ಬದನಾಜೆ ಶಂಕರ್ ಭಟ್ | ಅಡಿಕೆ ಮೌಲ್ಯವರ್ಧನೆಯ ನೆಲ ವಿಜ್ಞಾನಿ | ಆ.18 ಕ್ಕೆ ನರೇಂದ್ರ ರೈ ದೇರ್ಲ ಅವರ ಪುಸ್ತಕ ಬಿಡುಗಡೆ |

August 14, 2024
3:40 PM

ಅಡಿಕೆಯ ಮೌಲ್ಯವರ್ಧನೆಯ ಬಗ್ಗೆ ಅಧ್ಯಯನ ಮಾಡಿ, ಸ್ವತ: ಪ್ರಯೋಗ ಮಾಡಿರುವ ಬದನಾಜೆಯ ಶಂಕರ ಭಟ್‌ ಅವರ ಜೀವನ ಚರಿತ್ರೆ ‘ಬದನಾಜೆ ಶಂಕರ್ ಭಟ್- ಅಡಿಕೆ ಮೌಲ್ಯವರ್ಧನೆಯ ನೆಲ ವಿಜ್ಞಾನಿ’ ಎಂಬ ನರೇಂದ್ರ ರೈ ದೇರ್ಲಅವರ ಪುಸ್ತಕವು ಆ. 18 ರಂದು ವಿಟ್ಲದ ಮಂಗಳಮಂಟಪದಲ್ಲಿ ಬೆಳಿಗ್ಗೆ 10.30 ಕ್ಕೆ ಬಿಡುಗಡೆಯಾಗಲಿದೆ.

Advertisement

ಜೀವನಪೂರ್ತಿ ಅಡಿಕೆಯ ಬಗ್ಗೆಯೇ ಅಧ್ಯಯನ, ಸಂಶೋಧನೆ ನಡೆಸಿರುವ ಬದನಾಜೆ ಶಂಕರ್ ಭಟ್ಅವರು ಮೂಲ ಆಯುರ್ವೇದ ಪರಂಪರೆಯ ಅಡಿಕೆಯ ಅನೇಕ ಉಪ ಉತ್ಪನ್ನಗಳನ್ನು ಸಂಶೋಧಿಸಿದವರು.

ಅಂಟು, ಸಾಬೂನು, ವೈನ್, ಲಘು ಪಾನೀಯ, ಚೊಗರಿನ ಸಾರ, ವಾರ್ನಿಸ್.. ಹೀಗೆ ತಿಂದು ಉಗುಳುವ ಅಡಿಕೆಯ ಬಹುರೂಪಿ ಬೆಳವಣಿಗೆಗೆ ಬುನಾದಿ ಹಾಕಿದವರು. ಈ ದೇಶದ ಕೃಷಿ ವಿಶ್ವವಿದ್ಯಾನಿಲಯ, ಸಂಶೋಧಕರು, ವಿಜ್ಞಾನಿಗಳು, ಕೃಷಿ ತಜ್ಞರು ಬೆರಗಾಗುವಷ್ಟು ಅಡಿಕೆಯ ಒಳಸುಳಿಗಳನ್ನು ತೆರೆದಿಟ್ಟವರು. ಇಷ್ಟೇ ಅಲ್ಲ ,ಅಡಿಕೆಯ ಮಾರಕ ಮಹಾಳಿ, ಹಳದಿಎಲೆ, ಬೇರುಹುಳಗಳಿಗೂ ಔಷಧಿ ಕಂಡು ಹಿಡಿಯಲು ಪ್ರಯತ್ನಿಸಿದವರು. ತಮ್ಮ ಮನೆಯನ್ನೇ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡು ಇಷ್ಟೆಲ್ಲಾ ಸಂಶೋಧನೆ ಮಾಡಿದ ಜನವಿಜ್ಞಾನಿ 81ರ ಹರೆಯದ ಶಂಕರ ಭಟ್ಟರ ಬಗ್ಗೆ ನರೇಂದ್ರ ರೈ ದೇರ್ಲ ಅವರು ತಮ್ಮ ‘ಕರ್ನಾಟಕ ಕೃಷಿ ಕಥನ ಮಾಲಿಕೆ’ಯ ಆರನೆಯ ಪುಸ್ತಕವನ್ನಾಗಿ ರಚಿಸಿದ್ದಾರೆ.

ಪುಸ್ತಕ ಬಿಡುಗಡೆಯು ವಿಟ್ಲದ ಮಂಗಳ ಮಂಟಪದಲ್ಲಿ ನಡೆಯಲಿದ್ದು ‘ಅಡಿಕೆ ಪತ್ರಿಕೆ’ಯ ಸಂಪಾದಕರಾದ ಶ್ರೀ ಪಡ್ರೆಯವರು ಬಿಡುಗಡೆ ಮಾಡಲಿದ್ದಾರೆ. ‘ಚೌಟರ ತೋಟ’ದ ಖ್ಯಾತಿಯ ಡಾ. ಚಂದ್ರಶೇಖರ್ ಚೌಟರು ಅಧ್ಯಕ್ಷತೆ ವಹಿಸಲಿದ್ದಾರೆ. ‘ಐಟಿಯಿಂದ ಮೇಟಿ’ ಖ್ಯಾತಿಯ ವಸಂತ ಕಜೆ ಅವರು ಪುಸ್ತಕ ಪರಿಚಯಿಸಲಿದ್ದಾರೆ. ವಿಜ್ಞಾನಿ ಡಾ. ಸರ್ಪಂಗಳ ಕೇಶವ ಭಟ್ ಮತ್ತು ಡಾ ಎಂ ಎಸ್ ಭಟ್ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಳೆ ಇಳಿಮುಖ
June 18, 2025
10:43 PM
by: The Rural Mirror ಸುದ್ದಿಜಾಲ
ವಿದ್ಯಾರ್ಥಿಗಳ ಓದಿನ ವಿಷಯದ ಆಯ್ಕೆ ಹೇಗಿರಬೇಕು..?
June 18, 2025
10:32 PM
by: The Rural Mirror ಸುದ್ದಿಜಾಲ
ರೈತರು ಗಮನಿಸಿ | ಭತ್ತದ ಬೆಳೆಗೆ ಫಸಲ್‌ ಭಿಮಾ ಯೋಜನೆ ವಿಮಾ ಪ್ರೀಮಿಯಂ ಪಾವತಿ ಪ್ರಾರಂಭ
June 18, 2025
10:18 PM
by: The Rural Mirror ಸುದ್ದಿಜಾಲ
ಕೇರಳದ ವಯನಾಡಿನಲ್ಲಿ ಧಾರಾಕಾರ ಮಳೆ | ಕಬಿನಿ ಜಲಾಶಯದ ಒಳಹರಿವಿನಲ್ಲಿ ಏರಿಕೆ
June 18, 2025
10:05 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group