ಬೆಟ್ಟದಲ್ಲಿ ಹಾರಿದ ತಿರಂಗಾ | ಸಮುದ್ರ ಮಟ್ಟದಿಂದ 2250 ಅಡಿ ಎತ್ತರದಲ್ಲಿ ಹಾರಾಡಿದ ರಾಷ್ಟ್ರಧ್ವಜ | ಪರಿಸರದ ನಡುವೆ ಕೇಳಿತು ಜನಗಣಮನ… |

August 19, 2022
7:00 AM

ಇಡೀ ದೇಶದಲ್ಲಿ ಅಮೃತ ಮಹೋತ್ಸವದ ಸ್ವಾತಂತ್ರ್ಯ ಸಂಭ್ರಮ ಮುಗಿಯಿತು. ಇಡೀ ವರ್ಷ ಈ ಆಚರಣೆ ನಡೆಯುತ್ತದೆ. ವಿವಿಧ ಕಡೆ ಹೆಮ್ಮೆಯಿಂದ, ಸಡಗರದಿಂದ ಈ ಆಚರಣೆ ನಡೆಯಿತು. ಸುಳ್ಯದ ಸಂಪಾಜೆಯ ನಾಟೆಕಲ್ಲು ಗುಡ್ಡದ ಮೇಲೆಯೂ ರಾಷ್ಟ್ರಧ್ವಜ ಹಾರಾಡಿತು. ಸಮುದ್ರ ಮಟ್ಟದಿಂದ 2250 ಅಡಿ ಎತ್ತರ ಇರುವ ಈ ಬೆಟ್ಟದಲ್ಲಿ ಜನಗಣಮನ ಕೇಳಿತು.ಸುಂದರ ಪರಿಸರದಲ್ಲಿ ಕೇಳಿದ ರಾಷ್ಟ್ರಗೀತೆ ಎಲ್ಲೆಡೆಯೂ ಮಾರ್ಧನಿಸಿತು. 

Advertisement

ಸುಳ್ಯದ ಸಂಪಾಜೆ ಬಳಿಯ ಲೈನ್ಕಜೆಯ ಹತ್ತಿರದ ನಾಟೆಕಲ್ಲು ಗುಡ್ಡದ ಮೇಲೆ ಅಂದರೆ ಸಮುದ್ರ ಮಟ್ಟದಿಂದ 2250 ಅಡಿ ಎತ್ತರದಲ್ಲಿ ಚಾರಣದ ಮೂಲಕ ತೆರಳಿದ ತಂಡ ಸ್ವಾತಂತ್ರೋತ್ಸವವನ್ನು ಆಚರಣೆ ಮಾಡಿತು. ಸುತ್ತಲೂ ಸುಂದರ ಪರಿಸರ, ಈ ಪರಿಸರದ ನಡುವೆ ರಾಷ್ಟ್ರಧ್ವಜ ಹಾರಾಡಿದ್ದು ಹೆಮ್ಮೆಯಾಗಿ ಕಂಡಿತು. ಈ ಸುಂದರ ಪರಿಸರದಲ್ಲಿ ಹಕ್ಕಿ ಕಲರವ, ಜೀರುಂಡೆಗಳ ಸದ್ದು, ಗಾಳಿಯ ಸದ್ದಿನ ನಡುವೆ ಕೇಳಿದ ರಾಷ್ಟ್ರಗೀತೆ ಬೆಟ್ಟಗಳ ನಡುವೆ ಮಾರ್ಧನಿಸಿತು.

ಸಂಪಾಜೆಯ ಲೈನ್ಕಜೆ ಮನೆಯವರು ಹಾಗೂ ಯುವಕರ ತಂಡ ಈ ಸಾಹಸ ಯಾತ್ರೆ ಮಾಡಿದೆ. ಸಂಪಾಜೆಯಿಂದ ಮುಂದೆ ಅತ್ಯಂತ ಪ್ರಸಿದ್ಧವಾ ಅರೆಕಲ್ಲು ಮೂಲಕವಾಗಿ ಈ ನಾಟೆಕಲ್ಲು ಬೆಟ್ಟಕ್ಕೆ ತೆರಳಬೇಕಾಗುತ್ತದೆ. ಹರಿದ್ವರ್ಣ ಕಾಡಿನ ನಡುವೆ ಈ ಜಾಗ ಇದೆ.  ಅತ್ಯಂತ ಸುಂದರವಾದ ಜಾಗ ಇದಾಗಿದ್ದು ಬೆಟ್ಟ ಕೆಳಭಾಗ ಕೆಲವು ಮನೆಗಳೂ ಇದೆ. ಬೆಟ್ಟದಲ್ಲಿ ಕಡವೆ, ಕಾಡಕೋಣ, ಹುಲಿ, ಚಿರತೆ, ಆನೆಗಳು ಆಗಾಗ ಓಡಾಡುತ್ತವೆ. ಬೆಟ್ಟದ ಮೇಲ್ಭಾಗದಲ್ಲೂ ವರ್ಷದ ಎಲ್ಲಾ ದಿನವೂ ನೀರು ಇರುತ್ತದೆ. ಏರುವ ದಾರಿ ಅತ್ಯಂತ ಕಠಿಣವಾಗಿದೆ. ಜಿಗಣೆ ಕಾಟ ಇದೆ. ಬೆಟ್ಟ ಏರುವುದೇ ತ್ರಾಸದಾಯಕ. ಚಾರಣದ ಪ್ರದೇಶ ಇದು. ಲೈನ್ಕಜೆಯಿಂದ ಸುಮಾರು ಎರಡು ಗಂಟೆಯ ನಡಿಗೆ ಇದೆ. ಕಲ್ಲುಗಳು, ಮರಗಳ ನಡುವೆ ಏರುತ್ತಾ ಸಾಗಬೇಕಿದೆ. ಬೆಟ್ಟದ ತುದಿ ತಲುಪಿದ ಬಳಿಕ ಮನೋಹರವಾದ ಜಾಗ ಕಾಣುತ್ತದೆ. ಸುತ್ತಲೂ ಹಸಿರಿನಿಂದ ಕೂಡಿದ ಪ್ರದೇಶ. ಹೀಗಾಗಿ ಮನಸ್ಸು ಉಲ್ಲಾಸವಾಗುತ್ತದೆ.  ಸುಂದರವಾದ ಈ ಬೆಟ್ಟಕ್ಕೆ ಪ್ರತೀ ಸಲ ಚಾರಣಕ್ಕೆ ಲೈನ್ಕಜೆ ರಾಮಚಂದ್ರ ಹಾಗೂ ಮನೆಯವರು ಹೋಗುತ್ತಾರೆ. ಲೈನ್ಕಜೆ ಮನೆಯವರು ಈ ಬಾರು ಬೆಟ್ಟ ಹತ್ತಿ ಸ್ವಾತಂತ್ರ್ಯ ದಿನಾಚರಣೆ ಮಾಡಿದ್ದಾರೆ. ಈ ತಂಡದಲ್ಲಿ ಆದಿತ್ಯ ಲೈನ್ಕಜೆ, ಅರ್ಜುನ ಲೈನ್ಕಜೆ, ಅವಿನಾಶ್ ಲೈನ್ಕಜೆ, ರವಿ ಎಲಿಕ್ಕಳ, ಸಂದೀಪ್ ಎಲಿಕ್ಕಳ, ವಿಜೇತ ಪೆರುಂಬಾರು, ವಿಷ್ಣು ಕಾರ್ಮಾರು ಇದ್ದರು. ಲೈನ್ಕಜೆ ರಾಮಚಂದ್ರ ಅವರ ಪುತ್ರ ಭಾರತೀಯ ಸೇನೆಯಲ್ಲಿ ಮೇಜರ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

Advertisement

ಎಚ್ಚರಿಕೆ ಇದೆ...
ಈ ಬೆಟ್ಟ ಸುಂದರವಾಗಿರುವುದರಿಂದ ಹಾಗೂ ಕೆಲವರು ಚಾರಣಕ್ಕೆ ಆಗಮಿಸುತ್ತಾರೆ. ಆದರೆ ಪ್ಲಾಸ್ಟಿಕ್‌ ಬಳಕೆ, ಪ್ಲಾಸ್ಟಿಕ್‌ ಬಾಟಲಿ ಎಸೆಯುವುದು ಇತ್ಯಾದಿಗಳು ಕಂಡರೆ ಸ್ಥಳೀಯರೇ ಗಮನಿಸಿ ಎಚ್ಚರಿಸುತ್ತಾರೆ. ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್‌, ತ್ಯಾಜ್ಯಗಳು ಬೆಟ್ಟದ ಮೇಲೆ ಹೋಗದಂತೆ ತಡೆಯನ್ನೂ ಮಾಡುತ್ತಾರೆ. ಮಳೆಗಾಲ ಈ ಬೆಟ್ಟದ ಕಡೆಗೆ ಪಯಣ ಕಷ್ಟವಾಗಿದೆ.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

2047 ರ ವೇಳೆಗೆ ಕೇಂದ್ರ ಸರ್ಕಾರದಿಂದ 32 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿ
July 6, 2025
10:40 AM
by: ದ ರೂರಲ್ ಮಿರರ್.ಕಾಂ
ತುಂಗಾ, ಭದ್ರಾ ಜಲಾಶಯಗಳಿಂದ ಯಾವುದೇ ಕ್ಷಣದಲ್ಲಿ ನೀರು ಬಿಡುಗಡೆ ಸಾಧ್ಯತೆ | ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ
July 6, 2025
10:34 AM
by: ದ ರೂರಲ್ ಮಿರರ್.ಕಾಂ
ವೇಗವಾಗಿ ಬೆಳೆಯುವ ಮರ ಹವಾಮಾನ ವೈಪರೀತ್ಯಕ್ಕೆ ಪರಿಹಾರ | ಕೃಷಿ ಅರಣ್ಯೀಕರಣಕ್ಕೆ ಬೆಂಬಲ – ಕೃಷಿ ಆದಾಯ ಹೆಚ್ಚಿಸಲೂ ಸಲಹೆ |
July 6, 2025
10:20 AM
by: ದ ರೂರಲ್ ಮಿರರ್.ಕಾಂ
ಇಲ್ಲಿ ಅಡಿಕೆ ಧಾರಣೆಯಲ್ಲಿ ಏರಿಳಿವಾದಾಗಲೇ ಅಲ್ಲಿ ಬರ್ಮಾ ಅಡಿಕೆ ವಶಕ್ಕೆ…! | ಕಾರಣ ಏನು..?
July 5, 2025
7:41 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group