ಗೇರುಹಣ್ಣಿನ ಮೌಲ್ಯವರ್ಧನೆಗೆ ಕೈಗಾರಿಕಾ ಸಂಪರ್ಕ ಸಭೆ : ವ್ಯಾಪಾರೀಕರಣಕ್ಕೆ ಹೊಸ ವೇದಿಕೆ

March 12, 2026
9:26 PM
ದೇಶದಲ್ಲಿ ಉತ್ಪಾದನೆಯಾಗುವ ಗೇರುಹಣ್ಣಿನ ಕೇವಲ 1% ಮಾತ್ರ ಮೌಲ್ಯವರ್ಧನೆಗೆ ಬಳಸಲಾಗುತ್ತಿರುವ ಹಿನ್ನೆಲೆ ಪುತ್ತೂರಿನಲ್ಲಿ ಕೈಗಾರಿಕಾ ಸಂಪರ್ಕ ಸಭೆ ನಡೆಯಿತು. ಗೇರುಹಣ್ಣು ಆಧಾರಿತ ಹೊಸ ಉತ್ಪನ್ನಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ವಾಣಿಜ್ಯೀಕರಣಕ್ಕೆ ಒತ್ತು ನೀಡಲಾಯಿತು.

ಪುತ್ತೂರಿನ ಐಸಿಎಆರ್–ಡಿಸಿಆರ್‌ನಲ್ಲಿ ಗೋಡಂಬಿ ಮೌಲ್ಯವರ್ಧನೆ ಕುರಿತು ಕೈಗಾರಿಕಾ ಸಂಪರ್ಕ ಸಭೆ ಆಯೋಜಿಸಲಾಗಿತ್ತು. ಗೇರು ತಂತ್ರಜ್ಞಾನಗಳ ವಾಣಿಜ್ಯೀಕರಣ ಹಾಗೂ ದೊಡ್ಡ ಪ್ರಮಾಣದ ಅಳವಡಿಕೆಗೆ ಕೈಗಾರಿಕಾ ಭಾಗವಹಿಸುವಿಕೆ ಮತ್ತು ಮಾರುಕಟ್ಟೆ ಸ್ವೀಕಾರ ಅಗತ್ಯವಿರುವ ಹಿನ್ನೆಲೆ, ವಿಜ್ಞಾನಿಗಳು–ಉದ್ಯಮಿಗಳು–ಪಾಲುದಾರರ ನಡುವೆ  ಸಂವಾದಕ್ಕೆ ವೇದಿಕೆ ಸೃಷ್ಟಿಸುವ ಉದ್ದೇಶದಿಂದ ಇಂಡಸ್ಟ್ರಿ ಇಂಟರ್ಫೇಸ್ ಸಭೆ ಆಯೋಜಿಸಲಾಯಿತು.

ಗೇರುಹಣ್ಣು ಪೌಷ್ಟಿಕಾಂಶದಿಂದ ಸಮೃದ್ಧವಾಗಿರುವುದರ ಜೊತೆಗೆ ಆರ್ಥಿಕವಾಗಿಯೂ ಮೌಲ್ಯಯುತ ಮತ್ತು ಪರಿಸರದ ದೃಷ್ಟಿಯಿಂದ ಪ್ರಮುಖ ಸಂಪನ್ಮೂಲವಾಗಿದೆ. ದೇಶದಲ್ಲಿ ವರ್ಷಕ್ಕೆ ಸುಮಾರು 60 ಲಕ್ಷ ಟನ್ ಗೇರುಹಣ್ಣು ಉತ್ಪಾದನೆಯಾಗುತ್ತಿದ್ದರೂ, ಅದರ ಕೇವಲ ಒಂದು ಶೇಕಡಾ ಮಾತ್ರ ಮೌಲ್ಯವರ್ಧನೆಗೆ ಬಳಸಲಾಗುತ್ತಿದೆ ಎಂಬುದು ಗಮನಾರ್ಹ ಸಂಗತಿ.

ಪ್ರಸ್ತುತ ಗೋವಾ ರಾಜ್ಯವು ಮಾತ್ರ ವಾಣಿಜ್ಯಮಟ್ಟದಲ್ಲಿ ಗೇರುಹಣ್ಣನ್ನು ಫೆನ್ನಿ ಉತ್ಪಾದನೆಗೆ ಪರಿಣಾಮಕಾರಿಯಾಗಿ ಬಳಸುತ್ತಿದೆ. ದೇಶದ ವಿವಿಧ ಭಾಗಗಳಲ್ಲಿ ಗೇರುಹಣ್ಣಿನಿಂದ ಪಾನೀಯಗಳು ಹಾಗೂ ಇತರ ಉತ್ಪನ್ನಗಳ ಅಭಿವೃದ್ಧಿಗೆ ಪ್ರಯತ್ನಗಳು ನಡೆಯುತ್ತಿದ್ದರೂ, ಅವು ಇನ್ನೂ ಸೀಮಿತವಾಗಿವೆ ಮತ್ತು ವ್ಯಾಪಕ ಗಮನ ಸೆಳೆಯಲು ವಿಫಲವಾಗಿವೆ.

ತಜ್ಞರ ಉಪಸ್ಥಿತಿ – ತಂತ್ರಜ್ಞಾನ ವ್ಯಾಪಾರೀಕರಣಕ್ಕೆ ಒತ್ತು :  ಸಭೆಗೆ ಡಾ. ಜೆ. ದಿನಕರ ಅಡಿಗ (ನಿರ್ದೇಶಕ), ಡಾ. ಸೆಲ್ವರಾಜನ್ (ನಿರ್ದೇಶಕ, ರಾಷ್ಟ್ರೀಯ ಬಾಳೆ ಸಂಶೋಧನಾ ಕೇಂದ್ರ, ತಿರುಚಿರಾಪಳ್ಳಿ) ಹಾಗೂ ಉದ್ಯಮ ಕ್ಷೇತ್ರದ ಪ್ರತಿನಿಧಿಗಳು ಸೇರಿದಂತೆ ಅನೇಕರು ಭಾಗವಹಿಸಿದರು.

ಉದ್ಘಾಟನಾ ಭಾಷಣದಲ್ಲಿ ಡಾ. ಸೆಲ್ವರಾಜನ್ ಅವರು ಗೇರುಹಣ್ಣಿನ ಕಡಿಮೆ ಬಳಕೆಯ ಕುರಿತು ಗಮನಸೆಳೆದು, ಇಂತಹ ಸಂಪರ್ಕ ಸಭೆಗಳು ತಂತ್ರಜ್ಞಾನ ವ್ಯಾಪಾರೀಕರಣವನ್ನು ವೇಗಗೊಳಿಸಿ ಸಂಶೋಧನೆ ಮತ್ತು ಕೈಗಾರಿಕೆಯ ನಡುವಿನ ಅಂತರ ಕಡಿಮೆ ಮಾಡುತ್ತವೆ ಎಂದು ಹೇಳಿದರು.

ಉದ್ಯಮ ಪ್ರತಿನಿಧಿಗಳನ್ನು ಗೇರುಹಣ್ಣಿನ ಉತ್ಪನ್ನಗಳ ಮೌಲ್ಯಮಾಪನದಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೋತ್ಸಾಹಿಸಲಾಯಿತು.

ಗೇರುಹಣ್ಣು ಆಧಾರಿತ ಹೊಸ ಉತ್ಪನ್ನಗಳಿಗೆ ಉತ್ತಮ ಪ್ರತಿಕ್ರಿಯೆ : ಕಾರ್ಯಕ್ರಮದ ಭಾಗವಾಗಿ ಗೇರುಹಣ್ಣು ಆಧಾರಿತ ಐದು ಉತ್ಪನ್ನಗಳನ್ನು ಪರಿಚಯಿಸಲಾಯಿತು.

ಇವುಗಳಲ್ಲಿ ಗಂಟಲು ಕೆರೆಸುವ ಅಂಶ ತೆಗೆದ ತಾಜಾ ಗೇರುಹಣ್ಣಿನ ರಸ, ಪ್ಯಾಶ್ಚರೀಕರಿಸಿದ ಗೇರುಹಣ್ಣಿನ ರಸ, ಕ್ಯಾಶ್‌ಲೈಮ್ RTS, ಕ್ಯಾಶ್‌ಲೈಮ್ ಫಿಜ್, ಗೇರುಹಣ್ಣಿನಿಂದ ತಯಾರಿಸಿದ ಜೋನಿ ಬೆಲ್ಲ ಉತ್ಪನ್ನಗಳು ಭಾಗವಹಿಸುವವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಪಡೆದವು. ವಿಶೇಷವಾಗಿ ಗೇರುಹಣ್ಣಿನ ಬೆಲ್ಲ ಹಾಗೂ ಕ್ಯಾಶ್‌ಲೈಮ್ RTS ಹೆಚ್ಚು ಆದ್ಯತೆ ಪಡೆದವು.

ಸಂವಾದದಲ್ಲಿ ಹೊರಹೊಮ್ಮಿದ ಪ್ರಮುಖ ಅಂಶಗಳು : ಸಂವಾದ ಅಧಿವೇಶನದಲ್ಲಿ ಭಾಗವಹಿಸುವವರು ಹಲವು ಪ್ರಮುಖ ವಿಚಾರಗಳನ್ನು ಮುಂದಿಟ್ಟರು.  ಉತ್ಪನ್ನಗಳ ಜೀವಿತಾವಧಿ ಹೆಚ್ಚಿಸುವ ತಂತ್ರಜ್ಞಾನ,  ಉತ್ಪಾದನೆ ಮತ್ತು ಮಾರುಕಟ್ಟೆಗೆ ಆರ್ಥಿಕ ಬೆಂಬಲ ವ್ಯವಸ್ಥೆ,  ಉದ್ಯಮಿಗಳು ಮತ್ತು ಪಾಲುದಾರರಿಗೆ ತರಬೇತಿ ಕಾರ್ಯಕ್ರಮಗಳ ಅಗತ್ಯ.  ಉತ್ಪನ್ನಗಳ ಮೌಲ್ಯಮಾಪನದ ನಂತರ ಗೇರುಹಣ್ಣಿನ ಮೌಲ್ಯವರ್ಧನೆ ಕುರಿತ ತಾಂತ್ರಿಕ ಮಾಹಿತಿ ನೀಡಲಾಯಿತು. ತಂತ್ರಜ್ಞಾನ ವಾಣಿಜ್ಯೀಕರಣದ ಕಾರ್ಯವಿಧಾನದ ಕುರಿತು ವಿಶೇಷ ಉಪನ್ಯಾಸವೂ ನಡೆಯಿತು.

ರಾಜ್ಯಗಳಾದ್ಯಂತ ಉದ್ಯಮಿಗಳ ಉತ್ಸಾಹಭರಿತ ಪಾಲ್ಗೊಳ್ಳಿಕೆ : ಈ ಇಂಡಸ್ಟ್ರಿ ಇಂಟರ್ಫೇಸ್ ಸಭೆಯಲ್ಲಿ ಕರ್ನಾಟಕ, ತಮಿಳುನಾಡು ಹಾಗೂ ಕೇರಳದಿಂದ 32 ಉದ್ಯಮ ತಜ್ಞರು ಮತ್ತು ನಿರೀಕ್ಷಿತ ಉದ್ಯಮಿಗಳು ಭಾಗವಹಿಸಿದ್ದರು. ಇನ್ನೂ 22 ಮಂದಿ ಆನ್‌ಲೈನ್ ಮೂಲಕ ಕಾರ್ಯಕ್ರಮಕ್ಕೆ ಸೇರಿಕೊಂಡರು.  ಇದರಿಂದ ಗೇರುಹಣ್ಣಿನ ಮೌಲ್ಯವರ್ಧನೆಗೆ ಉದ್ಯಮ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಆಸಕ್ತಿ ಸ್ಪಷ್ಟವಾಗಿದೆ.

ಮುಂದಿನ ದಾರಿ : ತಜ್ಞರ ಅಭಿಪ್ರಾಯದಂತೆ ಗೇರುಹಣ್ಣಿನ ಮೌಲ್ಯವರ್ಧನೆ ಮೂಲಕ ರೈತರಿಗೆ ಹೆಚ್ಚುವರಿ ಆದಾಯ, ಆಹಾರ ಸಂಸ್ಕರಣೆ ಕ್ಷೇತ್ರದಲ್ಲಿ ಹೊಸ ಉದ್ಯಮ ಅವಕಾಶಗಳು, ಬಳಕೆಯಾಗದ ಸಂಪನ್ಮೂಲದ ಸಮರ್ಪಕ ಉಪಯೋಗ ಸಾಧ್ಯವಾಗಬಹುದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

An industry interface meeting on cashew apple value addition was held at ICAR-DCR Puttur to promote commercialization of technologies. With only 1% of India’s cashew apple production currently utilized, experts emphasized product development, industry participation, and market linkages to unlock its economic potential.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ದಕ್ಷಿಣ ಕನ್ನಡದಲ್ಲಿ ಹೆಚ್ಚುತ್ತಿರುವ ಕಡಲ್ಕೊರೆತ ಗಂಭೀರತೆ : ಲೋಕಸಭೆಯಲ್ಲಿ ಧ್ವನಿಯೆತ್ತಿದ ಸಂಸದ
March 12, 2026
9:11 PM
by: ದ ರೂರಲ್ ಮಿರರ್.ಕಾಂ
ಭಾರತೀಯ ಕೊಕ್ಕೋಗೆ ಜಾಗತಿಕ ಮಟ್ಟದ ಮಾನ್ಯತೆ | ಈಗ ಮೌಲ್ಯವರ್ಧನೆಯೇ ರೈತರಿಗೆ ಹೊಸ ದಾರಿ
March 12, 2026
8:31 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 12-03-2026 | ಮಾರ್ಚ್‌ 14–15 ರಿಂದ ಗುಡುಗು ಸಹಿತ ಮಳೆ ಸಾಧ್ಯತೆ
March 12, 2026
11:48 AM
by: ಸಾಯಿಶೇಖರ್ ಕರಿಕಳ
ಗ್ಯಾಸ್‌ ಸರಬರಾಜು ಆತಂಕ : ಹೋಟೆಲ್‌ ಉದ್ಯಮಕ್ಕೆ ಹೊಡೆತ, ಗೃಹ ಬಳಕೆದಾರರಿಗೆ ಆದ್ಯತೆ
March 12, 2026
11:36 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror