ಕರ್ನಾಟಕದ ಕರಾವಳಿಯಲ್ಲಿ ಮೀನುಗಾರಿಕೆ ಅಭಿವೃದ್ಧಿಗಾಗಿ ಹೊಸ ತಂತ್ರಗಾರಿಕೆ | ಸಮುದ್ರಕ್ಕೆ ಕೃತಕ ಬಂಡೆಗಳ ಅಳವಡಿಕೆ | ಮೀನುಗಳ ಆಶ್ರಯ, ಸಂತೋನಾತ್ಪತ್ತಿಗೆ ಹೆಚ್ಚು ಸಹಾಯ

March 13, 2024
2:21 PM

ಕರ್ನಾಟಕ ಕರಾವಳಿಯ(Coastal Karnataka) ಸಮುದ್ರಗಳಲ್ಲಿ(Sea) ಆಯ್ದ ಸ್ಥಳಗಳಲ್ಲಿ ಕೃತಕ ಬಂಡೆಗಳನ್ನು(Artificial reef) ತಂತ್ರಜ್ಞರು(Experts) ಹಾಕುತ್ತಿದ್ದಾರೆ. ಈ ಮೂಲಕ ಮೀನುಗಳ ಆಶ್ರಯಕ್ಕೆ ಹಾಗೂ ಸಂತೋನಾತ್ಪತ್ತಿಗೆ(Fertility) ಇದು ಹೆಚ್ಚು ಸಹಾಯವಾಗಲಿದೆ. ಹಾಗೆ ಅದು ಮುಂದೆ ಮೀನುಗಾರಿಕೆಗೆ(Fishery) ಹೆಚ್ಚು ಅನುಕೂಲವಾಗಲಿದೆ. ಕಡಲಿಗೆ ಬೃಹತ್‌ ಆಕಾರದ ಕಾಂಕ್ರೀಟ್ ಬಂಡೆಗಳು ಲಗ್ಗೆ ಇಟ್ಟಿವೆ. ಈಗಾಗಲೇ ಇರುವ ನೈಸರ್ಗಿಕ ಬಂಡೆಗಳಲ್ಲದೇ ಕರ್ನಾಟಕದ ಪಶ್ಚಿಮ ಕರಾವಳಿಯಲ್ಲಿ ಈಗ ಕೃತಕ ಬಂಡೆಗಳನ್ನು ಅಳವಡಿಸಲಾಗುತ್ತಿದೆ. ಇದರಿಂದಾಗಿ ಸಾಂಪ್ರದಾಯಿಕ ಮೀನುಗಾರಿಕೆಗೆ ಇನ್ನಷ್ಟು ಪ್ರೋತ್ಸಾಹ ಸಿಕ್ಕಂತಾಗಲಿದೆ.

ಇದರ ಮೊದಲ ಭಾಗವಾಗಿ ಭಟ್ಕಳದ ಬೆಳಕೆ ಸಮುದ್ರದಲ್ಲಿ 4-5 ನಾಟಿಕಲ್ ಮೈಲು ದೂರದಲ್ಲಿ ಈ ಬಂಡೆಗಳನ್ನು ಹಾಕಲಾಗಿದೆ. ಒಂದೊಂದು ಬಂಡೆ ಕೂಡ 400 ಕೆಜಿ ತೂಕವನ್ನು ಹೊಂದಿದೆ. ಕ್ರೇನ್ ಸಹಾಯದಿಂದ ಈ ಬಂಡೆಗಳನ್ನು ಹಾಕುತ್ತಿದ್ದು, ಕರ್ನಾಟಕದ 56 ಸಮುದ್ರ ತೀರಗಳಲ್ಲಿ ಈ ಯೋಜನೆ ಜಾರಿ ಬರಲಿದೆ.

ಉಡುಪಿಯಲ್ಲಿ 31 ಹಾಗೂ ಉತ್ತರಕನ್ನಡದಲ್ಲಿ 25 ಜಾಗವನ್ನು ಇದಕ್ಕಾಗಿ ನಿಗದಿ ಪಡಿಸಲಾಗಿದೆ. ಹೀಗೆ ಎಸೆಯುವ ಬಂಡೆಗಳು ಆಳ ಸಮುದ್ರದ ಜೀವ ಸಂತತಿಯ ಹೆಚ್ಚಳದಲ್ಲಿ ಗಣನೀಯ ಪಾತ್ರವಹಿಸುತ್ತವೆ. ಆಳ ಸಮುದ್ರದಲ್ಲಿ ಮೀನುಗಳ ಸಂತತಿ ಹೆಚ್ಚಿಸಲು ಸ‌ಹಾಯಕವಾಗುವ ಈ ಬಂಡೆಗಳು ಜಿಲ್ಲೆಯ ಮೀನುಗಾರರಲ್ಲಿ ಹೊಸ ಭರವಸೆ ಮೂಡಿ‌ಸಿವೆ.

Artificial reefs have been deployed in the sea off these hamlets to attract fish and help re-establish biodiversity in the area.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಒಂದು ಹಕ್ಕಿಯ ಫೋಟೋಗಾಗಿ 7 ತಿಂಗಳು ಕಾಯ್ದ ವ್ಯಕ್ತಿ..!, 60ನೇ ಹುಟ್ಟುಹಬ್ಬವನ್ನೂ ವಿಭಿನ್ನವಾಗಿ ಆಚರಿಸಿದರು..!
June 14, 2026
11:58 PM
by: ಮಹೇಶ್ ಪುಚ್ಚಪ್ಪಾಡಿ
₹1.11 ಕೋಟಿ ಮೌಲ್ಯದ ಕಳಪೆ ಗುಣಮಟ್ಟದ ಅಡಿಕೆ ವಶಕ್ಕೆ – ಮಹಾರಾಷ್ಟ್ರದ ಕೋಲ್ಡ್ ಸ್ಟೋರೇಜ್‌ನಲ್ಲೂ ಕಳಪೆ ಅಡಿಕೆ ದಾಸ್ತಾನು..!
June 14, 2026
10:34 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 14.06.2026 | ಜೂನ್ 20ರವರೆಗೆ ಕರಾವಳಿ-ಮಲೆನಾಡಿನಲ್ಲಿ ಇದೇ ವಾತಾವರಣ| ಎಲ್‌ನಿನೋ ಪ್ರಭಾವದ ನಡುವೆ ಮಳೆ ನೀರು ಸಂಗ್ರಹಕ್ಕೆ ರೈತರಿಗೆ ಸಲಹೆ
June 14, 2026
3:27 PM
by: ಸಾಯಿಶೇಖರ್ ಕರಿಕಳ
ತುಮಕೂರಿನಲ್ಲಿ ಅಡಿಕೆ ಕ್ರಾಂತಿ -ತೆಂಗಿನ ತೋಟಗಳ ಜಾಗದಲ್ಲಿ ಅಡಿಕೆ ಬೆಳೆ..! 94 ಸಾವಿರ ಹೆಕ್ಟೇರ್‌ ದಾಟಿದ ವಿಸ್ತೀರ್ಣ
June 14, 2026
12:52 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror