ಕೃಷಿ ಕೂಳೆ ಇನ್ನು ಮುಂದೆ ಮಾಲಿನ್ಯದ ಮೂಲವಲ್ಲ, ಆದಾಯದ ಮೂಲವಾಗಲಿದೆ. ಬಯೋ-ಬಿಟುಮೆನ್ ತಂತ್ರಜ್ಞಾನದಿಂದ ಕೂಳೆಯಿಂದ ರಸ್ತೆ ನಿರ್ಮಾಣ ಸಾಧ್ಯವಾಗುತ್ತಿದ್ದು, ರೈತರ ಆದಾಯ ಹೆಚ್ಚಿಸುವ ಜೊತೆಗೆ ಪರಿಸರ ರಕ್ಷಣೆಗೆ ಸಹಕಾರಿಯಾಗಲಿದೆ ಎಂದು ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
ಕೂಳೆ ಈಗ ಸಂಪತ್ತಾಗಲಿದೆ : ಹಿಂದೆ ರೈತರಿಗೆ ತೊಂದರೆ ಹಾಗೂ ಮಾಲಿನ್ಯದ ಕಾರಣವಾಗಿದ್ದ ಕೃಷಿ ಕೂಳೆ ಈಗ ಆದಾಯದ ಮೂಲವಾಗುತ್ತಿದೆ. ಹೊಸ ಬಯೋ-ಬಿಟುಮೆನ್ ತಂತ್ರಜ್ಞಾನ ಮೂಲಕ ಕೂಳೆಯನ್ನು ರಸ್ತೆ ನಿರ್ಮಾಣದಲ್ಲಿ ಬಳಸುವ ವ್ಯವಸ್ಥೆ ಅಭಿವೃದ್ಧಿಯಾಗಿದೆ.
ದೆಹಲಿಯಲ್ಲಿ ಮಹತ್ವದ ಘೋಷಣೆ : ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ದೆಹಲಿಯಲ್ಲಿ ನಡೆದ ತಂತ್ರಜ್ಞಾನ ವರ್ಗಾವಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಇದು ದೇಶಕ್ಕೆ ಐತಿಹಾಸಿಕ ಹೆಜ್ಜೆ ಎಂದು ಹೇಳಿದರು. ಈ ತಂತ್ರಜ್ಞಾನವು ರೈತರ ಆದಾಯ ಹೆಚ್ಚಿಸುತ್ತದೆ, ಮಾಲಿನ್ಯ ಕಡಿಮೆ ಮಾಡುತ್ತದೆ, ಬಿಟುಮೆನ್ ಆಮದು ಕಡಿಮೆ ಮಾಡುತ್ತದೆ, ಸ್ವಾವಲಂಬಿ ಭಾರತ ಗುರಿಗೆ ನೆರವಾಗುತ್ತದೆ ಎನ್ನುವುದು ಈ ತಂತ್ರಜ್ಞಾನದ ಲಾಭಗಳು.
ಕೂಳೆ ಸುಡುವುದಕ್ಕೆ ಬ್ರೇಕ್ : ಕೃಷಿ ಕೂಳೆ ಸುಡುವುದನ್ನು ಪ್ರಕೃತಿಗೆ ವಿರುದ್ಧವೆಂದು ಹೇಳಿದ ಸಚಿವರು, ಇದರಿಂದಾಗಿ ಸಣ್ಣ ಜೀವಿಗಳು ನಾಶವಾಗುತ್ತವೆ, ಮಣ್ಣಿನ ಆರೋಗ್ಯ ಹಾನಿಯಾಗುತ್ತದೆ ಹಾಗೂ ವಾಯು ಮಾಲಿನ್ಯ ಹೆಚ್ಚುತ್ತದೆ. ಇದಕ್ಕೆ ಪರಿಹಾರವಾಗಿ ಕೂಳೆಯಿಂದ ಆದಾಯ ಗಳಿಸುವ ದಾರಿ ಕಂಡುಕೊಳ್ಳಲಾಗಿದೆ ಎಂದು ಹೇಳಿದರು.
ರೈತರಿಗೆ ಹೊಸ ಆದಾಯದ ದಾರಿ : ಹಿಂದೆ ಕೃಷಿ ಕೂಳೆಯನ್ನು ಪಶು ಮೇವು ಅಥವಾ ಗೃಹಬಳಕೆಗೆ ಬಳಸಲಾಗುತ್ತಿತ್ತು. ಆದರೆ ಈಗ ಸಮಯದ ಕೊರತೆಯಿಂದ ರೈತರು ಅದನ್ನು ಸುಡುತ್ತಿದ್ದರು. ಈ ಹೊಸ ತಂತ್ರಜ್ಞಾನದಿಂದ, ಕೂಳೆ ಖರೀದಿ ಮಾರುಕಟ್ಟೆ ಸೃಷ್ಟಿಯಾಗುತ್ತದೆ, ರೈತರಿಗೆ ಹೆಚ್ಚುವರಿ ಆದಾಯ ಸಿಗುತ್ತದೆ ಹಾಗೂ ತ್ಯಾಜ್ಯವು ಸಂಪತ್ತಾಗಿ ಮಾರ್ಪಡುತ್ತದೆ.
ಆಮದು ಕಡಿಮೆಯಾಗಲಿದೆ : ಬಯೋ-ಬಿಟುಮೆನ್ ಬಳಕೆಯಿಂದ ದೇಶದ ಬಿಟುಮೆನ್ ಆಮದು ವೆಚ್ಚ ಕಡಿಮೆಯಾಗಲಿದೆ. ಇದರಿಂದ ವರ್ಷಕ್ಕೆ ಸಾವಿರಾರು ಕೋಟಿ ರೂಪಾಯಿ ಉಳಿತಾಯವಾಗುವ ಸಾಧ್ಯತೆ ಇದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ವಿಜ್ಞಾನ ಮತ್ತು ಕೃಷಿಯ ಸಂಗಮ : ಸಚಿವರು ವಿಜ್ಞಾನಿಗಳನ್ನು ಶ್ಲಾಘಿಸಿ, ಇದು ಕೇವಲ ತಂತ್ರಜ್ಞಾನವಲ್ಲ. ಕೃಷಿ ಹಾಗೂ ವಿಜ್ಞಾನ ಮತ್ತು ರಸ್ತೆ ನಿರ್ಮಾಣದ ಅದ್ಭುತ ಸಂಯೋಜನೆ ಎಂದು ಹೇಳಿದರು. ಹೀಗಾಗಿ ಇದು “ಜೈ ಕಿಸಾನ್, ಜೈ ಸೈನ್ಸ್” ಹೊಸ ಮಾದರಿಯಾಗಿದ್ದು ಇದರಿಂದಾಗಿ ರೈತರಿಗೆ ಹೊಸ ಮಾರುಕಟ್ಟೆ, ಪರಿಸರ ರಕ್ಷಣೆ ಹಾಗೂ ರಸ್ತೆ ಅಭಿವೃದ್ಧಿ ಇವುಗಳನ್ನೆಲ್ಲ ಒಟ್ಟಿಗೆ ಸಾಧಿಸುವ ಹೊಸ ಮಾದರಿಯಾಗಲಿದೆ ಎಂದು ಸಚಿವರು ಹೇಳಿದರು.
Bio-bitumen technology converts crop residue into material for road construction, reducing pollution and increasing farmers’ income. The initiative can lower import costs, support sustainability, and strengthen India’s self-reliance while solving stubble burning issues.
ಜೋಯಿಡಾದಲ್ಲಿ ನಡೆದ ಹಲಸು ಉತ್ಸವದಲ್ಲಿ 50ಕ್ಕೂ ಹೆಚ್ಚು ಮೌಲ್ಯವರ್ಧಿತ ಹಲಸಿನ ಉತ್ಪನ್ನಗಳು ಪ್ರದರ್ಶನಗೊಂಡು…
ಕ್ಯಾಂಪ್ಕೋ ಸಂಸ್ಥಾಪಕ ವಾರಣಾಶಿ ಸುಬ್ರಾಯ ಭಟ್ ಅವರ ಜನ್ಮಕ್ಕೆ 99 ವರ್ಷಗಳು ಪೂರ್ಣಗೊಂಡಿದ್ದು,…
ರಾಜ್ಯಕ್ಕೆ ಮುಂಗಾರು ಪ್ರವೇಶಿಸಿದರೂ ಅದರ ಬಲ ಇನ್ನೂ ದುರ್ಬಲವಾಗಿದೆ. ಕರಾವಳಿಯಲ್ಲಿ ಜೂನ್ 8ರಿಂದ…
ನಾರ್ವೆ ಚೆಸ್ 2026 ಟೂರ್ನಿಯನ್ನು ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಇತಿಹಾಸವನ್ನು…
ಆಸ್ಟ್ರೇಲಿಯಾದಲ್ಲಿ ವರೋವಾ ಮೈಟ್ ಹಾವಳಿಯಿಂದ ಜೇನುನೊಣಗಳ ಸಂಖ್ಯೆ ತೀವ್ರವಾಗಿ ಕುಸಿಯುತ್ತಿದ್ದು, ಆಹಾರ ಬೆಳೆಗಳ…
ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಜೂನ್ 6ರಂದು ಕಾಸರಗೋಡು ಜಿಲ್ಲೆಯ ಎಲ್ಲಾ ಶಿಕ್ಷಣ…