ಅಡಿಕೆ ಹಳದಿ ಎಲೆ ರೋಗದ ಬಗ್ಗೆ ಚಳಿಗಾಲದ ಅಧಿವೇಶನದ ಸದನದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಗಮನ ಸೆಳೆದರು. ಪುತ್ತೂರು ಶಾಸಕ ಸಂಜೀವ ಮಟಂದೂರು ಅವರು ಸಾತ್ ನೀಡಿದರು. ಅಡಿಕೆ ಹಳದಿ ರೋಗ ಪರಿಹಾರ ಹಾಗೂ ಸಂಶೋಧನೆಗೆ ಮೂರು ಕೋಟಿ ರೂಪಾಯಿ ಅನುದಾನವನ್ನು ಎ ಆರ್ ಡಿ ಎಫ್ ಗೆ ನೀಡಬೇಕು ಎಂಬ ಒತ್ತಾಯವನ್ನೂ ಮಾಡಿದ್ದಾರೆ. ವಿಷಯ ಗಮನದ ಬಳಿಕ ಸುದೀರ್ಘ ಚರ್ಚೆ ನಡೆಯಿತು. ಈ ಸಂದರ್ಭ ಸರ್ಕಾರದ ಪರವಾಗಿ ಮಾತನಾಡಿದ ಮುನಿರತ್ನ ಅವರು 16 ಕೋಟಿ ಪರ್ಯಾಯ ಬೆಳೆಗೆ ಅನುಮೋದನೆ ಸರಕಾರ ಬದ್ಧವಾಗಿದೆ. ಸಂಶೋಧನೆಗೆ ಹಣ ನೀಡಲು ಬದ್ಧವಾಗಿದೆ. ಇದರಲ್ಲಿ 817 ಲಕ್ಷ ಲ್ಯಾಬ್ ಹಾಗೂ ಸಂಶೋಧನೆಗೂ ನೀಡಲಾಗುವುದು ಎಂದರು. ಹಳದಿ ಎಲೆ ರೋಗದ ಬಗ್ಗೆ ಸದನದಲ್ಲಿ ಸುಮಾರು 10 ನಿಮಿಷಗಳ ಚರ್ಚೆ ನಡೆಯಿತು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel