Rural Mirror - ಅತಿಥಿ

ವಾರದ ಅತಿಥಿ | ಮರ ಬಳಸದೆಯೇ ಮನೆ ನಿರ್ಮಾಣ, “ದ್ವಾರಕಾ”ದಿಂದ ಪರಿಸರಕ್ಕೊಂದು ಕೊಡುಗೆ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಸುಮಾರು 300 ಮನೆಗಳ ನಿರ್ಮಾಣ. ಇಷ್ಟೂ ಮನೆಗಳಿಗೆ ಮರದ ಬಳಕೆ ಇಲ್ಲ. ಎಲ್ಲವೂ ಆಧುನಿಕ ತಂತ್ರಜ್ಞಾನ. ಇದೊಂದು ಪರಿಸರಕ್ಕೆ ನೀಡುವ ಬಹುದೊಡ್ಡ ಕೊಡುಗೆ. ಇಂತಹದ್ದೊಂದು ಕೆಲಸವನ್ನು ಮಾಡುತ್ತಿರುವುದು ಪುತ್ತೂರು ದ್ವಾರಕಾ ಸಂಸ್ಥೆಯ ಆಡಳಿತ ನಿರ್ದೇಶಕ ಗೋಪಾಲಕೃಷ್ಣ ಭಟ್‌. ಈ ವಾರದ ಅತಿಥಿಯಾಗಿ ಅವರ ಉದ್ಯಮದ ಬಗ್ಗೆ ರೂರಲ್‌ ಮಿರರ್.ಕಾಂ ಜೊತೆ ಹಂಚಿಕೊಂಡಿದ್ದಾರೆ. ಅವರ ಜೊತೆಗಿನ ಮಾತುಕತೆಯ ಸಾರಾಂಶ ಇಲ್ಲಿದೆ….

Advertisement
2004-05 ರಲ್ಲಿ ಆರಂಭವಾದ ನಮ್ಮ ಹೆಜ್ಜೆ ಮುಂದುವರಿದಿದೆ. ಈ ಕೆಲಸ ಆರಂಭವಾದ ಬಳಿಕ “ದ್ವಾರಕಾ” ಎಂದು ಹೆಸರು ಇಡಲಾಯಿತು. ಅಂದಿನಿಂದ ನಿರಂತರವಾಗಿ ಕೆಲಸ ಮಾಡುತ್ತಲೇ ಬಂದಿದ್ದೇವೆ. ನಿರ್ಮಾಣ ಕಾಮಗಾರಿಯನ್ನು ಮಾಡುತ್ತಿರುವ ನಾವು ಯಾವುದೇ ಉದ್ಯಮವು ಆಯಾ ಪ್ರದೇಶದ “ಬೇಡಿಕೆಯನ್ನು ಪೂರೈಕೆ ಮಾಡುವುದೇ” ಯಶಸ್ಸಿನ ಗುಟ್ಟಾಗಿರುತ್ತದೆ. ನಾವು ಆ ಬೇಡಿಕೆಯನ್ನು ಪೂರೈಸುತ್ತಾ ಬಂದಿದ್ದೇವೆ. ಬೇಡಿಕೆ ಪೂರೈಕೆಯ ಜೊತೆಗೆ ವಿಶ್ವಾಸಾರ್ಹತೆ, ಸ್ಥಿರತೆ ಹಾಗೂ ನಿರಂತರತೆಯನ್ನು ಕೂಡಾ ಕಾಯ್ದುಕೊಳ್ಳಬೇಕು.
ನಾವು ಬಡಾವಣೆ ನಿರ್ಮಾಣ ಮಾಡುವುದು ಪರಿಸರ ಸ್ನೇಹಿಯಾಗಿಯೇ ಮಾಡುತ್ತೇವೆ. ಬಡಾವಣೆ ನಿರ್ಮಾಣದ ಬಳಿಕ ಕಿರು ತೋಟವನ್ನೂ ಮಾಡುತ್ತೇವೆ. ಅದರ ಜೊತೆಗೆ ಕಳೆದ ಸುಮಾರು 5-6 ವರ್ಷಗಳಿಂದ ಮನೆಗಳಿಗೆ ಮರ ಬಳಕೆ ಮಾಡುತ್ತಿಲ್ಲ. ಈಗಾಗಲೇ ಸುಮಾರು 300 ಮನೆಗಳನ್ನು ಮರ ಇಲ್ಲದೆಯೇ, ಆಧುನಿಕ ತಂತ್ರಜ್ಞಾನಗಳ ಬಳಕೆ ಮಾಡಿ ನಿರ್ಮಾಣ ಮಾಡಿದ್ದೇವೆ. ಈ ಮೂಲಕ ಪರಿಸರಕ್ಕೂ ಕೊಡುಗೆ ನೀಡಲಾಗಿದೆ.
ಇದರ ಜೊತೆಗೆ ದ್ವಾರಕಾ ಪ್ರತಿಷ್ಟಾನದ ಮೂಲಕ ಸಾಮಾಜಿಕವಾಗಿ ಕೂಡಾ ಕೆಲಸ ಮಾಡಲಾಗುತ್ತಿದೆ. ನಮ್ಮದು ನಿರ್ಮಾಣ ಕೆಲಸವಾದ್ದರಿಂದ ಮನೆ ಇಲ್ಲದವರಿಗೆ ಮನೆಕಟ್ಟಿಕೊಡುವ ಕೆಲಸ ಮಾಡಿದ್ದೇವೆ. ಯಾರಿಗೆ ಮನೆ ಕಟ್ಟಲು ಶಕ್ತಿಯೇ ಇಲ್ಲ  ಅಥವಾ ಸರ್ಕಾರದ ಯೋಜನೆಯಿಂದಲೂ ಮನೆ ಕಟ್ಟಲು ಸಾಧ್ಯವಿಲ್ಲ ಅವರಿಗೆ ಉಚಿತವಾಗಿ ಮನೆಕಟ್ಟಿ ಕೊಡುತ್ತೇವೆ. ಈಗಾಗಲೇ 4-5 ಮನೆ ನಿರ್ಮಾಣ ಮಾಡಿದ್ದೇವೆ ಅದರ ಜೊತೆಗೆ ಮನೆ ಕಟ್ಟಲು ಸಹಾಯ ಕೂಡಾ ಮಾಡಿದ್ದೇವೆ.
ಪ್ರತಿಷ್ಟಾನದ ಮೂಲ ಧ್ಯೇಯವೇ “ಸುಸಂಸ್ಕೃತ ಸಮಾಜ ನಿರ್ಮಾಣ “. ಇದಕ್ಕಾಗಿ ಮಕ್ಕಳಿಗೆ ಸಂಸ್ಕಾರ ನೀಡುವ ಮೂಲಕ ಮಾನಸಿಕವಾಗಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುದ ಉದ್ದೇಶ ಹೊಂದಲಾಗಿದೆ. ಮಕ್ಕಳು ಮಾನಸಿಕವಾಗಿ ಆರೋಗ್ಯವಾಗುವುದರಿಂದ ಸಮಾಜದ ಬದಲಾವಣೆ ಸಾಧ್ಯವಿದೆ. ಅದಕ್ಕಾಗಿ ಪ್ರಯತ್ನ. ಮಕ್ಕಳಿಗೆ ಉಚಿತ ವಸಂತ ವೇದ ಶಿಬಿರ, ವಿವಿಧ ತರಬೇತಿ, ಪುಸ್ತಕಗಳ ವಿತರಣೆ, ತರಬೇತಿ, ವ್ಯಕ್ತಿತ್ವ ವಿಕಸನ ಶಿಬಿರ, ಸಂಸ್ಕಾರ ಶಿಬಿರ ನಡೆಸುತ್ತಿದ್ದೇವೆ.
ಗೋಶಾಲೆಯ ಮೂಲಕ ಗೋವುಗಳ ರಕ್ಷಣೆ. ಕೃಷಿ, ಸಾವಯವ ಕೃಷಿಯ ಕಡೆಗೆ ಆಸಕ್ತಿ ಇರುವ ಕಾರಣದಿಂದ ದೇಸೀ ತಳಿಯ ಗೋಶಾಲೆ ಮಾಡಲಾಗಿದೆ.  ಹಾಲು ಮಾರಾಟಇಲ್ಲಿ ಉದ್ದೇಶ ಅಲ್ಲ, ಕಸಾಯಿ ಖಾತೆಗೆ ಹೋಗುವ ಹೋರಿಯ ಸಾಕಾಣಿಕೆ ಮಾಡಲಾಗುತ್ತಿದೆ. 25-30 ಹೋರಿ ಹಾಗೂ ದನ ಇದೆ.ಹಸು ಯಾವಾಗಲೂ ಹೊರೆ ಅಲ್ಲ, ಹಸು ನಮ್ಮನ್ನು ಸಾಕುತ್ತದೆ ಎಂದು ನಂಬಿದವರು ನಾವು.

ಶಿಕ್ಷಣ ಕ್ಷೇತ್ರದಲ್ಲೂ ಬದಲಾವಣೆ ಬೇಕಾಗಿದೆ. ಹೀಗಾಗಿ  ಶಿಕ್ಷಣ ಸಂಸ್ಥೆಯನ್ನು ಕಟ್ಟಬೇಕು ಎನ್ನುವ ಆಶಯ ಇತ್ತು. ಈಗ ಅದೂ ಕೂಡಾ ಸಾಕಾರವಾಗಿದೆ. ಒಬ್ಬ ವ್ಯಕ್ತಿ ತಾನೇ ದುಡಿದರೆ ಮಾತ್ರಾ ಸಮಾಜಕ್ಕೂ, ದೇಶಕ್ಕೂ ಆಸ್ಥಿಯಾಗಬಲ್ಲ, ದುಡಿದ್ದು ತಿನ್ನುವವನಾದರೆ ಆತ ದೇಶಕ್ಕೆ ಹೊರೆಯಾಗುತ್ತಾನೆ. ಇದಕ್ಕಾಗಿ ಮಕ್ಕಳನ್ನು ಸ್ವಾವಲಂಬಿಯಾಗಿ ಬೆಳೆಸುವ, ಬದುಕುವ ಶಿಕ್ಷಣದ ಕನಸನ್ನು ಹೊಂದಿದ್ದೇವೆ.
ಗೋಪಾಲಕೃಷ್ಣ ಭಟ್‌ ಅವರ ಸಂಪರ್ಕ : 9449258076

Gopalakrishna Bhat, the administrative wizard behind Puttur Dwarka Construction, is making waves with his ambitious project of constructing around 300 houses with not a single piece of wood in sight. It’s not just about building homes; it’s about embracing modern technology to reduce our carbon footprint. Instead of traditional wood, these homes are likely using alternative materials like recycled metals or advanced composites—how cool is that? This project stands out as a stellar example of how we can innovate and still be kind to Mother Earth. By avoiding wood, they’re directly contributing to saving forests and promoting sustainability. Imagine a whole neighborhood that’s not only futuristic but also eco-friendly. Bhat’s vision is setting a new benchmark for how we think about construction and the environment. It’s kind of like living in the future, where technology seamlessly blends with nature. Kudos to Gopalakrishna Bhat and his team for being pioneers in this green construction movement. Here’s hoping more builders take a page from his book and work towards a more sustainable future.

Advertisement
/**/
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಕೇರಳದಲ್ಲಿ 1 ಲಕ್ಷ ಹೆಕ್ಟೇರ್‌ ರಬ್ಬರ್‌ ತೋಟದಲ್ಲಿ ಟ್ಯಾಪಿಂಗ್‌ ಇಲ್ಲ..!

ಕೇರಳದಲ್ಲಿ ಸುಮಾರು ಒಂದು ಲಕ್ಷ ಹೆಕ್ಟೇರ್‌ ಪ್ರದೇಶದ ರಬ್ಬರ್‌ ತೋಟದಲ್ಲಿ ಟ್ಯಾಪಿಂಗ್‌ ಸ್ಥಗಿತವಾಗಿದೆ. 

3 hours ago

ಮಕ್ಕಳಿಗೊಂದು ಪುಟ | ನಮ್ಮದೊಂದು ಬೆಳಕು….

ನಾವೊಂದು ಯೋಚನೆ ಮಾಡಿದ್ದೇವೆ.  ಎಲ್ಲಾ ಕಡೆ ಮಕ್ಕಳು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ನಗರ…

7 hours ago

ವೃಷಭದಲ್ಲಿ ಶುಕ್ರ ಸಂಚಾರದಿಂದ ಮಹಾಲಕ್ಷ್ಮೀ ರಾಜಯೋಗ

ವೃಷಭ ರಾಶಿಯಲ್ಲಿ ಶುಕ್ರನ ಸಂಚಾರ ಒಂದು ಶುಭಕರವಾದ ಮತ್ತು ಧನವೃದ್ಧಿಯ ತತ್ವವನ್ನು ಸಾರುವ…

10 hours ago

ಒಂದು ಸೇತುವೆಯ ಹೋರಾಟದ ಕತೆ | ಕೊನೆಗೂ ಕೈಗೂಡಿತು ಬೃಹತ್‌ ಸೇತುವೆ | ಅದು ಅಂಬಾರಗೂಡ್ಲು-ಕಳಸವಳ್ಳಿ ಸೇತುವೆ |

ಅನೇಕ ವರ್ಷಗಳ ಬೇಡಿಕೆ-ಹೋರಟದ ಬಳಿಕ ಬೃಹತ್‌ ಸೇತುವೆಯೊಂದು ನಿರ್ಮಾಣವಾಗಿದೆ. ಅಂಬಾರಗೂಡ್ಲು-ಕಳಸವಳ್ಳಿ ಸೇತುವೆಯ ಹೋರಾಟದ…

17 hours ago

ಅರಿವು ಕೇಂದ್ರಗಳಿಗೆ ಅಲೆಕ್ಸಾ ಸಾಧನ ವಿತರಿಸುವ ‘ತರಂಗಿಣಿ’ ಕಾರ್ಯಕ್ರಮ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯದ ಗ್ರಾಮೀಣ ಪ್ರದೇಶಗಳ ಗ್ರಾಮ ಪಂಚಾಯತಿ…

17 hours ago