಶಪಡಿಸಿಕೊಂಡಿದ್ದಾರೆ. ಇನ್ನೊಂದು ಪ್ರಕರಣದಲ್ಲಿ 55 ಚೀಲಗಳಷ್ಟು ಅಡಿಕೆಯನ್ನು ಚಂಪಾಯಿಯ ಪ್ರದೇಶದಿಂದ ವಶಪಡಿಸಿಕೊಂಡಿದೆ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಜಗತ್ತು ನಮ್ಮ ಜೊತೆಗಿದೆ ಎಂಬ ಭ್ರಮೆ
August 26, 2026
5:00 PM
by: ಮಹೇಶ್ ಪುಚ್ಚಪ್ಪಾಡಿ
ತೆಂಗಿನ ಎಣ್ಣೆಯಿಂದ ವಿಮಾನದ ಇಂಧನ ? ಜೆಟ್‌ ಎಂಜಿನ್‌ ಪರೀಕ್ಷೆಯಲ್ಲಿ ಕುತೂಹಲ ಮೂಡಿಸಿದ ಫಲಿತಾಂಶ
August 26, 2026
10:44 AM
by: ದ ರೂರಲ್ ಮಿರರ್.ಕಾಂ
ಕೃಷಿ ಇನ್ನು ಕೇವಲ ಬೆಳೆ ಬೆಳೆಯುವುದಲ್ಲ – ಯುವಕರಿಗೆ ಸ್ಟಾರ್ಟ್‌ಅಪ್ ಕ್ಷೇತ್ರ
August 26, 2026
6:52 AM
by: ದ ರೂರಲ್ ಮಿರರ್.ಕಾಂ
ಬರಪೀಡಿತ ಪ್ರದೇಶಗಳ ರೈತರಿಗೆ ಗುಡ್‌ನ್ಯೂಸ್ ; ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ
August 25, 2026
10:36 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror