ಕಿಶೋರ್ ಕುಮಾರ್ ಕೊಡ್ಗಿ
ಮುಂಗಾರು ಹಂಗಾಮಿನಲ್ಲಿ ಬೆಳೆ ಸಮೀಕ್ಷೆ ಅವಧಿಯು ಸೆ.15 ಕ್ಕೆ ಕೊನೆಗೊಳ್ಳುತ್ತದೆ. ನಿಗದಿ ಅವಧಿಯಲ್ಲಿ ಸಮೀಕ್ಷೆಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಮೀಕ್ಷೆಯ ಅವಧಿಯನ್ನು ವಿಸ್ತರಿಸಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ಕ್ಯಾಂಪ್ಕೋ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ತಿಳಿಸಿದ್ದಾರೆ.
ಬೆಳೆ ಸಮೀಕ್ಷೆಯ ಅವಧಿಯು ಸೆ.15 ಕ್ಕೆ ಕೊನೆಯ ದಿನವಾಗಿರುತ್ತದೆ. ಗ್ರಾಮಕರಣಿಕರ ಮೂಲಕ ಅಥವಾ ಸಮೀಕ್ಷಕರ ಮೂಲಕ ರೈತರು ಬೆಳೆ ಸೆರ್ವೆ ಮಾಡಿಸುತ್ತಾರೆ. ಆದರೆ ಸರ್ವರ್ ಸಮಸ್ಯೆ ಇರುವುದರಿಂದ ಸಮೀಕ್ಷಾ ಕಾರ್ಯ ವೇಗದಲ್ಲಿ ನಡೆಯುತ್ತಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸಮೀಕ್ಷಾ ವಿಧಾನವೂ ಕಠಿಣವಾಗಿದೆ ಮತ್ತು ರೈತರ ಜಮೀನಿನಲ್ಲಿ ಅಂತರ್ಜಾಲ ಹಾಗೂ ಜಿಪಿಎಸ್ ಸಿಗದೆ ಸಮೀಕ್ಷೆ ವಿಳಂಬವೂ ಆಗುತ್ತಿದೆ.
ಹೀಗಾಗಿ ತಾಂತ್ರಿಕ ತೊಂದರೆಯಿಂದಾಗಿ ಅನಾನುಕೂಲತೆಯನ್ನು ಸರಿಪಡಿಸಲು ಹಾಗೂ ಸಮೀಕ್ಷೆಯ ಅವಧಿಯನ್ನು ಒಂದು ತಿಂಗಳು ವಿಸ್ತರಿಸಿದಲ್ಲಿ ಎಲ್ಲಾ ರೈತರಿಗೂ ಅನುಕೂಲವಾಗುತ್ತದೆ. ಆದುದುರಿಂದ ಸಮೀಕ್ಷಾ ಅವಧಿಯನ್ನು ವಿಸ್ತರಿಸಲು ಆದೇಶ ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿಯಲ್ಲಿ ಕ್ಯಾಂಪ್ಕೋ ಒತ್ತಾಯಿಸಿದೆ
31.05.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆಯ ಪ್ರಕಾರ, ರಾಜ್ಯದ ವಿವಿಧ…
ಅಡಿಕೆ ಹಳದಿ ಎಲೆ ರೋಗ ನಿರೋಧಕ ಟಿಶ್ಯೂ ಕಲ್ಚರ್ ತಳಿ ಅಭಿವೃದ್ಧಿಯಲ್ಲಿ ಸಿಪಿಸಿಆರ್ಐ…
ಐಎಂಡಿ ಬಿಡುಗಡೆ ಮಾಡಿದ ಎರಡನೇ ಮುಂಗಾರು ಮುನ್ಸೂಚನೆಯಲ್ಲಿ ದೇಶದಲ್ಲಿ ಕೇವಲ 90% ಮಳೆಯ…
ಕರ್ನಾಟಕದಲ್ಲಿ ಮುಂಗಾರು ಪ್ರವೇಶದ ನಿರೀಕ್ಷೆ ಹೆಚ್ಚಾಗುತ್ತಿದ್ದು, ಸದ್ಯ ರಾಜ್ಯದ ಬಹುತೇಕ ಭಾಗಗಳಲ್ಲಿ ಬಿಸಿಲು…
ಭಾರತದಲ್ಲಿ 191 ಜಾತಿಯ ಜಿರಳೆಗಳು ದಾಖಲಾಗಿದ್ದು, ZSI ವಿಜ್ಞಾನಿಗಳು ದೇಶದ ಮೊದಲ ದೊಡ್ಡ…
ಜೈಸಲ್ಮೇರ್ನಲ್ಲಿ ಬಯಲಿನಲ್ಲಿ ಪತ್ತೆಯಾಗಿದ್ದ ನೂರಾರು ಹಸುಗಳ ಶವಗಳ ಘಟನೆ ಬಳಿಕ ನಗರಸಭೆ ಶವಗಳನ್ನು…