ಅಡಿಕೆ ಬೆಳೆಗಾರರಿಗೆ ಬೀಸಿಗೆ ಕಾಲ ಕಳೆದು ಮಳೆಗಾಲದ ಆರಂಭದ ವೇಳೆ ವಿಪರೀತವಾಗಿ ಕಾಡುವ ಸಮಸ್ಯೆ ಎಳೆ ಅಡಿಕೆ ಬೀಳುವುದು. ಇದಕ್ಕೆ ಬಹುಪಾಲು ಕಾರಣ ಪೆಂತಿ ಕೀಟ. ಇದೀಗ ಈ ಕೀಟಿ ನಿಯಂತ್ರಣಕ್ಕೆ ರಾಸಾಯನಿಕ ರಹಿತವಾಗಿ ನಿಯಂತ್ರಣ ಮಾಡುವ ಅಧ್ಯಯನವನ್ನು ಸಿಪಿಸಿಆರ್ಐ ವಿಜ್ಞಾನಿಗಳು ಆರಂಭಿಸಿದ್ದಾರೆ.
ಪುತ್ತೂರಿನ ಬಲ್ನಾಡಿನ ಕೃಷಿಕ ಸುರೇಶ್ ಭಟ್ ಅವರ ಕೃಷಿ ಭೂಮಿಯಲ್ಲಿ ಸಿಪಿಸಿಆರ್ ಐ ವತಿಯಿಂದ ನಡೆದ ಸಂವಾದ ಕಾರ್ಯಕ್ರಮದಲ್ಲಿ ವಿಜ್ಞಾನಿ ಡಾ.ಮಧು ಅವರು ಮಾಹಿತಿ ನೀಡಿದರು. ಅಡಿಕೆ ಬೀಳುವುದಕ್ಕೆ ಮುಖ್ಯವಾದ ಕಾರಣ ಪೆಂತಿ ಕೀಟ. ಹೆಚ್ಚಾಗಿ ಈ ಕೀಟವು ಅಲಸಂಡೆಯಲ್ಲಿರುತ್ತದೆ, ತಾತ್ಕಾಲಿಕವಾಗಿ ಅಡಿಕೆ ಹಿಂಗಾರಕ್ಕೆ ಬರುತ್ತದೆ. ಈ ಸಂದರ್ಭದಲ್ಲಿ ಕೀಟವು ಅಡಿಕೆ ರಸ ಹೀರುವ ಕಾರಣದಿಂದ ಅಡಿಕೆ ಬೀಳುತ್ತದೆ. ಸದ್ಯ ರಾಸಾಯನಿಕ ಮಾತ್ರವೇ ಪರಿಹಾರವಾಗಿದೆ. ಹೆಚ್ಚುರಾಸಾಯನಿಕ ಸಿಂಪಡಣೆ ಮಾಡುವುದು ಕೃಷಿ ಬೆಳವಣಿಗೆ ದೃಷ್ಟಿಯಿಂದ ಹಾನಿಕಾರಕವಾದ ಕಾರಣ ಇದೀಗ ರಾಸಾಯನಿಕ ರಹಿತವಾದ ಪ್ರಯೋಗ ನಡೆಯುತ್ತಿದೆ. ರಾಸಾಯನಿಕ ರಹಿತವಾದ ಅಧ್ಯಯನ ಪ್ರಾರಂಭವಾಗಿದೆ. ಈ ಫಲಿತಾಂಶ ಬರಲು ಸಮಯ ಇದೆ, ಪ್ರಾರಂಭದ ಹಂತದಲ್ಲಿ ಈ ಪ್ರಯೋಗ ಇದೆ. ಮುಂದಿನ ದಿನಗಳಲ್ಲಿ ಕೃಷಿಕರಿಗೆ ಸಿಗಬಹುದು ಎಂದು ಡಾ.ಮಧು ಹೇಳಿದರು.
ಅನಗತ್ಯವಾಗಿ ರಾಸಾಯನಿಕ ಸಿಂಪಡಣೆ ಮಾಡುವುದು ಕಡಿಮೆ ಮಾಡಬೇಕಿದೆ. ವಿಷ ಸಿಂಪಡಣೆಯಿಂದ ಇತರ ಕೀಟಗಳೂ ನಾಶವಾಗುತ್ತದೆ. ಅನೇಕ ಕೀಟಗಳು ನಮಗೆ ಮಿತ್ರವಾಗಿರುತ್ತದೆ. ವಾತಾವರಣ ಶುದ್ಧತೆ ಹೆಚ್ಚಾಗಬೇಕು, ಆಗ ಆಹಾರ ಸರಪಳಿಯೂ ಬೆಳೆಯುತ್ತದೆ. ವಿಷ ಸಿಂಪಡಣೆಯ ಕಾರಣದಿಂದ ಗೊತ್ತಿಲ್ಲದೇ ಯಾವುದೋ ಒಂದು ಜಾತಿಯ ಕೀಟ ನಾಶವಾಗುತ್ತದೆ. ಟಾರ್ಗೆಟ್ ಕೀಟದ ಜೊತೆ ಇನ್ನೊಂದು ಕೀಟವೂ ನಾಶವಾಗುತ್ತದೆ.
ಏಪ್ರಿಲ್ ಮಧ್ಯದ ವೇಳೆಗೆ ದೆಹಲಿಯಲ್ಲಿ ತಾಪಮಾನವು 40 ಡಿಗ್ರಿಗಿಂತ ಹೆಚ್ಚಾಗಬಹುದು, ಈ ಬಾರಿ…
ಗುಜ್ಜೆ ರೋಲ್ ಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಮೊದಲಿಗೆ ಗುಜ್ಜೆ ಕಟ್…
ಹಿಂದೂಗಳ ಪವಿತ್ರ ಯಾತ್ರಾಸ್ಥಳ, ವಾರ್ಷಿಕ ಪವಿತ್ರ ಅಮರನಾಥ ಯಾತ್ರೆ ಜೂನ್ 29 ರಿಂದ, …
ಡೀಸೆಲ್ ದರ ಹೆಚ್ಚಳವನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು, ಟೋಲ್ ಶುಲ್ಕ ಕಡಿಮೆ ಮಾಡಬೇಕು,…
ಅಡಿಕೆ ಬೆಳೆ ರಾಜ್ಯದಲ್ಲಿ ಮಾತ್ರವಲ್ಲ ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ವಿವಿಧ ಕಡೆಗಳಲ್ಲಿ ವಿಸ್ತರಣೆ…
ಶುದ್ಧತೆಯ ವಿಚಾರ ಬಂದಾಗ ನಂಬಿಕೆಯೂ ಮುಖ್ಯ. ಅದಕ್ಕಾಗಿ, 8 ದಶಕಗಳಿಂದ ನಿಮ್ಮ ಎದುರಿನಲ್ಲಿ…