Advertisement
Opinion

“ಬ್ಯಾಗ್ ” ಗೋಬರ್ ಗ್ಯಾಸ್ | ಸಣ್ಣ ಗೋಪಾಲಕರಿಗೆ ಈ ಬ್ಯಾಗ್ ಮಾದರಿಯ ಗೋಬರ್ ಗ್ಯಾಸ್ ಅತ್ಯುತ್ತಮ

Share

ನಮ್ಮಲ್ಲೂ ಇನ್ಫೋಸಿಸ್(Infosys) ಪ್ರತಿಷ್ಠಾನದವರ ಪ್ರಾಯೋಜಕತ್ಚದ ಸಿಸ್ಟಿಮಾ ಕಂಪನಿಯ(Sistema Company) ಬ್ಯಾಗ್ ಬಯೋ ಗ್ಯಾಸ್(Bag Bio gas) ಸ್ಥಾವರವಿದೆ. ನಮ್ಮಲ್ಲಿ ಸಿಸ್ಟಿಮಾ ಕಂಪನಿಯು ಬಯೋ ಗ್ಯಾಸ್ ಸ್ಥಾವರ ಸ್ಥಾಪಿಸಿ ಹೋಗಿ ಒಂದು ವರ್ಷದ ತನಕ ಸಮಾಧಾನಕರವಾಗಿ ಗ್ಯಾಸ್ ಉತ್ಪತ್ತಿಯಾಗುತ್ತಿರಲಿಲ್ಲ. ಕೊನೆಗೆ ಸಿಸ್ಟಿಮಾದ ಅಧಿಕಾರಿಗಳು ಬಂದು ಬ್ಯಾಗ್ ನೊಳಗಿದ್ದ ಐದಾರು ಸಾವಿರ ಲೀಟರ್ ಅಮೂಲ್ಯ ಸ್ಲರಿಯನ್ನು(Slurry) ಗುಡ್ಡಕ್ಕೆ ಬಿಟ್ಟು ಹೋದರು. “ಗ್ಯಾಸ್(Gas) ಬರಲಿಲ್ಲ…!!!”… ಯಾಕೆ ಗ್ಯಾಸ್ ಉತ್ಪತ್ತಿ ಯಾಗುತ್ತಿಲ್ಲ ಎಂಬ ಪ್ರಶ್ನೆ ಗೆ ಯಾರಲ್ಲೂ ಉತ್ತರವಿರಲಿಲ್ಲ…!!!

ಮಲೆನಾಡು ಕರಾವಳಿಯ ಭಾಗದಲ್ಲಿ ” ಅರ್ಧ ನೆಲದೊಳಗಿನ ಅರ್ಧ ಹೊರಗಿರುವಂತೆ ಈ ಗ್ಯಾಸ್ ಬ್ಯಾಗ್ ಸ್ಥಾಪಿಸಿದರೆ ಮಳೆಗಾಲದಲ್ಲಿ ತೃಪ್ತಿಕರವಾಗಿ ಗ್ಯಾಸ್ ಉತ್ಪತ್ತಿಯಾಗೋಲ್ಲ…!! ಸಂಸ್ಥೆಯ ಮುಖ್ಯಾಧಿಕಾರಿಯೊಬ್ಬರ ಬಳಿ ಮಾತನಾಡಿದರೆ ಅವರು ಅಸಂಬದ್ಧವಾಗಿ ವಾದ ಮಾಡಿದರು. ಮಲೆನಾಡು ಕರಾವಳಿ ಪ್ರದೇಶದಲ್ಲಿ ಈ ಬ್ಯಾಗ್ ಸ್ಥಾವರವನ್ನು ನೆಲಮಟ್ಟದಿಂದ ಕನಿಷ್ಠ ಎರಡು ಅಡಿ ಎತ್ತರ ತಳಪಾಯ ಮಾಡಿ ಅದರ ಮೇಲೆ ಪ್ಲಾಂಟ್ ಸ್ಥಾಪಿಸಿ. ದಯವಿಟ್ಟು ಯಾರೂ ನೆಲದೊಳಗೆ ಈ ಪ್ಲಾಂಟ್ ಸ್ಥಾಪಿಸಬೇಡಿ. ಮತ್ತೆ ಮಳೆಗಾಲದಲ್ಲಿ ದಯವಿಟ್ಟು ಇಡೀ ಸ್ಥಾವರವನ್ನು ಮಳೆ ನೀರು ತಾಕದಂತೆ ಮುಚ್ಚಿ… ಮಲೆನಾಡು ಕರಾವಳಿಯಲ್ಲಿ ಈ ಪ್ಲಾಂಟ್ ಗೆ ಶಾಶ್ವತವಾಗಿ ಮಾಡನ್ನ ಮಾಡಿದರೂ ಉತ್ತಮ…

ದಿನಕ್ಕೆ ಎರಡು ಬುಟ್ಟಿ ಹಸಿ ಫ್ರೆಶ್ ಸಗಣಿಯನ್ನು ಸುಮಾರು ಅರವತ್ತು ಲೀಟರ್ ನೀರಿನೊಂದಿಗೆ ಚೆನ್ನಾಗಿ ಕರಡಿ ಸ್ಥಾವರದೊಳಕ್ಕೆ ಬಿಡಬೇಕು.‌ ಸ್ಲರಿ ಸಾಕಷ್ಟು ತೆಳ್ಳಗೇ ಇರಲಿ … ಸ್ಲರಿ ಹೊಂಡ ಇಳಿಜಾರಿನಲ್ಲಿರಲಿ.. ಮೂರು ನಾಲ್ಕು ದಿನಕ್ಕೊಮ್ಮೆ ನಮ್ಮಲ್ಲಿ ಸ್ಲರಿ ಹೊರಬರುತ್ತದೆ. ಈ ಕಾರಣಕ್ಕೆ ಗೋಏರ್ ಗ್ಯಾಸ್ ಸ್ಥಾವರಕ್ಕಿಂತ ತಗ್ಗಿನಲ್ಲಿ ಸ್ಲರಿ ಹೊಂಡ ಇರದಿದ್ದರೆ ಸ್ಲರಿ ಹೊರಕ್ಕೆ ಚೆಲ್ಲಿ ವ್ಯರ್ಥವಾಗುತ್ತದೆ. ಇದು ನಮ್ಮ ಸ್ವಂತ ಅನುಭವ…

ಸಿಸ್ಟಿಮಾ ಕಂಪನಿಯ ಒಲೆ ಖಂಡಿತವಾಗಿಯೂ ಗುಣಮಟ್ಟದ್ದಲ್ಲ. ನಮ್ಮ ಮನೆಯಲ್ಲಿ ಇಪ್ಪತ್ತೈದು ವರ್ಷಗಳ ಹಿಂದೆ ಹೆಚ್ ಪಿ‌ ಗ್ಯಾಸ್ ಸಂಪರ್ಕ ಪಡೆದಾಗ ಆ ಗ್ಯಾಸ್ ಸಂಪರ್ಕದೊಂದಿಗೆ ನಮ್ಮಲ್ಲಿ ಹೆಚ್ ಪಿ‌ ಸಂಸ್ಥೆ ನೀಡಿದ ಅಕೈ ಕಂಪನಿಯ ಒಲೆ ಇಂದಿಗೂ ಕೆಲವು ಚಿಕ್ಕ ಪುಟ್ಟ ರಿಪೇರಿಯೊಂದಿಗೆ ಕಾರ್ಯ ನಿರ್ವಹಣೆ ಮಾಡುತ್ತಿದೆ. ಆದರೆ ಸಿಸ್ಟಿಮಾ ಕಂಪನಿಯು ಸ್ಥಾವರದೊಂದಿಗೆ ಕೊಟ್ಟ ಒಲೆ ಪರಮ ಡೆಲಿಕೇಟು ಆಗಿತ್ತು…!! ಒಂದೇ ವರ್ಷಕ್ಕೆ ಒಲೆಯನ್ನ ಬಿಸಾಡಿ ಬೇರೆ ಒಲೆಯನ್ನು ಕೊಂಡು ಬಳಸುತ್ತಿದ್ದೇವೆ.
ಬಂಧುಗಳೇ… ಈ ಬ್ಯಾಗ್ ಗ್ಯಾಸ್ ಸ್ಥಾವರ ಬಹಳ ಉಳಿತಾಯಕಾರಿ ಮತ್ತು ಕಡಿಮೆ ವೆಚ್ಚ. ಸರಿಯಾಗಿ‌ ಅಧ್ಯಯನ ಮಾಡಿ . ಒಂದೆರಡು ಕಡೆ ಈ ಬ್ಯಾಗ್ ಗ್ಯಾಸ್ ನ್ನ ನೋಡಿ ಸ್ಥಾಪಿಸಿ….

ಬರಹ :
ಪ್ರಬಂಧ ಅಂಬುತೀರ್ಥ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

Published by
ಪ್ರಬಂಧ ಅಂಬುತೀರ್ಥ

Recent Posts

ಮುಂಗಾರು ಬೇಗನೆ ವಿದಾಯ ಹೇಳುತ್ತಿದೆಯೇ..? ಸೆಪ್ಟೆಂಬರ್‌ನಲ್ಲಿ ಮಳೆ ಕಡಿಮೆಯಾಗುವ ಮುನ್ಸೂಚನೆ..?

ಸೆಪ್ಟೆಂಬರ್ 5–10ರ ನಂತರ ದೇಶದ ಹಲವು ಭಾಗಗಳಲ್ಲಿ ಮುಂಗಾರು ಮಳೆ ಗಣನೀಯವಾಗಿ ಕಡಿಮೆಯಾಗುವ…

8 hours ago

ಹವಾಮಾನ ವರದಿ | 22-08-2026 | ಕರಾವಳಿಯಲ್ಲಿ ಮಳೆ ಇಳಿಕೆ, 26ರಿಂದ ಮತ್ತಷ್ಟು ದುರ್ಬಲವಾಗುವ ಸಾಧ್ಯತೆ

ಕರ್ನಾಟಕದಲ್ಲಿ ಆಗಸ್ಟ್ 23ರಿಂದ 25ರವರೆಗೆ ಹಲವೆಡೆ ಅಲ್ಲಲ್ಲಿ ಸಾಮಾನ್ಯ ಮಳೆಯಷ್ಟೇ ನಿರೀಕ್ಷಿಸಲಾಗಿದ್ದು, ಕರಾವಳಿ…

16 hours ago

ಸೆಪ್ಟೆಂಬರ್‌ನಲ್ಲಿ ಪಿಎಂ ಕಿಸಾನ್ ಹಣ ಬರಬೇಕೇ? ರೈತರು ಈಗಲೇ e-KYC ಪೂರ್ಣಗೊಳಿಸಿ

PM-Kisan ಯೋಜನೆಯ 24ನೇ ಕಂತಿನ ಹಣ ಪಡೆಯಲು ಅರ್ಹ ರೈತರು ಬಯೋಮೆಟ್ರಿಕ್ ಅಥವಾ…

24 hours ago

ಬೆಳೆ ವಿಮೆಗೆ ರೈತರಿಗೆ ಮತ್ತೊಂದು ಅವಕಾಶ : ಆಗಸ್ಟ್ 31ರವರೆಗೆ ನೋಂದಣಿ ಅವಧಿ ವಿಸ್ತರಣೆ

ಮುಂಗಾರು ಹಂಗಾಮಿನ ಭತ್ತ ಸೇರಿದಂತೆ ಬೆಳೆಗಳಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ…

1 day ago

ಹವಾಮಾನ ವರದಿ | 21-08-2026 | ಕರಾವಳಿಯಲ್ಲಿ ಆ.23–25 ರಂದು ಮಳೆ ಹೆಚ್ಚಳ ಸಾಧ್ಯತೆ – ಆ.26ರವರೆಗೆ ಮೋಡ–ಮಳೆ

ಕರಾವಳಿ ಕರ್ನಾಟಕದಲ್ಲಿ ಆ.23ರಿಂದ 25ರವರೆಗೆ ಮಳೆಯ ಪ್ರಮಾಣ ಸ್ವಲ್ಪ ಹೆಚ್ಚಾಗುವ ಸಾಧ್ಯತೆಯಿದ್ದು, ಆ.26ರವರೆಗೂ…

2 days ago

ನಿಮ್ಮ ಹೆಸರಲ್ಲಿ 9 ಸಿಮ್‌ಗಳಿವೆಯೇ? ಆಗಸ್ಟ್ 24ರಿಂದ ಹೊಸ ನಿಯಮ – ಹೆಚ್ಚುವರಿ ನಂಬರ್‌ಗೆ ಬ್ರೇಕ್

ಆಗಸ್ಟ್ 24ರಿಂದ ಒಬ್ಬ ವ್ಯಕ್ತಿಯ ಹೆಸರಿನಲ್ಲಿ 9 ಮೊಬೈಲ್ ಸಂಪರ್ಕಗಳ ಮಿತಿಯನ್ನು ಮೀರಿ…

2 days ago