Advertisement
ಧಾರ್ಮಿಕ

ಇತಿಹಾಸ ಪ್ರಸಿದ್ಧ ಬಳ್ಪ ತ್ರಿಶೂಲಿನೀ ದೇವಸ್ಥಾನದಲ್ಲಿ ಜಾತ್ರಾ ಸಂಭ್ರಮ | ಡಿ.30 ಬ್ರಹ್ಮರಥೋತ್ಸವ |

Share

ಇತಿಹಾಸ ಪ್ರಸಿದ್ಧ , ಶಿಲಾಮಯ ದೇಗುಲ  ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಉತ್ಸವ ಆರಂಭವಾಗಿದ್ದು ಡಿ.30 ರಂದು ಬ್ರಹ್ಮರಥೋತ್ಸವ ಹಾಗೂ ಡಿ.31  ರಂದು ದರ್ಶನ ಬಲಿ ನಡೆಯಲಿದೆ ಎಂದು ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀವತ್ಸ ಎಂ ವಿ ಹಾಗೂ ಧಾರ್ಮಿಕ ಉತ್ಸವ ಸಮಿತಿ ಅಧ್ಯಕ್ಷ ಅರ್ಗುಡಿ ಸದಾನಂದ ರೈ ತಿಳಿಸಿದ್ದಾರೆ.

ಸಂಪೂರ್ಣ ಶಿಲಾಮಯವಾದ, ದಕ್ಷಿಣ ಭಾರತದ ಅಪರೂಪದ ಶಿಲಾಮಯ ದೇಗುಲ ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಉತ್ಸವಗಳು ಆರಂಭಗೊಂಡಿದೆ. ಡಿ.27 ರಿಂದ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಉತ್ಸವಾದಿಗಳು ನಡೆದು ಡಿ. 28 ರಿಂದ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಉತ್ಸವಗಳು ಆರಂಭಗೊಳ್ಳುತ್ತಿದೆ.

ಡಿ.28 ರಂದು ದೇವತಾ ಪ್ರಾರ್ಥನೆ, ಪ್ರಾಸಾದ ಶುದ್ಧಿ ಇತ್ಯಾದಿ ವೈದಿಕ ಕಾರ್ಯಗಳು ನಡೆದು ಡಿ.29 ರಂದು ಗಣಪತಿ ಹವನ, ನವಗ್ರಹ ಹವನ ಸಹಿತ ವೈದಿಕ ಕಾರ್ಯಕ್ರಮಗಳ ಬಳಿಕ ಡಿ.30 ರಂದು ಮಧ್ಯಾಹ್ನ ದೇವರು ರಥಾರೂಢರಾಗಿ ರಾತ್ರಿ 9.30 ಕ್ಕೆ ಬ್ರಹ್ಮರಥೋತ್ಸವ ಹಾಗೂ ಬಳ್ಪ ಬೆಡಿ, ಉತ್ಸವ ಬಲಿ, ಓಡುಬಲಿ ನಡೆಯಲಿದೆ. ಡಿ.31 ರಂದು ದರ್ಶನ ಬಲಿ ನಡೆದು ಸಂಜೆ ಅವಭ್ರತೋತ್ಸವ ನಡೆಯಲಿದೆ.

ಡಿ.30  ರಂದು ಸಂಜೆ 6 ಗಂಟೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನಾರ್ಚನೆ ನಡೆಯಲಿದೆ. ಸಿದ್ಧಿವಿನಾಯಕ ಸ್ಫೋಟ್ಸ್‌ ಕ್ಲಬ್‌ ಸಂಯೋಜಿಸುವ ಈ ಕಾರ್ಯಕ್ರಮದಲ್ಲಿ ಗಾನಸಾರಥಿ ಖ್ಯಾತಿ ಬನ್ಸಾಲೆ ರಾಘವೇಂದ್ರ ಆಚಾರ್ಯ, ಸ್ವರವಾರಿಧಿ ಖ್ಯಾತಿಯ ಕಾವ್ಯಶ್ರೀ ಅಜೇರು, ಯುವಭಾಗವತ ಪ್ರಶಾಂತ್‌ ರೈ ಪುತ್ತೂರು ಭಾಗವಹಿಸುವರು. 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 16-05-2026 | ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು – ಮೇ 20 ರಿಂದ ಕರಾವಳಿಯಲ್ಲಿ ಮುಂಗಾರು ಮಾದರಿಯ ಮಳೆ ಸಾಧ್ಯತೆ

ಕರ್ನಾಟಕದ ಹಲವೆಡೆ ಪೂರ್ವ ಮುಂಗಾರು ಮಳೆ ಮುಂದುವರಿದಿದ್ದು, ಕರಾವಳಿಯಲ್ಲಿ ಮೇ 20ರಿಂದ ಮುಂಗಾರು…

1 hour ago

ಮುಂಗಾರು ಮೇ 26ಕ್ಕೆ ಕೇರಳ ಪ್ರವೇಶ ಸಾಧ್ಯ : ಕರ್ನಾಟಕದ ಹಲವೆಡೆ ಭಾರೀ ಮಳೆ ಎಚ್ಚರಿಕೆ – ರೈತರಿಗೆ ಸಲಹೆ ಏನು..?

ಮೇ 26ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ…

1 hour ago

ಅಡಿಕೆ ಮಾರುಕಟ್ಟೆಯಲ್ಲಿ ಆತಂಕದ ತಿರುವು..! ಧಾರಣೆ ಇಳಿಕೆ ಯಾಕೆ..? ಮತ್ತೆ ಏರಿಕೆಯಾಗುತ್ತದಾ..? ಬೆಳೆಗಾರರಲ್ಲಿ ಹೆಚ್ಚಿದ ಕುತೂಹಲ

ಚಾಲಿ ಅಡಿಕೆ ಧಾರಣೆ ಮೇ ತಿಂಗಳಲ್ಲಿ ಇಳಿಕೆಯಾಗುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಬರ್ಮಾ-ಇಂಡೋನೇಷ್ಯಾ…

3 hours ago

ರಬ್ಬರ್‌ ದರ 13 ವರ್ಷಗಳಲ್ಲಿ ದಾಖಲೆ ಮಟ್ಟಕ್ಕೆ..! ಆದರೆ ಯಾಕೆ ಬೆಳೆಗಾರರು ಇನ್ನೂ ಚಿಂತೆಯಲ್ಲಿ..?

ರಬ್ಬರ್‌ ದರವು ದೇಶದಲ್ಲಿ ದಾಖಲೆ ಮಟ್ಟ ತಲುಪಿದ್ದು, ರೈತರಿಗೆ ಲಾಭದ ನಿರೀಕ್ಷೆ ಮೂಡಿಸಿದೆ.…

9 hours ago

ಅಂಡಮಾನಿಗೆ ಮುಂಗಾರು ಶೀಘ್ರ ಪ್ರವೇಶ ಸಾಧ್ಯತೆ : ಕೇರಳಕ್ಕೆ ಮುಂಗಾರು ಬೇಗನೆ ಆಗಮನದ ಸೂಚನೆ

ಮೇ 15 ರ ಸುಮಾರಿಗೆ ಮುಂಗಾರು ಅಂಡಮಾನ್ ಸಮುದ್ರ ಪ್ರವೇಶಿಸುವ ಸಾಧ್ಯತೆ ಇದೆ.…

2 days ago