ಹಣಕಾಸಿನ ಅಡೆತಡೆಗಳನ್ನು ಎದುರಿಸುತ್ತಿರುವ ಜಾರ್ಖಂಡ್ನ ಹಜಾರಿಬಾಗ್ನ ಮುಕಿ ಗ್ರಾಮದ ರೈತ ತನ್ನ ಹಾನಿಗೊಳಗಾದ ನೀರಿನ ಪಂಪ್ ಅನ್ನು ಪೆಡಲ್ ಪವರ್ನಲ್ಲಿ ಚಲಾಯಿಸುವ ಮೂಲಕ ಯಶಸ್ವಿಯಾಗಿದ್ದಾರೆ. ವಿದ್ಯುಚ್ಛಕ್ತಿ ಮತ್ತು ಇಂಧನದಿಂದ ಚಲಿಸುವ ಸಾಂಪ್ರದಾಯಿಕ ಪಂಪ್ ಅನ್ನು ಹಳೆಯ ಬೈ-ಸೈಕಲ್ ಅನ್ನು ಪೆಡಲ್ ಮಾಡುವುದರೊಂದಿಗೆ ತನ್ನ ಬೆಳೆಗಳಿಗೆ ನೀರುಣಿಸುವಂತೆ ಮಾಡಿದ್ದಾರೆ.
ಪಂಪ್ನ ಕಾಯಿಲ್ ಸುಟ್ಟ ನಂತರ ಬೆಳೆಗಳಿಗೆ ನೀರು ಹಾಕಲು ಸಾಧ್ಯವಾಗದ ಕಾರಣ ಈ ಪ್ರಯೋಗವನ್ನು ಮಾಡಿರುವೆನು ಎಂದು ರೈತ ಮಾಂಝಿ ಹೇಳಿದ್ದಾರೆ. ಆರ್ಥಿಕ ಅಡಚಣೆ ಮತ್ತು ವಿದ್ಯುತ್ ಪೂರೈಕೆಯ ಕೊರತೆಯಿಂದಾಗಿ ಅದನ್ನು ಮತ್ತೆ ಸರಿಪಡಿಸಲು ಸಾಧ್ಯವಾಗಲಿಲ್ಲ. ಮರುದಿನ ನನ್ನ ಹಿತ್ತಲಿನಲ್ಲಿ ಬಿದ್ದಿರುವ ಹಳೆಯ ಬೈಸಿಕಲ್ಲೊಂದಿಗೆ ಪಂಪ್ ಅನ್ನು ಚಾಲೂಗೊಳಿಸುವ ಏಕೆ ಸಾಧ್ಯವಿಲ್ಲ ಎಂದು ಪ್ರಯತ್ನಿಸಿದೆ. ಹೀಗಾಗಿ ನಾನು ಪಂಪ್ನಿಂದ ಮೋಟಾರ್ ಫ್ಯಾನ್ ಅನ್ನು ತೆಗೆದು ಅದರ ಬುಷ್ ಅನ್ನು ಸರಪಳಿಯ ಸಹಾಯದಿಂದ ಫ್ರೀ-ವೀಲ್ ಮೂಲಕ ಬೈಸಿಕಲ್ ವೀಲ್ನೊಂದಿಗೆ ಸಿಕ್ಕಿಸಿ ಯಶಸ್ವಿಯಾದೆ ಎಂದು ಮಾಂಝಿ ಹೇಳಿದರು.
ಕೃಷಿಕ ಮಾಂಝಿ ಈಗ ತನ್ನ 2.5 ಎಕರೆ ಜಮೀನಿನಲ್ಲಿ ತನ್ನ ತರಕಾರಿ ಬೆಳೆಗಳಿಗೆ ಒಂದು ರೂಪಾಯಿ ಹೂಡಿಕೆ ಮಾಡದೆ ಹತ್ತಿರದ ಕೊಳದಿಂದ ಸಮರ್ಥವಾಗಿ ಈ ಪಂಪ್ ಬಳಸಿ ನೀರಾವರಿ ಮಾಡುತ್ತಾನೆ ಎಂದು ಅವರು ಹೇಳಿದರು.
ಕರಾವಳಿ ಹಾಗೂ ಮಲೆನಾಡಿನಲ್ಲಿ ಆಗಸ್ಟ್ 10ರಿಂದ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳು ಗೋಚರಿಸಿವೆ.…
ದೇಹ, ಮನಸ್ಸು ಮತ್ತು ಆತ್ಮದ ಸಮತೋಲನವೇ ನಿಜವಾದ ಆರೋಗ್ಯ ಎಂದು ರಾಮಚಂದ್ರಾಪುರ ಶ್ರೀ…
2050ರ ವೇಳೆಗೆ ಮಳೆಯ ತೀವ್ರತೆ ಮತ್ತು ನಗರೀಕರಣದ ಪರಿಣಾಮವಾಗಿ ಭಾರತದ ಹಲವು ಗುಡ್ಡ…
ಅಕಾಲದ ಹಸಿವು ಮತ್ತು ಅಸಮಯದ ನಿದ್ದೆ ದೇಹದ ಯಂತ್ರದಲ್ಲಿ ಸಮಸ್ಯೆಯ ಸಂಕೇತ ಎಂದು…
ಸುಳ್ಯ ತಾಲೂಕಿನ ಮಲೆನಾಡು ಭಾಗದಲ್ಲಿ ಎರಡು ದಿನಗಳ ವಿರಾಮದ ಬಳಿಕ ಮತ್ತೆ ಭಾರೀ…
ದೇಶದ ಅಡಿಕೆ ಉತ್ಪಾದನೆ ಹಾಗೂ ಬೆಳೆ ವಿಸ್ತೀರ್ಣದಲ್ಲಿ ಕರ್ನಾಟಕವೇ ಅಗ್ರಸ್ಥಾನದಲ್ಲಿದೆ ಎಂದು ಕೇಂದ್ರ…