ಚಿಕಿತ್ಸೆ ಮುಗಿದರೂ ಕ್ಯಾನ್ಸರ್ ಅಪಾಯ ಏಕೆ ಮುಗಿಯುವುದಿಲ್ಲ?

January 7, 2026
11:10 PM

 ಕ್ಯಾನ್ಸರ್ ಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡ ನಂತರವೂ ವರ್ಷಗಳ ಬಳಿಕ ಮತ್ತೆ ರೋಗ ಕಾಣಿಸಿಕೊಳ್ಳುವುದಕ್ಕೆ ಕಾರಣ ಏನು ಎಂಬ ಪ್ರಶ್ನೆಗೆ ವಿಜ್ಞಾನಿಗಳು ಮಹತ್ವದ ಉತ್ತರವನ್ನು ಕಂಡುಕೊಂಡಿದ್ದಾರೆ. ದೇಹದೊಳಗೆ ಮರೆಮಾಡಿಕೊಂಡಿರುವ ನಿದ್ರಿತ ಕ್ಯಾನ್ಸರ್ ಕೋಶಗಳು’ (Dormant Tumour Cells) ಮತ್ತೆ ಸಕ್ರಿಯವಾಗುವುದೇ ಕ್ಯಾನ್ಸರ್ ಮರುಕಳಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ.

ಅಮೆರಿಕ ಹಾಗೂ ಯೂರೋಪಿನ ಪ್ರಮುಖ ಸಂಶೋಧನಾ ಸಂಸ್ಥೆಗಳ ವಿಜ್ಞಾನಿಗಳು ನಡೆಸಿರುವ ಅಧ್ಯಯನಗಳ ಪ್ರಕಾರ, ಕ್ಯಾನ್ಸರ್‌ ಚಿಕಿತ್ಸೆ ಬಳಿಕವೂ ಕೆಲ ಕ್ಯಾನ್ಸರ್ ಕೋಶಗಳು ಸಂಪೂರ್ಣವಾಗಿ ನಾಶವಾಗದೆ ದೇಹದ ವಿವಿಧ ಭಾಗಗಳಲ್ಲಿ ನಿದ್ರಾವಸ್ಥೆಯಲ್ಲಿ ಉಳಿದುಕೊಳ್ಳುತ್ತವೆ. ಇವು ಹಲವು ವರ್ಷಗಳ ಕಾಲ ಯಾವುದೇ ಲಕ್ಷಣವಿಲ್ಲದೆ ಮರೆಮಾಚಿಕೊಂಡಿರುತ್ತವೆ. ಆದರೆ ಸೂಕ್ತ ಪರಿಸ್ಥಿತಿ ಬಂದಾಗ ಮತ್ತೆ ಬೆಳೆಯಲು ಪ್ರಾರಂಭಿಸಿ ಕ್ಯಾನ್ಸರ್‌ ಮರುಕಳಿಕೆಗೆ ಕಾರಣವಾಗುತ್ತವೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಮರುಕಳಿಕೆ ಸಾಧ್ಯತೆ :  ವೈಜ್ಞಾನಿಕ ಅಂದಾಜಿನ ಪ್ರಕಾರ, ಸ್ತನ ಕ್ಯಾನ್ಸರ್ ಸೇರಿದಂತೆ ಹಲವಾರು ಕ್ಯಾನ್ಸರ್‌ಗಳಿಂದ ಗುಣಮುಖರಾದ ಸುಮಾರು 30% ರೋಗಿಗಳಲ್ಲಿ ಇಂತಹ ನಿದ್ರಿತ ಕೋಶಗಳು ಇರಬಹುದೆಂದು ತಿಳಿದುಬಂದಿದೆ. ಕೆಲ ಸಂದರ್ಭಗಳಲ್ಲಿ ಈ ಕೋಶಗಳು ದಶಕಗಳ ನಂತರವೂ ಸಕ್ರಿಯಗೊಳ್ಳುವ ಸಾಧ್ಯತೆ ಇದೆ. ಫಿಲಡಲ್ಪಿಯಾದ ಲಿಸಾ ಡಟ್ಟನ್ ಎಂಬ ಮಹಿಳೆ 2017ರಲ್ಲಿ ಸ್ತನ ಕ್ಯಾನ್ಸರ್‌ನಿಂದ ಗುಣಮುಖಳಾದರು. ಆದರೆ 2020ರಲ್ಲಿ ನಡೆಸಿದ ಪರೀಕ್ಷೆಯಲ್ಲಿ, ಅವರ ಎಲುಬು ಮಜ್ಜೆಯಲ್ಲಿ ನಿದ್ರಿತ ಕ್ಯಾನ್ಸರ್ ಕೋಶಗಳು ಇರುವುದನ್ನು ವೈದ್ಯರು ಪತ್ತೆಹಚ್ಚಿದರು. “ರೋಗ ಮುಕ್ತಳಾಗಿದ್ದೇನೆ ಎಂದು ಭಾವಿಸಿದ್ದಾಗ ಈ ಸುದ್ದಿ ಆಘಾತ ತಂದಿತು” ಎಂದು ಅವರು ಹೇಳಿದ್ದಾರೆ.

ನಿದ್ರಿತ ಕೋಶಗಳು ಹೇಗೆ ಉಳಿದುಕೊಳ್ಳುತ್ತವೆ? :  ಸಂಶೋಧಕರ ಪ್ರಕಾರ ಈ ಕೋಶಗಳು ಮುಖ್ಯ ಟ್ಯೂಮರ್‌ನಿಂದ ಆರಂಭಿಕ ಹಂತದಲ್ಲೇ ಬೇರ್ಪಟ್ಟು ದೇಹದ ಇತರೆ ಭಾಗಗಳಿಗೆ ತೆರಳುತ್ತವೆ, ಸಾಮಾನ್ಯವಾಗಿ ಎಲುಬು ಮಜ್ಜೆ, ಲಿಂಫ್ ನೋಡ್‌, ಶ್ವಾಸಕೋಶಗಳಲ್ಲಿ ನೆಲೆಸುತ್ತವೆ, ವೇಗವಾಗಿ ಬೆಳೆಯದ ಕಾರಣ, ಕಿಮೋಥೆರಪಿ ಮತ್ತು ರೇಡಿಯೇಷನ್ ಚಿಕಿತ್ಸೆಗಳಿಂದ ತಪ್ಪಿಸಿಕೊಳ್ಳುತ್ತವೆ, ರೋಗನಿರೋಧಕ ವ್ಯವಸ್ಥೆಯಿಂದಲೂ ಇವು ಮರೆಮಾಚಿಕೊಳ್ಳುತ್ತವೆ.

ಯಾವಾಗ ಮತ್ತೆ ಎಚ್ಚರಗೊಳ್ಳುತ್ತವೆ? :  ವೈಜ್ಞಾನಿಕ ಅಧ್ಯಯನಗಳು ತಿಳಿಸುವಂತೆ, ಕೆಳಗಿನ ಸಂದರ್ಭಗಳಲ್ಲಿ ಈ ನಿದ್ರಿತ ಕೋಶಗಳು ಮತ್ತೆ ಸಕ್ರಿಯಗೊಳ್ಳಬಹುದು:

  • ಫ್ಲು, COVID-19 ಮುಂತಾದ ವೈರಲ್ ಸೋಂಕುಗಳು
  • ಗಾಯ, ಶಸ್ತ್ರಚಿಕಿತ್ಸೆ ಅಥವಾ ಉರಿಯೂತ
  • ವಯಸ್ಸಾಗುವುದು ಮತ್ತು ದೇಹದ ಬದಲಾವಣೆಗಳು
  • ನಿರಂತರ ಮಾನಸಿಕ ಒತ್ತಡ ಮತ್ತು ಜೀವನಶೈಲಿ ಬದಲಾವಣೆ
  • ರೋಗನಿರೋಧಕ ಶಕ್ತಿ ಕುಂದುವುದು

ಇಂತಹ ಸಂದರ್ಭಗಳಲ್ಲಿ ದೇಹದ ಸಮತೋಲನ ಕದಡಿದಾಗ, ಈ ಕೋಶಗಳು ಮತ್ತೆ ಬೆಳೆಯಲು ಅವಕಾಶ ಪಡೆಯುತ್ತವೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಹೊಸ ಚಿಕಿತ್ಸೆಗಳತ್ತ ಹೆಜ್ಜೆ :  ಈ ಸಮಸ್ಯೆಯನ್ನು ನಿವಾರಿಸಲು ವಿಜ್ಞಾನಿಗಳು ಈಗ ನಿದ್ರಿತ ಕ್ಯಾನ್ಸರ್ ಕೋಶಗಳನ್ನು  ಮೊದಲೇ ಪತ್ತೆಹಚ್ಚುವ ಪರೀಕ್ಷೆಗಳು, ನಿದ್ರಾವಸ್ಥೆಯಲ್ಲೇ ನಾಶ ಮಾಡುವ ಔಷಧೋಪಚಾರ, ರೋಗ ಮತ್ತೆ ಕಾಣಿಸಿಕೊಳ್ಳುವುದನ್ನು ತಡೆಯುವ ಚಿಕಿತ್ಸೆಗಳ ಮೇಲೆ ಕೆಲಸ ಮಾಡುತ್ತಿದ್ದಾರೆ.  ಅಮೆರಿಕದಲ್ಲಿ ನಡೆಯುತ್ತಿರುವ SURMOUNT ಮತ್ತು CLEVER ಎಂಬ ಕ್ಲಿನಿಕಲ್ ಟ್ರಯಲ್‌ಗಳು ಈ ನಿದ್ರಿತ ಕೋಶಗಳನ್ನು ಗುರುತಿಸಿ ಸಂಪೂರ್ಣವಾಗಿ ನಾಶ ಮಾಡುವ ಉದ್ದೇಶ ಹೊಂದಿವೆ. ಈ ಪ್ರಯೋಗಗಳು ಯಶಸ್ವಿಯಾದರೆ, ಭವಿಷ್ಯದಲ್ಲಿ ಕ್ಯಾನ್ಸರ್ ಮರುಕಳಿಕೆ ತಡೆಯುವಲ್ಲಿ ದೊಡ್ಡ ಕ್ರಾಂತಿ ತರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕ್ಯಾನ್ಸರ್ ವಿಜ್ಞಾನಿ ಸೈರಸ್ ಘಾಜರ್ ಅವರ ಪ್ರಕಾರ, “ಈಗ ಅನೇಕ ಸಂಶೋಧನಾ ತಂಡಗಳು ಒಂದೇ ದಿಕ್ಕಿನಲ್ಲಿ ಕೆಲಸ ಮಾಡುತ್ತಿವೆ. ನಿದ್ರಿತ ಕ್ಯಾನ್ಸರ್ ಕೋಶಗಳ ಕುರಿತು ನಮಗೆ ಈಗ ಸ್ಪಷ್ಟ ಚಿತ್ರ ಸಿಗುತ್ತಿದೆ. ಮುಂದಿನ ವರ್ಷಗಳಲ್ಲಿ ಇದಕ್ಕೆ ಪರಿಣಾಮಕಾರಿ ಚಿಕಿತ್ಸೆ ಸಾಧ್ಯವಾಗಲಿದೆ, ಎನ್ನುತ್ತಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

(ಮೂಲ : ಅಧ್ಯಯನ )

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕಸದ ತೆಂಗಿನಕಾಯಿಯೂ ಈಗ ರೈತರ ಸಂಪತ್ತು…! ಭುವನೇಶ್ವರದ ‘ವೇಸ್ಟ್ ಟು ವೆಲ್ತ್’ ಮಾದರಿ
July 14, 2026
7:12 AM
by: ದ ರೂರಲ್ ಮಿರರ್.ಕಾಂ
ರಾಜ್ಯದಲ್ಲಿ ಬರದ ಛಾಯೆ- ರೈತರಿಗೆ ಎಕರೆಗೆ ₹50 ಸಾವಿರ ಪರಿಹಾರ ನೀಡಿ
July 14, 2026
7:01 AM
by: ದ ರೂರಲ್ ಮಿರರ್.ಕಾಂ
ಹುಲಿ-ಚಿರತೆ ಹಾವಳಿ ನಿಯಂತ್ರಣಕ್ಕೆ ಆಗ್ರಹ – ಚಾಮರಾಜನಗರದಲ್ಲಿ ಅರಣ್ಯ ಇಲಾಖೆ ವಿರುದ್ಧ ರೈತ ಸಂಘಟನೆಗಳ ಪ್ರತಿಭಟನೆ
July 14, 2026
6:53 AM
by: ದ ರೂರಲ್ ಮಿರರ್.ಕಾಂ
ಮುಂಗಾರು ದುರ್ಬಲ: ಯಾದಗಿರಿ ರೈತರಿಗೆ ಕೃಷಿ ಇಲಾಖೆಯ ಮಹತ್ವದ ಸಲಹೆ
July 14, 2026
6:47 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror