Advertisement
ಕೃಷಿ

ಇಲ್ಲಿ ತರಕಾರಿ ಬೆಲೆಗೆ ಗೋಡಂಬಿ ಮಾರಾಟವಾಗಲು ಕಾರಣವೇನು..?

Share

ಜಾರ್ಖಂಡ್ ರಾಜ್ಯದ ಜಮ್ತಾರಾ ಪಟ್ಟಣದಿಂದ ಕೇವಲ ನಾಲ್ಕು ಕಿಲೋಮೀಟರ್ ದೂರದಲ್ಲಿ, ಜಾರ್ಖಂಡ್‌’ನ ಗೋಡಂಬಿ ನಗರ ಎಂದು ಕರೆಯಲ್ಪಡುವ ನಲಾ ಎಂಬ ಹಳ್ಳಿಯಿದೆ. ಈ ನಲಾ ಗ್ರಾಮದಲ್ಲಿ ಗೋಡಂಬಿಗಳನ್ನು ತರಕಾರಿಯಂತೆ ಪ್ರತಿ ಕೆಜಿ ಗೆ 20 ರಿಂದ 30 ರೂ ಗಳಿಗೆ ಮಾಡಲಾಗುತ್ತಿದೆ. ಅಂದರೆ ತರಕಾರಿಗಳನ್ನು ಮಾರಕಟ್ಟೆಯಿಂದ ಯಾವ ಕೆಜಿಗೆ ತೆಗೆದುಕೊಳ್ಳುತೇವೆ ಆದರಂತೆ ಇಲ್ಲಿ ಗೊಡಂಬಿಗಳನ್ನು ತೆಗೆದುಕೊಳ್ಳಲಾಗುತ್ತದೆ. ದೇಶದೆಲ್ಲೆಡೆ ದುಬಾರಿ ಬೆಲೆಗೆ ಗೋಡಂಬಿ ಮಾರಾಟವಾಗುತ್ತಿದ್ದೆ ಇಲ್ಲಿ ಮಾತ್ರಾ ಇಷ್ಟು ಕಡಿಮೆಗೆ ಹೇಗೆ ಗೋಡಂಬಿ ಮಾರಾಟ ಮಾಡುತ್ತಾರೆ..? ಇದು ಬಹಳ ಕುತೂಹಲ.

ಸಲಾ ಗ್ರಾಮದಲ್ಲಿ  50 ಎಕರೆಗೂ ಹೆಚ್ಚು ಭೂಮಿ ಗೋಡಂಬಿ ತೋಟಗಳಿಂದ ತುಂಬಿಕೊಂಡಿದ್ದು, ಈ ಗ್ರಾಮವನ್ನು ಭಾರತದ ಗೋಡಂಬಿ ನಗರ ಎಂದು ಕರೆಯಬಹುದಾಗಿದೆ ಕೂಡಾ. ಆದರೆ ಈ ಊರು ಅಷ್ಟೊಂದು ಅಭಿವೃದ್ಧಿ ಹೊಂದಿಲ್ಲದ ಕಾರಣ, ಗ್ರಾಮಸ್ಥರು ಗೋಡಂಬಿಯನ್ನು ಇಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ.

2010ರಲ್ಲಿ ಜಾರ್ಖಂಡ್ ಅರಣ್ಯ ಇಲಾಖೆ ನಲಾ ಗ್ರಾಮದ ಮಣ್ಣು ಮತ್ತು ಹವಾಮಾನ ಗೋಡಂಬಿ ಬೆಳೆಗೆ ಅತ್ಯಂತ ಸೂಕ್ತ ಎಂದು ಕಂಡುಹಿಡಿದಿತ್ತು. ಈ ಪ್ರದೇಶದಲ್ಲಿ ಲ್ಯಾಟರೈಟ್ ಮಣ್ಣು ಮಧ್ಯಮ ಮಳೆ, ಸೂರ್ಯನ ಬೆಳಕು ಮತ್ತು ತಾಪಮಾನ ಗೋಡಂಬಿ ಮರಗಳ ಬೆಳವಣಿಗೆಗೆ ಆದರ್ಶ. ಇದರಿಂದಾಗಿ ದೊಡ್ಡ ಪ್ರಮಾಣದಲ್ಲಿ ಗೋಡಂಬಿ ಉತ್ಪಾದನೆ ಆರಂಭವಾಯಿತು . ಈಗ ಗ್ರಾಮದಲ್ಲಿ ಸಾವಿರಾರು ಗೇರುಬೀಜದ ಮರಗಳು ಇದ್ದು, ಪ್ರತಿ ವರ್ಷ ಲಕ್ಷಾಂತರ ಕೆಜಿ ಗೊಂಡಂಬಿ ಉತ್ಪಾದನೆಯಾಗುತ್ತದೆ.

ಗೋಡಂಬಿಯ ಪೌಷ್ಟಿಕಾಂಶದ ಮೌಲ್ಯ ಮತ್ತು ಅದನ್ನು ಸ್ವಚ್ಛಗೊಳಿಸುವ ಮತ್ತು ಬಳಕೆಗೆ ಸಿದ್ಧಪಡಿಸುವ ಪ್ರಕ್ರಿಯೆಯಿಂದಾಗಿ, ಗೋಡಂಬಿ ಬೀಜಗಳ ಬೆಲೆ ಯಾವಾಗಲೂ ಗಗನಕ್ಕೇರುವಂತೆ ಮಾಡುತ್ತಿದೆ. ಸದ್ಯ ಗೋಡಂಬಿ ಪ್ರತಿ ಕಿಲೋಗ್ರಾಂಗೆ ಸುಮಾರು ₹800 ರಿಂದ ₹1000 ವರೆಗೆ ಇರುತ್ತದೆ. ಆದರೆ ಜಾರ್ಖಂಡ್‌ ಈ ಪ್ರದೇಶದಲ್ಲಿ ಮಾತ್ರಾ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ.

ಗೋಡಂಬಿಯನ್ನ ಇಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡಲು ಮುಖ್ಯ ಕಾರಣವೆಂದರೆ, 2010ರಲ್ಲಿ ಗೋಡಂಬಿ ತೋಟಗಳು ಎಲ್ಲರಿಗೂ ಇಲ್ಲಿ ಪರಿಚಿತವಾದವು. ಅದರ ನಂತರ, ಗೋಡಂಬಿ ಕೃಷಿ ದೊಡ್ಡ ಪ್ರಮಾಣದಲ್ಲಿ ಪ್ರಾರಂಭವಾಯಿತು. ಸಸ್ಯಗಳು ಗೋಡಂಬಿ ಹಣ್ಣುಗಳನ್ನ ನೀಡಿದ ತಕ್ಷಣ, ರೈತರು ಅವುಗಳನ್ನ ಸಂಗ್ರಹಿಸಿ ರಸ್ತೆಬದಿಯಲ್ಲಿ ಅಗ್ಗದ ಬೆಲೆಗೆ ಮಾರಾಟ ಮಾಡುತ್ತಾರೆ. ಈ ಸ್ಥಳವು ಹೆಚ್ಚು ಅಭಿವೃದ್ಧಿ ಹೊಂದಿಲ್ಲದ ಕಾರಣ, ಗ್ರಾಮಸ್ಥರು ಗೋಡಂಬಿಯನ್ನು ಇಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ಬೆಂಗಳೂರಿನಲ್ಲಿ ಭಾರತದ ಅತಿದೊಡ್ಡ ಕಾಫಿ ಉತ್ಸವ- ತೋಟದಿಂದ ಕಪ್‌ವರೆಗೆ ಭಾರತದ ಕಾಫಿಯ ಹೊಸ ಪಯಣ

ಭಾರತದ ಅತಿದೊಡ್ಡ ಕಾಫಿ ಉತ್ಸವ 2027 ಫೆಬ್ರವರಿ 26ರಿಂದ 28ರವರೆಗೆ ಬೆಂಗಳೂರಿನಲ್ಲಿ ನಡೆಯಲಿದ್ದು,…

7 minutes ago

‘ಅರ್ಥ’ ಮತ್ತು ‘ಅಪಾರ್ಥ’ದ ನಡುವೆ ಇರುವ ‘ಪಾ’ ಯಾವುದು?

ಅಪಾರ್ಥವಾಗುವುದು ಮಾನವ ಸಹಜ; ಆದರೆ ಅಪಾರ್ಥವಾಯಿತೆಂಬ ಅರಿವು ಬಂದ ನಂತರ ಮತ್ತೆ ‘ಅರ್ಥ’ದೆಡೆಗೆ…

47 minutes ago

ಹವಾಮಾನ ವರದಿ | 31-08-2026 | ಸೆ.3ರಿಂದ ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಸದ್ಯ ವ್ಯಾಪಕ ಭಾರಿ ಮಳೆಯ ಸಾಧ್ಯತೆ ಕಡಿಮೆಯಾಗಿದ್ದು, ಕರಾವಳಿಯಲ್ಲಿ ಮುಂದಿನ 10…

17 hours ago

ತೆಂಗು–ಅಡಿಕೆ ನಡುವೆ ಏಲಕ್ಕಿ, ಮೆಣಸು, ಅರಿಶಿಣ | ತುಮಕೂರಿನಲ್ಲೂ ಬೆಳೆಗಾರರು ಪರ್ಯಾಯ ಆದಾಯದ ಕಡೆಗೆ ಹೆಜ್ಜೆ

ತೆಂಗು–ಅಡಿಕೆ ತೋಟಗಳ ನಡುವೆ ಅರಿಶಿಣ, ಏಲಕ್ಕಿ, ಮೆಣಸು ಬೆಳೆದು ತುಮಕೂರು ಜಿಲ್ಲೆಯ ರೈತರು…

1 day ago

ಮಳೆ ಕೊರತೆ ನೀಗಿಸಲು ಕರ್ನಾಟಕದಲ್ಲಿ ಮೋಡ ಬಿತ್ತನೆ

ಮುಂಗಾರು ಮಳೆಯ ಕೊರತೆ ಎದುರಿಸುತ್ತಿರುವ ರಾಜ್ಯದ ಹಲವು ಭಾಗಗಳಲ್ಲಿ ಮಳೆ ಹೆಚ್ಚಿಸಲು ಸರ್ಕಾರ…

1 day ago

ಕಸ್ತೂರಿ ರಂಗನ್ ವರದಿ ಜಾರಿಗೆ ಅವಕಾಶವಿಲ್ಲ

ಕಸ್ತೂರಿ ರಂಗನ್ ವರದಿ ಜಾರಿಗೆ ಕರ್ನಾಟಕ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಶಿಕ್ಷಣ…

1 day ago