Advertisement
Opinion

30ಕ್ಕೆ ಮುನ್ನ ಅಮ್ಮನಾಗಿ…!? | ಏಕೆ? ಎಂದು ಕೇಳುವ ಹುಡುಗಿಯರೇ ಇಂದು ಹೆಚ್ಚಾಗಿದ್ದಾರೆ….!

Share

ವಿದ್ಯಾಭ್ಯಾಸ(Education), ನೌಕರಿಯ ಹುಡುಕಾಟ(Searching Job), ಸೂಕ್ತ ವರ(Bride groom) ಸಿಗುತ್ತಿಲ್ಲ, ಹೀಗೆ ನಾನಾ ಕಾರಣಗಳಿಂದಾಗಿ ಹುಡುಗಿಯರು(Girls) ಇಂದು ತಮ್ಮ ಮದುವೆಯನ್ನು(Marriage) ಮುಂದೂಡುತ್ತಾ ಬರುತ್ತಿದ್ದಾರೆ. 30 ವಯಸ್ಸಿನ ನಂತರ ಮದುವೆಯಾಗುವವರ ಸಂಖ್ಯೆಯೂ ಹೆಚ್ಚಾಗಿದೆ. ಮದುವೆಯಾದ ನಂತರ ಕೆಲ ವರ್ಷಗಳ ಕಾಲ ಮಕ್ಕಳ(Child) ಕಿರಿ ಕಿರಿ ಇಲ್ಲದೇ ಹಾಯಾಗಿರೋಣ ಎಂದು ಅಮ್ಮನಾಗುವುದನ್ನು(Mother) ಮುಂದೂಡುವವರೂ ಈಗ ಹೆಚ್ಚಾಗಿದ್ದಾರೆ. ಇಂದಿನ ಯುವತಿಯರಲ್ಲಿ ಅದಾಗಲೇ ಅನಿಯಮಿತ ಮುಟ್ಟು, PCOD ಗಳಂತಹ ಸಂತಾನ ಹೀನತೆಯ ಸಮಸ್ಯೆಗಳು ಹೆಚ್ಹು. ಮದುವೆಯ ಮುಖ್ಯ ಉದ್ದೇಶ ಈ ಎಲ್ಲದರ ನಡುವೆ ಕಳೆದುಹೋಗಿದೆ.

ಇದು ಸರಿಯಾದ ನಿರ್ಧಾರವೇ..?? ಖಂಡಿತವಾಗಿಯೂ ಅಲ್ಲ..! : ನಾವು ಅತ್ಯಂತ ಆರೋಗ್ಯವಂತ – ಶಕ್ತಿವಂತರಾಗಿ ಇದ್ದಾಗ ನಮಗೆ ಮಗು ಜನಿಸಿದರೆ, ಆ ಮಗುವಿನ ಆರೋಗ್ಯ ಚೆನ್ನಾಗಿರುತ್ತದೆ. ನಾವು ಅಶಕ್ತರಾದಾಗ, ಅನಾರೋಗ್ಯ ಹೊಂದಿದಾಗ, ಜನಿಸುವ ಮಗು ಖಂಡಿತವಾಗಿಯೂ ಸದೃಢ ಇರುವುದಿಲ್ಲ. 20 ರಿಂದ 25 ವಯಸ್ಸಿನ ನಡುವೆ ನಾವು ಅತ್ಯಂತ ಶಕ್ತಿವಂತರಾಗಿರುತ್ತೇವೆ. ಹೀಗಾಗಿ ಈ ಅವಧಿಯಲ್ಲಿನ ಮದುವೆ – ಮಕ್ಕಳು ಅತ್ಯಂತ ಸೂಕ್ತ. ಸ್ವಲ್ಪ ತಡವಾಗಿದೆ ಎಂದರೂ ಕೂಡ 30ರೊಳಗೆ ಅಮ್ಮನಾಗುವುದು ಒಳ್ಳೆಯದು. ಏಕೆಂದರೆ 30 ರ ನಂತರ ಸಂತಾನ ಶಕ್ತಿ ಕ್ಷೀಣಿಸುತ್ತಾ ಹೋಗುತ್ತದೆ. 35 ರಷ್ಟು ಹೊತ್ತಿಗೆ ಮಹಿಳೆಯರ ಸಂತಾನ ಶಕ್ತಿ 50 ಪ್ರತಿಶತ ಕಡಿಮೆಯಾಗಿರುತ್ತದೆ. ಅಂದರೆ ಮಕ್ಕಳಾಗುವ ಸಾಧ್ಯತೆ ಕೇವಲ 50 ಪ್ರತಿಶತ ಮಾತ್ರ. 40 ರ ನಂತರ ಹುಟ್ಟುವ ಮಕ್ಕಳು ಇನ್ನೂ ಅಶಕ್ತ. ಮಕ್ಕಳು ಹುಟ್ಟುವ ಸಾಧ್ಯತೆಯೂ ಕೂಡ ಇನ್ನೂ ಕಡಿಮೆ. ನಮ್ಮ ಆರ್ಥಿಕ ಭವಿಷ್ಯವನ್ನು ಗಟ್ಟಿ ಮಾಡಿಕೊಳ್ಳುವ ಅನಿವಾರ್ಯತೆಯಲ್ಲಿ, ನಮ್ಮ Biology ಮತ್ತು ಮಕ್ಕಳ ಭವಿಷ್ಯವನ್ನು ಹಾಳು ಮಾಡುವುದು ಎಷ್ಟು ಸರಿ ಬನ್ನಿ. 30ರೊಳಗೆ ಮದುವೆಯಾಗಿ- ಅಮ್ಮನಾಗಿ. ಇದು ಪುರುಷರಿಗೆ ಕೂಡ ಅನ್ವಯವಾಗುತ್ತದೆ. ಸದೃಢ ಭಾರತವನ್ನು ಕಟ್ಟೋಣ.

ಬರಹ :
ಡಾ. ಶ್ರೀಶೈಲ ಬದಾಮಿ,
ಧಾರವಾಡ, 9480640182
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಶಿರಾಡಿ ಘಾಟ್‌ನಲ್ಲಿ ಸೋಮವಾರ ಟ್ರಾಫಿಕ್‌ ಸಂಕಷ್ಟದ ಸಾಧ್ಯತೆ – ಮುಂಜಾಗ್ರತಾ ಕ್ರಮ ಅಗತ್ಯ

ಮೂರು ದಿನಗಳ ರಜೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಶಿರಾಡಿ ಘಾಟ್‌ನಲ್ಲಿ…

4 hours ago

ಹವಾಮಾನ ವರದಿ |13-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಹಂತ ಹಂತವಾಗಿ ಚುರುಕಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಮಳೆ ಕಡಿಮೆಯಾಗಿದ್ದು, ಬಿಸಿಲು ಹೆಚ್ಚಾಗಿರುವ ನಡುವೆಯೇ ಸೆ.14ರಿಂದ ದಕ್ಷಿಣ ಒಳನಾಡಿನಲ್ಲಿ…

13 hours ago

ರೈತರ ಆದಾಯ ಹೆಚ್ಚಿಸಲು ಬಹುಬೆಳೆ, ಪಶುಸಂಗೋಪನೆ, ಮೀನುಗಾರಿಕೆಗೆ ಒತ್ತು

ನೀರಿನ ಕೊರತೆ ಮತ್ತು ಹವಾಮಾನ ಬದಲಾವಣೆಯ ನಡುವೆ ಭತ್ತ–ಗೋಧಿಯಂತಹ ಹೆಚ್ಚಿನ ನೀರು ಮತ್ತು…

17 hours ago

ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸದ್ಯ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ…

2 days ago

ಹಸುವಿನ ಹಾಲಿಗೆ ಬದಲಾಗಿ ‘ಲ್ಯಾಬ್‌ ಹಾಲು’ – ಇನ್ನು ಕೇವಲ ವಿಜ್ಞಾನಕಲ್ಪನೆ ಅಲ್ಲ..! ಹೊಸ ಅಧ್ಯಯನದ ಲೆಕ್ಕಾಚಾರ

ಇಂಪೀರಿಯಲ್ ಕಾಲೇಜ್ ಲಂಡನ್‌ನ ಅಧ್ಯಯನದ ಪ್ರಕಾರ, precision fermentation ಮೂಲಕ ತಯಾರಿಸುವ ಹಾಲಿಗೆ…

2 days ago

ಅಡಿಕೆಗೆ ಉತ್ತಮ ಬೆಲೆ , ಆದರೂ ಬೆಳೆಗಾರರ ಚಿಂತೆ ಮುಂದುವರಿದಿದೆ – ಕಾರಣವೇನು?

ಅಡಿಕೆ ಧಾರಣೆ ಏರಿಳಿತ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡುತ್ತಿದೆ. ಇದಕ್ಕೆ ಭಾರತ ಮಾತ್ರವಲ್ಲ…

2 days ago