ಬಿಳಿನೆಲೆಯ ಭಾಗ್ಯ ಹೊಳೆಗೆ ಸಂಪರ್ಕ ಸೇತುವೆ | ಹಲವು ವರ್ಷಗಳ ಜನರ ಬೇಡಿಕೆಗೆ ಸಿಕ್ಕಿತು ಗೆಲುವು |

March 19, 2021
2:18 PM

ಹಲವು ವಷಗಳಿಂದ ಇಲ್ಲಿನ ಜನರು ಸಂಕಷ್ಟ ಪಡುತ್ತಿದ್ದು, ಮಳೆಗಾಲ ಬಂತೆಂದರೆ ಹೊಳೆ ದಾಟಲಾಗದೆ ಸಂಪರ್ಕವೇ ಕಷ್ಟವಾಗಿತ್ತು. ಅಂತಹ ಸಂಕಷ್ಟದ ಪರಿಸ್ಥಿತಿ ಬಿಳಿನೆಲೆ ಗ್ರಾಮದ ಉದ್ಮಯ ಎಂಬಲ್ಲಿ ಕಂಡುಬಂದಿತ್ತು. ಹೀಗಾಗಿ ಈ ಭಾಗದ ಪುತ್ತಿಲ, ಬೈಲಡ್ಕ ಮೊದಲಾದ ಪ್ರದೇಶದ ಜನರಿಗೆ ಸಂಕಷ್ಟವಾಗಿತ್ತು. ಇದೀಗ ಸುಳ್ಯ ಶಾಸಕ, ಸಚಿವ ಎಸ್ ಅಂಗಾರ ಅವರ ಶಿಫಾರಿಸ್ಸಿನ ಮೇರೆಗೆ ಶಾಲಾ ಸಂಪರ್ಕ ಸೇತುವೆ ಯೋಜನೆಯಡಿಯಲ್ಲಿ ಸೇತುವೆ ನಿರ್ಮಾಣವಾಗಲಿದೆ. ಹಲವು ವರ್ಷಗಳಿಂದ ಜನರು ಸಲ್ಲಿಸುತ್ತಿದ್ದ ಬೇಡಿಕೆಗೆ ಈಗ ಈಡೇರಿದೆ, ಸ್ಥಳೀಯ ಜನಪ್ರತಿನಿಧಿಗಳೂ ಇದಕ್ಕಾಗಿ ಸತತ ಪ್ರಯತ್ನ ಮಾಡಿದ್ದರು.

 

 

ಕಡಬ ತಾಲೂಕಿನ ಬಿಳಿನೆಲೆ ಗ್ರಾಮದಲ್ಲಿ ಹರಿಯುವ ಭಾಗ್ಯ ಹೊಳೆಗೆ ಉದ್ಮಯ ಎಂಬಲ್ಲಿ ಶಾಲಾ ಸಂಪರ್ಕ ಸೇತು ಯೋಜನೆಯಡಿಯಲ್ಲಿ ಸುಸಜ್ಜಿತ ಸೇತುವೆ ನಿರ್ಮಾಣವಾಗಲಿದೆ. ಮುಂದಿನ ಎರಡು ತಿಂಗಳಲ್ಲಿ ಸೇತುವೆ ನಿರ್ಮಾಣವಾಗಿ ಲೋಕಾರ್ಪಣೆಯಾಗಲಿದೆ. ಆ ಮೂಲಕ ಹಲವು ವರ್ಷಗಳ ಈ ಭಾಗದ ಜನರ ಬೇಡಿಕೆ ಈಡೇರುತ್ತಿದೆ. ಸುಮಾರು 50 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಸೇತುವೆ ಮಳೆಗಾಲದ ಮುನ್ನವೇ ರಚನೆಯಾಗಬೇಕು ಎನ್ನುವ ನೆಲೆಯಲ್ಲಿ  ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳಲು ಯೋಜಿಸಲಾಗಿದೆ.

 

 

ಮಳೆಗಾಲದಲ್ಲಿ ಇಲ್ಲಿನ ಪುತ್ತಿಲ ಬೈಲಡ್ಕ ಭಾಗದ ಜನರಿಗೆ ಸಂಕಷ್ಟ, ಭಾಗ್ಯ ಹೊಳೆಯಲ್ಲಿ ನೀರು ತುಂಬಿ ಹರಿಯುವ ಕಾರಣ  ಸೇತುವೆಯಿಲ್ಲದೆ ದಾಟುವುದೇ ಸಾಹಸದ ಕೆಲಸವಾಗಿತ್ತು. ಹೀಗಾಗಿ ಮಳೆಗಾಲದಲ್ಲಿ ಹೊಳೆಯನ್ನು ದಾಟಲು ಸ್ಥಳಿಯರೇ ಕಾಲು ಸಂಕ ನಿರ್ಮಿಸುತ್ತಿದ್ದರು, ಅದುವೇ ಆಧಾರವಾಗಿತ್ತು, ಶಾಲಾ ಮಕ್ಕಳಿಗಂತೂ ಭಾರೀ ಮಳೆ ಇದ್ದರೆ ಹೊಳೆ ದಾಟಿ ಸಾಗಲು ಭಯದ ವಾತಾವರಣ ಇತ್ತು.  ಹೀಗಾಗಿ ಇಲ್ಲೊಂದು ಸರ್ವಋತು ಸೇತುವೆಯಾಗಬೇಕು ಎಂದು ಈ ಭಾಗದ ಜನತೆ ಜನಪ್ರತಿನಿಧಿಗಳಲ್ಲಿ ನಿರಂತರವಾಗಿ ಹೇಳುತ್ತಲೇ ಇದ್ದರು. ವಿವಿಧ ಮಾಧ್ಯಮಗಳು ಕೂಡಾ ಗಮನ ಸೆಳೆದಿದ್ದವು. ಇದೀಗ ಸುಳ್ಯ ಶಾಸಕ, ಸಚಿವ ಎಸ್ ಅಂಗಾರ ಅವರ ಶಿಫಾರಿಸ್ಸಿನ ಮೇರೆಗೆ ಶಾಲಾ ಸಂಪರ್ಕ ಸೇತುವೆ ಯೋಜನೆಯಡಿಯಲ್ಲಿ ಸೇತುವೆ ನಿರ್ಮಾಣವಾಗಲಿದೆ. ಇದರ ಹಿಂದೆ ಸ್ಥಳೀಯ ಜನಪ್ರತಿನಿಧಿಗಳೂ ಕೆಲಸ ಮಾಡಿದ್ದರು.

ಹೀಗಿತ್ತು ಇಲ್ಲಿನ ಪರಿಸ್ಥಿತಿ...
ಬಿಳಿನೆಲೆಯ ಪುತ್ತಿಲ ಬೈಲಡ್ಕ ಭಾಗದಲ್ಲಿ ಸುಮಾರು 50 ಕ್ಕೂ ಹೆಚ್ಚು ಕುಟುಂಬದ ಜನರು , ಶಾಲಾ ವಿದ್ಯಾರ್ಥಿಗಳು ಸೇತುವೆಯಿಲ್ಲದೆ ಮಳೆಗಾಲದಲ್ಲಿ ಈ ಅಪಾಯಕಾರಿಯಾಗಿ ಹೊಳೆ ದಾಟುತ್ತಿದ್ದರು. ಇಲ್ಲಿನ ಅರ್ಗಿನಿ, ಅಮೈ, ಬೈಲು ಪ್ರದೇಶದ ಜನತೆ ಬಿಳಿನೆಲೆ ಮುಖಾಂತರ ಕಡಬ ಸುಬ್ರಹ್ಮಣ್ಯ ಮತ್ತಿತರ ಪ್ರಮುಖ ಪೇಟೆ ಸಂಪರ್ಕಿಸಬೇಕಾದರೆ ಈ ಹೊಳೆಯನ್ನು ದಾಟಿ ಮುಂದುವರಿಯಬೇಕು. ಇದಕ್ಕಾಗಿ ಸ್ಥಳೀಯರೇ ಸ್ವತಃ ಖರ್ಚು ಮಾಡಿ ಕಾಲುಸಂಕ ರಚನೆ ಮಾಡುತ್ತಿದ್ದರು. ಕಬ್ಬಿಣದ ರಾಡ್ ಉಪಯೋಗಿಸಿ ನಿರ್ಮಿಸಿರುವ ಈ ಕಾಲು ಸಂಕದಲ್ಲಿ ಪ್ರಯಾಣಿಸುವುದೆ ಸಾಹಸವಾಗಿತ್ತು. ಇದೀಗ ಈ ಎಲ್ಲಾ ಸಾಹಸಗಳಿಗೆ ವಿರಾಮ ಸಿಕ್ಕಂತಾಗಿದೆ

 

 

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಧ್ಯಪ್ರಾಚ್ಯ ಸಂಘರ್ಷ ಪರಿಣಾಮ – ಗೋಮಯ ಗೊಬ್ಬರದತ್ತ ಭಾರತದ ರೈತರು – ರಾಸಾಯನಿಕ ಗೊಬ್ಬರ ಕೊರತೆ ಭೀತಿ..!
June 19, 2026
10:43 AM
by: ದ ರೂರಲ್ ಮಿರರ್.ಕಾಂ
ಕೇರಳದಲ್ಲಿ ಕೊಬ್ಬರಿ ಬೆಲೆ MSP ಗಿಂತಲೂ ಕಡಿಮೆ – ₹130 ಕನಿಷ್ಠ ಬೆಂಬಲ ಬೆಲೆಗೆ ರೈತರ ಆಗ್ರಹ
June 19, 2026
9:58 AM
by: ದ ರೂರಲ್ ಮಿರರ್.ಕಾಂ
ಎಲ್‌ ನಿನೋ ಈಗ ಮತ್ತಷ್ಟು ನಿಗೂಢ…! ಹವಾಮಾನ ಬದಲಾವಣೆ ಮಳೆ ಮುನ್ಸೂಚನೆಗಳನ್ನೇ ಗೊಂದಲಗೊಳಿಸುತ್ತಿದೆಯೇ..?
June 19, 2026
7:21 AM
by: ದ ರೂರಲ್ ಮಿರರ್.ಕಾಂ
ಪ್ರತಿ ಜಿಲ್ಲೆಯಲ್ಲಿ ಒಂದು ಗೋಆಧಾರಿತ ಉದ್ಯಮ – ಉತ್ತರ ಪ್ರದೇಶದ ಹೊಸ ಮಾದರಿ ದೇಶದ ಗಮನ ಸೆಳೆಯುತ್ತಿದೆ
June 19, 2026
7:01 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror