ಎರಡು ಪ್ಯಾಕೆಟ್ ಅಡಿಕೆ‌ ಹುಡಿ ಸಾಗಾಟ | ಟರ್ಕಿಯಲ್ಲಿ ಬಂಧನವಾಗಿದ್ದ ಪಾಕಿಸ್ತಾನಿ ಪ್ರಜೆ ಬಿಡುಗಡೆ | ಟರ್ಕಿಗೆ ಅಡಿಕೆ-ಸುಪಾರಿ ಸಾಗಾಟ ಶಾಶ್ವತವಾಗಿ ನಿಷೇಧ…! |

November 30, 2022
10:37 AM

ತನ್ನ ಪ್ರವಾಸದ ಸಂದರ್ಭ ಮಿತ್ರರಿಗೆ ಉಡುಗೊರೆಯಾಗಿ ಅಡಿಕೆ ಪ್ಯಾಕೆಟ್‌ ಸಾಗಾಟ ಮಾಡಿದ ಆರೋಪದ ಮೇಲೆ ಟರ್ಕಿಯಲ್ಲಿ ಬಂಧಿಸಲ್ಪಟ್ಟಿದ್ದ ಪಾಕಿಸ್ತಾನದ ಲಾಹೋರ್‌ನ 26 ವರ್ಷದ ನಿವಾಸಿ ಮುಹಮ್ಮದ್ ಅವೈಸ್ ಬಿಡುಗಡೆಯ ಜೊತೆಗೆ ಟರ್ಕಿಗೆ ಅಡಿಕೆಯನ್ನು ಶಾಶ್ವತವಾಗಿ ಸಾಗಾಟ ಮಾಡುವುದಕ್ಕೆ ನಿಷೇಧ ಹೇರಲಾಗಿದೆ.

Advertisement
Advertisement

ಪಾಕಿಸ್ತಾನದ ಮುಹಮ್ಮದ್ ಅವೈಸ್ ತನ್ನ ಪ್ರವಾಸದ ವೇಳೆ ಮಿತ್ರರಿಗೆ ಎರಡು ಅಡಿಕೆ ಪ್ಯಾಕೆಟ್‌ ಸಾಗಾಟ ಮಾಡುತ್ತಿದ್ದ. ಈ ಸಂದರ್ಭ ಟರ್ಕಿಯಲ್ಲಿ ವಿಮಾನ ಇಳಿಯುತ್ತಿದ್ದಂತೆ ನಾಗರಿಕ ವಿಮಾನಯಾನ ಪ್ರಾಧಿಕಾರದ ತಪಾಸಣೆಯ ವೇಳೆ ಸಿಕ್ಕಿಹಾಕಿಕೊಂಡು ಬಂಧಿಸಲ್ಪಟ್ಟಿದ್ದ. ಪಾಕಿಸ್ತಾನದಲ್ಲಿ ಅಡಿಕೆ ನಿಷೇಧ ಇಲ್ಲ, ಆದರೆ ಟರ್ಕಿಯಲ್ಲಿ ಅಡಿಕೆಯು ಮಾದಕವಸ್ತು/ಡ್ರಗ್ಸ್ ವರ್ಗದ ಅಡಿಯಲ್ಲಿ ಬರುತ್ತದೆ. ಹೀಗಾಗಿ ಅಡಿಕೆ ಸಾಗಾಟ,ಬಳಕೆ ನಿಷೇಧವಾಗಿತ್ತು. ಈ ಬಗ್ಗೆ ಅರಿವು ಇರದ ಪಾಕಿಸ್ತಾನದ ಪ್ರಜೆ ಅಡಿಕೆ ಸಾಗಾಟ ಮಾಡಿದ್ದ. ದೇಶದ ಕಾನೂನು ಪ್ರಕಾರ ಟರ್ಕಿಯಲ್ಲಿ ಪಾಕಿಸ್ತಾನಿ ಪ್ರಜೆಯನ್ನು ಬಂಧಿಸಿದ್ದರು.

Advertisement

ಬಳಿಕ ಇಸ್ತಾನ್‌ಬುಲ್‌ನಲ್ಲಿರುವ ಪಾಕಿಸ್ತಾನಿ ದೂತಾವಾಸದ ಸತತ ಪ್ರಯತ್ನಗಳ ನಂತರ, ಇಸ್ತಾನ್‌ಬುಲ್‌ನ ಸ್ಥಳೀಯ ನ್ಯಾಯಾಲಯವು  ಬಂಧನದಲ್ಲಿರುವ ಪಾಕಿಸ್ತಾನಿ ಪ್ರಜೆಯನ್ನು ಬಿಡುಗಡೆ ಮಾಡಿದೆ. ಇದರ ಜೊತೆಗೇ ಮುಂದೆ ಟರ್ಕಿಯಲ್ಲಿ ಅಡಿಕೆ ಸಾಗಾಟ, ಬಳಕೆ ಮಾಡದಂತೆ ಪಾಕಿಸ್ತಾನಿ ಪ್ರಜೆಗೆ ಎಚ್ಚರಿಕೆ ನೀಡಿ ಶಾಶ್ವತವಾಗಿ ಅಡಿಕೆ ಸಾಗಾಟವನ್ನು ನಿಷೇಧ ಮಾಡಿದೆ.

ಕೆಲವು ದೇಶಗಳಲ್ಲಿ ಅಡಿಕೆ ಬಳಕೆ ಹಾಗೂ ಸಾಗಾಟಕ್ಕೆ ನಿರ್ಬಂಧ ಇದೆ. ದೇಶದ ಕಾನೂನು ಪ್ರಕಾರ ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಅಡಿಕೆ ಪತ್ತೆಯಾದರೆ ಬಂಧಿಸಲಾಗುತ್ತದೆ.

Advertisement

 

Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಇತ್ತೀಚಿಗೆ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ : ಮಕ್ಕಳ ತೂಕ ಮತ್ತು ಎತ್ತರವನ್ನು ಹೆಚ್ಚಿಸುವ ಆಹಾರಗಳು
April 25, 2024
3:13 PM
by: The Rural Mirror ಸುದ್ದಿಜಾಲ
ಕೊನೆಗೂ ಗಾಂಧಿ ಕುಡಿಗಳ ಕ್ಷೇತ್ರ ಫಿಕ್ಸ್‌ : ರಾಯ್ ಬರೇಲಿಯಿಂದ ಪ್ರಿಯಾಂಕಾ, ಅಮೇಥಿಯಿಂದ ರಾಹುಲ್ ಸ್ಪರ್ಧೆ ಬಹುತೇಕ ಖಚಿತ
April 25, 2024
3:00 PM
by: The Rural Mirror ಸುದ್ದಿಜಾಲ
ಬರಗಾಲ ಎಫೆಕ್ಟ್‌ : ಗಗನಕ್ಕೇರಿದ ತರಕಾರಿ ದರ : ಕ್ಯಾರೆಟ್, ಬೀನ್ಸ್, ಮೆಣಸಿನಕಾಯಿ ಯಾವುದೂ ಮುಟ್ಟುವಂಗಿಲ್ಲ..
April 25, 2024
2:39 PM
by: The Rural Mirror ಸುದ್ದಿಜಾಲ
ಕರಾವಳಿ ಜಿಲ್ಲೆಯ ಕೃಷಿ ಕ್ಷೇತ್ರದ ಕಡೆಗೆ ಗಮನ | ಅಡಿಕೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಯತ್ನ | ಮಂಗಳೂರು ಬಿಜೆಪಿ ಅಭ್ಯರ್ಥಿ ಭರವಸೆ |
April 25, 2024
2:00 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror