Opinion

ರೈತ ಫಲಾನುಭವಿಗಳನ್ನು ಅಲೆದಾಡಿಸದೇ ಸವಲತ್ತು ನೀಡಬಹುದೇ…? | ರೈತರು ಇಂತಹ ಕಡೆ ಪ್ರಶ್ನಿಸುವಂತಾಗಲು ಸಾಧ್ಯವೇ…?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ನಮ್ಮ ಪ್ರಧಾನಿಯವರು ಹೇಳಿದಂತೆ ಅಟಕ್ ನಾ, ಲಟ್ ಕಾನಾ, ಬಟ್ ಕಾನಾ….. ಅಂದರೆ, ಒಂದು ಕೆಲಸವನ್ನು ತಡೆಹಿಡಿಯುವುದು, ತ್ರಿಶಂಕುವಿನಲ್ಲಿ ನೇತಾಡಿಸುವುದು, ಫಲಾನುಭವಿಯನ್ನು ಅಲೆದಾಡಿಸುವುದು ಇದು ಸರಕಾರಿ ಕೆಲಸದ ಪೂರೈಕೆಯಲ್ಲಿ ಇರುವ ಅಡೆತಡೆಗಳು. ಅನೇಕ ದಶಕಗಳಿಂದ ಈ ಪದ್ಧತಿ  ನಡೆದುಕೊಂಡು ಬಂದಿದೆ.

Advertisement
Advertisement

ಆದರೆ 2016- 2017 ರಿಂದ ಆರಂಭಗೊಂಡ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ರೀತಿಯ ಅನೇಕ ಯೋಜನೆಗಳು ಯಾವುದೇ ಅಡೆ-ತಡೆಗಳು ಇಲ್ಲದೆ ಫಲಾನುಭವಿ ಗೆ ಸುಲಭವಾಗಿ ಲಭ್ಯ ಆಗಿದ್ದವು. ಫಲಾನುಭವಿಯ ಖಾತೆಗೆ ನೇರವಾಗಿ ಹಣದ ವರ್ಗಾವಣೆ ನಡೆಯುತ್ತಿತ್ತು. ಈಗ ಮತ್ತೆ ಹಳೆಯ ಚಾಳಿ ಮರುಕಳಿಸುವ ಲಕ್ಷಣಗಳು ಗೋಚರಿಸುತ್ತಿವೆ. ಕಳೆದ ವರ್ಷವೇ ಬೆಳೆ ದಾಖಲೀಕರಣದ ಹೆಸರಿನಲ್ಲಿ ವಿಮೆ ಸೌಲಭ್ಯವನ್ನು ಕಠಿಣಗೊಳಿಸುವ ಕೆಲಸ ನಡೆದಿತ್ತು. ಈ ವರ್ಷ ಒಂದು ಹೆಜ್ಜೆ ಮುಂದೆ ಹೋಗಿ, ವಿಮೆ ಕಂತು ಕಟ್ಟುವ ಸಂದರ್ಭದಲ್ಲೇ ಅದು ಸ್ವೀಕಾರ ಆಗದೆ ಅನೇಕ ರೈತರಿಗೆ ತಲೆ ನೋವಾಗಿ ಪರಿಣಮಿಸಿದೆ.
ಇಲಾಖೆಯ ಅಧಿಕಾರಿಗಳನ್ನು ಈ ಬಗ್ಗೆ ವಿಚಾರಿಸಿದಾಗ, ಅವರು ಅದರಿಂದ ತಪ್ಪಿಸಿಕೊಂಡು, ಬೇರೆ ಇಲಾಖೆ ಅಥವಾ ಸರಕಾರದ ಮೇಲೆ ಗೂಬೆ ಕೂರಿಸುವ ಮೂಲಕ ತಾವು ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ.

ರೈತರು ಇದನ್ನು ಪ್ರಶ್ನಿಸದೆ, ಸಂಬಂಧಪಟ್ಟ ಇಲಾಖೆಯನ್ನು ಸಂಪರ್ಕಿಸಿ ದೂರು ದಾಖಲಿಸಿ, ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ಶಿಕ್ಷಣವನ್ನು ಪಡೆಯಬೇಕಿದೆ. ಈ ಎಲ್ಲದರ ಮಧ್ಯೆ ಕಾನೂನು ತಜ್ಞರಿಗೆ  ಕೆಲವು ಪ್ರಶ್ನೆಗಳು.

  1. ಅಡಿಕೆ ಒಂದು ತೋಟಗಾರಿಕಾ ಬಹು ವಾರ್ಷಿಕ ಬೆಳೆ, ಹಾಗಾಗಿ ಹಿಂದಿನ ವರ್ಷಗಳಲ್ಲಿ ವಿಮೆ ನೀಡಿದ ದಾಖಲೆ ಇದ್ದಾಗ ಈ ವರ್ಷ ನಿರಾಕರಿಸಿದರೆ, ಗ್ರಾಹಕ ನ್ಯಾಯಾಲಯದಲ್ಲಿ ಹೋರಾಟ ನಡೆಸಿ ಗೆಲುವು ಪಡೆಯಬಹುದೇ?.
  2. ಈ ವರ್ಷ ಅನೇಕ ರೈತರು ವಿಮೆ ಪಾವತಿಸಲಾಗದೆ ಸೌಲಭ್ಯದಿಂದ ಹೊರಗೆ ಉಳಿಯುತ್ತಿದ್ದು, ಅದರ ಕುರಿತು ವಿಮಾ ಕಂಪನಿಯವಿರುದ್ಧ ಕಾನೂನಾತ್ಮಕ ಹೋರಾಟ ನಡೆಸಲು ಅವಕಾಶ ಇದೆಯೇ?.
  3. ವಿಮೆ ಅರ್ಜಿಯಲ್ಲಿ ಬೆಳೆಯ ದೃಢೀಕರಣ ಕಡ್ಡಾಯ ಎಂದು ಸಹಿ ಹಾಕಿಸಿಕೊಳ್ಳುವುದು ಅಪರಾಧ ಅಲ್ಲವೇ?.
  4. ಪ್ರತ್ಯಕ್ಷ ಜಮೀನಿನಲ್ಲಿ ಬೆಳೆ ಇರುವಾಗ, ಅದನ್ನು ನಂಬದೆ ತಂತ್ರಾಂಶದಲ್ಲಿ ಇರುವ ಮಾಹಿತಿಯನ್ನು ನಂಬುವುದು ರೈತನಿಗೆ ಮಾಡುವ ಅಪಮಾನ ಹಾಗೂ ರೈತನ ಮೂಲಭೂತ ಹಕ್ಕಿನ ಉಲ್ಲಂಘನೆ ಅಲ್ಲವೇ?.
  5. ನ್ಯಾಯಯುತವಾಗಿ ವಿಮೆ ಕಟ್ಟಲು ಮುಂದಾದ ರೈತನಿಗೆ ವಿಮಾ ಸೌಲಭ್ಯವನ್ನು ನಿರಾಕರಿಸುವುದು ದಂಡಾರ್ಹ ಅಪರಾಧ ಅಲ್ಲವೇ?.
  6. ರೈತರು ಈ ಬಗ್ಗೆ ಸ್ವಾಭಿಮಾನದ ಹೋರಾಟ ನಡೆಸಿ, ಈ ರೀತಿಯ ತಾಂತ್ರಿಕ ತೊಂದರೆಗಳನ್ನು ಉಂಟು ಮಾಡಿರುವವರ ವಿರುದ್ಧ ವಿಜಯ ಗಳಿಸುವುದು ಅಪೇಕ್ಷಣೀಯ ಅಲ್ಲವೇ?.
  7. ಈ ವಿಮಾ ಸೌಲಭ್ಯವನ್ನು ಪಡೆಯುವಲ್ಲಿ ಉಂಟಾದ ಸಮಯ, ನೆಮ್ಮದಿ, ಆರ್ಥಿಕ ನಷ್ಟಗಳಿಗೆ ಪರಿಹಾರ ಸಿಗಬೇಕಲ್ಲವೇ?.

ಮೂಲ : social network

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

58ನೇ ಜ್ಞಾನಪೀಠ ಪ್ರಶಸ್ತಿ  ಪ್ರದಾನ | ಜಗದ್ಗುರು ರಾಮಭದ್ರಾಚಾರ್ಯ ಅವರಿಗೆ ಜ್ಞಾನಪೀಠ ಪ್ರಶಸ್ತಿ ಪ್ರದಾನ

ದೆಹಲಿಯಲ್ಲಿ  ಆಯೋಜಿಸಿದ್ದ 58ನೇ ಜ್ಞಾನಪೀಠ ಪ್ರಶಸ್ತಿ  ಪ್ರದಾನ ಕಾರ್ಯಕ್ರಮದಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮು…

7 hours ago

ಹೊಸರುಚಿ | ಹಲಸಿನ ಹಣ್ಣಿನ ಜಾಮ್

ಹಲಸಿನ ಹಣ್ಣಿನ ಜಾಮ್ ಗೆ ಬೇಕಾಗುವ ಸಾಮಗ್ರಿಗಳು : ಹಲಸಿನ ಹಣ್ಣು 3…

22 hours ago

ಅಡಿಕೆ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕಾಗಿ ಸರಕಾರಗಳಿಂದ ರಚಿಸಲಾದ ಸಮಿತಿಗಳು ಏನು ಹೇಳಿವೆ..?

ಅಡಿಕೆಗೆ ಸಂಬಂಧಿಸಿ ಸುಮಾರು 7 ಸಮಿತಿಗಳು-ವರದಿಗಳು ಆಗಿವೆ. ಎಲ್ಲಾ ಸಂದರ್ಭದಲ್ಲೂ ಅಡಿಕೆಯ ಪರ್ಯಾಯ…

22 hours ago

ಮೇ ಕೊನೆಯ ವಾರದಂದು ಈ ಐದು ರಾಶಿಯವರಿಗೆ ಶುಕ್ರ ದೆಸೆ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

23 hours ago

ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಬಾಗಲಕೋಟೆ ಜಿಲ್ಲೆಯ  ಶೂರ್ಪಾಲಿಯ ಶ್ರೀಲಕ್ಷ್ಮೀ ನರಸಿಂಹ ದೇವಾಲಯ

ಕೆಲ ದೇವಾಲಯಗಳು ತಮ್ಮ ಶಿಲ್ಪಕಲೆ, ಇತಿಹಾಸ, ಸೌಂದರ್ಯಕ್ಕೆ ಹೆಸರಾದರೆ ಮತ್ತೆ ಕೆಲವು ಭಕ್ತರ…

1 day ago