ಕೃಷಿ

ಬಾಳೆದಿಂಡಿನ ರಸ ಕಿಡ್ನಿಯಲ್ಲಿರುವ ಕಲ್ಲನ್ನು ಕರಗಿಸಬಲ್ಲುದು..!

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಕಲ್ಪವೃಕ್ಷ ಎಂದಾಕ್ಷಣ ತೆಂಗು ಎಂದು ನಮಗೆ ನೆನಪಿಗೆ ಬರುತ್ತದೆ. ಆದರೆ  ಬಾಳೆಯೂ ಕಲ್ಪವೃಕ್ಷವೇ. ಇದರ ಎಲ್ಲಾ ಭಾಗಗಳು ಉಪಯುಕ್ತವೇ ಆಗಿದೆ.

Advertisement

ಬಾಳೆಗೊನೆ ಮೋತೆ ದಿಂಡು ಉತ್ತಮ ಔಷಧಿಯ ಗುಣಗಳನ್ನು ಹೊಂದಿದ್ದು ಬಹಳ ಉಪಯುಕ್ತವಾಗಿದೆ. ಇದೀಗ ಒಂದು ಅಡಿ ಉದ್ದದ ದಿಂಡಿಗೂ ಬಹಳ ಡಿಮಾಂಡ್ ಇದೆ. ಇದರಲ್ಲಿ ಚಟ್ನಿ, ಸಾಸಿವೆ, ಸಾಂಬಾರ್, ಪಲ್ಯ, ದಿಂಡಿನ ಪಕೋಡ, ದೋಸೆ, ಇಡ್ಲಿ ಸಲಾಡ್,ಮೊಸರು ಗೊಜ್ಜು.. ಹೀಗೇ ನಾನಾ ವೈವಿಧ್ಯ ತಿನಿಸುಗಳು ಮಾಡಲಾಗುತ್ತದೆ.  ದಿಂಡಿನ ನಾರಿನಿಂದ ಪರಿಸರ ಸ್ನೇಹಿ ಉತ್ಪನ್ನಗಳನ್ನು ಉತ್ಪಾದಿಸುತ್ತಿದೆ. ಚೀಲಗಳು, ಬುಟ್ಟಿಗಳು, ಸಸಿ ಕುಂಡಗಳು, ಯೋಗಾಸನ ಚಾಪೆಗಳು, ಹಗ್ಗ ಇತ್ಯಾದಿಗಳ ತಯಾರಿಯಾಗುತ್ತದೆ. ಸೀರೆ, ಅಂಗಿ, ಬಟ್ಟೆಗಳು, ಪರಿಸರಸ್ನೇಹಿ ಹರ್ಬಲ್ ಮೆಡಿಸಿನ್  ಮಾಡಲಾಗುತ್ತದೆ.

ಬಾಳೆದಿಂಡಿನ ರಸವು ಮುಖ್ಯವಾಗಿ ಕಿಡ್ನಿಯಲ್ಲಿರುವ ಕಲ್ಲನ್ನು ಕರಗಿಸಲು ರಾಮಬಾಣವಾಗಿದೆ .ಗ್ಯಾಸ್ಟ್ರಿಕ್ ಸಮಸ್ಯೆಗೆ‌,  ಮೂತ್ರಪಿಂಡದ ಸಮಸ್ಯೆಗೆ ಹಾಗೂ ಎಸಿಡಿಟಿಯನ್ನು ಕಡಿಮೆ ಮಾಡಲು ಈ ರಸ ಉಪಯೋಗವಾಗಿದೆ.  ಖಾಲಿ ಹೊಟ್ಟೆಯಲ್ಲಿ ಬಾಳೆದಿಂಡಿನ ರಸವನ್ನು ಸೇವಿಸುವುದರಿಂದ ಎಸಿಡಿಟಿ ಸಮಸ್ಯೆ ದೂರವಾಗುತ್ತದೆ.

ಬಾಳೆಗಿಡ ಕಡಿದು ಮಧ್ಯದ ದಿಂಡನ್ನು ತೆಗೆದು ಗುಳಿಯ ಆಕಾರದಲ್ಲಿ ಸಂಜೆ ಮಾಡಿ ಪ್ಲಾಸ್ಟಿಕ್,ಬಾಳೆ ಎಲೆ ಅಥವಾ ಹಾಳೆ ಮುಚ್ಚಬೇಕು. ಮರುದಿನ ಬೆಳಗ್ಗೆ ನೋಡುವಾಗ ಗುಳಿತುಂಬಾ ನೀರು ತುಂಬಿರುತ್ತದೆ. ಇದನ್ನು ತೆಗೆದುಕೊಳ್ಳಬೇಕು.

ಬಾಳೆದಿಂಡಿನ ರಸ  ಕುಡಿಯುವುದರಿಂದ   ಕಿಡ್ನಿಯಲ್ಲಿನ ಕಲ್ಲು ಕರಗುತ್ತದೆ. ವರ್ಷಕ್ಕೆ ಎರಡು ಬಾರಿಯಾದರೂ ಸೇವಿಸುವುದರಿಂದ ಹೊಟ್ಟೆಯಲ್ಲಿರುವ ಕಲ್ಮಶಗಳನ್ನು ಹೊರಹಾಕುತ್ತದೆ .ಇದರ ತಾಜಾ ನೀರನ್ನು ಹಾಗೆ ಕುಡಿಯುವುದು ಉತ್ತಮ ಅಥವಾ ಜೀರಿಗೆ, ಶುಂಠಿ ,ನಿಂಬೆರಸ, ಗಾಂಧಾರಿ ಮೆಣಸು, ಚಿಟಿಕೆ ಉಪ್ಪು, ಬೇಕಿದ್ದರೆ ಕಲ್ಲು ಸಕ್ಕರೆ ಸೇರಿಸಿ ಕುಡಿಯಬಹುದು.  ಇದನ್ನು ಸಮಸ್ಯೆ ಇದ್ದವರೇ ಕುಡಿಯಬೇಕೆಂದಿಲ್ಲ ಇಲ್ಲದವರುಕೂಡಾ ಕುಡಿಯಬಹುದು. ಸಾಯಂಕಾಲದಿಂದ ಬೆಳಿಗ್ಗೆ ಆಗುವಾಗ ಐದರಿಂದ ಆರು ಆರು ಗ್ಲಾಸ್ ಅಂದರೆ ಸುಮಾರು ಒಂದು ಲೀಟರ್ ನಷ್ಟು ನೀರು ತುಂಬುತ್ತದೆ.  ಇದೊಂದು ಸಂಜೀವಿನಿ  ಆಹಾರವಾಗಿದೆ.

ಬರಹ :
ಕುಮಾರ ಪೆರ್ನಾಜೆ ಪುತ್ತೂರು
, ಹೆಚ್ಚಿನ ಮಾಹಿತಿಗೆ ಕರೆ ಮಾಡಿ ಮೋ:9480240643 .……ಮುಂದೆ ಓದಿ…..
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಕುಮಾರ್ ಪೆರ್ನಾಜೆ

ಕುಮಾರ್‌ ಪೆರ್ನಾಜೆ ಅವರು ಕೃಷಿಕರು. ಹವ್ಯಾಸಿ ಪತ್ರಕರ್ತರು, ಕೃಷಿ ಬರಹಗಾರರು. ಕೃಷಿಯಲ್ಲಿ ಹೊಸ ಚಿಂತನೆಗಳನ್ನು ಅಳವಡಿಸಿದವರು. ಕರ್ನಾಟಕ ಸರ್ಕಾರವು ಕೃಷಿ ಪಂಡಿತ ಪ್ರಶಸ್ತಿ ನೀಡಿ ಗೌರವಿಸಿದೆ.

Published by
ಕುಮಾರ್ ಪೆರ್ನಾಜೆ

Recent Posts

ಕೂಡಿಟ್ಟ ಆಸ್ತಿ ಮನೆಯಲ್ಲೇ ನಡೀತು ಕುಸ್ತಿ

ಹಕ್ಕಿಗಳು ಮರಿಗಳಿಗೆ ಹಾರಲು ಕಲಿಸುತ್ತವೆ. ಒಮ್ಮೆ ಹಾರಲು ಬಂತೆಂದರೆ ಗೂಡು ಬಿಟ್ಟು ಹಾರುತ್ತವೆ…

4 hours ago

ಹವಾಮಾನ ವರದಿ | 23-04-2025 | ಇಂದು ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ | ರಾಜ್ಯದಲ್ಲಿ ಎ.27 ರ ನಂತರ ಮಳೆ ಹೆಚ್ಚಾಗುವ ಲಕ್ಷಣ

ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ.…

11 hours ago

ಅರ್ಧಕೇಂದ್ರ ಯೋಗದಿಂದ ಈ 3 ರಾಶಿಗೆ ಯಶಸ್ಸು | ಕೋಟ್ಯಾಧಿಪತಿ ಯೋಗ!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜೋತಿಷಿಗಳನ್ನು ಸಂಪರ್ಕಿಸಿ 9535156490

18 hours ago

ಹೊಸರುಚಿ | ಗುಜ್ಜೆ ಮೊಸರು ಗೊಜ್ಜು

ಗುಜ್ಜೆ ಮೊಸರು ಗೊಜ್ಜು ಬೇಕಾಗುವ ಸಾಮಾಗ್ರಿಗಳು :  ಗುಜ್ಜೆ 1 ಕಪ್ ಬೇಯಿಸಿ…

18 hours ago

ಜಮ್ಮು- ಕಾಶ್ಮೀರ | ಪ್ರವಾಸಿಗರ ಮೇಲೆ ಉಗ್ರರ ದಾಳಿ | ಉಗ್ರರ ದಾಳಿಗೆ ಕನ್ನಡಿಗ ಸೇರಿ 20 ಕ್ಕೂ ಹೆಚ್ಚು ಜನರು ಬಲಿ

ಜಮ್ಮು- ಕಾಶ್ಮೀರದ  ಪೆಹಲ್ಗಾಮ್ ನಲ್ಲಿಂದು ಪ್ರವಾಸಿಗರ ಮೇಲೆ  ಭಯೋತ್ಪಾದಕ ದಾಳಿ ನಡೆದಿದೆ. ಘಟನೆಯಲ್ಲಿ…

1 day ago