ಭಾರತೀಯ ಕಿಸಾನ್ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಮಾ.26 ರಂದು ಅರ್ಥಿಕ ಬೆಳೆಯಾಗಿ ಬಿದಿರು ಬೆಳೆಸುವ(Bamboo cultivation) ಕುರಿತು ವಿಚಾರ ವಿನಿಮಯ ಸಭೆಯನ್ನು ಕರೆಯಲಾಗಿದೆ. ಪುತ್ತೂರಿನ ಪಂಚವಟಿಯಲ್ಲಿ ಈ ಸಭೆ ನಡೆಯಲಿದೆ.
ಸಭೆಯಲ್ಲಿ ಬಿದಿರು ಸೊಸೈಟಿ ಆಫ್ ಇಂಡಿಯಾ ಸಂಸ್ಥೆಯ, ಪುನತಿ ಶ್ರೀಧರ್,ಐ.ಎಫ್.ಎಸ್,(ನಿವೃತ್ತ ), ಡಾ.ಕೆ.ಎನ್.ಮೂರ್ತಿ, ಐ.ಎಫ್.ಎಸ್.(ನಿವೃತ್ತ) , ಸುಂದರ ನಾಯಕ್,( ಮಾಜಿ ಅಧ್ಯಕ್ಷರು) ಭಾಗವಹಿಸುವರು.
ಸಭೆಯಲ್ಲಿ ಆರ್ಥಿಕವಾಗಿ ಬಿದಿರು ಬೆಳೆಸುವ ರೈತರಿಗೆ ಕನಿಷ್ಠ ದರದಲ್ಲಿ ಬಿದಿರು ಗಿಡಗಳ ಲಭ್ಯತೆ, ಬಿದಿರು ಬೆಳೆಸಿರುವ ರೈತರೀಗೆ ಹಂತ ಹಂತವಾಗಿ ಹಣಕಾಸು ಸಹಾಯ ಧನವನ್ನು ಒದಗಿಸುವ ಯೋಜನೆ , ಬಿದಿರು ಗಿಡಗಳ ನರ್ಸರಿ, ಮೌಲ್ಯ ವರ್ಧನೆ, ಕೌಶಲ್ಯ ಅಭಿವೃದ್ಧಿ ಮತ್ತು ಮಾರುಕಟ್ಟೆ ಕುರಿತು ಅಗತ್ಯ ಇರುವ ಪ್ರೊತ್ಸಾಹ, ಪರಿಸರದಲ್ಲಿ ಮಳೆ ನೀರು ಸಂಗ್ರಹ, ವಾತಾವರಣದಲ್ಲಿ ಶುದ್ಧವಾದ ಗಾಳಿ ಮತ್ತು ಮಣ್ಣಿನ ಸವಕಳಿ ತಡೆಯುವ ಬಗ್ಗೆ ಚರ್ಚೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸ ಬೇಕಾದ ವಾಟ್ಸಪ್ ಸಂಖ್ಯೆ: 9731855028 ಎಂ.ಜಿ.ಸತ್ಯನಾರಾಯಣ ಸುಳ್ಯ ಮತ್ತು 9591148552 – ಮೂಲಚಂದ್ರರವರು ಪುತ್ತೂರು. ಭಾರತೀಯ ಕೀಸಾನ್ ಸಂಘ.
ದಕ್ಷಿಣ ಕನ್ನಡದಲ್ಲಿ ಉಷ್ಣಾಂಶ ಏರಿಕೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮ ಅಗತ್ಯವಾಗಿದೆ. ನೀರು ಹೆಚ್ಚು…
ರೈತರಿಗೆ ನ್ಯಾಯ ಕೊಡಲು MSPಗೆ ವೈಜ್ಞಾನಿಕ ಆಧಾರ ಅಗತ್ಯ ಎಂದು ಕೋಡಿಹಳ್ಳಿ ಚಂದ್ರಶೇಖರ್…
ವಿಟ್ಲದಲ್ಲಿ ₹12 ಕೋಟಿ ವೆಚ್ಚದ ಕ್ಯಾಂಪ್ಕೊ ನೂತನ ಕಟ್ಟಡಕ್ಕೆ ಮಾರ್ಚ್ 27ರಂದು ಶಂಕುಸ್ಥಾಪನೆ…
ದೇಶದ 651 ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ಹೆಚ್ಚು ದುರ್ಬಲವೆಂದು…
26.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ರಾಜ್ಯದ ವಿವಿಧ…
ರಾಜ್ಯದ ಹಲವು ಭಾಗಗಳಲ್ಲಿ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆ ಮುಂದುವರಿದಿದೆ. ಮಾರ್ಚ್…