ಭಾರತೀಯ ಕಿಸಾನ್ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಮಾ.26 ರಂದು ಅರ್ಥಿಕ ಬೆಳೆಯಾಗಿ ಬಿದಿರು ಬೆಳೆಸುವ(Bamboo cultivation) ಕುರಿತು ವಿಚಾರ ವಿನಿಮಯ ಸಭೆಯನ್ನು ಕರೆಯಲಾಗಿದೆ. ಪುತ್ತೂರಿನ ಪಂಚವಟಿಯಲ್ಲಿ ಈ ಸಭೆ ನಡೆಯಲಿದೆ.
ಸಭೆಯಲ್ಲಿ ಬಿದಿರು ಸೊಸೈಟಿ ಆಫ್ ಇಂಡಿಯಾ ಸಂಸ್ಥೆಯ, ಪುನತಿ ಶ್ರೀಧರ್,ಐ.ಎಫ್.ಎಸ್,(ನಿವೃತ್ತ ), ಡಾ.ಕೆ.ಎನ್.ಮೂರ್ತಿ, ಐ.ಎಫ್.ಎಸ್.(ನಿವೃತ್ತ) , ಸುಂದರ ನಾಯಕ್,( ಮಾಜಿ ಅಧ್ಯಕ್ಷರು) ಭಾಗವಹಿಸುವರು.
ಸಭೆಯಲ್ಲಿ ಆರ್ಥಿಕವಾಗಿ ಬಿದಿರು ಬೆಳೆಸುವ ರೈತರಿಗೆ ಕನಿಷ್ಠ ದರದಲ್ಲಿ ಬಿದಿರು ಗಿಡಗಳ ಲಭ್ಯತೆ, ಬಿದಿರು ಬೆಳೆಸಿರುವ ರೈತರೀಗೆ ಹಂತ ಹಂತವಾಗಿ ಹಣಕಾಸು ಸಹಾಯ ಧನವನ್ನು ಒದಗಿಸುವ ಯೋಜನೆ , ಬಿದಿರು ಗಿಡಗಳ ನರ್ಸರಿ, ಮೌಲ್ಯ ವರ್ಧನೆ, ಕೌಶಲ್ಯ ಅಭಿವೃದ್ಧಿ ಮತ್ತು ಮಾರುಕಟ್ಟೆ ಕುರಿತು ಅಗತ್ಯ ಇರುವ ಪ್ರೊತ್ಸಾಹ, ಪರಿಸರದಲ್ಲಿ ಮಳೆ ನೀರು ಸಂಗ್ರಹ, ವಾತಾವರಣದಲ್ಲಿ ಶುದ್ಧವಾದ ಗಾಳಿ ಮತ್ತು ಮಣ್ಣಿನ ಸವಕಳಿ ತಡೆಯುವ ಬಗ್ಗೆ ಚರ್ಚೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸ ಬೇಕಾದ ವಾಟ್ಸಪ್ ಸಂಖ್ಯೆ: 9731855028 ಎಂ.ಜಿ.ಸತ್ಯನಾರಾಯಣ ಸುಳ್ಯ ಮತ್ತು 9591148552 – ಮೂಲಚಂದ್ರರವರು ಪುತ್ತೂರು. ಭಾರತೀಯ ಕೀಸಾನ್ ಸಂಘ.
ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳು ಯುವ ಉದ್ಯಮಶೀಲತೆಗೆ ಮುಂದಿನ ದೊಡ್ಡ ಅವಕಾಶಗಳಾಗಿದ್ದು,…
ಕರ್ನಾಟಕದ ಬರಪೀಡಿತ ಪ್ರದೇಶಗಳಲ್ಲಿ ಬೆಳೆ ವಿಮೆ ನೋಂದಣಿ ಹಾಗೂ ಪ್ರೀಮಿಯಂ ಕಡಿತದ ಅವಧಿಯನ್ನು…
ಕರ್ನಾಟಕದ 102 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಈ ತಿಂಗಳಾಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ…
ಮಂಗಳೂರಿನ ಅಶ್ಮಿತ್ ಎ.ಜೆ. ಅವರು ಝೀ ಕನ್ನಡದ ‘ಸರಿಗಮಪ 2026’ರ ವಿಜೇತರಾಗಿ ₹20…
ದಕ್ಷಿಣ ಕನ್ನಡದ ಮಲೆನಾಡು ತಪ್ಪಲಿನ ಸುಬ್ರಹ್ಮಣ್ಯ, ಸುಳ್ಯ, ಕಡಬ ಸೇರಿದಂತೆ ಹಲವು ಪ್ರದೇಶಗಳಲ್ಲಿ…
ಆಗಸ್ಟ್ 26ರಿಂದ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳಿದ್ದು, ಕರಾವಳಿ…