ಬಳ್ಪದಲ್ಲಿರುವ ಇತಿಹಾಸ ಪ್ರಸಿದ್ಧ ಬೋಗಾಯನಕೆರೆ ಅಭಿವೃದ್ಧಿಯಾಗುತ್ತಿದೆ. ಕೆರೆಯಲ್ಲಿರುವ ಹೂಳೆತ್ತುವ ಕಾರ್ಯ ಭರದಿಂದ ನಡೆಯುತ್ತಿದೆ. ಶನಿವಾರ ಸಂಜೆ ನಿಲ್ಲಿಸಿದ್ದ ಹಿಟಾಚಿ ಪಲ್ಟಿಯಾಗಿದೆ. ಟಿಪ್ಪರ್ ಆಪರೇಟರ್ ಕೆಲಸ ನಿಲ್ಲಿಸಿ ತೆರಳಿದ ವೇಳೆ ಮಣ್ಣು ಕುಸಿತವಾಗಿ ಪಲ್ಟಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಬೋಗಾಯನಕೆರೆ ಅಭಿವೃದ್ಧಿಗೆ ಮುನ್ನ ಹೂಳೆತ್ತುವ ಕಾರ್ಯ ನಡೆಯುತ್ತಿದೆ. ಈ ಸಂದರ್ಭ ಹೂಳು ತೆಗೆಯಲು ಕೆರೆಯ ಮಧ್ಯೆ ಮಣ್ಣು ಹಾಕಿ ಟಿಪ್ಪರ್ ಹಾಗೂ ಹಿಟಾಚಿ ಹೋಗುವಂತೆ ದಾರಿ ಮಾಡಲಾಗಿತ್ತು. ಶನಿವಾರವೂ ಈ ದಂಡೆಯ ಮೇಲೆ ತೆರಳಿದ ಹಿಟಾಚಿ ಕೆಲಸ ಮಾಡುತ್ತಿತ್ತು. ಸಂಜೆ ವೇಳೆ ಕೆಲಸ ನಿಲ್ಲಿಸಿದ ವೇಳೆ ಪಲ್ಟಿಯಾಗಿದೆ. ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಇಲ್ಲಿ ಕಾಮಗಾರಿ ಆರಂಭ ಮಾಡಿದ ನಂತರ ಎರಡನೇ ಬಾರಿ ಹಿಟಾಚಿ ಪಲ್ಟಿಯಾಗುತ್ತಿದೆ. ಹೂಳು ತುಂಬಿದ್ದ ಕೆರೆಯಲ್ಲಿ ಲಾರಿ ಓಡಾಟ, ಟಿಪ್ಪರ್ ಓಡಾಟ ಸವಾಲಿನ ಕೆಲಸವಾಗಿದೆ.
ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಮುಂದಿನ ಕೆಲವು ದಿನ ಬಿಸಿಲಿನ ವಾತಾವರಣ ಹೆಚ್ಚಾಗುವ…
2025-26ರಲ್ಲಿ ಕ್ಯಾಂಪ್ಕೊ ₹3,735 ಕೋಟಿ ವಹಿವಾಟು ಮತ್ತು ₹49.62 ಕೋಟಿ ಲಾಭ ದಾಖಲಿಸಿದ್ದು,…
ಸಂಪತ್ತು ಮತ್ತು ಸೌಲಭ್ಯಗಳು ಹೆಚ್ಚಿರುವುದೇ ನಿಜವಾದ ಶ್ರೀಮಂತಿಕೆಯಲ್ಲ; ಅವುಗಳನ್ನು ವಿವೇಕದಿಂದ ಬಳಸುವ ಮನಸ್ಸು…
ಸೆ.11ರಿಂದ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಕಡಿಮೆಯಾಗಲಿದ್ದು, ಬಿಸಿಲು ಹೆಚ್ಚಾಗುವ ಲಕ್ಷಣಗಳಿವೆ.…
ದುರ್ಬಲ ಮುಂಗಾರು ಮತ್ತು ಜಲ–ಪವನ ವಿದ್ಯುತ್ ಉತ್ಪಾದನೆ ಕುಸಿತದಿಂದ ರಾಜ್ಯದಲ್ಲಿ ವಿದ್ಯುತ್ ಪೂರೈಕೆಯ…
2026ರ ಗೌರಿ-ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವಂತೆ ಮಂಗಳೂರು ಮಹಾನಗರಪಾಲಿಕೆ ಸೂಚಿಸಿದ್ದು, POP…