ಭೋಪಾಲ್‌ ಅನಿಲ ದುರಂತ | 39 ವರ್ಷ ಕಳೆದರು ಇನ್ನೂ ಮಾಸಿಲ್ಲ ನೆನಪು | ಚುನಾವಣಾ ಫಲಿತಾಂಶದ ಹೊತ್ತಿನಲ್ಲಿ ಸಿಎಂ ಶ್ರದ್ಧಾಂಜಲಿ ಸಲ್ಲಿಕೆ |

December 3, 2023
12:36 PM
ಭೋಪಾಲ್‌ ಅನಿಲ ದುರಂತ ನಡೆದು 39 ವರ್ಷ ಕಳೆದರು ಇಂದಿಗೂ ಮಕ್ಕಳು ಅಂಗವೈಕಲ್ಯದಿಂದಲೇ ಹುಟ್ಟುತ್ತಿದ್ದಾರೆ. 

ರಾತ್ರಿ ಕಳೆದು ಬೆಳಗಾಗುವುದೊರೊಳಗೆ ಇಡೀ ಮನು ಕುಲವೇ ಬೆಚ್ಚಿ ಬೀಳುವಂತ ಘಟನೆ ನಡೆದು ಹೋಯ್ತು. ನೋಡ ನೋಡುತ್ತಿದ್ದಂತೆ ಎಲ್ಲೆಂದರಲ್ಲಿ ಮನುಷ್ಯ ಉಸಿರಾಡಲಾಗದೆ ಪ್ರಾಣ ಕಳೆದುಕೊಂಡು. ಅದಾಗಿ 39 ವರ್ಷ ಕಳೆದರು ಇಂದಿಗೂ ಮಕ್ಕಳು ಅಂಗವೈಕಲ್ಯದಿಂದಲೇ ಹುಟ್ಟುತ್ತಿದ್ದಾರೆ.  ಮಧ್ಯಪ್ರದೇಶದ(Madya Pradesh) ಚುನಾವಣಾ ಫಲಿತಾಂಶದ(Election Result) ಹೊತ್ತಿನಲ್ಲಿ ಹಾಲಿ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌(CM Shivaraj Sing Chauhan), 1984ರ ಡಿಸೆಂಬರ್‌ 2ರ ತಡರಾತ್ರಿ ನಡೆದ ಭೀಕರ ಅನಿಲ ದುರಂತವನ್ನು ನೆನಪಿಸಿಕೊಂಡಿದ್ದಾರೆ. ಅಂದು ದುರ್ಮರಣ ಹೊಂದಿದ 3 ಸಾವಿರಕ್ಕೂ ಹೆಚ್ಚು ಮಂದಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

Advertisement
Advertisement

ಈ ಬಗ್ಗೆ ಮಾತನಾಡಿರುವ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌, ಅಂದು ಮಡಿದ ಜನರಿಗೆ ಶ್ರದ್ಧಾಂಜಲಿ ಅರ್ಪಿಸುತ್ತೇನೆ. ಅಂತಹ ದುರಂತ ಮತ್ತೆಂದಿಗೂ ಮರುಕಳಿಸಬಾರದು. ಅದಕ್ಕಾಗಿ ನಿರಂತರವಾಗಿ ಅಭಿವೃದ್ಧಿ ಮತ್ತು ಪರಿಸರದ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

1984ರ ಡಿ. 2ರ ಮಧ್ಯ ರಾತ್ರಿ (ಡಿಸೆಂಬರ್‌ 3ರ ಹೊತ್ತಿಗೆ) ಭೋಪಾಲ್‌ನ(Bhopal Tragedy) ಯೂನಿಯನ್ ಕಾರ್ಬೈಡ್(Methyl Isocyanate)  ಕಾರ್ಖಾನೆಯಿಂದ ವಿಷಕಾರಿ ಮಿಥೇಲ್ ಐಸೊಸೈನೇಟ್ (Methyl Isocyanate) ಅನಿಲವು ಸೋರಿಕೆಯಾಗಿತ್ತು. ಇದರಿಂದ ಉಂಟಾದ ಅನಾಹುತದಲ್ಲಿ ಸರಿಸುಮಾರು 3,800 ಮಂದಿ ಜೀವ ಕಳೆದುಕೊಂಡರು. 1 ಲಕ್ಷಕ್ಕೂ ಹೆಚ್ಚು ಜನರಿಗೆ ಆರೋಗ್ಯ ಸಮಸ್ಯೆ ಉಂಟಾಗಿತ್ತು. 5 ಲಕ್ಷಕ್ಕೂ ಹೆಚ್ಚು ಮಂದಿ ವಿಷಾನೀಲ ಸೇವಿಸಿದ್ದ ಪರಿಣಾಮ ಹೆಚ್ಚು ಜನರ ಮೇಲೆ ದೀರ್ಘಕಾಲದ ಆರೋಗ್ಯ ಪರಿಣಾಮ ಉಂಟು ಮಾಡಿತ್ತು.

ಯುಎನ್ ಕಾರ್ಮಿಕ ಸಂಸ್ಥೆ, ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್ (ILO) ಬಿಡುಗಡೆ ಮಾಡಿದ 2020ರ ವರದಿಯು, 1984 ರಲ್ಲಿ ಭೋಪಾಲ್‌ನಲ್ಲಿನ ಯೂನಿಯನ್ ಕಾರ್ಬೈಡ್ ಕೀಟನಾಶಕ ಘಟಕದಿಂದ ಬಿಡುಗಡೆಯಾದ ಕನಿಷ್ಠ 30 ಟನ್ ಮೀಥೈಲ್ ಐಸೊಸೈನೇಟ್ ವಿಷ ಅನಿಲವು 6 ಲಕ್ಷಕ್ಕೂ ಹೆಚ್ಚು ಮಂದಿ ಮೇಲೆ ಪರಿಣಾಮ ಬೀರಿತು ಎಂಬ ಅಂಶವನ್ನು ಉಲ್ಲೇಖಿಸಿತ್ತು. ನಂತರ ಈ ದುರಂತವು 1919ರ ನಂತರ ನಡೆದ ವಿಶ್ವದ ಪ್ರಮುಖ ಕೈಗಾರಿಕಾ ಅಪಘಾತಗಳ ಪಟ್ಟಿಯನ್ನು ಸೇರಿತು.

ನಂತರದ ವರ್ಷಗಳಲ್ಲಿ ಸರ್ಕಾರವು ದಾಖಲಿಸಿದ ಅಂಕಿ-ಅಂಶಗಳಲ್ಲಿ ಸುಮಾರು 15,000 ಸಾವುಗಳು ಸಂಭವಿಸಿದೆ ಎಂದು ಅಂದಾಜಿಸಲಾಗಿತ್ತು. ದುರಂತದಲ್ಲಿ ಬದುಕುಳಿದವರು ಉಸಿರಾಟ ಕಾಯಿಲೆ, ಅಂಗಾಗಳ ವೈಫಲ್ಯ, ಮಧುಮೇಹ ಇನ್ನಿತರ ಕಾಯಿಲೆಗಳಿಗೆ ತುತ್ತಾದರು ಎಂಬ ಅಂಶವನ್ನೂ ದಾಖಲಿಸಲಾಗಿತ್ತು. ಆದ್ರೆ ಇಂದಿಗೂ ಬದುಕುಳಿದ ಕೆಲ ಸಂತ್ರಸ್ತರಲ್ಲಿ ಕಾಯಿಲೆಗಳು ವಾಸಿಯಾಗಿಲ್ಲ ಎಂದು ಕಣ್ಣೀರಿಡುತ್ತಿದ್ದಾರೆ ಸ್ಥಳೀಯರು.

Advertisement

1984 d. In the middle of the 2nd night (by December 3rd) toxic Methyl Isocyanate (Methyl Isocyanate) gas was leaked from the Union Carbide (Methyl Isocyanate) factory in Bhopal (Bhopal Tragedy). Approximately 3,800 people lost their lives in the resulting disaster. More than 1 lakh people had health problems. More than 500,000 people consumed poison ivy, resulting in long-term health effects for many.

– ಅಂತರ್ಜಾಲ ಮಾಹಿತಿ

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕರೆಂಟ್ ಹೊದ ಕೂಡ್ಲೆ ಬೊಬ್ಬೆ ಹೊಡೆಯೋದು ಯಾಕೆ..!?
May 25, 2025
9:29 AM
by: ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ
ಮಳೆ Update | ಕರಾವಳಿ ಜಿಲ್ಲೆಯಲ್ಲಿ ವ್ಯಾಪಕ ಮಳೆ | ಹಲವು ಕಡೆ 100 ಮಿಮೀಗಿಂತಲೂ ಅಧಿಕ ಮಳೆ | ಉಡುಪಿಯಲ್ಲಿ 164 ಮಿಮೀ ಮಳೆ |
May 25, 2025
9:07 AM
by: ದ ರೂರಲ್ ಮಿರರ್.ಕಾಂ
ಬಿತ್ತನೆ ಬೀಜ ರಸಗೊಬ್ಬರ ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಕಠಿಣ ಕ್ರಮದ ಎಚ್ಚರಿಕೆ
May 25, 2025
6:13 AM
by: The Rural Mirror ಸುದ್ದಿಜಾಲ
ರೈತರು ಉತ್ತಮ ಇಳುವರಿ ಪಡೆಯಲು ಸಂಯುಕ್ತ ರಸಗೊಬ್ಬರ ಬಳಸುವಂತೆ ಕೃಷಿ ಇಲಾಖೆ ಸೂಚನೆ
May 25, 2025
6:05 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group