#Arecanut | ಮಣಿಪುರದ ಗಲಭೆ ನಡುವೆಯೂ ಟನ್‌ಗಟ್ಟಲೆ ಬರ್ಮಾ ಅಡಿಕೆ ಕಳ್ಳಸಾಗಾಣಿಕೆ…! | ಭೂತಾನ್‌ ಅಡಿಕೆಗಿಂತಲೂ ಹೆಚ್ಚಿನ ಸಮಸ್ಯೆ ಈ ಅಡಿಕೆ..! |

August 27, 2023
8:53 PM
ಅಡಿಕೆ ಆಮದು ಬಗ್ಗೆ ಆಗಾಗ ಚರ್ಚೆಯಾಗುತ್ತದೆ. ಅದರಲ್ಲೂ ಭೂತಾನ್‌ ಅಡಿಕೆ ಆಮದು ಬಗ್ಗೆ ಚರ್ಚೆಯಾಗಿತ್ತು. ಆದರೆ ಅದಕ್ಕಿಂತಲೂ ಹೆಚ್ಚಾಗಿ ಕಾಡುತ್ತಿರುವುದು ಕಳ್ಳಸಾಗಾಣಿಕೆ ಮೂಲಕ ಭಾರತದೊಳಕ್ಕೆ ಬರುತ್ತಿರುವ ಬರ್ಮಾ ಅಡಿಕೆ. ಈಚೆಗೆ ಮಣಿಪುರ ಗಲಭೆಯ ಸಂದರ್ಭದಲ್ಲೂ ಅಡಿಕೆ ಸಾಗಾಣಿಕೆಯಾಗಿತ್ತು ಎನ್ನುವ ಅಂಶ ಈಗ ಬೆಳಕಿಗೆ ಬಂದಿದೆ. ಈ ನಡುವೆಯೇ ಸುಮಾರು 4.8 ಕೋಟಿ ಮೌಲ್ಯದ ಅಡಿಕೆಯನ್ನು ಅಸ್ಸಾಂ ರೈಪಲ್ಸ್‌ ತಂಡವು ವಶಪಡಿಸಿಕೊಂಡಿದ್ದಾರೆ.

ಬರ್ಮಾ ಅಡಿಕೆ ಕಳ್ಳಸಾಗಾಣಿಕೆ ನಿರಂತರವಾಗಿ ನಡೆಯುತ್ತಿದೆ. ಅಸ್ಸಾಂ ರೈಫಲ್ಸ್ ಸಿಬ್ಬಂದಿಗಳ ತಂಡವು ಆಗಸ್ಟ್ 22 ಮತ್ತು 24 ರಂದು ಮಣಿಪುರದ ಕಾಮ್‌ಜಾಂಗ್ ಜಿಲ್ಲೆಯಲ್ಲಿ ಅಕ್ರಮ ಅಡಿಕೆ ಸಾಗಾಟವನ್ನು ಪತ್ತೆ ಮಾಡಿದ್ದಾರೆ. ಸುಮಾರು 4.8 ಕೋಟಿ ಮೌಲ್ಯದ ಅಡಿಕೆಯನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ 3 ಜನರನ್ನು ಬಂಧಿಸಲಾಗಿದೆ.

Advertisement
Advertisement

ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಅಕ್ರಮವಾಗಿ ಅಡಿಕೆ ಸಾಗಾಟದ ಮಾಹಿತಿ ಆಧಾರದಲ್ಲಿ  ಅಸ್ಸಾಂ ರೈಪಲ್ಸ್‌ ತಂಡವು ಕಾರ್ಯಾಚರಣೆ ನಡೆಸಿತ್ತು. ಈ ಸಂದರ್ಭ  209 ಚೀಲಗಳ  ಅಡಿಕೆಯನ್ನು ವಶಕ್ಕೆ ತೆಗೆದುಕೊಂಡಿದೆ ಪ್ರಕಟಣೆಯಲ್ಲಿ ತಿಳಿಸಿದೆ. ಈ ಆಧಾರದಲ್ಲಿ ತನಿಖೆ ನಡೆಸಿದ ಇಲಾಖೆಗಳಿಗೆ ಮಹತ್ವದ ಮಾಹಿತಿ ದೊರೆತಿದೆ. ಕಳೆದ ಕೆಲವು ಸಮಯಗಳಿಂದ ಬರ್ಮಾ ಅಡಿಕೆಯನ್ನು ಟನ್‌ ಗಟ್ಟಲೆ  ಮಣಿಪುರದ ಮೂಲಕ ಭಾರತದ ಹೈದರಾಬಾದ್‌ , ಮಂಗಳೂರು ಹಾಗೂ ಅಹಮದಾಬಾದ್‌ ಮತ್ತು ಬೆಂಗಳೂರು ಕಡೆಗೆ ರವಾನೆಯಾಗಿದೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ ಎಂದು IFP ವರದಿ ಮಾಡಿದೆ.

ಮಣಿಪುರದಲ್ಲಿ  ಗಲಭೆ ಹಾಗೂ ಆ ಕಾರಣದಿಂದ ನೂರಾರು ಜನರು ಸಾವಿಗೀಡಾದ ಸಂದರ್ಭದಲ್ಲಿ  ಸುಮಾರು ಒಂಬತ್ತು ಟನ್ ಬರ್ಮಾ ಅಡಿಕೆಯನ್ನು ವಿಮಾನ ಸರಕು ಸೇವೆಯ ಮೂಲಕ ನಿಯಮಿತವಾಗಿ ಸಾಗಿಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಏಳು ಸದಸ್ಯರನ್ನೊಳಗೊಂಡ ಸಿಂಡಿಕೇಟ್ ಇಂಫಾಲ್‌ನ  ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂಡಿಗೋ ಕಾರ್ಗೋ ಸೇವೆಯ ಮೂಲಕ ಮ್ಯಾನ್ಮಾರ್ ಅಡಿಕೆಯ ವ್ಯಾಪಾರವನ್ನು ಇತರ ರಾಜ್ಯಗಳಿಗೆ ರಫ್ತು ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ ಎಂದು IFP ವರದಿಯಲ್ಲಿ ತಿಳಿಸಿದೆ. ಈ ಅಡಿಕೆಯನ್ನು ಕಾಮ್‌ಜಾಂಗ್ ಜಿಲ್ಲೆಯ ಕಸ್ಸೋಮ್ ಖುಲ್ಲೆನ್‌ನಿಂದ ಸಾಗಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಸಾಗಾಣಿಕೆಯಲ್ಲಿ ಪ್ರಮುಖ ರಾಜಕಾರಣಿಗಳು ಸೇರಿದಂತೆ ಕೆಲವು ಉನ್ನತ ವ್ಯಕ್ತಿಗಳು  ಭಾಗಿಯಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Advertisement

ಕಳೆದ ಆರು ವರ್ಷಗಳಲ್ಲಿ, ಅಸ್ಸಾಂ ಮತ್ತು ಅದರ ನೆರೆಯ ರಾಜ್ಯಗಳಾದ ಮಿಜೋರಾಂ ಮತ್ತು ಮಣಿಪುರದ ಹಲವಾರು ಸ್ಥಳಗಳಲ್ಲಿ ಶಂಕಿತ ಬರ್ಮಾ ಅಡಿಕೆಗಳನ್ನು ತುಂಬಿದ ಟ್ರಕ್‌ಗಳು ಮತ್ತು ರೈಲು ವ್ಯಾಗನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.  ನೆರೆಯ ದೇಶಗಳಿಂದ ಅಡಿಕೆ ಕಳ್ಳಸಾಗಣೆ ಕುರಿತು ಭಾರತದಲ್ಲಿ 2021 ರಲ್ಲಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಯಿತು. ಹಾಗಿದ್ದರೂ ಅಡಿಕೆ ಕಳ್ಳಸಾಗಾಣಿಕೆಗೆ ತಡೆಯಾಗಲಿಲ್ಲ.

 

Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆಯ ಮೌಲ್ಯವರ್ಧಿತ ಉತ್ಪನ್ನಗಳು
June 9, 2025
10:05 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ವಿಶ್ವದ ಅತೀ ಎತ್ತರದ ಚೆನಾಬ್ ರೈಲ್ವೆ ಸೇತುವೆ ನಿರ್ಮಾಣ | ಬೆಂಗಳೂರಿನ ಜಿ.ಮಾಧವಿ ಲತಾ ಪ್ರಮುಖ ಪಾತ್ರ | ಭೂತಾಂತ್ರಿಕ ಸಲಹೆಗಾರರಾಗಿ 17 ವರ್ಷಗಳ ಕಾಲ ಕೊಡುಗೆ
June 9, 2025
7:27 AM
by: ದ ರೂರಲ್ ಮಿರರ್.ಕಾಂ
ಇಂದಿನಿಂದ ಕರಾವಳಿ-ಮಲೆನಾಡು ಜಿಲ್ಲೆಗಳಲ್ಲಿ ಮಳೆ
June 9, 2025
6:57 AM
by: ದ ರೂರಲ್ ಮಿರರ್.ಕಾಂ
ಮೃಗಶಿರ ನಕ್ಷತ್ರಕ್ಕೆ ಸೂರ್ಯನ ಪ್ರವೇಶ | ಈ ಮೂರು ರಾಶಿಗಳ ಅದೃಷ್ಟ..!
June 9, 2025
6:44 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group