Advertisement
Opinion

ಬೇಕರಿ-ಬ್ರಿಟಿಷ್ ಆಹಾರಗಳು ಭಾರತವನ್ನು ಅನಾರೋಗ್ಯದಡೆಗೆ ತಳ್ಳುತ್ತಿವೆಯೇ?

Share

ಬೇಕರಿ ಆಹಾರಗಳು(Bakery Food) ನೇರವಾಗಿ ಪ್ರತಿ ದಿನ ತರುವ ಸಮಸ್ಯೆ ಎಂದರೆ ಮಲಬದ್ಧತೆ(Constipation). ಮಲಬದ್ಧತೆ ಎಲ್ಲಾ ಕಾಯಿಲೆಗಳಿಗೂ(Decease) ಮೂಲ ಎಂದು ಆಯುರ್ವೇದ(Ayurveda) ಹೇಳುತ್ತದೆ. ವಿಷ ವಸ್ತುಗಳು(Poision) ಪ್ರತಿ ದಿನ ದೇಹದಿಂದ(Body) ಹೊರ ಹೋಗದೇ ದೇಹ ಕಾಯಿಲೆಗಳ ಗೂಡಾಗುತ್ತದೆ.

Advertisement
Advertisement

ಬೇಕರಿಯ ಆಹಾರಗಳು ಖಂಡಿತವಾಗಿಯೂ ತರುವ ಮತ್ತೊಂದು ಪ್ರಮುಖ ಕಾಯಿಲೆ ಸಕ್ಕರೆ ಕಾಯಿಲೆ(Diabetes). ಬೇಕರಿಯ ಆಹಾರಗಳಿಗೆ ಬೇಕಾದ ಮೂಲ ವಸ್ತುವೇ ಮೈದಾ. ಈ ಮೈದಾದಲ್ಲಿರುವ ಅಲ್ಲಾಕ್ಸಾನ್ ಎಂಬ ವಿಷವಸ್ತು ನೇರವಾಗಿ ನಮ್ಮ ಮೇದೋಜೀರಕ ಗ್ರಂಥಿಗೆ ದಾಳಿ ಇಡುತ್ತದೆ. ಅದನ್ನು ಹಾಳು ಮಾಡಿ ಇನ್ಸುಲಿನ್ ಸ್ರವಿಸುವಿಕೆಯನ್ನು ಕುಗ್ಗಿಸುತ್ತದೆ. ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಸಣ್ಣದಾದ ಮತ್ತು ಅತಿ ಸೂಕ್ಷ್ಮವಾದ ಮೇದೋಜೀರಕ ಗ್ರಂಥಿಯನ್ನು ಹೊಂದಿರುತ್ತಾರೆ. ಈ ಗ್ರಂಥಿ ಬೇಕರಿಯ ಆಹಾರಗಳ ದಾಳಿಗೆ ತುತ್ತಾಗಿ ಬೆಳವಣಿಗೆ ಹೊಂದುವುದೇ ಇಲ್ಲ.

Advertisement

ನಮ್ಮ ತಂದೆ ತಾಯಿಗಳು ನಮಗೆ ಹುಣ್ಣಿಮೆ ಮತ್ತು ಅಮಾವಾಸ್ಯೆಗಳಲ್ಲಿ ಮಾತ್ರ ಸಿಹಿ ತಿಂಡಿಗಳನ್ನು ಮನೆಯಲ್ಲಿ ಮಾಡಿಕೊಡುತ್ತಿದ್ದರು. ಬೇರೆ ದಿನಗಳಲ್ಲಿ ಸಿಹಿ ವರ್ಜವಾಗಿತ್ತು. ಇಂದಿನ ಮಕ್ಕಳು ಸಿಹಿತಿನ್ನದ ದಿನವೇ ಇಲ್ಲ. ಇಂದಿನ ಆಹಾರಗಳಲ್ಲಿ ಅತ್ಯಂತ ಚಟ್ಟ ವಿಷಯವೆಂದರೆ ಸಕ್ಕರೆ. ಪ್ರತಿದಿನದ ಸಕ್ಕರೆ ಸೇವನೆಯಿಂದಾಗಿ ಮಕ್ಕಳ ಸೂಕ್ಷ್ಮ ಮೇಧೋಜೀರಕ ಗ್ರಂಥಿ ಹೆಚ್ಚು ಇನ್ಸುಲಿನ್ ಸ್ರವಿಸುವಿಕೆಗೆ ಅನಿವಾರ್ಯವಾಗಿ ತುತ್ತಾಗಿ ಹಾಳಾಗ ತೊಡಗುತ್ತದೆ. ಹೆಚ್ಚಿನ ಸಕ್ಕರೆ ಸೇವನೆ ದೇಹವನ್ನು ಆಮ್ಲೀಯಗೊಳಿಸಿ ಕ್ಯಾನ್ಸರ್ ಕಾಯಿಲೆ ಉದ್ಭವಿಸಲು ಕೂಡ ಕಾರಣವಾಗುತ್ತದೆ.

ಈ ಮಕ್ಕಳು ದೊಡ್ಡವರಾದಾಗ ಅಶಕ್ತ ಮೇದೋಜೀರಕ ಗ್ರಂಥಿ ಮತ್ತು ಇನ್ಸುಲಿನ್ ಕೊರತೆಯಿಂದಾಗಿ ಸಕ್ಕರೆ ಕಾಯಿಲೆಗೆ ಖಂಡಿತವಾಗಿಯೂ ತುತ್ತಾಗುತ್ತಾರೆ. ಜೀವನಪೂರ್ತಿ ಔಷಧಿಗಳ ಮೇಲೆ ಅವಲಂಬನೆ ಮತ್ತು ಸಿಹಿ ತಿಂಡಿಗಳ ತ್ಯಾಜ್ಯ ಅನಿವಾರ್ಯವಾಗುತ್ತದೆ. ತಮ್ಮ ಪ್ರೀತಿಯನ್ನು ತೋರಿಸಲು ಪ್ರತಿದಿನ ಬೇಕರಿಯ ಆಹಾರಗಳನ್ನು ಮತ್ತು ಸಿಹಿ ತಿಂಡಿಗಳನ್ನು ಮಕ್ಕಳಿಗಾಗಿ ಕೊಂಡೊಯ್ಯುವ ತಂದೆ ತಾಯಿಗಳು ಅವರ ವೈರಿಗಳೇ ಆಗಿರುತ್ತಾರೆ .

Advertisement

ನಿಮ್ಮ ಮಕ್ಕಳನ್ನು ನಿಜವಾಗಿಯೂ ಪ್ರೀತಿಸುವ ತಂದೆ ತಾಯಿಗಳೇ ನೀವಾಗಿದ್ದರೆ ಹೊರಗಿನ, ಬೇಕರಿಯ ಮತ್ತು ಸಿಹಿ ತಿಂಡಿಗಳು ಅವರಿಗೆ ಬೇಡ. ಪ್ರತಿದಿನ ನಮ್ಮ ಮಕ್ಕಳಿಗೆ ನಾವು ತಿನ್ನಿಸುತ್ತಿರುವ ಚಾಕೊಲೇಟ್, ಬಿಸ್ಕೆಟ್, ಬ್ರೆಡ್, ಐಸ್ ಕ್ರೀಮ್, ಪಿಜ್ಜಾ, ಚಾಟ್, ಇವುಗಳೇ ಅವರ ಬದುಕಿಗೆ ಅಡ್ಡಿಯಾಗುತ್ತವೆ. ಮನೆಗಳಲ್ಲಿ ಮತ್ತು ಶಾಲೆಗಳಲ್ಲಿ ನಾವಿಂದು ಆಚರಿಸುತ್ತಿರುವ ಬರ್ತಡೇ ಎಂಬ ಮೂರ್ಖ ಬ್ರಿಟಿಷ್ ಪದ್ಧತಿ ಮಕ್ಕಳ ಮರಣಕ್ಕೆ ಮುನ್ನುಡಿ ಬರೆಯುತ್ತಿದೆ. ದೀಪ ಆರಿಸುವುದಲ್ಲ ! ದೀಪ ಬೆಳಗಿಸಿ ಕಲ್ಲಂಗಡಿ, ಬಾಳೆಹಣ್ಣು, ಉಂಡೆ, ಕತ್ತರಿಸಿ ಭಾರತೀಯ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳೋಣ.

ದೇಶಿಯ ಆಹಾರಗಳಾದ ಉಂಡೆ, ಕೋಡುಬಳೆ, ಚಕ್ಕುಲಿ, ಕಡುಬು, ಪಾಯಸ, ಮುಂತಾದವುಗಳನ್ನು ಮಕ್ಕಳಿಗೆ ಹೇರಳವಾಗಿ ತಿನ್ನಿಸಿ, ಯಾವ ಕಾಯಿಲೆಯೂ ಬರುವುದಿಲ್ಲ. ಒಟ್ಟಿನಲ್ಲಿ ನಿಮ್ಮ ಸಂಸಾರವು ಸೇವಿಸುವ ಆಹಾರಗಳು ನಿಮ್ಮ ಮನೆಯ ಆಹಾರಗಳೇ ಆಗಿರಲಿ. ಇದೊಂದು ಕೆಲಸವನ್ನು ನೀವು ಮಾಡಿದ್ದೆ ಆದಲ್ಲಿ ನಿಮ್ಮ ಸಂಸಾರದ 80 ಪ್ರತಿಶತ: ಕಾಯಿಲೆಗಳು ದೂರವಾಗುತ್ತವೆ. ಅಂತಹ ತಂದೆ ತಾಯಿಗಳು ನೀವಾಗುತ್ತಿರಲ್ಲವೇ?

Advertisement
Service title
ಡಾ. ಶ್ರೀಶೈಲ ಬದಾಮಿ
, M. Pharm., PhD ಧಾರವಾಡ, 9480640182

If you are a parent who truly loves your children, they don’t want outside, bakery and sweets. The chocolate, biscuits, bread, ice cream, pizza, chat that we feed our children every day, these are the obstacles in their life. The silly British custom of birthdays we celebrate at home and in schools is heralding the death of children.

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಶಿಶಿಲದಲ್ಲಿರುವ ಈ ದೈವದ ವಿಶೇಷತೆ..! | ಜೋಡಿ ದೈವಗಳಿಗೆ ಜೀವಂತ ಕೋಳಿ ಅರ್ಪಣೆ |

ಗ್ರಾಮೀಣ ಭಾಗದ ನಂಬಿಕೆಗಳು ಮಾನಸಿಕವಾಗಿ ಹೆಚ್ಚು ಶಕ್ತಿ ನೀಡುತ್ತವೆ. ಅಂತಹದೊಂದು ನಂಬಿಕೆ ಶಿಶಿಲದಲ್ಲಿ…

12 hours ago

ಕೋವಿ ಡಿಪಾಸಿಟ್‌ ಪ್ರಕರಣ | ಮಹತ್ವದ ತೀರ್ಪು | ಚುನಾವಣಾ ಕಾಲದಲ್ಲಿ ಕೋವಿ ಡಿಪಾಸಿಟ್‌ಗೆ ಪರಿಹಾರ |

ಚುನಾವಣೆಯ ಸಮಯದಲ್ಲಿ ಕೋವಿ ಠೇವಣಾತಿಯ ಬಗ್ಗೆ ಕೃಷಿಕರ ಸಂಕಷ್ಟಕ್ಕೆ ನ್ಯಾಯಾಲಯವು ಪರಿಹಾರ ನೀಡಿದೆ.

13 hours ago

ಬಹುಬೆಳೆ ಬೆಳೆದು ಉತ್ತಮ ಫಸಲು ಪಡೆದ ರೈತ | ಕೃಷಿಗೆ ರೈತ ಅನುಸರಿಸಿದ ಕ್ರಮಗಳಾವುವು..?

ಮಿಶ್ರ ಬೆಳೆ, ಪರ್ಯಾಯ ಬೆಳೆ, ಬಹು ಬೆಳೆ(Mixed cropping, alternating cropping, multiple…

21 hours ago

ಸ್ಟ್ರೀಟ್ ಫುಡ್ ವರ್ಸಸ್ ಆರೋಗ್ಯ | ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳಿ

ಆಹಾರ ಹಾಗೂಆಹಾರ ಪದ್ಧತಿಗಳ ಬಗ್ಗೆ ವಿವೇಕ್‌ ಆಳ್ವ ಅವರು ಬರೆದಿದ್ದಾರೆ.

21 hours ago