Advertisement
MIRROR FOCUS

ಅಡಿಕೆ ಹಳದಿ ಎಲೆ ರೋಗ | ರೋಗ ಹರಡುವ ಕೀಟ ಯಾವುದು ಗೊತ್ತಾ ? |

Share

ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಶೃಂಗೇರಿ, ಕೊಪ್ಪ ಪ್ರದೇಶಗಳಲ್ಲೂ ಅಡಿಕೆ ಹಳದಿ ಎಲೆ ರೋಗದ ಬಾಧೆ ಅಡಿಕೆ ಕೃಷಿಕರನ್ನು ಕಾಡುತ್ತಿದೆ. ಹಳದಿ ಎಲೆ ರೋಗವು ಫೈಟೋಪ್ಲಾಸ್ಮಾ ಎಂಬ ವೈರಸ್‌ನಿಂದ ಬರುತ್ತದೆ. ಆದರೆ ಈ ವೈರಸ್‌ ಹರಡುವ ವಾಹಕವಾಗಿ ಪ್ರೊಟಿಸ್ಟಾ ಮೋಯಿಸ್ಟಾ ಎಂಬ ಕೀಟ ಎಂದು ವಿಜ್ಞಾನಿಗಳು ಹೇಳುತ್ತಿದ್ದರು. ಇದೀಗ ಈ ಕೀಟವನ್ನು ಕೃಷಿಕ ರಮೇಶ್‌ ದೇಲಂಪಾಡಿ ಪರಿಚಯಿಸಿದ್ದಾರೆ. ಅವರ ತೋಟದಲ್ಲಿ ಕಂಡುಬಂದ ಕೀಟದ ಫೋಟೋ ತೆಗೆದಿದ್ದಾರೆ. ವಿಜ್ಞಾನಿಗಳೂ ಈ ಕೀಟದ ಬಗ್ಗೆ ಖಚಿತಪಡಿಸಿದ್ದಾರೆ.

Advertisement
Advertisement

ಅಡಿಕೆಯ ಹಳದಿ ಎಲೆ ರೋಗ ಫೈಟೋಪ್ಲಾಸ್ಮಾದಿಂದ ಬರುತ್ತದೆ ಹಾಗೂ ಈ ವೈರಸ್‌ ಹರಡುವುದು ಕೀಟ. ಈ ಕೀಟವು ಮಳೆಗಾಲದ ಹೊತ್ತಿಗೆ ಗುಂಪಾಗಿ ಇರುತ್ತದೆ. ಅಡಿಕೆ ಮರದ ಅಥವಾ ಗಿಡ ಸೋಗೆಯಲ್ಲಿ ಕುಳಿತು ರಸ ಹೀರುತ್ತವೆ. ಹೀಗೆ ರಸ ಹೀರಿವ ಕೀಟವು ಇನ್ನೊಂದು ಮರಕ್ಕೆ ಹಾರುತ್ತದೆ. ಆ ಮರದಲ್ಲೂ ರಸ ಹೀರುತ್ತವೆ. ಆದರೆ ಒಂದು ವೇಳೆ ಹಳದಿ ಎಲೆ ರೋಗ ಇರುವ ಅಡಿಕೆ ಮರದಲ್ಲಿ ರಸ ಹೀರಿದ್ದರೆ ವೈರಸ್‌ ಇನ್ನೊಂದು ಮರಕ್ಕೆ ವರ್ಗಾವಣೆಯಾಗುತ್ತದೆ. ಹೀಗೇ ಹಳದಿ ಎಲೆ ರೋಗ ಹರಡುತ್ತದೆ ಎಂದು ವಿಜ್ಞಾನಿಗಳು ಹಿಂದೆ ಹೇಳಿದ್ದರು. ಆದರೆ ಇದೀಗ ಈ ಕೀಟವು ತೋಟದಲ್ಲಿ ಪತ್ತೆಯಾಗಿದೆ. ಕೃಷಿಕ ರಮೇಶ್‌ ದೇಲಂಪಾಡಿ ಅವರು ತಮ್ಮ ತೋಟದಲ್ಲಿ ಗಮನಿಸಿದ ಈ ಕೀಟದ ಫೋಟೊ ತೆಗೆದು ವಿಜ್ಞಾನಿಗಳಿಗೆ ಕಳುಹಿಸಿದಾಗ ಖಚಿತ ಪಡಿಸಿದ್ದಾರೆ. ಇಂತಹ ಕೀಟಗಳೇ ವೈರಸ್‌ ವಾಹಕಗಳು ಎಂದಿದ್ದಾರೆ.

Advertisement

ಈ ಪ್ರೊಟಿಸ್ಟಾ ಮೋಯಿಸ್ಟಾ ಕೀಟದ ಗಾತ್ರ ಕೇವಲ ಸೊಳ್ಳೆಯಷ್ಟು ಅಥವಾ ಅದಕ್ಕಿಂತಲೂ ಸಣ್ಣ. ವಿಜ್ಞಾನದ ಪ್ರಕಾರ ಇದರ ಜೀವಿತಾವಧಿ ಕೇವಲ ಒಂದು ತಿಂಗಳು. ತೋಟದಲ್ಲಿ ಇದರ ಸಂಖ್ಯೆಯಲ್ಲಿ ಏರುಪೇರು ಆಗುತ್ತಿರುತ್ತದೆ.ಇದಕ್ಕೆ ಮುಖ್ಯ ಕಾರಣ ಇದರ ನೈಸರ್ಗಿಕ ಶತ್ರುಗಳು.ಈ ನೈಸರ್ಗಿಕ ಶತ್ರುಗಳ ಸಂಖ್ಯೆ ಮಳೆಗಾಲ ಆರಂಭವಾಗುತ್ತಿದ್ದಂತೇ ಕಡಿಮೆಯಾಗುತ್ತದೆ ಮತ್ತು ಮಳೆಗಾಲ ಮುಗಿಯುತ್ತಿದ್ದಂತೇ ಹೆಚ್ಚಾಗುತ್ತದೆ .

Advertisement

ತೋಟದಲ್ಲಿ ಈ ಬಗೆಯ ಕೀಟ ಕಂಡುಬಂತು ಅಂದಾಕ್ಷಣ ಹಳದಿ ಎಲೆ ರೋಗ ಬಂದೇ ಬಿಟ್ಟಿತು ಎನ್ನಲಾಗುವುದಿಲ್ಲ ಎಂದು ಕೃಷಿಕ ರಮೇಶ್‌ ದೇಲಂಪಾಡಿ ಹೇಳುತ್ತಾರೆ. ರೋಗ ಅಥವಾ ವೈರಸ್‌ ಈ ಕೀಟದಲ್ಲಿ ದೇಹದಲ್ಲಿ ಇದ್ದರೆ ಮಾತ್ರಾ ವರ್ಗಾವಣೆಯಾಗುತ್ತದೆ. ರೋಗ ಪಸರುಸುವಿಕೆ ಭಾರೀ ನಿಧಾನ ಎಂಬುದು ಈ ತನಕದ ಅಧ್ಯಯನ . ರೋಗ ಇದ್ದೆಡೆ ಇಂತಹ ಕೀಟಗಳು ಕಂಡುಬಂದರೆ ನಿಯಂತ್ರಣದ ಕಡೆಗೆ ಗಮನಿಸಿದರೆ ಹಳದಿ ಎಲೆ ರೋಗ ಹರಡುವಿಕೆಗೆ ಕಡಿವಾಣ ಹಾಕಬಹುದು.

Advertisement

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮಾವು ಮಾಂತ್ರಿಕ ಮತ್ತು ನಂಬರ್ 1 – ಸುಬ್ರಾಯ ಭಟ್ಟರ 200ಕ್ಕೂ ಹೆಚ್ಚು ನಾಡು ಮಾವು ಹಾಗೂ ಹಲಸು ತಳಿ ಸಂರಕ್ಷಣೆ

ನಾಡು ಮಾವು ಸಂರಕ್ಷಣೆ ಕೆಲಸದ ಮೊದಲ ದಿನವದು. ನವೆಂಬರ್ 2022. ಕಸಿ ಕಡ್ಡಿಗಳನ್ನು…

2 hours ago

ಭಾರತದಲ್ಲಿ ಏರಿದ ತಾಪಮಾನ : ಅತ್ತ ತಾಂಜಾನಿಯಾದಲ್ಲಿ ಭಾರೀ ಮಳೆ, ಪ್ರವಾಹ : 155 ಮಂದಿ ಸಾವು

ಭಾರತದಲ್ಲಿ(India) ಉರಿ ಬಿಸಿಲಿನ ತಾಪ(Heat) ಏರುತ್ತಿದ್ದರೆ ತಾಂಜಾನಿಯಾದಲ್ಲಿ (Tanzania) ಕಳೆದ ವಾರದಿಂದ ಭಾರೀ…

6 hours ago

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಮುಂದಿನ ವಾರ ಕಾಡಲಿದೆ ರಣ ಬಿಸಿಲು : ದೂರ ಸಾಗಿದ ಮಳೆ : ಬಿಸಿ ಗಾಳಿಯ ಮುನ್ಸೂಚನೆ

ಮಳೆ ಬರುವ ಕುರುಹೇ ಇಲ್ಲ. ಎಲ್ಲೆಲ್ಲೂ ಬಿಸಿಗಾಳಿಯ ಅಬ್ಬರ, ನೆತ್ತಿ ಸುಡುವ ಸೂರ್ಯ. ರಾಜ್ಯಾದ್ಯಂತ…

7 hours ago

ಹವಾಮಾನ ವೈಪರೀತ್ಯ | ಕೃಷಿ ಕಾರ್ಮಿಕರಿಗೆ ಈಗ ಬಿಸಿಗಾಳಿ ಸಂಕಷ್ಟ | ಕೃಷಿಗೂ ಸಮಸ್ಯೆ-ಕೃಷಿ ಬೆಳವಣಿಗೆ ಕುಂಠಿತ |

ತಾಪಮಾನ ಏರಿಕೆಯಿಂದ ಹಲವು ಕಡೆ ಸಮಸ್ಯೆಯಾಗುತ್ತಿದೆ. ಕೃಷಿ ನಷ್ಟದ ಜೊತೆಗೆ ಗ್ರಾಮೀಣ ಭಾಗದಲ್ಲಿ…

7 hours ago

ಮಳೆಗಾಗಿ ಪುತ್ತೂರು ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನದಲ್ಲಿ‌ಪರ್ಜನ್ಯ ಜಪ |

ಮಳೆಗಾಗಿ ಪುತ್ತೂರಿನ ಶ್ರೀ‌ಮಹಾಲಿಂಗೇಶ್ವರ ದೇವಳದಲ್ಲಿ‌ ಪರ್ಜನ್ಯ ಜ‌ಪ ನೆರವೇರಿತು.

9 hours ago