ಹಣಕಾಸಿನ ಅಡೆತಡೆಗಳನ್ನು ಎದುರಿಸುತ್ತಿರುವ ಜಾರ್ಖಂಡ್ನ ಹಜಾರಿಬಾಗ್ನ ಮುಕಿ ಗ್ರಾಮದ ರೈತ ತನ್ನ ಹಾನಿಗೊಳಗಾದ ನೀರಿನ ಪಂಪ್ ಅನ್ನು ಪೆಡಲ್ ಪವರ್ನಲ್ಲಿ ಚಲಾಯಿಸುವ ಮೂಲಕ ಯಶಸ್ವಿಯಾಗಿದ್ದಾರೆ. ವಿದ್ಯುಚ್ಛಕ್ತಿ ಮತ್ತು ಇಂಧನದಿಂದ ಚಲಿಸುವ ಸಾಂಪ್ರದಾಯಿಕ ಪಂಪ್ ಅನ್ನು ಹಳೆಯ ಬೈ-ಸೈಕಲ್ ಅನ್ನು ಪೆಡಲ್ ಮಾಡುವುದರೊಂದಿಗೆ ತನ್ನ ಬೆಳೆಗಳಿಗೆ ನೀರುಣಿಸುವಂತೆ ಮಾಡಿದ್ದಾರೆ.
ಪಂಪ್ನ ಕಾಯಿಲ್ ಸುಟ್ಟ ನಂತರ ಬೆಳೆಗಳಿಗೆ ನೀರು ಹಾಕಲು ಸಾಧ್ಯವಾಗದ ಕಾರಣ ಈ ಪ್ರಯೋಗವನ್ನು ಮಾಡಿರುವೆನು ಎಂದು ರೈತ ಮಾಂಝಿ ಹೇಳಿದ್ದಾರೆ. ಆರ್ಥಿಕ ಅಡಚಣೆ ಮತ್ತು ವಿದ್ಯುತ್ ಪೂರೈಕೆಯ ಕೊರತೆಯಿಂದಾಗಿ ಅದನ್ನು ಮತ್ತೆ ಸರಿಪಡಿಸಲು ಸಾಧ್ಯವಾಗಲಿಲ್ಲ. ಮರುದಿನ ನನ್ನ ಹಿತ್ತಲಿನಲ್ಲಿ ಬಿದ್ದಿರುವ ಹಳೆಯ ಬೈಸಿಕಲ್ಲೊಂದಿಗೆ ಪಂಪ್ ಅನ್ನು ಚಾಲೂಗೊಳಿಸುವ ಏಕೆ ಸಾಧ್ಯವಿಲ್ಲ ಎಂದು ಪ್ರಯತ್ನಿಸಿದೆ. ಹೀಗಾಗಿ ನಾನು ಪಂಪ್ನಿಂದ ಮೋಟಾರ್ ಫ್ಯಾನ್ ಅನ್ನು ತೆಗೆದು ಅದರ ಬುಷ್ ಅನ್ನು ಸರಪಳಿಯ ಸಹಾಯದಿಂದ ಫ್ರೀ-ವೀಲ್ ಮೂಲಕ ಬೈಸಿಕಲ್ ವೀಲ್ನೊಂದಿಗೆ ಸಿಕ್ಕಿಸಿ ಯಶಸ್ವಿಯಾದೆ ಎಂದು ಮಾಂಝಿ ಹೇಳಿದರು.
ಕೃಷಿಕ ಮಾಂಝಿ ಈಗ ತನ್ನ 2.5 ಎಕರೆ ಜಮೀನಿನಲ್ಲಿ ತನ್ನ ತರಕಾರಿ ಬೆಳೆಗಳಿಗೆ ಒಂದು ರೂಪಾಯಿ ಹೂಡಿಕೆ ಮಾಡದೆ ಹತ್ತಿರದ ಕೊಳದಿಂದ ಸಮರ್ಥವಾಗಿ ಈ ಪಂಪ್ ಬಳಸಿ ನೀರಾವರಿ ಮಾಡುತ್ತಾನೆ ಎಂದು ಅವರು ಹೇಳಿದರು.
ಮಂಗಳೂರಿನಲ್ಲಿ ಸೆ.18ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ…
ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಏಕಾಏಕಿ ಸುರಿದ ಭಾರೀ ಮಳೆಗೆ ಹಲವು ರಸ್ತೆಗಳು ಜಲಾವೃತವಾಗಿ…
ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.16ರಿಂದ ಮಲೆನಾಡು, ಸೆ.17ರಿಂದ ಉತ್ತರ ಒಳನಾಡಿನಲ್ಲಿ ಮೋಡ…
ಸರಿಗಮಪ ಲಿಟಲ್ ಚಾಂಪ್ಸ್ 2026ರ ವಿಜೇತ ಅಶ್ಮಿತ್ ಎ. ಜೆ. ಅವರನ್ನು ಮಂಗಳೂರಿನ…
ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.18ರಿಂದ ಮಳೆಯ ವ್ಯಾಪ್ತಿ ಹೆಚ್ಚಾಗುವ ಸೂಚನೆಗಳಿವೆ. ಸೆ.19ರಿಂದ…
ಬಣ್ಣಗಳ ಮೂಲಕ ಅರಳಿದ ಗಣೇಶ - ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ 8…