Advertisement
ಸುದ್ದಿಗಳು

“ಕ್ಯಾನ್ಸರ್ ಮ್ಯಾಪಿಂಗ್” – ರೋಗ ತಡೆಯುವ ಮೊದಲ ಹೆಜ್ಜೆ

Share

ಕ್ಯಾನ್ಸರ್ ವಿರುದ್ಧ ಹೋರಾಟ ಎಂದರೆ ಕೇವಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದು ಮಾತ್ರವಲ್ಲ. ರೋಗ ಹೇಗೆ ಹರಡುತ್ತಿದೆ, ಯಾವ ಪ್ರದೇಶಗಳಲ್ಲಿ ಹೆಚ್ಚು ಕಾಣಿಸುತ್ತಿದೆ, ಯಾವ ವಯಸ್ಸಿನವರಲ್ಲಿ ಪ್ರಕರಣಗಳು ಏರುತ್ತಿವೆ ಎಂಬುದನ್ನು ಗುರುತಿಸುವುದೇ ಸಾರ್ವಜನಿಕ ಆರೋಗ್ಯದ ದೊಡ್ಡ ಸವಾಲು.

ಈ ದಿಕ್ಕಿನಲ್ಲಿ ಗಮನಾರ್ಹ ಅಧ್ಯಯನ ನಡೆಸುತ್ತಿರುವವರು ಬ್ರೆಜಿಲ್‌ನ ಎಪಿಡೆಮಿಯಾಲಜಿಸ್ಟ್ (ರೋಗವ್ಯಾಪ್ತಿ ತಜ್ಞೆ) ಮಾರಿಯಾ ಪೌಲಾ ಕುರಾಡೊ. ಅವರು ಕ್ಯಾನ್ಸರ್ ಪ್ರಕರಣಗಳ ಸಂಖ್ಯೆಯನ್ನು ಮಾತ್ರವಲ್ಲದೆ, ಅವುಗಳ ಭೌಗೋಳಿಕ ಮಾದರಿಯನ್ನು ನಕ್ಷೆಗಳ ಮೂಲಕ ಅಧ್ಯಯನ ಮಾಡುತ್ತಿದ್ದಾರೆ.

“ಕ್ಯಾನ್ಸರ್ ಎಲ್ಲೆಡೆ ಒಂದೇ ರೀತಿಯಲ್ಲಿ ಕಾಣಿಸುವುದಿಲ್ಲ. ಕೆಲವು ಪ್ರದೇಶಗಳಲ್ಲಿ ನಿರ್ದಿಷ್ಟ ಕ್ಯಾನ್ಸರ್‌ಗಳು ಹೆಚ್ಚು, ಕೆಲ ಭಾಗಗಳಲ್ಲಿ ಮರಣ ಪ್ರಮಾಣವೂ ಹೆಚ್ಚಿದೆ,” ಎನ್ನುತ್ತಾರೆ ಕುರಾಡೊ.

ಕ್ಯಾನ್ಸರ್ ಒಂದು ವೈದ್ಯಕೀಯ ಸಮಸ್ಯೆಯಷ್ಟೇ ಅಲ್ಲ, ಅದು ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆಯ ಪ್ರತಿಬಿಂಬವೂ ಆಗಿದೆ ಎಂಬುದನ್ನು ತೋರಿಸುತ್ತದೆ. ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಸೇವೆಗಳ ಕೊರತೆ, ಶೀಘ್ರ ಪತ್ತೆಯ ಸೌಲಭ್ಯಗಳ ಅಭಾವ ಇವು ರೋಗದ ಗಂಭೀರತೆಯನ್ನು  ಹೆಚ್ಚಿಸಬಹುದು ಎನ್ನುತ್ತಾರೆ ಅವರು.

ಕುರಾಡೊ ತಮ್ಮ ವೃತ್ತಿಜೀವನವನ್ನು ತಲೆ ಮತ್ತು ಕುತ್ತಿಗೆ ಭಾಗದ ಟ್ಯೂಮರ್ ಶಸ್ತ್ರಚಿಕಿತ್ಸಕರಾಗಿ ಆರಂಭಿಸಿದ್ದರು. ಆದರೆ ನಂತರ ಅವರಿಗೆ ಅರಿವಾಯಿತು ಒಬ್ಬೊಬ್ಬ ರೋಗಿಗೆ ಚಿಕಿತ್ಸೆ ನೀಡುವುದಕ್ಕಿಂತ, ದೊಡ್ಡ ಮಟ್ಟದಲ್ಲಿ ಕ್ಯಾನ್ಸರ್ ತಡೆಗೆ ಸಂಶೋಧನೆ ಮುಖ್ಯ. ಹೀಗಾಗಿ ಅವರು ಶಸ್ತ್ರಚಿಕಿತ್ಸೆಯಿಂದ ಹೊರಬಂದು ಎಪಿಡೆಮಿಯಾಲಜಿ ಕ್ಷೇತ್ರದಲ್ಲಿ ತೊಡಗಿಕೊಂಡರು.

ಈಗ ಅವರು ಹಲವು ದೇಶಗಳ ಸಂಶೋಧಕರೊಂದಿಗೆ ಸೇರಿ “Headspace” ಎಂಬ ಅಂತರಾಷ್ಟ್ರೀಯ ಯೋಜನೆಯ ಮೂಲಕ ತಲೆ ಮತ್ತು ಕುತ್ತಿಗೆ ಕ್ಯಾನ್ಸರ್‌ಗಳ ಕಾರಣಗಳು, ಪರಿಸರ ಪ್ರಭಾವ ಮತ್ತು ಜನನತಾತ್ವಿಕ ಅಂಶಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ಕ್ಯಾನ್ಸರ್ ಮ್ಯಾಪಿಂಗ್ ಮೂಲಕ ಸರ್ಕಾರಗಳು ಯಾವ ಪ್ರದೇಶದಲ್ಲಿ ಹೆಚ್ಚು ಪ್ರಕರಣಗಳಿವೆ ಎಂಬುದನ್ನು ಗುರುತಿಸಿ ಅಲ್ಲಿ ಸ್ಕ್ರೀನಿಂಗ್, ಮುನ್ನೆಚ್ಚರಿಕೆ ಮತ್ತು ತಡೆ ಕಾರ್ಯಕ್ರಮಗಳನ್ನು ಹೆಚ್ಚಿಸಬಹುದು. ಇದು ಚಿಕಿತ್ಸೆಗಿಂತಲೂ ತಡೆಗಟ್ಟುವಿಕೆಯತ್ತ ಮಹತ್ವದ ಹೆಜ್ಜೆ.

ಕ್ಯಾನ್ಸರ್ ವಿರುದ್ಧ ಹೋರಾಟ ಆಸ್ಪತ್ರೆಗಳ ಒಳಗಿನ ವಿಚಾರ ಮಾತ್ರವಲ್ಲ. ಅದು ಸಮಾಜದ ಮಟ್ಟದಲ್ಲಿ ಎಚ್ಚರಿಕೆ, ನೀತಿ ಮತ್ತು ವಿಜ್ಞಾನವನ್ನು ಒಟ್ಟಿಗೆ ಕಟ್ಟುವ ಅಗತ್ಯ. ಇದುವರೆಗಿನ ಅವರ ಅಧ್ಯಯನದ ಪ್ರಕಾರ, ರೋಗವನ್ನು ಚಿಕಿತ್ಸೆಗಿಂತ ಮುಂಚೆಯೇ ತಡೆಯುವುದು, ಮ್ಯಾಪಿಂಗ್‌ ಮಾಡುವುದು ನಾಳಿನ ಬದುಕನ್ನು ಉಳಿಸುವ ಮಾರ್ಗ ಎಂದು ಅಭಿಪ್ರಾಯ ಪಡುತ್ತಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್

the rural mirror news

Published by
ಮಿರರ್‌ ಡೆಸ್ಕ್

Recent Posts

ಶಿರಾಡಿ ಘಾಟ್‌ನಲ್ಲಿ ಸೋಮವಾರ ಟ್ರಾಫಿಕ್‌ ಸಂಕಷ್ಟದ ಸಾಧ್ಯತೆ – ಮುಂಜಾಗ್ರತಾ ಕ್ರಮ ಅಗತ್ಯ

ಮೂರು ದಿನಗಳ ರಜೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಶಿರಾಡಿ ಘಾಟ್‌ನಲ್ಲಿ…

4 hours ago

ಹವಾಮಾನ ವರದಿ |13-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಹಂತ ಹಂತವಾಗಿ ಚುರುಕಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಮಳೆ ಕಡಿಮೆಯಾಗಿದ್ದು, ಬಿಸಿಲು ಹೆಚ್ಚಾಗಿರುವ ನಡುವೆಯೇ ಸೆ.14ರಿಂದ ದಕ್ಷಿಣ ಒಳನಾಡಿನಲ್ಲಿ…

13 hours ago

ರೈತರ ಆದಾಯ ಹೆಚ್ಚಿಸಲು ಬಹುಬೆಳೆ, ಪಶುಸಂಗೋಪನೆ, ಮೀನುಗಾರಿಕೆಗೆ ಒತ್ತು

ನೀರಿನ ಕೊರತೆ ಮತ್ತು ಹವಾಮಾನ ಬದಲಾವಣೆಯ ನಡುವೆ ಭತ್ತ–ಗೋಧಿಯಂತಹ ಹೆಚ್ಚಿನ ನೀರು ಮತ್ತು…

17 hours ago

ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸದ್ಯ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ…

2 days ago

ಹಸುವಿನ ಹಾಲಿಗೆ ಬದಲಾಗಿ ‘ಲ್ಯಾಬ್‌ ಹಾಲು’ – ಇನ್ನು ಕೇವಲ ವಿಜ್ಞಾನಕಲ್ಪನೆ ಅಲ್ಲ..! ಹೊಸ ಅಧ್ಯಯನದ ಲೆಕ್ಕಾಚಾರ

ಇಂಪೀರಿಯಲ್ ಕಾಲೇಜ್ ಲಂಡನ್‌ನ ಅಧ್ಯಯನದ ಪ್ರಕಾರ, precision fermentation ಮೂಲಕ ತಯಾರಿಸುವ ಹಾಲಿಗೆ…

2 days ago

ಅಡಿಕೆಗೆ ಉತ್ತಮ ಬೆಲೆ , ಆದರೂ ಬೆಳೆಗಾರರ ಚಿಂತೆ ಮುಂದುವರಿದಿದೆ – ಕಾರಣವೇನು?

ಅಡಿಕೆ ಧಾರಣೆ ಏರಿಳಿತ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡುತ್ತಿದೆ. ಇದಕ್ಕೆ ಭಾರತ ಮಾತ್ರವಲ್ಲ…

2 days ago