ಬಳ್ಪದಲ್ಲಿರುವ ಇತಿಹಾಸ ಪ್ರಸಿದ್ಧ ಬೋಗಾಯನಕೆರೆ ಅಭಿವೃದ್ಧಿಯಾಗುತ್ತಿದೆ. ಕೆರೆಯಲ್ಲಿರುವ ಹೂಳೆತ್ತುವ ಕಾರ್ಯ ಭರದಿಂದ ನಡೆಯುತ್ತಿದೆ. ಶನಿವಾರ ಸಂಜೆ ನಿಲ್ಲಿಸಿದ್ದ ಹಿಟಾಚಿ ಪಲ್ಟಿಯಾಗಿದೆ. ಟಿಪ್ಪರ್ ಆಪರೇಟರ್ ಕೆಲಸ ನಿಲ್ಲಿಸಿ ತೆರಳಿದ ವೇಳೆ ಮಣ್ಣು ಕುಸಿತವಾಗಿ ಪಲ್ಟಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಬೋಗಾಯನಕೆರೆ ಅಭಿವೃದ್ಧಿಗೆ ಮುನ್ನ ಹೂಳೆತ್ತುವ ಕಾರ್ಯ ನಡೆಯುತ್ತಿದೆ. ಈ ಸಂದರ್ಭ ಹೂಳು ತೆಗೆಯಲು ಕೆರೆಯ ಮಧ್ಯೆ ಮಣ್ಣು ಹಾಕಿ ಟಿಪ್ಪರ್ ಹಾಗೂ ಹಿಟಾಚಿ ಹೋಗುವಂತೆ ದಾರಿ ಮಾಡಲಾಗಿತ್ತು. ಶನಿವಾರವೂ ಈ ದಂಡೆಯ ಮೇಲೆ ತೆರಳಿದ ಹಿಟಾಚಿ ಕೆಲಸ ಮಾಡುತ್ತಿತ್ತು. ಸಂಜೆ ವೇಳೆ ಕೆಲಸ ನಿಲ್ಲಿಸಿದ ವೇಳೆ ಪಲ್ಟಿಯಾಗಿದೆ. ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಇಲ್ಲಿ ಕಾಮಗಾರಿ ಆರಂಭ ಮಾಡಿದ ನಂತರ ಎರಡನೇ ಬಾರಿ ಹಿಟಾಚಿ ಪಲ್ಟಿಯಾಗುತ್ತಿದೆ. ಹೂಳು ತುಂಬಿದ್ದ ಕೆರೆಯಲ್ಲಿ ಲಾರಿ ಓಡಾಟ, ಟಿಪ್ಪರ್ ಓಡಾಟ ಸವಾಲಿನ ಕೆಲಸವಾಗಿದೆ.
ಕರಾವಳಿ ಕರ್ನಾಟಕದಲ್ಲಿ ಮುಂದಿನ 10 ದಿನಗಳವರೆಗೂ ಮೋಡ–ಮಳೆಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.…
ಜೂನ್ನಲ್ಲಿ ಶೇ.29ರಷ್ಟು ಮಳೆ ಕೊರತೆ ಎದುರಿಸಿದ್ದ ಬೆಳಗಾವಿ ಜಿಲ್ಲೆಯಲ್ಲಿ ಜುಲೈನಲ್ಲಿ ಉತ್ತಮ ಮಳೆಯಾಗಿದ್ದು,…
ಕೇಂದ್ರ ಸರ್ಕಾರದಿಂದ ಉಚಿತ ಎಲೆಕ್ಟ್ರಿಕ್ ಸ್ಟೌ ವಿತರಣೆ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ…
ಸರ್ಕಾರಿ ಶಾಲೆಗಳಲ್ಲಿ ಬಾಕಿ ಇರುವ ಮಕ್ಕಳಿಗೆ ಆಗಸ್ಟ್ 28ರೊಳಗೆ ಶೂ ಮತ್ತು ಸಾಕ್ಸ್…
ರಾಜ್ಯಾದ್ಯಂತ ಪಿಜಿ, ಹಾಸ್ಟೆಲ್, ಕ್ಯಾಟರಿಂಗ್ ಹಾಗೂ ಹೋಟೆಲ್ಗಳಲ್ಲಿ ಆಹಾರ ಸುರಕ್ಷತಾ ತಪಾಸಣೆ ಮುಂದುವರಿಯಲಿದೆ…
ಉತ್ತರ ಪ್ರದೇಶದಲ್ಲಿ ಸುಮಾರು 10 ಸಾವಿರ ‘ಗೋ ಮಿತ್ರ’ರಿಗೆ ತರಬೇತಿ ನೀಡಿ ಗೋ…