ಕ್ಯಾಂಪ್ಕೋ ಪ್ರಕಟಣೆ | ದೋಟಿ ಕೊಯ್ಲು ತರಬೇತಿಗೆ ಅರ್ಜಿ ಆಹ್ವಾನ

November 27, 2021
9:02 PM

ಅಡಿಕೆ ಕೃಷಿಕ ಸಮುದಾಯದ ಸಮಸ್ಯೆ ಪರಿಹರಿಸಲು ಮಂಗಳೂರಿನ ಕ್ಯಾಂಪ್ಕೋ ಸಂಸ್ಥೆ ದೋಟಿಯ ಮೂಲಕ ಅಡಿಕೆ ಕೊಯ್ಲು ತರಬೇತಿ ನೀಡಲು ನಿರ್ಧರಿಸಿದೆ. ಈ ಕಾರ್ಯಕ್ರಮ ಅಡಿಕೆ ಪತ್ರಿಕೆ ಹಾಗೂ ವಿಟ್ಲದ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ ಸಹಭಾಗಿತ್ವದಲ್ಲಿ ನಡೆಯಲಿದೆ. ತರಬೇತಿ ಜನವರಿ ತಿಂಗಳ 10 ರಿಂದ 12 ರ ವರೆಗೆ ಮೂರು ದಿನ ವಿಟ್ಲ ಸಿಪಿಸಿಆರ್ ಐಯಲ್ಲಿ ನಡೆಯಲಿದೆ.

Advertisement
Advertisement

ದಕ್ಷಿಣಕನ್ನಡ ಮತ್ತುಕಾಸರಗೋಡು ಜಿಲ್ಲೆಯ 18ರಿಂದ 35 ವರ್ಷದ ಒಳಗಿನ ಯುವಕರು ತರಬೇತಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಫಾರಂಗಳನ್ನು ಕ್ಯಾಂಪ್ಕೋ  ಶಾಖೆಗಳಿಂದ ಪಡೆಯಬಹುದು. ಇದೇ ಫಾರ್ಮಿನ ಮಾದರಿಗಳನ್ನು ಹಲವು ವಾಟ್ಸಪ್ ಗುಂಪುಗಳಲ್ಲಿ ಬಿಡುಗಡೆ ಮಾಡಲಾಗಿದ್ದು, ಅದನ್ನೇ ಮುದ್ರಿಸಿ ಬಳಸಲೂಬಹುದು. ಅರ್ಜಿಯ ಜೊತೆಗೆಇತ್ತೀಚೆಗಿನ ಎರಡು ಭಾವಚಿತ್ರ, ಆಧಾರ್ ಮತ್ತು ಪಾನ್‍ ಕಾರ್ಡಿನ ಜೆರಾಕ್ಸ್ ಪ್ರತಿಗಳನ್ನು ಲಗತ್ತಿಸಬೇಕು. ತುಂಬಿಸಿದ ಅರ್ಜಿ ಫಾರ್ಮನ್ನು ಕ್ಯಾಂಪ್ಕೋದ ಯಾವುದೇ ಶಾಖೆಯಲ್ಲಿ ಸಲ್ಲಿಸಬಹುದು.

ಅನುಭವಿ ತರಬೇತುದಾರರು ಫೈಬರ್‍ಕಾರ್ಬನ್‍ ದೋಟಿ ಬಳಸಿ ಅಡಿಕೆಕೊಯ್ಲು ಮತ್ತು ಸಿಂಪಡಣೆ ಮಾಡಲು ಕಲಿಸಲಿದ್ದಾರೆ. ತರಬೇತಿಯಲ್ಲಿ ಒಟ್ಟು 20 ಮಂದಿಗೆ ಮಾತ್ರ ಅವಕಾಶ ಇರುತ್ತದೆ. ಶಿಬಿರದ ಅವಧಿಯಲ್ಲಿಡೀ ಅಭ್ಯರ್ಥಿಗಳಿಗೆ ಶಿಬಿರ ಕೇಂದ್ರ ವಾಸ್ತವ್ಯ ಕಡ್ಡಾಯ. ಉಚಿತ ವಾಸ್ತವ್ಯ ಮತ್ತುಆಹಾರದ ಏರ್ಪಾಡು ಇದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 20.

ಮೂರು ವರ್ಷ ಹಿಂದೆ ಕ್ಯಾಂಪ್ಕೋ ಅಡಿಕೆ ಮರ ಏರಿ ಕೊಯ್ಲು – ಸಿಂಪಡಣೆ ಮಾಡಲು ಎರಡು ತರಬೇತಿ ಶಿಬಿರ ನಡೆಸಿತ್ತು. ಈ ಶಿಬಿರದಲ್ಲಿ ವಿದ್ಯೆ ಕಲಿತ ಹಲವರು ವೃತ್ತಿ ನಡೆಸುತ್ತಿದ್ದು ಬದುಕಿನಲ್ಲಿ ಪ್ರಗತಿ ಹೊಂದಿದ್ದಾರೆ. ದೋಟಿಯ ಮೂಲಕ ಕೊಯ್ಲು – ಸಿಂಪಡಣೆ ಮಾಡುವ ಕ್ರಮ ಉತ್ತರ ಕನ್ನಡದಲ್ಲಿ ಜನಪ್ರಿಯತೆ ಪಡೆಯುತ್ತಿದೆ. ಹಲವು ಹಳ್ಳಿಗಳಲ್ಲಿ ದೋಟಿ ಜಾಬ್ ವರ್ಕರುಗಳು ತಯಾರಾಗಿ ವೃತ್ತಿ ಮಾಡುತ್ತಿದ್ದಾರೆ. ಕುಮಟಾ ತಾಲೂಕಿನ ಮೂರೂರು-ಕಲ್ಲಬ್ಬೆಯಲ್ಲಿ ಕಳೆದೆರಡು ವರ್ಷಗಳಲ್ಲಿ 50ಕ್ಕೂ ಹೆಚ್ಚು ಜಾಬ್ ವರ್ಕರುಗಳು ರೂಪುಗೊಂಡು ಒಂದು ಅನನ್ಯ ಯಶೋಗಾಥೆ ಸೃಷ್ಟಿಯಾಗಿದೆ. ಈ ಮಂದಿ ವರ್ಷದ ಆರು ತಿಂಗಳ ಕಾಲ ಪ್ರತಿ ತಿಂಗಳಿಗೆ ಕನಿಷ್ಠ್ಠ 25,000 ರೂ ಆದಾಯ ಗಳಿಸುತ್ತಿದ್ದಾರೆ. ದೋಟಿ ಮೂಲಕ ಮಾಡುವ ಮರ ಗೆಲಸದಲ್ಲಿ ಅಪಾಯ ಸಾಧ್ಯತೆ ತೀರಾ ಕಡಿಮೆ ಇರುವುದು ಹೆಚ್ಚು ಹೆಚ್ಚು ಯುವಕರನ್ನು ಈ ಕೆಲಸಕ್ಕೆ ಸೆಳೆಯಹತ್ತಿದೆ.

Advertisement

ತರಬೇತಿಯ ಬಗ್ಗೆ ಹೆಚ್ಚಿನ ವಿವರಗಳಿಗೆ ಶಂ. ನಾ. ಖಂಡಿಗೆ( ಶಿಬಿರಾಧಿಕಾರಿ) : 99464 06321, ಈಶ್ವರ ನಾಯ್ಕ : 94493 32906 ಇವರನ್ನು ಸಂಪರ್ಕಿಸಬಹುದು.

 

 

Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಪ್ರೋಟಾನ್ ಥೆರಪಿ ಮೂಲಕ ಕ್ಯಾನ್ಸರ್ ಗೆ ಚಿಕಿತ್ಸೆ | ಕಿದ್ವಾಯಿ ಆಸ್ಪತ್ರೆಯಲ್ಲಿ ಸೌಲಭ್ಯ ಜಾರಿಗೆ ಪ್ರಸ್ತಾವನೆ
June 9, 2025
9:24 PM
by: ದ ರೂರಲ್ ಮಿರರ್.ಕಾಂ
ನೈರುತ್ಯ ಮುಂಗಾರು ಉತ್ತರ ಒಳನಾಡಿನಲ್ಲಿ ತೀವ್ರ  | ರಾಜ್ಯದ ವಿವಿದೆಡೆ ಮಳೆ
June 9, 2025
9:11 PM
by: The Rural Mirror ಸುದ್ದಿಜಾಲ
ಹಾವೇರಿ ಜಿಲ್ಲೆಯಲ್ಲಿ 441 ಸಾಕ್ಷರತಾ ಕಲಿಕಾ ಕೇಂದ್ರ ಸ್ಥಾಪನೆ
June 9, 2025
9:04 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 09-06-2025 | ಜೂನ್ 10 ರಿಂದ ಮಳೆಯ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ಇದೆ | ಮುಂದಿನ 10 ದಿನಗಳವರೆಗೂ ಉತ್ತಮ ಮಳೆ ಸಾಧ್ಯತೆ|
June 9, 2025
11:23 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group