Advertisement
MIRROR FOCUS

“ಕೃಷಿ ಕೂಳೆ ಸುಡುವುದು ಮುಗಿದುಹೋಯ್ತು…!” | ರೈತರಿಗೆ ಹೊಸ ಆದಾಯದ ದಾರಿ, ಕೂಳೆಯಿಂದ ಬಿಟುಮೆನ್ ತಯಾರಿ

Share

ಕೃಷಿ ಕೂಳೆ ಇನ್ನು ಮುಂದೆ ಮಾಲಿನ್ಯದ ಮೂಲವಲ್ಲ, ಆದಾಯದ ಮೂಲವಾಗಲಿದೆ. ಬಯೋ-ಬಿಟುಮೆನ್ ತಂತ್ರಜ್ಞಾನದಿಂದ ಕೂಳೆಯಿಂದ ರಸ್ತೆ ನಿರ್ಮಾಣ ಸಾಧ್ಯವಾಗುತ್ತಿದ್ದು, ರೈತರ ಆದಾಯ ಹೆಚ್ಚಿಸುವ ಜೊತೆಗೆ ಪರಿಸರ ರಕ್ಷಣೆಗೆ ಸಹಕಾರಿಯಾಗಲಿದೆ ಎಂದು ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.

ಕೂಳೆ ಈಗ ಸಂಪತ್ತಾಗಲಿದೆ : ಹಿಂದೆ ರೈತರಿಗೆ ತೊಂದರೆ ಹಾಗೂ ಮಾಲಿನ್ಯದ ಕಾರಣವಾಗಿದ್ದ ಕೃಷಿ ಕೂಳೆ ಈಗ ಆದಾಯದ ಮೂಲವಾಗುತ್ತಿದೆ. ಹೊಸ ಬಯೋ-ಬಿಟುಮೆನ್ ತಂತ್ರಜ್ಞಾನ ಮೂಲಕ ಕೂಳೆಯನ್ನು ರಸ್ತೆ ನಿರ್ಮಾಣದಲ್ಲಿ ಬಳಸುವ ವ್ಯವಸ್ಥೆ ಅಭಿವೃದ್ಧಿಯಾಗಿದೆ.

ದೆಹಲಿಯಲ್ಲಿ ಮಹತ್ವದ ಘೋಷಣೆ : ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ದೆಹಲಿಯಲ್ಲಿ ನಡೆದ ತಂತ್ರಜ್ಞಾನ ವರ್ಗಾವಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಇದು ದೇಶಕ್ಕೆ ಐತಿಹಾಸಿಕ ಹೆಜ್ಜೆ ಎಂದು ಹೇಳಿದರು. ಈ ತಂತ್ರಜ್ಞಾನವು ರೈತರ ಆದಾಯ ಹೆಚ್ಚಿಸುತ್ತದೆ, ಮಾಲಿನ್ಯ ಕಡಿಮೆ ಮಾಡುತ್ತದೆ, ಬಿಟುಮೆನ್ ಆಮದು ಕಡಿಮೆ ಮಾಡುತ್ತದೆ, ಸ್ವಾವಲಂಬಿ ಭಾರತ ಗುರಿಗೆ ನೆರವಾಗುತ್ತದೆ ಎನ್ನುವುದು ಈ ತಂತ್ರಜ್ಞಾನದ ಲಾಭಗಳು.

ಕೂಳೆ ಸುಡುವುದಕ್ಕೆ ಬ್ರೇಕ್ :  ಕೃಷಿ ಕೂಳೆ ಸುಡುವುದನ್ನು ಪ್ರಕೃತಿಗೆ ವಿರುದ್ಧವೆಂದು ಹೇಳಿದ ಸಚಿವರು, ಇದರಿಂದಾಗಿ ಸಣ್ಣ ಜೀವಿಗಳು ನಾಶವಾಗುತ್ತವೆ, ಮಣ್ಣಿನ ಆರೋಗ್ಯ ಹಾನಿಯಾಗುತ್ತದೆ ಹಾಗೂ ವಾಯು ಮಾಲಿನ್ಯ ಹೆಚ್ಚುತ್ತದೆ.  ಇದಕ್ಕೆ ಪರಿಹಾರವಾಗಿ ಕೂಳೆಯಿಂದ ಆದಾಯ ಗಳಿಸುವ ದಾರಿ ಕಂಡುಕೊಳ್ಳಲಾಗಿದೆ ಎಂದು ಹೇಳಿದರು.

ರೈತರಿಗೆ ಹೊಸ ಆದಾಯದ ದಾರಿ : ಹಿಂದೆ ಕೃಷಿ ಕೂಳೆಯನ್ನು ಪಶು ಮೇವು ಅಥವಾ ಗೃಹಬಳಕೆಗೆ ಬಳಸಲಾಗುತ್ತಿತ್ತು. ಆದರೆ ಈಗ ಸಮಯದ ಕೊರತೆಯಿಂದ ರೈತರು ಅದನ್ನು ಸುಡುತ್ತಿದ್ದರು. ಈ ಹೊಸ ತಂತ್ರಜ್ಞಾನದಿಂದ, ಕೂಳೆ ಖರೀದಿ ಮಾರುಕಟ್ಟೆ ಸೃಷ್ಟಿಯಾಗುತ್ತದೆ, ರೈತರಿಗೆ ಹೆಚ್ಚುವರಿ ಆದಾಯ ಸಿಗುತ್ತದೆ ಹಾಗೂ ತ್ಯಾಜ್ಯವು ಸಂಪತ್ತಾಗಿ ಮಾರ್ಪಡುತ್ತದೆ.

ಆಮದು ಕಡಿಮೆಯಾಗಲಿದೆ :  ಬಯೋ-ಬಿಟುಮೆನ್ ಬಳಕೆಯಿಂದ ದೇಶದ ಬಿಟುಮೆನ್ ಆಮದು ವೆಚ್ಚ ಕಡಿಮೆಯಾಗಲಿದೆ.  ಇದರಿಂದ ವರ್ಷಕ್ಕೆ ಸಾವಿರಾರು ಕೋಟಿ ರೂಪಾಯಿ ಉಳಿತಾಯವಾಗುವ ಸಾಧ್ಯತೆ ಇದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ವಿಜ್ಞಾನ ಮತ್ತು ಕೃಷಿಯ ಸಂಗಮ :  ಸಚಿವರು ವಿಜ್ಞಾನಿಗಳನ್ನು ಶ್ಲಾಘಿಸಿ, ಇದು ಕೇವಲ ತಂತ್ರಜ್ಞಾನವಲ್ಲ. ಕೃಷಿ ಹಾಗೂ ವಿಜ್ಞಾನ ಮತ್ತು ರಸ್ತೆ ನಿರ್ಮಾಣದ ಅದ್ಭುತ ಸಂಯೋಜನೆ ಎಂದು ಹೇಳಿದರು. ಹೀಗಾಗಿ ಇದು  “ಜೈ ಕಿಸಾನ್, ಜೈ ಸೈನ್ಸ್” ಹೊಸ ಮಾದರಿಯಾಗಿದ್ದು ಇದರಿಂದಾಗಿ ರೈತರಿಗೆ ಹೊಸ ಮಾರುಕಟ್ಟೆ, ಪರಿಸರ ರಕ್ಷಣೆ ಹಾಗೂ ರಸ್ತೆ ಅಭಿವೃದ್ಧಿ ಇವುಗಳನ್ನೆಲ್ಲ ಒಟ್ಟಿಗೆ ಸಾಧಿಸುವ ಹೊಸ ಮಾದರಿಯಾಗಲಿದೆ ಎಂದು ಸಚಿವರು ಹೇಳಿದರು.

Bio-bitumen technology converts crop residue into material for road construction, reducing pollution and increasing farmers’ income. The initiative can lower import costs, support sustainability, and strengthen India’s self-reliance while solving stubble burning issues.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್

the rural mirror news

Published by
ಮಿರರ್‌ ಡೆಸ್ಕ್

Recent Posts

ಭಾರೀ ಮಳೆಯ ಎಚ್ಚರಿಕೆ : 24 ಗಂಟೆ ಸನ್ನದ್ಧವಾಗಿರಲು ಡಿಸಿ ಸೂಚನೆ, ಭೂಕುಸಿತ ಪ್ರದೇಶಗಳ ಮೇಲೆ ಕಟ್ಟೆಚ್ಚರ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳನ್ನು 24…

5 hours ago

ಹುಬ್ಬಳ್ಳಿಯಲ್ಲಿ ಹಲಸು ಮೇಳಕ್ಕೆ ಚಾಲನೆ – 50ಕ್ಕೂ ಹೆಚ್ಚು ಮಳಿಗೆಗಳು, ಹಲಸಿನ ಬಿರಿಯಾನಿಯಿಂದ ಕಬಾಬ್‌ವರೆಗೆ ಸವಿಯುವ ಅವಕಾಶ

ಹುಬ್ಬಳ್ಳಿಯಲ್ಲಿ ಆರಂಭವಾದ ಮೂರು ದಿನಗಳ ಹಲಸು ಮೇಳಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.…

5 hours ago

ರಾಜ್ಯಾದ್ಯಂತ ಆರ್ಭಟಿಸುತ್ತಿರುವ ವರುಣ – ಭದ್ರಾ-ನೇತ್ರಾವತಿ ಅಪಾಯದ ಮಟ್ಟ ಮೀರಿ ಪ್ರವಾಹ

ಕರಾವಳಿ ಹಾಗೂ ಮಲೆನಾಡಿನಲ್ಲಿ ಭಾರಿ ಮಳೆ ಮುಂದುವರಿದಿದ್ದು, ಭದ್ರಾ ಹಾಗೂ ನೇತ್ರಾವತಿ, ಕುಮಾರಧಾರಾ…

5 hours ago

ಶಿರಾಡಿ ಘಾಟ್‌ನಲ್ಲಿ ಭೂಕುಸಿತ – ರೈಲು ಸಂಚಾರಕ್ಕೆ ತಾತ್ಕಾಲಿಕ ಅಡ್ಡಿ

ಶಿರಾಡಿ ಘಾಟ್‌ನ ಎಡಕುಮರಿ–ಶಿರಿಬಾಗಿಲು ನಡುವೆ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಪರಿಹಾರ…

5 hours ago

ಮೊಬೈಲ್ ನೋಡುತ್ತಾ ಊಟ ಮಾಡಬೇಡಿ, ಶಿಸ್ತಿನ ಜೀವನವೇ ಆರೋಗ್ಯದ ರಹಸ್ಯ – ರಾಘವೇಶ್ವರ ಶ್ರೀ

ಆಹಾರ, ನಿದ್ರೆ ಮತ್ತು ಬ್ರಹ್ಮಚರ್ಯ ಸಮತೋಲನದಲ್ಲಿದ್ದಾಗ ಮಾತ್ರ ಆರೋಗ್ಯ ಹಾಗೂ ಆಧ್ಯಾತ್ಮಿಕ ಪ್ರಗತಿ…

16 hours ago

ಭಾರೀ ಮಳೆಯ ಎಚ್ಚರಿಕೆ | ಕರಾವಳಿ ಕರ್ನಾಟಕದಲ್ಲಿ ಅತಿ ಭಾರೀ ಮಳೆ – ಪ್ರವಾಹ- ಭೂಕುಸಿತದ ಎಚ್ಚರಿಕೆ

ಕರಾವಳಿ ಕರ್ನಾಟಕ, ದಕ್ಷಿಣ ಒಳನಾಡು ಕರ್ನಾಟಕ ಹಾಗೂ ಕೇರಳದಲ್ಲಿ ಇಂದು ಭಾರೀ ಮಳೆಯ…

20 hours ago