Advertisement
ಸುದ್ದಿಗಳು

ಬಿಜೆಪಿ ಅಭ್ಯರ್ಥಿಗಳ 2ನೇ ಲಿಸ್ಟ್​ನಲ್ಲೂ 7 ಹಾಲಿ ಶಾಸಕರಿಗೆ ಟಿಕೆಟ್ ಮಿಸ್​ | ಯಾರಿಗೆಲ್ಲಾ ಸಿಗಲಿಲ್ಲ ಟಿಕೆಟ್…?

Share

​ಕರ್ನಾಟಕ ವಿಧಾನಸಭಾ ಚುನಾವಣೆಗೆ ಆಡಳಿತ ಪಕ್ಷ ಬಿಜೆಪಿ 2ನೇ ಲಿಸ್ಟ್​ ಬಿಡುಗಡೆ ಮಾಡಿದ್ದು, 23 ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ. ಈ ಲಿಸ್ಟ್​ನಲ್ಲೂ 7 ಹಾಲಿ ಶಾಸಕರಿಗೆ ಟಿಕೆಟ್​ ಕೈತಪ್ಪಿದೆ. ಮೊದಲ ಲಿಸ್ಟ್​ನಲ್ಲೂ 9 ಹಾಲಿ ಶಾಸಕರಿಗೆ ಟಿಕೆಟ್​ ನೀಡಿರಲಿಲ್ಲ. ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ, ಹಾವೇರಿ ಶಾಸಕ ನೆಹರೂ ಓಲೇಕಾರ್​ ಸೇರಿದಂತೆ 7 ಹಾಲಿ ಶಾಸಕರಿಗೆ ಟಿಕೆಟ್​ ಕೈತಪ್ಪಿದೆ. ಇನ್ನು ಬಿಜೆಪಿ ಹಿರಿಯ ನಾಯಕ ಜಗದೀಶ್​ ಶೆಟ್ಟರ್​ ಹೆಸರು ಪಟ್ಟಿಯಲ್ಲಿ ಇಲ್ಲದಿರುವುದು ತೀವ್ರ ಕುತೂಹಲ ಕೆರಳಿಸಿದೆ. ಗೋವಿಂದರಾಜ, ಹೆಬ್ಬಾಳ, ಮಹದೇವಪುರ ಕ್ಷೇತ್ರಗಳ ಟಿಕೆಟ್​ ಕೂಡ ಘೋಷಣೆಯಾಗಿಲ್ಲ. ಮಂಗಳವಾರ ಬಾಕಿ ಉಳಿಸಿಕೊಂಡಿದ್ದ 35 ಕ್ಷೇತ್ರಗಳ ಪೈಕಿ  23 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಫೈನಲ್ ಮಾಡಲಾಗಿದೆ. ಇನ್ನೂ 12 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹೆಸರು ಬಹಿರಂಗವಾಗಿಲ್ಲ.

ಬಿಜೆಪಿ ಮೊದಲ ಪಟ್ಟಿಯನ್ನು ಮಂಗಳವಾರ ರಾತ್ರಿ ಬಿಡುಗಡೆ ಮಾಡಿತ್ತು. ಮೊದಲ ಪಟ್ಟಿಯಲ್ಲಿ 189 ಮಂದಿ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಲಾಗಿತ್ತು. ಅದರಲ್ಲಿ 52 ಹೊಸ ಮುಖಗಳಿಗೆ ಟಿಕೆಟ್ ನೀಡಲಾಗಿತ್ತು. ಒಬಿಸಿಯ 32, ಎಸ್​ಸಿ 30, ಎಸ್​ಟಿ 16 ಹಾಗೂ 9 ವೈದ್ಯರು, ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಟಿಕೆಟ್ ನೀಡಲಾಗಿತ್ತು. ಇದೀಗ 2ನೇ ಪಟ್ಟಿಯಲ್ಲಿ 23 ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಲಾಗಿದೆ.

ಟಿಕೆಟ್ ಫೈನಲ್ ಆಗದ ಕ್ಷೇತ್ರಗಳು: ನಾಗಠಾಣಾ, ಸೇಡಂ, ಮಾನ್ವಿ, ಕೊಪ್ಪಳ, ರೋಣ, ಹುಬ್ಬಳ್ಳಿ ಧಾರವಾಡ ಕೇಂದ್ರ, ಹಗರಿ ಬೊಮ್ಮನಹಳ್ಳಿ, ಶಿವಮೊಗ್ಗ ನಗರ, ಹೆಬ್ಬಾಳ, ಗೋವಿಂದರಾಜನಗರ, ಕೃಷ್ಣರಾಜ, ಮಹದೇವಪುರ, ಕ್ಷೇತ್ರ ಬಾಕಿ ಉಳಿದಿವೆ. ಇದರಲ್ಲೂ ಇಬ್ಬರು ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ.

ಟಿಕೆಟ್ ವಂಚಿತ ಹಾಲಿ ಶಾಸಕರು:

ಮೂಡಿಗೆರೆ -ಎಂಪಿ ಕುಮಾರಸ್ವಾಮಿ ಬದಲಿಗೆ ದೀಪಕ್​ ದೊಡ್ಡಯ್ಯಗೆ ಟಿಕೆಟ್​

ಚೆನ್ನಗಿರಿ- ಮಾಡಾಳ್ ವಿರೂಪಾಕ್ಷಪ್ಪ ಬದಲಿಗೆ ಶಿವಕುಮಾರ್​ಗೆ ಟಿಕೆಟ್​

ಬೈಂದೂರು-ಸುಕುಮಾರ್ ಶೆಟ್ಟಿ ಬದಲಿಗೆ ಗುರುರಾಜ್​ಗೆ ಟಿಕೆಟ್​

ಕಲಘಟಗಿ- ನಿಂಬಣ್ಣನವರ್​ ಬದಲಿಗೆ ನಾಗರಾಜ್​ ಛಬ್ಬಿಗೆ ಟಿಕೆಟ್

ಮಾಯಕೊಂಡ- ಎನ್. ಲಿಂಗಣ್- ಬಸವರಾಜ್ ನಾಯ್ಕ್​ಗೆ ಟಿಕೆಟ್ ಸಿಕ್ಕಿದೆ

ದಾವಣಗೆರೆ ಉತ್ತರ :  ಎಸ್ ಎ ರವೀಂದ್ರನಾಥ್ ಬದಲಿಗೆ ನಾಗರಾಜ್​ ಲೋಕಿಕೆರೆಗೆ ಟಿಕೆಟ್​

2ನೇ ಲಿಸ್ಟ್​ನಲ್ಲಿ ಟಿಕೆಟ್​ ಪಡೆದವರು

ದೇವರಹಿಪ್ಪರಗಿ-ಸೋಮನಗೌಡ ಪಾಟೀಲ್

ಬಸವನಬಾಗೇವಾಡಿ -ಎಸ್ .ಕೆ.ಬೆಳ್ಳುಬ್ಬಿ

ಇಂಡಿ-ಕಾಸಗೌಡ ಬಿರಾದಾರ್

ಗುರುಮಿಠಕಲ್-ಲಲಿತ ಅನಪೂರ್

ಬೀದರ್-ಈಶ್ವರ್ ಸಿಂಗ್ ಠಾಕೂರ್

ಭಾಲ್ಕಿ -ಪ್ರಕಾಶ್ ಖಂಡ್ರೆ

ಗಂಗಾವತಿ -ಪರಣ್ಣ ಮುನವಳ್ಳಿ

ಕಲಘಟಗಿ-ನಾಗರಾಜ್ ಛಬ್ಬಿ

ಹಾನಗಲ್-ಶಿವರಾಜ್ ಸಜ್ಜನರ್

ಹಾವೇರಿ -ಗವಿಸಿದ್ದಪ್ಪ ದ್ಯಾಮಣ್ಣ ನವರ್

ಹರಪನಹಳ್ಳಿ-ಕರುಣಾಕರ ರೆಡ್ಡಿ

ದಾವಣಗೆರೆ ಉತ್ತರ-ಲೋಕೀಕೆರೆ ನಾಗರಾಜ್

ದಾವಣಗೆರೆ ದಕ್ಷಿಣ-ಅಜಯ್ ಕುಮಾರ್

ಮಾಯಕೊಂಡ -ಬಸವರಾಜ್ ನಾಯ್ಕ್

ಚನ್ನಗಿರಿ-ಶಿವಕುಮಾರ್

ಬೈಂದೂರು -ಗುರುರಾಜ್ ಗಂಟಿಹೊಳೆ

ಮೂಡಿಗೆರೆ-ದೀಪಕ್ ದೊಡ್ಡಯ್ಯ

ಗುಬ್ಬಿ -ಎಸ್.ಡಿ.ದಿಲೀಪ್ ಕುಮಾರ್

ಶಿಡ್ಲಘಟ್ಟ- ರಾಮಚಂದ್ರ ಗೌಡ

ಕೆಜಿಎಫ್ -ಅಶ್ವಿನಿ ಸಂಪಂಗಿ

ಶ್ರವಣಬೆಳಗೊಳ -ಚಿದಾನಂದ

ಅರಸೀಕೆರೆ-ಜಿ.ಬಿ.ಬಸವರಾಜು

ಹೆಗ್ಗಡದೇವನಕೋಟೆ-ಕೃಷ್ಣ ನಾಯ್ಕ್

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಬೇರೊಬ್ಬರ ಬದುಕಿನ ಅಳತೆಯಲ್ಲಿ ನಮ್ಮ ಬದುಕನ್ನು ಅಳೆಯುತ್ತಿದ್ದೇವೆಯೇ?

ಬೇರೊಬ್ಬರ ಬದುಕಿನೊಂದಿಗೆ ನಿರಂತರ ಹೋಲಿಕೆ ನಮ್ಮ ನೆಮ್ಮದಿ ಮತ್ತು ಆತ್ಮವಿಶ್ವಾಸವನ್ನು ಕಸಿದುಕೊಳ್ಳಬಹುದು. ಮತ್ತೊಬ್ಬರ…

31 minutes ago

ಗೂಗಲ್‌ ಮತ್ತು AIಯ ಕಾಲದಲ್ಲೂ ಗುರು ಏಕೆ ಬೇಕು..?

ಶಿಕ್ಷಕರ ದಿನಾಚರಣೆ ಶಿಕ್ಷಕರನ್ನು ಸನ್ಮಾನಿಸುವ ದಿನ ಮಾತ್ರವಲ್ಲ, ಶಿಕ್ಷಕತ್ವ ಮತ್ತು ಶಿಕ್ಷಣದ ನಿಜವಾದ…

59 minutes ago

ಮಳೆ ಹೆಚ್ಚಿಸಲು ಮೋಡ ಬಿತ್ತನೆಗೆ ಚಾಲನೆ – ಮೋಡ ಬಿತ್ತನೆಯಿಂದ ಮಳೆ ಬರುತ್ತದೆಯೇ?

ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ₹28.52 ಕೋಟಿ ವೆಚ್ಚದ 60 ದಿನಗಳ…

9 hours ago

3,000 ವರ್ಷಗಳ ಹಿಂದೆಯೇ ರೈತರು ಹವಾಮಾನ ಬದಲಾವಣೆಗೆ ಹೊಂದಿಕೊಂಡಿದ್ದರು..! ಬಿಹಾರದ ಪುರಾತನ ಬೀಜಗಳು ಹೇಳಿದ ಕೃಷಿ ಪಾಠ

ಬಿಹಾರದ ಯುರೆನ್‌ನಲ್ಲಿ ಪತ್ತೆಯಾದ 5 ಲಕ್ಷಕ್ಕೂ ಹೆಚ್ಚು ಸುಟ್ಟ ಬೀಜಗಳ ಅಧ್ಯಯನವು ಭಾರತದ…

11 hours ago

ಶ್ರೀಕೃಷ್ಣನನ್ನು ದೇವನಾಗಿ ಮಾತ್ರವಲ್ಲ, ಗುರುವಿನ ರೂಪದಲ್ಲೂ ಕಾಣುವ ದೃಷ್ಟಿ

ಶ್ರೀಕೃಷ್ಣನನ್ನು ಕೇವಲ ದೇವರ ಅವತಾರವಾಗಿ ನೋಡುವುದಕ್ಕಿಂತ, ಮನುಷ್ಯರ ನಡುವೆ ನಿಂತು ಉಪದೇಶಿಸಿದ ಮಾನವಶಿಕ್ಷಕನಾಗಿಯೂ…

17 hours ago

ಹವಾಮಾನ ವರದಿ | 04-09-2026 | ಮುಂಗಾರು ದುರ್ಬಲ… ಆದರೂ ಕರ್ನಾಟಕದಲ್ಲಿ ಗುಡುಗು ಮಳೆ ಮುಂದುವರಿಯುವ ಸಾಧ್ಯತೆ!

ಮುಂಗಾರು ದುರ್ಬಲಗೊಂಡಿದ್ದರೂ ಸ್ಥಳೀಯ ಮೋಡಗಳ ಬೆಳವಣಿಗೆಯಿಂದ ಮಲೆನಾಡು ಹಾಗೂ ಒಳನಾಡಿನಲ್ಲಿ ಗುಡುಗು ಸಹಿತ…

17 hours ago