ಹಣಕಾಸಿನ ಅಡೆತಡೆಗಳನ್ನು ಎದುರಿಸುತ್ತಿರುವ ಜಾರ್ಖಂಡ್ನ ಹಜಾರಿಬಾಗ್ನ ಮುಕಿ ಗ್ರಾಮದ ರೈತ ತನ್ನ ಹಾನಿಗೊಳಗಾದ ನೀರಿನ ಪಂಪ್ ಅನ್ನು ಪೆಡಲ್ ಪವರ್ನಲ್ಲಿ ಚಲಾಯಿಸುವ ಮೂಲಕ ಯಶಸ್ವಿಯಾಗಿದ್ದಾರೆ. ವಿದ್ಯುಚ್ಛಕ್ತಿ ಮತ್ತು ಇಂಧನದಿಂದ ಚಲಿಸುವ ಸಾಂಪ್ರದಾಯಿಕ ಪಂಪ್ ಅನ್ನು ಹಳೆಯ ಬೈ-ಸೈಕಲ್ ಅನ್ನು ಪೆಡಲ್ ಮಾಡುವುದರೊಂದಿಗೆ ತನ್ನ ಬೆಳೆಗಳಿಗೆ ನೀರುಣಿಸುವಂತೆ ಮಾಡಿದ್ದಾರೆ.
ಪಂಪ್ನ ಕಾಯಿಲ್ ಸುಟ್ಟ ನಂತರ ಬೆಳೆಗಳಿಗೆ ನೀರು ಹಾಕಲು ಸಾಧ್ಯವಾಗದ ಕಾರಣ ಈ ಪ್ರಯೋಗವನ್ನು ಮಾಡಿರುವೆನು ಎಂದು ರೈತ ಮಾಂಝಿ ಹೇಳಿದ್ದಾರೆ. ಆರ್ಥಿಕ ಅಡಚಣೆ ಮತ್ತು ವಿದ್ಯುತ್ ಪೂರೈಕೆಯ ಕೊರತೆಯಿಂದಾಗಿ ಅದನ್ನು ಮತ್ತೆ ಸರಿಪಡಿಸಲು ಸಾಧ್ಯವಾಗಲಿಲ್ಲ. ಮರುದಿನ ನನ್ನ ಹಿತ್ತಲಿನಲ್ಲಿ ಬಿದ್ದಿರುವ ಹಳೆಯ ಬೈಸಿಕಲ್ಲೊಂದಿಗೆ ಪಂಪ್ ಅನ್ನು ಚಾಲೂಗೊಳಿಸುವ ಏಕೆ ಸಾಧ್ಯವಿಲ್ಲ ಎಂದು ಪ್ರಯತ್ನಿಸಿದೆ. ಹೀಗಾಗಿ ನಾನು ಪಂಪ್ನಿಂದ ಮೋಟಾರ್ ಫ್ಯಾನ್ ಅನ್ನು ತೆಗೆದು ಅದರ ಬುಷ್ ಅನ್ನು ಸರಪಳಿಯ ಸಹಾಯದಿಂದ ಫ್ರೀ-ವೀಲ್ ಮೂಲಕ ಬೈಸಿಕಲ್ ವೀಲ್ನೊಂದಿಗೆ ಸಿಕ್ಕಿಸಿ ಯಶಸ್ವಿಯಾದೆ ಎಂದು ಮಾಂಝಿ ಹೇಳಿದರು.
ಕೃಷಿಕ ಮಾಂಝಿ ಈಗ ತನ್ನ 2.5 ಎಕರೆ ಜಮೀನಿನಲ್ಲಿ ತನ್ನ ತರಕಾರಿ ಬೆಳೆಗಳಿಗೆ ಒಂದು ರೂಪಾಯಿ ಹೂಡಿಕೆ ಮಾಡದೆ ಹತ್ತಿರದ ಕೊಳದಿಂದ ಸಮರ್ಥವಾಗಿ ಈ ಪಂಪ್ ಬಳಸಿ ನೀರಾವರಿ ಮಾಡುತ್ತಾನೆ ಎಂದು ಅವರು ಹೇಳಿದರು.
ಬಾಳೆಹಣ್ಣು, ಮಾವು, ಆಲೂಗಡ್ಡೆ ಮತ್ತು ಬೇಬಿ ಕಾರ್ನ್ ಸೇರಿದಂತೆ 20 ಕೃಷಿ ಉತ್ಪನ್ನಗಳ …
ಈಗಿನಂತೆ ಎಪ್ರಿಲ್ 29 ಹಾಗೂ 30ರಂದು ಉತ್ತರ ಒಳನಾಡು, ದಕ್ಷಿಣ ಕರಾವಳಿ ಹಾಗೂ…
ಚುನಾವಣಾ ಸಮಯದಲ್ಲಿ ಪರವಾನಿಗೆ ಹೊಂದಿದ ಶಸ್ತ್ರಾಸ್ತ್ರ ಠೇವಣಿ ವಿನಾಯಿತಿ ಕೋರಿ ಸಲ್ಲಿಸಿದ ಅರ್ಜಿಯನ್ನು…
ದೇಸೀ ಗೋವು ಅದರಲ್ಲೂ ಮಲೆನಾಡು ಗಿಡ್ಡ ತಳಿಯ ಹಸು ಉಳಿಯಬೇಕು, ಅದರ ಉಳಿವು…
ದಿನದಿಂದ ದಿನಕ್ಕೆ ತಾಪಮಾನ(Temperature) ಏರುತ್ತಿದೆ. ಬಿಸಿ ಗಾಳಿ(Heat wave) ಬೀಸುತ್ತಿದೆ. ನೀರಿಗೆ ಅಭಾವ(Water…
ವಿಶ್ವ ವಿದ್ಯಾಲಯ ಕಾಲೇಜು, ನೆಲ್ಯಾಡಿಯ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆ ಮತ್ತು ನೂತನ…