ಬೇಸಿಗೆಯಲ್ಲಿ ಸಣ್ಣ ಅಡಿಕೆ ಸಸಿಗಳಿಗೆ ಮೈಟ್ ಬಾಧೆ ಸಾಮಾನ್ಯ. ಅದರಲ್ಲೂ, ನೀರು ಮತ್ತು ನೆರಳಿನ ನಿರ್ವಹಣೆ ಸರಿಯಿಲ್ಲದ ತೋಟಗಳಲ್ಲಿ ಇದರ ಬಾಧೆ ಇನ್ನೂ ಹೆಚ್ಚು. ಆದರೆ, ಕಳೆದ ಎರಡು ವರ್ಷಗಳಿಂದ ದೊಡ್ಡ ಮರಗಳನ್ನೂ ಇದು ಬಾಧಿಸುತ್ತಿದೆ.……… ಮುಂದೆ ಓದಿ…….
“ಅಡಿಕೆ ಮರದ ಸೋಗೆಗಳು ಹಳದಿಯಾಗುತ್ತಿವೆ. ಕಳೆದ ಒಂದು ವಾರದಿಂದ ಅದರ ಲಕ್ಷಣ ಹೆಚ್ಚಾಗುತ್ತಿದೆ, ಯಾಕಿರಬಹುದು? ಒಮ್ಮೆ ತೋಟಕ್ಕೆ ಭೇಟಿ ನೀಡಬಹುದೇ?” ಸವಣೂರಿನ ಕೃಷಿಕರೊಬ್ಬರ ಪ್ರಶ್ನೆ. ಜನವರಿ ಮತ್ತು ಫೆಬ್ರವರಿ ತಿಂಗಳ ಇಬ್ಬನಿ ಬೀಳುವ ಸಮಯದಲ್ಲಿ ಬಿಸಿಲು ಬೀಳುವ ಎಲೆಯ ಭಾಗವು ಹಳದಿಯಾಗುವುದ್ದಿದೆ. ಈ ವರ್ಷ ಇದು ಸ್ವಲ್ಪ ಹೆಚ್ಚು. ಬಹುಶಃ, ಗಾಳಿಯ ಆರ್ದ್ರತೆ ಕಡಿಮೆಯಿದ್ದದ್ದು ಅದಕ್ಕೆ ಪೂರಕವಾಗಿರಬಹುದು. ಹಾಗಾಗಿ, ಕರೆ ಮಾಡಿದ ಕೃಷಿಕರಿಗೆ ಅಡಿಕೆ ಮರದ ಚಿತ್ರ ಕಳಿಸಲು ಹೇಳಿ ನಂತರ ಮೈಟ್ ಇದೆಯೇ ಎಂದು ಪರೀಕ್ಷಿಸಲು ಹೇಳಿದೆ. ಆಶ್ಚರ್ಯಕರವಾಗಿ ದೊಡ್ಡ ಮರಗಳ ಎಲೆಯಲ್ಲಿ ಮೈಟ್ ಲಕ್ಷಣವಿತ್ತು. ಫೆಬ್ರವರಿಯಲ್ಲಿ ದೊಡ್ಡ ಮರಗಳಿಗೆ ಮೈಟ್ ಸಾಮಾನ್ಯವಾಗಿ ಬಾಧಿಸುವುದು ಕಡಿಮೆ. ಮಾರ್ಚ್ ಮೇ ತಿಂಗಳಲ್ಲಿ ಹೆಚ್ಚು. ಅಲ್ಲದೆ, ಕಳೆದ ಒಂದು ವಾರದಿಂದ ಕೆಲವು ಸಸಿ ತೋಟ ಮತ್ತು ಫಲ ನೀಡುವ ತೋಟಗಳಲ್ಲಿ ಇದರ ಬಾಧೆ ಕಾಣಿಸಿಕೊಂಡಿದ್ದು, ಈ ವರ್ಷ ಮೈಟ್ ಹಾವಳಿ ಹೆಚ್ಚಾಗುವ ಸಾಧ್ಯತೆ ಇದೆ. ಆದುದರಿಂದ, ನಾವು ಎಚ್ಚರಿಕೆ ವಹಿಸಬೇಕಾಗಿದೆ.
ಗುರುತಿಸುವುದು ಹೇಗೆ: ನುಸಿ ಅಥವಾ ಮೈಟ್ ಅತ್ಯಂತ ಸಣ್ಣ ಗಾತ್ರವನ್ನು ಹೊಂದಿದ್ದು, ಬರಿಗಣ್ಣಿನಲ್ಲಿ ಸುಲಭವಾಗಿ ಗುರುತಿಸುವುದು ಕಷ್ಟ. ಬಿಳಿ ನುಸಿಯು ಬಿಳಿ ಬಣ್ಣದ ಬಲೆಯೊಳಗೆ ಅವಿತುಕೊಂಡು ರಸಹೀರುತ್ತವೆ. ಹಾಗಾಗಿ, ಬೆರಳ ತುದಿಯಿಂದ ಅಡಿಕೆ ಎಲೆಯ ಅಡಿ ಭಾಗವನ್ನು ಉಜ್ಜಿದಾಗ ಬಿಳಿ ಬಣ್ಣದ ಬಲೆ ಅಥವಾ ಕೆಂಪು ಬಣ್ಣ ಬೆರಳ ತುದಿಗೆ ಅಂಟಿಕೊಂಡರೆ ಮೈಟ್ ಕೀಟವೆಂದು ಗುರುತಿಸಬಹುದು.
ನಿರ್ವಹಣೆ:
ಅಡಿಕೆಯ ಕೀಟ ಬಾಧೆಯ ಬಗ್ಗೆ ಸಿಪಿಸಿಆರ್ಐ ನಿರ್ದೇಶಕರಿಂದ ಮಾಹಿತಿ. ಸಿಪಿಸಿಆರ್ಐ ವಿಜ್ಞಾನಿ ಡಾ.ಭವಿಷ್ಯ ಅವರು ಈ ಹಿಂದೆ ನಡೆದ ಕೃಷಿ ಮಾಹಿತಿ ಕಾರ್ಯಕ್ರಮಗಳಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದರು.ಅವರ ಮಾಹಿತಿ ಹಾಗೂ ಸಿಪಿಸಿಆರ್ಐ ನಿರ್ದೇಶಕರ ಮಾಹಿತಿ ಮೇಲಿದೆ.
During the dew-laden months of January and February, the exposed portions of the leaves exhibit a yellowing phenomenon. The likelihood of mite infestation decreases for larger trees by February. The situation in March exceeds that of May in terms of potential impact. There is an anticipated increase in mite infestations this year; therefore, it is imperative that precautions are duly taken.
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಈ ಬಾರಿ ಫೆಬ್ರವರಿ ತಿಂಗಳಲ್ಲಿ 34 ಡಿಗ್ರಿ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ…
ಪ್ರವಾಸಿಗರು ಸೇರಿದಂತೆ ಜನರು ಮುಳ್ಳಯ್ಯನಗಿರಿ ಪರ್ವತ ಶ್ರೇಣಿ ಹಾಗೂ ಅರಣ್ಯ ಪ್ರದೇಶಕ್ಕೆ ತೆರಳಿ…