ಪಶ್ಚಿಮಘಟ್ಟ ಅಂದ ತಕ್ಷಣ ಅತ್ಯಂತ ಸೂಕ್ಷ್ಮ ಪ್ರದೇಶ ಎಂಬ ಧ್ವನಿ ಮಾತ್ರ ಹೊರಡುತ್ತದೆ | ಕಾರ್ಯದಲ್ಲಿ ಇಲ್ಲದ ರಕ್ಷಣೆ

August 7, 2024
10:33 AM

ಬಹಳ ಗಂಭೀರ ಪರಿಸರ ಚರ್ಚೆ ಗಾಡ್ಗೀಳ್(Gadgil), ಕಸ್ತೂರಿ ರಂಗನ್ ವರದಿಗಳು(Kasturi Rangan report) ಮಳೆಗಾಲದಲ್ಲಿ(Rain season) ಗುಡ್ಡ – ಭೂಕುಸಿತ(Land slide) ಆದ ತಕ್ಷಣ ಧುತ್ತೆಂದು ಎದ್ದು ಶುರುವಾಗುತ್ತದೆ. ಜನರ ಮನಸ್ಸನ್ನು ಪರಿಸರ(Environment) ಪರ ಮಾಡುವುದು ಹರ ಸಾಹಸದ ಕೆಲಸ. ಯಾರು ಆದರ್ಶರು… ಈ ದೃಷ್ಟಿಯಿಂದ ಮಾರ್ಗದರ್ಶಿಸಬಲ್ಲರು ಎಂಬ ಪಶ್ನೆಗೆ ಅನೇಕ ಸಲ ಉತ್ತರ ಸಿಗದು. ಅನುಷ್ಠಾನ-ಕಾನೂನು ಜಾರಿ – ನೀತಿ ರೂಪಿಸುವುದು ನಾವೆಲ್ಲರೂ ಒಪ್ಪಿಕೊಂಡ ರಾಜಕಾರಣದ ಮತ್ತು ಅಧಿಕಾರಿಗಳ ವ್ಯವಸ್ಥೆಯಡಿ ಇದೆ.

Advertisement
Advertisement

ಇವತ್ತು ಗ್ರಾಮಗಳಲ್ಲಿ ಜೆಸಿಬಿ(JCB), ದೊಡ್ಡ ಮರಳ ಲಾರಿ-ಟಿಪ್ಪರ್, ಬೋರೆವೆಲ್ ಯಂತ್ರ(Borewell) …ಯಾರ ಕೈಲಿದೆ ? ಇವಕ್ಕೆಲ್ಲ ಕೆಲಸಬೇಕು. ಸುಮ್ಮನೆ ಕೂರುವ ಸ್ವಭಾವ ಅವುಗಳಿಗಿಲ್ಲ ! ಗುಡ್ಡದ ನೆತ್ತಿ ಸವರುವುದೊ, ಗುಡ್ಡದ ಬುಡವನ್ನು ಕೆರೆಯುವುದೊ, ಆಳದ ಕೊಳವೆಬಾವಿ ಕೊರೆಯುವುದೊ ಏನಾದರೊಂದನ್ನು ದಿನನಿತ್ಯ ಮಾಡುತ್ತಿರುತ್ತವೆ.

Advertisement

ಗ್ರಾಮಮಟ್ಟದ ರಾಜಕಾರಣಿಗಳೆ ಬಹುತೇಕ ಇವುಗಳ ಒಡೆಯರು. ಹೆಚ್ಚಿನ ಕಡೆ ಗ್ರಾಮದ ಈ ಪುಟ್ಟ ಪುಡಾರಿಗಳೆ ಇಂದಿನ ಗ್ರಾಮ ಪಂಚಾಯತ್ ಸದಸ್ಯರುಗಳು. ಇವರುಗಳೆ ದೊಡ್ಡ ರಾಜಕಾರಣಿಗಳನ್ನು ಉಳಿಸುವ ಕವಲು ಬೇರುಗಳು. ಪರಸ್ಪರ ಇವರಲ್ಲಿ ಬಹಳ ಸ್ನೇಹ- ಸಂಬಂಧ. ಉಳಿಸುವವರ ದನಿ ಹಾರಾಡುವ ಈ ಪುಡಾರಿಗಳ – ಅಧಿಕಾರಿಗಳ ಮುಂದೆ ಕೇಳುವುದೆ ? ಗೋಮಾಳ, ಹುಲ್ಲುಬನ್ನಿ ಹರಾಜು, ಬ್ಯಾಣ, ಸೊಪ್ಪಿನ ಬೆಟ್ಟ …ಇದು ಆಗಾಗ ಕೇಳುವ ಪದಗಳು. ಕಾಣಲು ಎಲ್ಲಿದೆ ಅದು ? ಸಾತ್ವಿಕ ಜನ ಸಂಘಟನೆಯೊಂದೇ ಪರಿಹಾರ ತರಬಲ್ಲದು… ಉತ್ಸಾಹ ತುಂಬುವ ಭಾಷಣದ ಮಾತು… ಸಂಘಟಿಸುವ ಯುವ ಸಮುದಾಯ ಇಂದು ಗ್ರಾಮದಲ್ಲೆಲ್ಲಿದೆ. ಇದ್ದವರನ್ನು ಒಪ್ಪಿಕೊಳ್ಳುವ ಹಸಿರ ಸಂಗಾತಿ ಗೆಳತಿಯರು ಎಲ್ಲಿದ್ದಾರೆ ?

ಗ್ರಾಮದಲ್ಲಿ ಒಂದು ಕಾಲದಲ್ಲಿ ಸಹೋದರರಂತೆ ಇದ್ದ ವಿವಿಧ ಸಮುದಾಯಗಳ ಒಡೆದು ರಾಜಕಾರಣ ಮಾಡುವ ಪಕ್ಷಗಳಿಗೆ ಹಸಿರು – ಭೂಮಿ ರಾಜಕಾರಣದ, ಮತಗಳಿಕೆಯ ವಸ್ತು. ಗುಡ್ಡ ಕುಸಿದಾಗ – ಮಣ್ಣಿನೊಳಗೆ ಜೀವ ಸಿಕ್ಕಾಗ ಪಶ್ಚಿಮಘಟ್ಟ , ಪಶ್ಚಿಮಘಟ್ಟ ಸುದ್ದಿ ಮಾಧ್ಯಮಗಳ ಮುಖಪುಟದಲ್ಲಿ… ಕುಸಿದಿರುವುದು – ಕುಸಿಯುತ್ತಿರುವುದು ಗುಡ್ಡ – ಬೆಟ್ಟ -ಕಣಿವೆ ಅಲ್ಲ … ನಮ್ಮೆಲ್ಲರಲ್ಲಿದ್ದ ಜೀವಪ್ರಜ್ಞೆ – ಜೀವನ ಪ್ರಜ್ಞೆ ನಿತ್ಯ ಕುಸಿಯುತ್ತಿದೆ. ಯಾವ ಯಂತ್ರ – ಸೈನ್ಯ ಇದನ್ನು ತಡೆದೀತು ? ಸುಸ್ಥಿರ ಅಭಿವೃದ್ಧಿ ಅಂದರೆ ಹೀಗೆ ಅನ್ನುವ ಅಂಶಗಳನ್ನು ಸವಿವರವಾಗಿ ಪಟ್ಟಿಮಾಡಬೇಕು. ಸವಲತ್ತು ಮತ್ತು ಅವಶ್ಯಕತೆಗಳ ನಡುವೆ ಸಮನ್ವಯ ಸಾಧಿಸದಿದ್ದರೆ ಉಳಿವು ಮಾತು ಹಾಗೆಯೆ ಉಳಿದು ಬಿಡುತ್ತದೆ. ಆರಂಭದ ವಾಕ್ಯ ಮತ್ತೆ ನೆನಪಾಗುತ್ತೆ – ಮೇಲ್ಪಂಕ್ತಿ ಯಾರು?

Advertisement
ಬರಹ :
ಆನಂದ ಆ. ಶ್ರೀ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹಬ್ಬದ ಸಮಯದಲ್ಲಿ ಆಹಾರ ಕಲಬೆರಕೆಯಾಗದಂತೆ ತಪಾಸಣೆಗೆ ಸೂಚನೆ
September 14, 2024
11:50 AM
by: ದ ರೂರಲ್ ಮಿರರ್.ಕಾಂ
ಪ್ಲಾಸ್ಟಿಕ್ ಮರು ಬಳಕೆಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ
September 11, 2024
11:16 PM
by: ದ ರೂರಲ್ ಮಿರರ್.ಕಾಂ
ಜಗತ್ತನ್ನು ಹವಾಮಾನ ವೈಪರೀತ್ಯದಿಂದ ರಕ್ಷಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ | ಪ್ರಧಾನಿ ಮೋದಿ |
September 11, 2024
11:11 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಬೆಳೆಗಾರರಿಗೆ ಮುಂದೊಂದು ದಿನ ಹೀಗಾಗಬಹುದೇ…!?
September 8, 2024
9:24 PM
by: ಪ್ರಬಂಧ ಅಂಬುತೀರ್ಥ

You cannot copy content of this page - Copyright -The Rural Mirror