Advertisement
MIRROR FOCUS

ಆಧುನಿಕ ಸ್ಪರ್ಶವಿರುವ ಆಕರ್ಷಕ ಅಡುಗೆಮನೆ | ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಂಬಿಕಾ ಶಿಕ್ಷಣ ಸಂಸ್ಥೆಗಳಿಂದ ಹೈಟೆಕ್ ವ್ಯವಸ್ಥೆ

Share
ಶಿಕ್ಷಣ ಸಂಸ್ಥೆಗಳಲ್ಲಿ ಹಾಸ್ಟೆಲ್ ವ್ಯವಸ್ಥೆ ಸರ್ವೇ ಸಾಮಾನ್ಯ. ಹೀಗೆ ಹಾಸ್ಟೆಲ್ ಇದೆ ಅಂದ ಮೇಲೆ ಅಡುಗೆ ಮನೆಯೂ ಇರಲೇಬೇಕು! ಆದರೆ ಅಡುಗೆ ಮನೆ ಅಂದ ಕೂಡಲೇ ನಮಗೆ ಪಾರಂಪರಿಕ ಅಡುಗೆ ಮನೆಗಳ ಚಿತ್ರಣ ಕಣ್ಣ ಮುಂದೆ ಹಾದುಬರುತ್ತದೆ. ಆದರೆ ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಡುಗೆಮನೆ ಆಧುನಿಕ ಸ್ಪರ್ಶದೊಂದಿಗೆ ಅತ್ಯಾಕರ್ಷಕವಾಗಿ ಕಾಣಿಸುತ್ತಿದೆ.
ಈ ಅಡುಗೆ ಮನೆ ಆಧುನಿಕ ತಂತ್ರಜ್ಞಾನಗಳಿಂದ ಕೂಡಿ ಹೈಟೆಕ್ ವ್ಯವಸ್ಥೆಯನ್ನು ಹೊಂದಿದೆ. ಇಲ್ಲಿ ತರಕಾರಿ ಕತ್ತರಿಸುವುದರಿಂದ ತೊಡಗಿ ಪ್ರತಿಯೊಂದಕ್ಕೂ ಯಂತ್ರಗಳಿವೆ. ಚಪಾತಿ ಪುಡಿಯನ್ನು ಕಲಸುವುದಕ್ಕೆ, ಕಲಸಿದ ಹಿಟ್ಟನ್ನು ಚಪಾತಿಯಾಗಿ ಮಾಡುವುದಕ್ಕೆ, ಹಾಗೆ ಮಾಡಿದ ಚಪಾತಿಯನ್ನು ಬೆಂಕಿಯ ಮೇಲಿನ ಬೇಯಿಸುವ ತಾಣಕ್ಕೆ ಒಯ್ಯುವುದಕ್ಕೆ ಹಾಗೂ ಬೆಂದ ಚಪಾತಿಯನ್ನು ನಿರ್ದಿಷ್ಟ ಜಾಗಕ್ಕೆ ತಲಪಿಸುವುದಕ್ಕೆ ಯಂತ್ರದ ವ್ಯವಸ್ಥೆ ಇದೆ. ಗಂಟೆಗೆ ಸರಿಸುಮಾರು 600ರಿಂದ 800 ಚಪಾತಿ ಈ ಯಂತ್ರದ ಮೂಲಕ ತಯಾರಾಗುತ್ತಿದೆ. ಅಗತ್ಯ ಬಿದ್ದಾಗ ಚಪಾತಿ ಬದಲಿಗೆ ಪೂರಿ ಮಾಡಿಕೊಡುವುದಕ್ಕೂ ಈ ಯಂತ್ರ ಬಳಕೆಯಾಗುತ್ತದೆ.
ಇನ್ನು ಅನ್ನ ಬೇಯಿಸುವುದಕ್ಕೆ ಸ್ಟೀಂ ವ್ಯವಸ್ಥೆಯನ್ನು ರೂಪಿಸಲಾಗಿದೆ. ಹಾಗಾಗಿ ಕೇವಲ ಹದಿನೈದು ನಿಮಿಷದಲ್ಲಿ ಬೆಳ್ತಿಗೆ ಹಾಗೂ ಮೂವತ್ತು ನಿಮಿಷದಲ್ಲಿ ಕುಚ್ಚಿಲು ಅಕ್ಕಿ ಬೆಂದು ಅಪಾರ ಸಮಯ ಹಾಗೂ ಇಂಧನ ಉಳಿತಾಯಕ್ಕೂ ಕಾರಣವಾಗಿದೆ. ತರಕಾರಿಗಳನ್ನೂ ಈ ಸ್ಟೀಂ ವ್ಯವಸ್ಥೆಯಲ್ಲಿ ಸುಲಭಕ್ಕೆ ಹಾಗೂ ಅತ್ಯಂತ ಶುಚಿಯಾಗಿ ಬೇಯಿಸಲು ಸಾಧ್ಯವಾಗುತ್ತಿದೆ. ಹಾಲುಕುದಿಸುವುದಕ್ಕೂ ಇದರಿಂದ ಸಾಧ್ಯ.
ಇಂಥದ್ದೊಂದು ಆಧುನಿಕ ಅಡುಗೆಮನೆಗೆ ಸಾಕಷ್ಟು ದುಡ್ಡೂ ವೆಚ್ಚವಾಗಿದೆ. ಸರಿಸುಮಾರು ನಲವತ್ತು ಲಕ್ಷ ರೂಪಾಯಿಗಳಲ್ಲಿ ಈ ಅಡುಗೆ ರೂಪುಗೊಂಡಿದೆ. ಈ ಆಧುನಿಕ ಅಡುಗೆಮನೆಯನ್ನು ಅನೇಕ ಹೆತ್ತವರು ಶ್ಲಾಘಿಸಿದ್ದಾರೆ. ಇಲ್ಲಿನ ಶುಚಿತ್ವ, ವೇಗಗಳನ್ನು ಕೊಂಡಾಡಿದ್ದಾರೆ.
ಈ ವಿನೂತನ ಅಡುಗೆ ಮನೆಯಿಂದಾಗಿ ನಮಗೆ ನಿರ್ವಹಣೆ ಅತ್ಯಂತ ಸುಲಭದ್ದೆನಿಸುತ್ತಿದೆ. ಅನ್ನ, ಸಾರು, ಸಾಂಬಾರುಗಳಲ್ಲಿ ಹೆಚ್ಚಳವಾಗಬೇಕಿದ್ದರೂ ತಕ್ಷಣಕ್ಕೆ ತಯಾರು ಮಾಡುವುದಕ್ಕೆ ಸಾಧ್ಯವಾಗುತ್ತಿದೆ. ಕೆಲಸ ಕಾರ್ಯಗಳನ್ನು ಚುರುಕಾಗಿ ನಡೆಸಿಕೊಡುವಲ್ಲಿ ಈ ಯಾಂತ್ರೀಕರಣ ನಮಗೆ ಸಹಕಾರಿಯಾಗಿದೆ ಎಂಬುದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ ಅವರ ಮಾತು.
ಸಾವಿರಾರು ಮಕ್ಕಳು ನಮ್ಮನ್ನು ಆಶ್ರಯಿಸಿರುವಾಗ ಅವರೆಲ್ಲರನ್ನೂ ನಮ್ಮ ಸ್ವಂತ ಮಕ್ಕಳಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಕ್ಷಣಕಾಲವೂ ಆ ಮಕ್ಕಳು ಹಸಿವಿನಲ್ಲಿರುವುದಕ್ಕೆ ನಾವು ಅವಕಾಶ ಮಾಡಿಕೊಡಬಾರದು. ಹಾಗಾಗಿ ಶುಚಿ ರುಚಿಯಾದ ಆಹಾರ ವ್ಯವಸ್ಥೆ ಜರೂರಾಗಿ ಕಾರ್ಯನಿರ್ವಹಿಸುವ ಉದ್ದೇಶದೊಂದಿಗೆ ಇಂತಹ ಹೈಟೆಕ್ ಅಡುಗೆಮನೆಯನ್ನು ರೂಪಿಸಿದ್ದೇವೆ.
ಸುಬ್ರಹ್ಮಣ್ಯ ನಟ್ಟೋಜ, ಅಧ್ಯಕ್ಷರು, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 17-04-2026 | ಕರ್ನಾಟಕದ ಹವಾಮಾನದಲ್ಲಿ ಬದಲಾವಣೆ – ಏಪ್ರಿಲ್ 18 ರಿಂದ ಮಳೆ ಹೆಚ್ಚಳ

ಏಪ್ರಿಲ್ 18ರಿಂದ ರಾಜ್ಯದಲ್ಲಿ ಹವಾಮಾನ ಬದಲಾವಣೆ ಕಂಡುಬರುತ್ತಿದ್ದು, ಹಂತ ಹಂತವಾಗಿ ಮಳೆಯ ಚಟುವಟಿಕೆ…

6 hours ago

ಒಡಿಶಾ ಕರಾವಳಿಯಲ್ಲಿ ಅಕ್ರಮ ಅಡಿಕೆ ಸಾಗಣೆ ಪತ್ತೆ – 700 ಕ್ಕೂ ಹೆಚ್ಚು ಗೋಣಿ ಚೀಲ ವಶಕ್ಕೆ

ಒಡಿಶಾ ಕರಾವಳಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 700 ಕ್ಕೂ ಹೆಚ್ಚು ಗೋಣಿ ಚೀಲಗಳ ಅಡಿಕೆ…

2 days ago

ರಾಸಾಯನಿಕ ಮುಕ್ತ ಕೃಷಿಗೆ ಪ್ರಧಾನಿ ಮೋದಿ ಕರೆ

ಆದಿಚುಂಚನಗಿರಿಯಲ್ಲಿ ಭೈರವೈಕ್ಯ ಮಂದಿರವನ್ನು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಿದರು. ರಾಸಾಯನಿಕ ಮುಕ್ತ ಕೃಷಿಗೆ ಆದ್ಯತೆ…

2 days ago

ವಳಲಂಬೆಯಲ್ಲಿ ಎ.19 ರಂದು ‘ಸಂಗೀತ ಸಂಭ್ರಮ’

ಸುಳ್ಯದ ವಳಲಂಬೆಯಲ್ಲಿ ಏಪ್ರಿಲ್ 19ರಂದು ‘ಸಂಗೀತ ಸಂಭ್ರಮ’ ಕಾರ್ಯಕ್ರಮ ನಡೆಯಲಿದೆ. ಖ್ಯಾತ ಕಲಾವಿದರಿಂದ…

2 days ago

ಹವಾಮಾನ ವರದಿ | 15-04-2026 | ಕರ್ನಾಟಕದಲ್ಲಿ ಬಿಸಿಗಾಳಿಯ ನಡುವೆ ಮಳೆಯ ಸುಳಿವು – ಏಪ್ರಿಲ್ 18 ರಿಂದ ಮಳೆ…!

ಕರ್ನಾಟಕದಲ್ಲಿ ಏಪ್ರಿಲ್ 18ರಿಂದ ಹಂತ ಹಂತವಾಗಿ ಮಳೆಯ ಚಟುವಟಿಕೆ ಆರಂಭವಾಗುವ ಸಾಧ್ಯತೆ ಇದೆ.…

2 days ago

ವಿಷು ಹಬ್ಬದ ಅರ್ಥವೇನು ಗೊತ್ತಾ..? ಸೂರ್ಯ ಸಂಕ್ರಮಣದ ಈ ರಹಸ್ಯ ನಿಮ್ಮ ಜೀವನವೇ ಬದಲಾಯಿಸಬಹುದು..!

ವಿಷು ಹಬ್ಬವು ಸೂರ್ಯನ ಮೇಷ ಸಂಕ್ರಮಣದೊಂದಿಗೆ ಸಂಬಂಧಿಸಿದ ಆಧ್ಯಾತ್ಮಿಕ ಹಬ್ಬವಾಗಿದೆ. ವಿಷು ಕಣಿ…

3 days ago