Advertisement
ಕೃಷಿ

ಇಲ್ಲಿ ತರಕಾರಿ ಬೆಲೆಗೆ ಗೋಡಂಬಿ ಮಾರಾಟವಾಗಲು ಕಾರಣವೇನು..?

Share

ಜಾರ್ಖಂಡ್ ರಾಜ್ಯದ ಜಮ್ತಾರಾ ಪಟ್ಟಣದಿಂದ ಕೇವಲ ನಾಲ್ಕು ಕಿಲೋಮೀಟರ್ ದೂರದಲ್ಲಿ, ಜಾರ್ಖಂಡ್‌’ನ ಗೋಡಂಬಿ ನಗರ ಎಂದು ಕರೆಯಲ್ಪಡುವ ನಲಾ ಎಂಬ ಹಳ್ಳಿಯಿದೆ. ಈ ನಲಾ ಗ್ರಾಮದಲ್ಲಿ ಗೋಡಂಬಿಗಳನ್ನು ತರಕಾರಿಯಂತೆ ಪ್ರತಿ ಕೆಜಿ ಗೆ 20 ರಿಂದ 30 ರೂ ಗಳಿಗೆ ಮಾಡಲಾಗುತ್ತಿದೆ. ಅಂದರೆ ತರಕಾರಿಗಳನ್ನು ಮಾರಕಟ್ಟೆಯಿಂದ ಯಾವ ಕೆಜಿಗೆ ತೆಗೆದುಕೊಳ್ಳುತೇವೆ ಆದರಂತೆ ಇಲ್ಲಿ ಗೊಡಂಬಿಗಳನ್ನು ತೆಗೆದುಕೊಳ್ಳಲಾಗುತ್ತದೆ. ದೇಶದೆಲ್ಲೆಡೆ ದುಬಾರಿ ಬೆಲೆಗೆ ಗೋಡಂಬಿ ಮಾರಾಟವಾಗುತ್ತಿದ್ದೆ ಇಲ್ಲಿ ಮಾತ್ರಾ ಇಷ್ಟು ಕಡಿಮೆಗೆ ಹೇಗೆ ಗೋಡಂಬಿ ಮಾರಾಟ ಮಾಡುತ್ತಾರೆ..? ಇದು ಬಹಳ ಕುತೂಹಲ.

ಸಲಾ ಗ್ರಾಮದಲ್ಲಿ  50 ಎಕರೆಗೂ ಹೆಚ್ಚು ಭೂಮಿ ಗೋಡಂಬಿ ತೋಟಗಳಿಂದ ತುಂಬಿಕೊಂಡಿದ್ದು, ಈ ಗ್ರಾಮವನ್ನು ಭಾರತದ ಗೋಡಂಬಿ ನಗರ ಎಂದು ಕರೆಯಬಹುದಾಗಿದೆ ಕೂಡಾ. ಆದರೆ ಈ ಊರು ಅಷ್ಟೊಂದು ಅಭಿವೃದ್ಧಿ ಹೊಂದಿಲ್ಲದ ಕಾರಣ, ಗ್ರಾಮಸ್ಥರು ಗೋಡಂಬಿಯನ್ನು ಇಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ.

2010ರಲ್ಲಿ ಜಾರ್ಖಂಡ್ ಅರಣ್ಯ ಇಲಾಖೆ ನಲಾ ಗ್ರಾಮದ ಮಣ್ಣು ಮತ್ತು ಹವಾಮಾನ ಗೋಡಂಬಿ ಬೆಳೆಗೆ ಅತ್ಯಂತ ಸೂಕ್ತ ಎಂದು ಕಂಡುಹಿಡಿದಿತ್ತು. ಈ ಪ್ರದೇಶದಲ್ಲಿ ಲ್ಯಾಟರೈಟ್ ಮಣ್ಣು ಮಧ್ಯಮ ಮಳೆ, ಸೂರ್ಯನ ಬೆಳಕು ಮತ್ತು ತಾಪಮಾನ ಗೋಡಂಬಿ ಮರಗಳ ಬೆಳವಣಿಗೆಗೆ ಆದರ್ಶ. ಇದರಿಂದಾಗಿ ದೊಡ್ಡ ಪ್ರಮಾಣದಲ್ಲಿ ಗೋಡಂಬಿ ಉತ್ಪಾದನೆ ಆರಂಭವಾಯಿತು . ಈಗ ಗ್ರಾಮದಲ್ಲಿ ಸಾವಿರಾರು ಗೇರುಬೀಜದ ಮರಗಳು ಇದ್ದು, ಪ್ರತಿ ವರ್ಷ ಲಕ್ಷಾಂತರ ಕೆಜಿ ಗೊಂಡಂಬಿ ಉತ್ಪಾದನೆಯಾಗುತ್ತದೆ.

ಗೋಡಂಬಿಯ ಪೌಷ್ಟಿಕಾಂಶದ ಮೌಲ್ಯ ಮತ್ತು ಅದನ್ನು ಸ್ವಚ್ಛಗೊಳಿಸುವ ಮತ್ತು ಬಳಕೆಗೆ ಸಿದ್ಧಪಡಿಸುವ ಪ್ರಕ್ರಿಯೆಯಿಂದಾಗಿ, ಗೋಡಂಬಿ ಬೀಜಗಳ ಬೆಲೆ ಯಾವಾಗಲೂ ಗಗನಕ್ಕೇರುವಂತೆ ಮಾಡುತ್ತಿದೆ. ಸದ್ಯ ಗೋಡಂಬಿ ಪ್ರತಿ ಕಿಲೋಗ್ರಾಂಗೆ ಸುಮಾರು ₹800 ರಿಂದ ₹1000 ವರೆಗೆ ಇರುತ್ತದೆ. ಆದರೆ ಜಾರ್ಖಂಡ್‌ ಈ ಪ್ರದೇಶದಲ್ಲಿ ಮಾತ್ರಾ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ.

ಗೋಡಂಬಿಯನ್ನ ಇಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡಲು ಮುಖ್ಯ ಕಾರಣವೆಂದರೆ, 2010ರಲ್ಲಿ ಗೋಡಂಬಿ ತೋಟಗಳು ಎಲ್ಲರಿಗೂ ಇಲ್ಲಿ ಪರಿಚಿತವಾದವು. ಅದರ ನಂತರ, ಗೋಡಂಬಿ ಕೃಷಿ ದೊಡ್ಡ ಪ್ರಮಾಣದಲ್ಲಿ ಪ್ರಾರಂಭವಾಯಿತು. ಸಸ್ಯಗಳು ಗೋಡಂಬಿ ಹಣ್ಣುಗಳನ್ನ ನೀಡಿದ ತಕ್ಷಣ, ರೈತರು ಅವುಗಳನ್ನ ಸಂಗ್ರಹಿಸಿ ರಸ್ತೆಬದಿಯಲ್ಲಿ ಅಗ್ಗದ ಬೆಲೆಗೆ ಮಾರಾಟ ಮಾಡುತ್ತಾರೆ. ಈ ಸ್ಥಳವು ಹೆಚ್ಚು ಅಭಿವೃದ್ಧಿ ಹೊಂದಿಲ್ಲದ ಕಾರಣ, ಗ್ರಾಮಸ್ಥರು ಗೋಡಂಬಿಯನ್ನು ಇಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ಆಮದು ಕಳಪೆ ಅಡಿಕೆ ಮಿಶ್ರಣದ ಎಚ್ಚರಿಕೆ- ಬೆಳೆಗಾರರಿಗೆ ಕ್ಯಾಂಪ್ಕೊ ಮನವಿ

ಆಮದುಗೊಂಡ ಕಳಪೆ ಅಡಿಕೆಯನ್ನು ದೇಶೀಯ ಅಡಿಕೆಯೊಂದಿಗೆ ಮಿಶ್ರಣ ಮಾಡಲಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ…

14 hours ago

ಹವಾಮಾನ ವರದಿ | 21-07-2026 | ಕರಾವಳಿ-ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಕೆ, ಭಾರೀ ಮಳೆ ಸಾಧ್ಯತೆ ಕಡಿಮೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಬಿಟ್ಟು ಬಿಟ್ಟು ಸಾಧಾರಣ ಮಳೆ…

21 hours ago

ಅಡಿಕೆ ರೋಗ ಸಂಕಷ್ಟಕ್ಕೆ ಸಂಸತ್ತಿನಲ್ಲಿ ಧ್ವನಿ : ನಿಯಮ 377ರಡಿ ಕ್ಯಾ. ಬ್ರಿಜೇಶ್ ಚೌಟ ಒತ್ತಾಯ

ಅಡಿಕೆ ತೋಟಗಳಲ್ಲಿ ಹೆಚ್ಚುತ್ತಿರುವ ಎಲೆ ಚುಕ್ಕೆ, ಹಳದಿ ಎಲೆ ಮತ್ತು ಕೊಳೆ ರೋಗಗಳಿಗೆ…

2 days ago

ದೇಶಾದ್ಯಂತ ಮುಂಗಾರು ಅಬ್ಬರ : ಹಲವು ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ, ಹಿಮಾಲಯ ತಪ್ಪಲಿನಲ್ಲಿ ರೆಡ್ ಅಲರ್ಟ್

ದೇಶಾದ್ಯಂತ ಮುಂಗಾರು ಮತ್ತಷ್ಟು ತೀವ್ರಗೊಂಡಿದ್ದು, ಉತ್ತರ ಭಾರತದ ಹಲವು ಭಾಗಗಳಿಗೆ ರೆಡ್ ಅಲರ್ಟ್…

2 days ago

ರಾಜ್ಯದಲ್ಲಿ ಬರದ ಛಾಯೆ | 178 ತಾಲ್ಲೂಕುಗಳಲ್ಲಿ ತೀವ್ರ ಮಳೆ ಕೊರತೆ, ಜಲಾಶಯಗಳ ನೀರಿನ ಮಟ್ಟ ಶೇ.40ಕ್ಕೆ ಕುಸಿತ

ರಾಜ್ಯದಲ್ಲಿ ಮುಂಗಾರು ಮಳೆ 39% ಕೊರತೆಯಾಗಿದ್ದು, 26 ಜಿಲ್ಲೆಗಳ 178 ತಾಲ್ಲೂಕುಗಳಲ್ಲಿ ಬರದ…

3 days ago

ಪುತ್ತೂರಿಗೆ ಪುತ್ತಿಲ? ಪುತ್ತೂರಿನ ರಾಜಕೀಯದ ಹೊಸ ವ್ಯಾಕರಣ

ಪುತ್ತೂರಿನ ರಾಜಕೀಯದಲ್ಲಿ ವ್ಯಕ್ತಿತ್ವದ ಪ್ರಭಾವ ಹೆಚ್ಚುತ್ತಿರುವ ಕುರಿತು ಈ ವಿಶ್ಲೇಷಣೆ ಬೆಳಕು ಚೆಲ್ಲುತ್ತದೆ.…

3 days ago