ಬಿಪಿಎಲ್ ಕಾರ್ಡ್‍ದಾರರೇ ಎಚ್ಚರಿಕೆ : ಅನರ್ಹ ಕಾರ್ಡ್‍ಗಳ ರದ್ದು

November 27, 2025
8:58 PM

ಐಷಾರಾಮಿ ವಾಹನ, ಹೆಚ್ಚು ಆದಾಯ, ಸರ್ಕಾರಿ ನೌಕರಿ, ಹೆಚ್ಚು ಜಾಗ ಮತ್ತು ಭೂಮಿ ಇರುವ ಕುಟುಂಬಗಳ ಕಾರ್ಡ್‍ಗಳನ್ನೂ ಗುರುತಿಸಿಕೊಂಡು ಆದಾಯ ತೆರಿಗೆ ಇಲಾಖೆಯು ಪ್ರತಿ ವರ್ಷ ತೆರಿಗೆ ಸಲ್ಲಿಸುತ್ತಿರುವವರ ವಿವರಗಳನ್ನು ಆಹಾರ ಇಲಾಖೆಗೆ ಒದಗಿಸುತ್ತಿದೆ. ಈ ಕಾರಣದಿಂದ ಬಿಪಿಎಲ್‍ಗಳನ್ನು ಅನರ್ಹ ಎಂಬ ಪಟ್ಟಿಯಲ್ಲಿ ರದ್ದುಗೊಳಿಸಲಾಗುತ್ತಿದೆ. ಹೀಗಾಗಿ ಕೆಲವು ಬಿಪಿಎಲ್ ರೇಷನ್ ಕಾರ್ಡ್‍ಗಳನ್ನು ರದ್ದುಗೊಳಿಸುವ ಪ್ರಕ್ರಿಯೆ ರಾಜ್ಯಾದ್ಯಂತ ತೀವ್ರಗೊಂಡಿದೆ. ಈಗಾಗಲೇ ಬೆಂಗಳೂರು, ಹಾವೇರಿ, ಧಾರವಾಡ, ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಾವಿರಾರು ಕಾರ್ಡ್‍ಗಳು ರದ್ದಾಗಿವೆ.

ಒಂದು ವೇಳೆ ಬಿಪಿಎಲ್ ಕಾರ್ಡ್‍ಗಳನ್ನು ಉಳಿಸಿಕೊಳ್ಳಲು ಪ್ರಯತ್ನಗಳನ್ನು ಮಾಡುತ್ತಿರುವವರು ಈ ಷರತ್ತುಗಳನ್ನು ಒಳಗೊಂಡಿರಬೇಕು.

  • ವಾರ್ಷಿಕ ಆದಾಯ 1.2 ಲಕ್ಷ ರೂಪಾಯಿಗಿಂತ ಕಡಿಮೆ ಇರಬೇಕು.
  • ಯಾವ ಸದಸ್ಯರು ಸರ್ಕಾರಿ ಹುದ್ದೆ ಅಥವಾ ಖಾಯಂ ನೌಕರಿಯಲ್ಲಿ ಇರಬಾರದು.
  •  ನಗರದಲ್ಲಿ 1000 ಚದರ ಅಡಿಗಿಂತ ಹೆಚ್ಚು ಮನೆ ಜಾಗ ಇರಬಾರದು.
  •  ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್‍ಗಿಂತ ಹೆಚ್ಚು ಭೂಮಿ ಇರಬಾರದು.
  •  ನಾಲ್ಕು ಚಕ್ರ ವಾಹನ ಇರಬಾರದು ಹಾಗೂ ಸದಸ್ಯರೂ ಆದಾಯ ತೆರಿಗೆ ಪಾವತಿಸುತ್ತಿರಬಾರದು.

ಸರ್ಕಾರದ ಈ ನಿಯಮಗಳಿಂದ ಕೆಲವೊಮ್ಮೆ ಅನರ್ಹರನ್ನು ತೆಗೆದುಹಾಕೊ ನಿಜವಾದ ಬಡವರ ಕಾರ್ಡ್ ರದ್ದುಗಿಳಿಸಿರುತ್ತದೆ. ಒಂದುವೇಳೆ ಈ ಎಲ್ಲಾ ಷರತ್ತುಗಳು ಒಳಗೊಂಡಿದ್ದರೂ, ಬಿಪಿಎಲ್ ಕಾರ್ಡ್ ಅನರ್ಹ ಎಂದು ರದ್ದಾಗಿದೆ ಎಂದರೆ ಸಮೀಪದ ಆಹಾರ ಇಲಾಖೆ ಕಚೇರಿ ಅಥವಾ ತಾಲೂಕು ಕಚೇರಿಗೆ ದೂರು ಸಲ್ಲಿಸಬಹುದು.

ನಿಮ್ಮ ಕಾರ್ಡ್ ರದ್ದು ಆಗಿದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಲು ಈ ವಿಧಾನ ನೋಡಿ:  https://mahitikanaja.karnataka.gov.in/FCS/MyRationCard ಈ ಲಿಂಕ್ ನಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ ತದನಂತರ ರೇಷನ್ ಕಾರ್ಡ್ ಸಂಖ್ಯೆಯನ್ನು ಟೈಮ್ ಮಾಡಿ  ಕ್ಲಿಕ್ ಮಾಡಿದರೆ ಸಾಕು.  ಕಾರ್ಡ್ ಸ್ಥಿತಿ ಆಕ್ಟೀವ್ ಎಂದು ಕಾಣಿಸಿದರೆ ನಿಮ್ಮ ಕಾರ್ಡ್ ಸುರಕ್ಷಿತ‌,   ಇನ್‍ ಆಕ್ಟೀವ್ ಎಂದು ಕಾಣಿಸಿಕೊಂಡರೆ ರದ್ದು ಆಗಿದೆ ಎಂದು ಅರ್ಥ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ರೂರಲ್‌ ಮಿರರ್ ಸುದ್ದಿಜಾಲ

ಇದನ್ನೂ ಓದಿ

ಹವಾಮಾನ ವರದಿ | 10-09-2026 | ಕರ್ನಾಟಕದಲ್ಲಿ ಮಳೆ ಏಕೆ ಇಳಿಮುಖವಾಗುತ್ತಿದೆ..?
September 10, 2026
11:29 AM
by: ಸಾಯಿಶೇಖರ್ ಕರಿಕಳ
ರಾಜ್ಯದಲ್ಲಿ ವಿದ್ಯುತ್‌ ಸಂಕಷ್ಟದ ಸುಳಿವು – ರಾತ್ರಿ 6.30 ರಿಂದ 9ರವರೆಗೆ ಪೂರೈಕೆ ವ್ಯತ್ಯಯ ಸಾಧ್ಯತೆ
September 10, 2026
10:59 AM
by: ದ ರೂರಲ್ ಮಿರರ್.ಕಾಂ
ಪರಿಸರ ಸ್ನೇಹಿ ಗೌರಿ-ಗಣೇಶ ಹಬ್ಬ : ಮಂಗಳೂರು ಮಹಾನಗರಪಾಲಿಕೆ ಸೂಚನೆ
September 9, 2026
9:26 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 09-09-2026 | ಕರ್ನಾಟಕದಲ್ಲಿ ಮಳೆಯ ಚಿತ್ರಣ ಬದಲಾಗುತ್ತಿದೆ – ಸೆ.11ರಿಂದ ಕರಾವಳಿಯಲ್ಲಿ ಬದಲಾವಣೆ
September 9, 2026
1:50 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror