ಸುದ್ದಿಗಳು

ರಬ್ಬರ್‌ ಬೆಳೆಗಾರರನ್ನು ಸಂಕಷ್ಟದಿಂದ ಪಾರು ಮಾಡಲು ಮುಖ್ಯಮಂತ್ರಿಗಳಿಗೆ ಕ್ಯಾಂಪ್ಕೋ ಮನವಿ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ರಬ್ಬರ್‌ ದರ ಕುಸಿತವಾಗಿದ್ದು ರಾಜ್ಯದ ರಬ್ಬರ್‌ ಬೆಳೆಗಾರರನ್ನು ರಕ್ಷಿಸಲು ಬೆಂಬಲ ಬೆಲೆ ಘೋಷಣೆ ಮಾಡುವ ಮೂಲಕ ಬೆಳೆಗಾರರನ್ನು ರಕ್ಷಣೆ ಮಾಡಬೇಕು ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

Advertisement
Advertisement

ಅಡಿಕೆ ಬೆಳೆಗಾರರನ್ನು ಸಂಕಷ್ಟದಿಂದ ಕಾಪಾಡುವ ಸಲುವಾಗಿ 1973 ರಲ್ಲಿ  ಸುಬ್ರಾಯ ಭಟ್ಟರಿಂದ ಸ್ಥಾಪಿತವಾದ
ಬಹುರಾಜ್ಯ ಸಹಕಾರಿ ಸಂಸ್ಥೆಯಾದ ಕ್ಯಾಂಪ್ಕೊ ರೈ ತರ ಹಿತ ಕಾಪಾಡಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ.ಕರ್ನಾಟಕ
ಮತ್ತು ಕೇರಳ ಸರಕಾರದ ನಿರ್ದೇ ಶನದಂತೆ 1979ರಲ್ಲಿ ಕೊಕ್ಕೊ ಖರೀ ದಿಯನ್ನು ಪ್ರಾರಂಭಿಸಿ, ರೈ ತರ ಉತ್ಪನ್ನಗಳಿಗೆ ಸ್ಥಿರ ಧಾರಣೆ
ಸಿಗಲು ಶ್ರಮವಹಿಸುತ್ತಿದೆ. ಸಮಗ್ರ ಕೃಷಿ ಮತ್ತು ಮಿಶ್ರ ಬೆಳೆ ಕೃಷಿಗೆ ಉತ್ತೇಜನ ನೀ ಡಿ ರೈ ತರಿಗೆ ಆರ್ಥಿಕ ಶಕ್ತಿ ತುಂಬಲು 2010
ಹಾಗೂ 2016 ರಲ್ಲಿ ಕ್ಯಾಂಪ್ಕೊ , ರಬ್ಬರ್ ಮತ್ತು ಕರಿಮೆಣಸಿನ ಖರೀದಿಯನ್ನು ಪ್ರಾರಂಭಿಸಿದೆ.

ಈಗ ಸುಮಾರು 60,000 ರಬ್ಬರ್ ಬೆಳೆಗಾರರಿದ್ದು , 55,000 ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 40,000 ಮೆ.ಟನ್ ನಷ್ಟು
ನೈಸರ್ಗಿಕ ರಬ್ಬರ್ ಬೆಳೆಸುತ್ತಿದ್ದು,  ಸುಮಾರು 60000 ಮೆ.ಟನ್  ಬೇಡಿಕೆ ಇರುವುದಾಗಿ ಅಂದಾಜಿಸಲಾಗಿದೆ. ಪ್ರಾರಂಭದಲ್ಲಿ
ಉತ್ತೇಜನಕಾರಿಯಾಗಿದ್ದ ರಬ್ಬರ್ ಧಾರಣೆ ನಂತರ ಕುಸಿಯಲು ಪ್ರಾರಂಭವಾಗಿ ನಿರಂತರ ಕುಸಿತದ ಹಾದಿ ಹಿಡಿದಿದೆ.  ಕರ್ನಾಟಕದಲ್ಲಿ ದಕ್ಷಿಣ ಕನ್ನಡ,ಉತ್ತರ ಕನ್ನಡ,ಕೊಡಗು,ಶಿವಮೊಗ್ಗ,ಚಿಕ್ಕಮಂಗಳೂರು,ಹಾಸನ ಮತ್ತು ಮೈಸೂರು
ಜಿಲ್ಲೆಗಳಲ್ಲಿ ಪ್ರಮುಖವಾಗಿ ರಬ್ಬರನ್ನ ಬೆಳೆಸಲಾಗುತ್ತಿದೆ. 2011 ರಲ್ಲಿ 242 ರೂಪಾಯಿ ಇದ್ದ ನೈ ಸರ್ಗಿಕ ರಬ್ಬರ್ ಬೆಲೆ ಸದ್ಯ 140
ರೂಪಾಯಿಯ ಆಸುಪಾಸಿನಲ್ಲಿದ್ದು ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆಯಾಗಿದೆ. ನಿರಂತರ ದರ ಕುಸಿತದಿಂದ ರೈತರ ಜೀವನಲ್ಲಿ ಅಭದ್ರತೆ ಕಾಡುತ್ತಿದೆ.

ಕೇರಳದಲ್ಲಿಯೂ ಕೂಡ ರಬ್ಬರ್ ಬೆಳೆಗಾರರು ಸಂಕಷ್ಟಗಳನ್ನು ಅನುಭವಿಸುತ್ತಿದ್ದು,ಅಲ್ಲಿನ ಸರಕಾರ ಬೆಳೆಗಾರರನ್ನು ರಕ್ಷಿಸಲು
ರಬ್ಬರ್ ಉತ್ಪಾದನಾ ಪ್ರೋತ್ಸಾಹ ಯೋ ಜನೆ ಜಾರಿಗೆ ತಂದಿದೆ.ಈ ಯೋಜನೆಯ ಮೂಲಕ ರಬ್ಬರ್ ನ  ವೈ ವಿದ್ಯತೆಗೆ 170 ರೂಪಾಯಿ ಕನಿಷ್ಟ ಬೆಲೆಯನ್ನು ನಿಗದಿಪಡಿಸಿದೆ.ಮಾರುಕಟ್ಟೆಯ ದೈನಂದಿನ ಖರೀದಿ ದರ ಮತ್ತು ಸರಕಾರ ನಿಗದಿಪಡಿಸಿದ ದರ  ವ್ಯತ್ಯಾ ಸದ ಮೊತ್ತವನ್ನು ನೇ ರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿದೆ.ಈ ಸೌಲಭ್ಯ ಪಡೆಯಲು ರೈತರು ರಬ್ಬರ್ ಸೊಸೈಟಿ ಅಥವಾ ರಬ್ಬರ್ ಬೋರ್ಡ್ ನ ಅಧಿಕಾರಿ ಪ್ರಾಮಾಣೀಕರಿಸಿದ ಖರೀದಿ ರಶೀದಿಯನ್ನು ಒದಗಿಸಬೇ ಕಾಗುತ್ತದೆ. ಅಲ್ಲಿನ ಸರಕಾರದ ಈ ಯೋಜನೆ ರಬ್ಬರ್ ಧಾರಣೆಯ ಉತ್ತೇಜನಕ್ಕೆ ಪ್ರೇರಣೆ ನೀ ಡಲಿದೆ.ಇದೇ ರೀ ತಿಯ ಯೋಜನೆಯನ್ನು ಕರ್ನಾಟಕದಲ್ಲೂ ಅನುಷ್ಠಾನಕ್ಕೆ ತರಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ವಿದೇಶದಿಂದ ಹಳ್ಳಿಗೆ ಬಂದು ಕೃಷಿ ಸಾಧನೆ ಮಾಡಿದ ಯುವಕ

ಕೃಷಿಯನ್ನು ನಂಬಿ ಕೆಲಸ ಮಾಡಿದರೆ ಯಶಸ್ಸು ಕಾಣಬಹುದು ಎಂಬುದನ್ನು ರೈತ  ಯೋಗೇಶ್ ತೋರಿಸಿಕೊಟ್ಟಿದ್ದಾರೆ.…

4 hours ago

ಬದುಕು ಪುರಾಣ | ‘ಅವನೇನು.. ಹರಿಶ್ಚಂದ್ರನೋ!’

ನುಡಿದಂತೆ ನಡೆದಾತ ‘ರಾಜಾ ಹರಿಶ್ಚಂದ್ರ’. ಸತ್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ತ್ಯಾಗಿ. ಅನೃತವನ್ನಾಡದೆ…

9 hours ago

ಗುರು ಆದಿತ್ಯ ರಾಜಯೋಗ | ಯಾರಿಗೆಲ್ಲಾ ಕುಬೇರ ಯೋಗ..?

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

9 hours ago

ಸೆ.30 ವರೆಗೆ ಆಗುಂಬೆ ಘಾಟಿಯಲ್ಲಿ ಭಾರೀ ವಾಹನ ಸಂಚಾರ ನಿರ್ಬಂಧ

ಸಾರ್ವಜನಿಕ ಹಿತದೃಷ್ಠಿಯಿಂದ ಆಗುಂಬೆ ಘಾಟಿಯ ಮೂಲಕ ನಾಳೆಯಿಂದ ಸೆಪ್ಟಂಬರ್ 30 ರವರೆಗೆ ಲಘು…

17 hours ago

ಕೃಷಿ ಸಂಸ್ಕರಣಾ ಘಟಕ | 15 ಲಕ್ಷ ರೂಪಾಯಿ ಸಹಾಯಧನ ನೀಡಲು ಸರ್ಕಾರ  ನಿರ್ಧಾರ

ಕೃಷಿ ಸಂಸ್ಕರಣಾ ಘಟಕ ಸ್ಥಾಪಿಸುವ ರೈತರಿಗೆ ಈ ವರ್ಷದಿಂದ ರಾಜ್ಯ ಸರ್ಕಾರ 9…

17 hours ago