ಬಳ್ಪದಲ್ಲಿರುವ ಇತಿಹಾಸ ಪ್ರಸಿದ್ಧ ಬೋಗಾಯನಕೆರೆ ಅಭಿವೃದ್ಧಿಯಾಗುತ್ತಿದೆ. ಕೆರೆಯಲ್ಲಿರುವ ಹೂಳೆತ್ತುವ ಕಾರ್ಯ ಭರದಿಂದ ನಡೆಯುತ್ತಿದೆ. ಶನಿವಾರ ಸಂಜೆ ನಿಲ್ಲಿಸಿದ್ದ ಹಿಟಾಚಿ ಪಲ್ಟಿಯಾಗಿದೆ. ಟಿಪ್ಪರ್ ಆಪರೇಟರ್ ಕೆಲಸ ನಿಲ್ಲಿಸಿ ತೆರಳಿದ ವೇಳೆ ಮಣ್ಣು ಕುಸಿತವಾಗಿ ಪಲ್ಟಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಬೋಗಾಯನಕೆರೆ ಅಭಿವೃದ್ಧಿಗೆ ಮುನ್ನ ಹೂಳೆತ್ತುವ ಕಾರ್ಯ ನಡೆಯುತ್ತಿದೆ. ಈ ಸಂದರ್ಭ ಹೂಳು ತೆಗೆಯಲು ಕೆರೆಯ ಮಧ್ಯೆ ಮಣ್ಣು ಹಾಕಿ ಟಿಪ್ಪರ್ ಹಾಗೂ ಹಿಟಾಚಿ ಹೋಗುವಂತೆ ದಾರಿ ಮಾಡಲಾಗಿತ್ತು. ಶನಿವಾರವೂ ಈ ದಂಡೆಯ ಮೇಲೆ ತೆರಳಿದ ಹಿಟಾಚಿ ಕೆಲಸ ಮಾಡುತ್ತಿತ್ತು. ಸಂಜೆ ವೇಳೆ ಕೆಲಸ ನಿಲ್ಲಿಸಿದ ವೇಳೆ ಪಲ್ಟಿಯಾಗಿದೆ. ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಇಲ್ಲಿ ಕಾಮಗಾರಿ ಆರಂಭ ಮಾಡಿದ ನಂತರ ಎರಡನೇ ಬಾರಿ ಹಿಟಾಚಿ ಪಲ್ಟಿಯಾಗುತ್ತಿದೆ. ಹೂಳು ತುಂಬಿದ್ದ ಕೆರೆಯಲ್ಲಿ ಲಾರಿ ಓಡಾಟ, ಟಿಪ್ಪರ್ ಓಡಾಟ ಸವಾಲಿನ ಕೆಲಸವಾಗಿದೆ.
ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ ಒಡಿಶಾದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ…
ಆಲಮಟ್ಟಿ ಕೃಷ್ಣಾ ಜಲಾಶಯದಲ್ಲಿ 114.896 ಟಿಎಂಸಿ ನೀರು ಸಂಗ್ರಹವಾಗಿದ್ದು, ಜಲಾಶಯ ಭರ್ತಿಯಾಗಲು ಕೆಲವೇ…
ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಬಿಟ್ಟುಬಿಟ್ಟು ಮಳೆ ಮುಂದುವರಿಯುವ…
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇಕಡಾ 66 ರಷ್ಟು ಮಳೆ ಕೊರತೆಯಿಂದ ಕೇವಲ ಶೇ.…
ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಸಾಮಾನ್ಯ ಮಳೆ ಮುಂದುವರಿಯುವ ನಿರೀಕ್ಷೆಯಿದ್ದು,…
ಉತ್ತರ ಪ್ರದೇಶದಲ್ಲಿ 200 ಹಸುಗಳನ್ನು ಆಧರಿಸಿದ ಸಮಗ್ರ ಗೋ ಆರ್ಥಿಕತೆ ಮಾದರಿಯಲ್ಲಿ ಗೋಮಯದಿಂದ…