ಆರುಷಿ ಮೈ ಡಾಟರ್ ಯೋಜನೆ ಜಾರಿಗಾಗಿ ಜಾಗೃತಿ | ಹೆಣ್ಣು ಭ್ರೂಣ ಹತ್ಯೆ ತಡೆಗೆ ಸಮಾಜ ಸೇವಕನ ಪಾದಯಾತ್ರೆ

October 18, 2023
11:17 AM
ಹೆಣ್ಣು ಭ್ರೂಣ ಹತ್ಯೆ ತಡೆಯಲು ಸಮಾಜ ಸೇವಕ ಹೊನ್ನಾಳಿ ನಗರದ ಚನ್ನೇಶ್.ಸಿ.ಎಂ ಜಕ್ಕಾಳಿ ಕನ್ಯಾಕುಮಾರಿಯಿಂದ ಸೆ 23 ರಿಂದ ದೆಹಲಿಯವರೆಗೂ ಪಾದಯಾತ್ರೆ ಮೂಲಕ ಜನ ಜಾಗೃತಿ ಮೂಡಿಸಿ ದೇಶದ ಗಮನ ಸೆಳೆಯಲು ಮುಂದಾಗಿದ್ದಾರೆ.

ಜಗತ್ತು, ದೇಶ, ತಂತ್ರಜ್ಞಾನ ಎಷ್ಟೇ ಮುಂದುವರೆದರು ಹೆಣ್ಣು, ಗಂಡು ಎಂಬ ಕೀಳು ಭಾವನೆ ಇನ್ನು ಸಂಪೂರ್ಣವಾಗಿ ಹೋದಂತಿಲ್ಲ. ಈಷ್ಟೆಲ್ಲಾ ಶಿಕ್ಷಣ ಇದ್ರೂ ಜನ ಬದಲಾಗಿಲ್ಲ. ಹೆಣ್ಣು-ಗಂಡು ಮಕ್ಕಳು ಒಂದೇ. ಹೆಣ್ಣು (Girl Child)ಕೂಡ ಗಂಡು ಮಕ್ಕಳಷ್ಟೇ ಸಮರ್ಥಳು ಅನ್ನೋದನ್ನು ಅದೆಷ್ಟೋ ಮಂದಿ ಇವಾಗಲೂ ಒಪ್ಪಿಕೊಳ್ಳಲು ತಯಾರಿಲ್ಲ. ಈ ನಿಟ್ಟಿನಲ್ಲಿ ಹೆಣ್ಣು ಭ್ರೂಣ ಹತ್ಯೆ (Fetusicide) ತಡೆಯಲು ಸಮಾಜ ಸೇವಕ ಹೊನ್ನಾಳಿ ನಗರದ ಚನ್ನೇಶ್.ಸಿ.ಎಂ ಜಕ್ಕಾಳಿ ಕನ್ಯಾಕುಮಾರಿಯಿಂದ ಸೆ 23 ರಿಂದ ದೆಹಲಿಯವರೆಗೂ ಪಾದಯಾತ್ರೆ ಮೂಲಕ ಜನ ಜಾಗೃತಿ(Public awareness) ಮೂಡಿಸಿ ದೇಶದ ಗಮನ ಸೆಳೆಯಲು ಮುಂದಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ದೇಶದ ಗಮನ ಸೆಳೆಯಲು ಆರುಷಿ ಮೈ ಡಾಟರ್ ಅನುಷ್ಠಾನ ಕನ್ಯಾಕುಮಾರಿಯಿಂದ ಪಾದಯಾತ್ರೆ ಹೊರಟಿದ್ದು, ಅ.19ಕ್ಕೆ ದಾವಣಗೆರೆಗೆ ಆಗಮಿಸಲಿದೆ. ಯಶಸ್ವಿ ಇಪ್ಪತ್ತೊಂದನೆ ದಿನದ ಪಾದಯಾತ್ರೆ ಇದಾಗಿದೆ. ಹೆಣ್ಣು ಭ್ರೂಣ ಹತ್ಯೆ ಖಂಡಿಸಿ ಹಲವಾರು ವರ್ಷಗಳಿಂದ ಒಂದಿಲ್ಲೊಂದು ರೀತಿಯ ಹೊರಾಟ ನಡೆಯುತ್ತಿದ್ದರೂ ಅದಕ್ಕೆ ಬೇಕಾದ ಕಾನೂನು ನೆರಳು ಇದ್ದರೂ ಸಹಿತ ಅನುಷ್ಠಾನ ಮಾಡುವಲ್ಲಿ ಜನಪ್ರತಿನಿಧಿಗಳು ಅಧಿಕಾರಿಗಳು, ವಿಫಲವಾಗಿದ್ದಾರೆ. ಹೆಣ್ಣು ಭ್ರೂಣ ಹತ್ಯೆ ನಿಂತಿದೆಯೇ ಎಂಬ ಪ್ರಶ್ನೆಗೆ ಇಂದಿಗೂ ಉತ್ತರ ದೊರಕಿಲ್ಲ.

ಪ್ರಸ್ತುತ ದಿನಮಾನಗಳಲ್ಲಿ ಯುವಕರಿಗೆ ವಿವಾಹವಾಗಲು ಹೆಣ್ಣು ಸಿಗುತ್ತಿಲ್ಲ ಎಂಬ ಬಲವಾದ ಕೂಗು ಕೇಳಿ ಬರುತ್ತಿದ್ದು ಇದೆ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಸ್ಯೆ ಉಲ್ಬಣ ಆಗಬಹುದೆಂಬ ಆತಂಕ ಇದ್ದೆ ಇದೆ. ಇದಕ್ಕೆಲ್ಲ ಉತ್ತರ ನೀಡಬೇಕಾದ ಇಲಾಖೆ ಜನಪ್ರತಿನಿಧಿಗಳು ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎನ್ನುವ ಕೂಗು ಸಾರ್ವಜನಿಕರ ವಲಯದಿಂದ ಕೇಳಿಬರುತ್ತಿದೆ. ಇದಕ್ಕೆಲ್ಲ ನವೀನ ಮಾದರಿಯ ಮೂಲಕ ತಾಯಿಯ ಗರ್ಭಾವಸ್ಥೆಯಿಂದಲೇ ಭ್ರೂಣವನ್ನು ಡಿಜಿಟಲ್ ಕೋಡ್ ನೀಡುವ ಮೂಲಕ ಹೆಣ್ಣು ಭ್ರೂಣ ತಡೆಗಟ್ಟುವ ಹಾಗೂ ಹೆಣ್ಣು ಸಂತತಿ ಉಳಿಸುವ ಪಣ ತೊಟ್ಟು ರಾಜ್ಯ ಮತ್ತು ಕೇಂದ್ರ ಸಚಿವರುಗಳ ಗಮನ ಸೆಳೆದು ಚರ್ಚಿಸಿದ್ದಾದರೂ ಅನುಷ್ಠಾನ ಆಗದಿರುವ ಬಗ್ಗೆ ಚನ್ನೇಶ್.ಸಿ.ಬೇಸರ ವ್ಯಕ್ತಪಡಿಸುತ್ತಾರೆ.

ಭ್ರೂಣ ಹತ್ಯೆ ತಡೆಗೆ ನವೀನ ಗುರುತಿನ ಮಾದರಿ ಬೇಕಾಗಿದೆ. ಬಹುತೇಕ ಸೌಲಭ್ಯಕ್ಕಾಗಿ ಪ್ರಸ್ತುತ ಗುರುತಿನ ಚೀಟಿಯಂತೆ ಇರುವ ಆಧಾರ್ ಕಾರ್ಡ್ನಂತೆ ತಾಯಿಯ (ಗರ್ಭಿಣಿಯಾದ ಮಹಿಳೆ) ಭ್ರೂಣದಿಂದಲೆ ಹೆರಿಗೆ ನಂತರದ ಆರೈಕೆಯ ಹಂತದವರೆಗೂ ಈ ನಂಬರ್ ಬಳಕೆ ಮಾಡಬೇಕು. ಆದ್ದರಿಂದ ಆರುಷಿ (ಮೈ ಡಾಟರ್) ನಡಿ ಪ್ರಸ್ತುತ ಸರ್ಕಾರದಲ್ಲಿ ಇರುವ ಆರುಷಿ ಯೋಜನೆಯ ಮೂಲಕ ಆರೋಗ್ಯ ಸಹಾಯಕಿಯರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ಸೇವೆಯ ಮೂಲಕ ಈ ಯೋಜನೆಯನ್ನು  ಸುಲಭವಾಗಿ ಅನುಷ್ಠಾನಗೊಳಿಸಬಹುದು ಎನ್ನುತ್ತಾರೆ ಚನ್ನೇಶ್.

To prevent female foeticide, social worker Channesh CM Jakkali of Honnali Nagar has started a walk from Kanyakumari to Delhi from September 23 to raise public awareness and attract the attention of the country. Aarushi My Daughter’s implementation of Padayatra started from Kanyakumari and will arrive at Davangere on 19th. This was a successful twenty-first day trek.

Advertisement

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹೊಸರುಚಿ | ಬಿಳಿ ಎಳ್ಳು ಓಟ್ಸ್ ಚಿಕ್ಕಿ
January 10, 2026
9:38 PM
by: ದಿವ್ಯ ಮಹೇಶ್
ಸುಳ್ಯ ಅಡಿಕೆ ಕೃಷಿಗೆ ಎಲೆಚುಕ್ಕಿ ಸಂಕಷ್ಟ | ಬೆಳೆಸಾಲ ಮನ್ನಾ ಮಾಡಲು ಆಗ್ರಹ – ಸಮೀಕ್ಷೆಗೆ ಸಹಕರಿಸುವಂತೆ ಕೃಷಿಕರಿಗೆ ಮನವಿ
January 10, 2026
8:26 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 10-01-2026 | ತುಂತುರು ಮಳೆ ಇದೆ..! ಎಲ್ಲೆಲ್ಲಿ ಮಳೆ ಇದೆ…?
January 10, 2026
8:02 PM
by: ಸಾಯಿಶೇಖರ್ ಕರಿಕಳ
ಅಡಿಕೆ ಸಿಂಗಾರ ಒಣಗುತ್ತಿದೆಯೇ..? ನಿಮ್ಮ ತೋಟದ ಶತ್ರು ನೀವು ಬಳಸುವ ಬೇವಿನ ಎಣ್ಣೆಯೇ ಇರಬಹುದು…!
January 10, 2026
7:24 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror