Advertisement
MIRROR FOCUS

ಅಡಿಕೆ ಭವಿಷ್ಯ | ಅಡಿಕೆ ಮಾತ್ರ ಅಲ್ಲ-ಮಿಶ್ರ ಬೆಳೆಯ ಕಡೆಗೆ ಆದ್ಯತೆ | ಮೇಘಾಲಯದಲ್ಲಿ ಆರಂಭವಾಗಿದೆ ಸರ್ಕಾರದಿಂದಲೇ ಅಭಿಯಾನ |

Share

ಕೃಷಿಕರ  ಭವಿಷ್ಯದ ದೃಷ್ಟಿಯಿಂದ ಅಡಿಕೆ ಬೆಳೆ ಮಾತ್ರಾ ಅಲ್ಲ, ಅದರ ಜೊತೆಗೆ ಸಮಗ್ರ ಕೃಷಿಯ ಅಗತ್ಯವಿದೆ ಎಂಬುದನ್ನು ಮೇಘಾಲಯ ಸರ್ಕಾರ ರೈತರಿಗೆ ತಿಳಿಸುತ್ತಿದೆ. ಇದಕ್ಕಾಗಿ ಸರ್ಕಾರದ ಮಿಷನ್ ಫಾರ್ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಆಫ್ ಹಾರ್ಟಿಕಲ್ಚರ್ (ಎಂಐಡಿಹೆಚ್) ಅಡಿಯಲ್ಲಿ ಸಮಗ್ರ ಕೃಷಿಯ ಕಡೆಗೆ ಆದ್ಯತೆ ನೀಡುವ ಯೋಜನೆಗಳನ್ನು ಹಾಕಿಕೊಂಡಿದೆ. 

ಏಕ ಬೆಳೆ ಯಾವತ್ತೂ ರೈತರ ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿಯಾಗಿದೆ. ಇದೀಗ ಮೇಘಾಲಯ ಸರ್ಕಾರವು ಅಡಿಕೆಯನ್ನು ಕೇಂದ್ರೀಕರಿಸಿಕೊಂಡು ಅಡಿಕೆಯ ಭವಿಷ್ಯನ್ನೂ ಗಮನದಲ್ಲಿರಿಸಿಕೊಂಡು ರೈತರನ್ನು ಜಾಗೃತಗೊಳಿಸುತ್ತಿದೆ. ಈಗ ಅಡಿಕೆಗಾಗಿಯೇ ಮಿಷನ್ ಫಾರ್ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಆಫ್ ಹಾರ್ಟಿಕಲ್ಚರ್ (ಎಂಐಡಿಹೆಚ್) ಅಡಿಯಲ್ಲಿ ಇನ್ನು ಮುಂದೆ ಅಡಿಕೆಯ ಪರ್ಯಾಯದತ್ತ ಹೆಜ್ಜೆ ಇರಿಸಿದೆ.  ರೈತರಲ್ಲಿ ಸಮಗ್ರ ಕೃಷಿ ಅಥವಾ ಮಿಶ್ರ ಬೆಳೆಯನ್ನು ಉತ್ತೇಜಿಸಲು ಗಮನ ನೀಡಿದೆ. ಇದು ಹೆಚ್ಚಿದ ಕೃಷಿ ಉತ್ಪನ್ನಗಳೊಂದಿಗೆ ಇತರರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಉದ್ಯಮಶೀಲತೆಯ ವಿವಿಧ ಸಾಧ್ಯತೆಗಳನ್ನು ಸೃಷ್ಟಿಸಿ  ಹಳ್ಳಿಗಳನ್ನು ಸ್ವಾವಲಂಬಿಯನ್ನಾಗಿ ಮಾಡುವುದು ಯೋಜನೆಯ ಉದ್ದೇಶ.

ಅಡಿಕೆಯ ಬಗ್ಗೆ ಮಾತನಾಡಿದ ಮೇಘಾಲಯದ ವೆಸ್ಟ್ ಗಾರೋ ಹಿಲ್ಸ್  ಜಿಲ್ಲಾಧಿಕಾರಿ ರಾಮ್ ಸಿಂಗ್, ಅಡಿಕೆ ತೋಟವು ಆರಂಭದಲ್ಲಿ ಉತ್ತಮ ಆದಾಯವನ್ನು ನೀಡಿದರೂ ಸಹ ಸುಸ್ಥಿರವಾಗಿಲ್ಲ ಎಂದು ಹೇಳಿದ್ದಾರೆ. ಅಡಿಕೆ ತೋಟದ ಹೆಚ್ಚಳವು ಅರಣ್ಯ ಪ್ರದೇಶವನ್ನು ಕಡಿಮೆ ಮಾಡುತ್ತದೆ, ಅದರಲ್ಲೂ ವಿಶೇಷವಾಗಿ ನೀರಿನ ಮೂಲಗಳ ಸುತ್ತಮುತ್ತಲಿನ ಪ್ರದೇಶಗಳನ್ನು ಕಡಿಮೆ ಮಾಡುತ್ತದೆ . ಇದರ  ಪರಿಣಾಮವಾಗಿ ನೀರಿನ ಕೊರತೆ ಭವಿಷ್ಯದಲ್ಲಿ ಕಾಡಬಹುದು  ಎಂದು ಅವರು ಹೇಳಿದ್ದಾರೆ. ಹೀಗಾಗಿ ಈ ಬಗ್ಗೆ ಜಾಗೃತಿ ಅಗತ್ಯ ಎಂದು ರೈತರನ್ನು ಎಚ್ಚರಿಸಿದ್ದಾರೆ. ತೋಟಗಾರಿಕೆಯು ಪರಿಸರದ ಸಂರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು  ಸುಸ್ಥಿರತೆಗಾಗಿ ಕೃಷಿ ಮತ್ತು ಪಶುಸಂಗೋಪನೆ ಸೇರಿದಂತೆ ಸಂಬಂಧಿತ ವಲಯಗಳೊಂದಿಗೆ ಸಮಗ್ರ ಕೃಷಿಯ ಅಗತ್ಯವಿದೆ ಎಂದು ಹೇಳಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

‘ಅರ್ಧ ಎಕರೆ ಸಾಕು… ಹಳ್ಳಿಯಲ್ಲೇ ಜೀವನ ಮಾಡಬಹುದು’ ಈ ಮಾತಿನ ಹಿಂದೆ ಇರುವ ದೊಡ್ಡ ಪ್ರಶ್ನೆ ಏನು..?

“ಅರ್ಧ ಎಕರೆ ಇದ್ದರೂ ಕುಟುಂಬ ಜೀವನ ಮಾಡಬಹುದು” ಎನ್ನುವ ರೈತನ ಮಾತು, ಭೂಮಿ…

5 hours ago

ಭಾರತದ ಆಹಾರ ನಾಳೆ ಬೆಳೆಯೋರು ಯಾರು? ರೈತರ ವಯಸ್ಸು ಹೆಚ್ಚುತ್ತಿದೆ, ಯುವಕರು ಕೃಷಿಯಿಂದ ದೂರವಾಗುತ್ತಿದ್ದಾರೆ..!

ಭಾರತ ಯುವ ದೇಶವಾಗಿದ್ದರೂ ಕೃಷಿಕರ ಸರಾಸರಿ ವಯಸ್ಸು 50–55 ವರ್ಷವಾಗಿದ್ದು, ಗ್ರಾಮೀಣ ಯುವಕರಲ್ಲಿ…

17 hours ago

ಹಸು ಕರು ಹಾಕಿದ ಬಳಿಕದ “ಪ್ಲಾಸೆಂಟಾ” ದಿಂದ ತಯಾರಿಸಬಹುದೇ ನೈಸರ್ಗಿಕ ದ್ರಾವಣ?

ಹಸು ಕರು ಹಾಕಿದ ಬಳಿಕ ಸಿಗುವ ಪ್ಲಾಸೆಂಟಾ ಅಥವಾ ‘ಮಾಸ’ವನ್ನು ತ್ಯಾಜ್ಯವಾಗಿ ಬಿಸಾಡದೆ,…

18 hours ago

ಹವಾಮಾನ ವರದಿ | 07-09-2026 | ಕರ್ನಾಟಕದಲ್ಲಿ ಮುಂದಿನ ಮಳೆಯ ಚಿತ್ರಣ ಹೇಗಿದೆ..?

ಸೆ.8 ರಿಂದ 10ರವರೆಗೆ ಕರಾವಳಿಯಲ್ಲಿ ಮೋಡ ಹೆಚ್ಚಾಗಿ ಅಲ್ಲಲ್ಲಿ ತುಂತುರು ಅಥವಾ ಸಾಮಾನ್ಯ…

1 day ago

ಹೆಬ್ರಿಯ ಗೋಡಂಬಿ ತ್ಯಾಜ್ಯದಿಂದ ಹಡಗುಗಳಿಗೆ ಇಂಧನ..!

ಉಡುಪಿ ಜಿಲ್ಲೆಯ ಹೆಬ್ರಿ ಸಮೀಪ ಗೋಡಂಬಿ ಸಂಸ್ಕರಣಾ ತ್ಯಾಜ್ಯದಿಂದ ಜೈವಿಕ ಇಂಧನ ಮತ್ತು…

1 day ago

ಮಡಿಕೇರಿಯಲ್ಲಿ ಅಡಿಕೆ ಹಾಳೆ ತಟ್ಟೆಗೂ ನಿಷೇಧ..!

ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಅಡಿಕೆ ತಟ್ಟೆ, ಪೇಪರ್ ಕಪ್, ಪೇಪರ್ ಪ್ಲೇಟ್ ಸೇರಿದಂತೆ…

1 day ago