Advertisement
ಕೃಷಿ

ಇಲ್ಲಿ ತರಕಾರಿ ಬೆಲೆಗೆ ಗೋಡಂಬಿ ಮಾರಾಟವಾಗಲು ಕಾರಣವೇನು..?

Share

ಜಾರ್ಖಂಡ್ ರಾಜ್ಯದ ಜಮ್ತಾರಾ ಪಟ್ಟಣದಿಂದ ಕೇವಲ ನಾಲ್ಕು ಕಿಲೋಮೀಟರ್ ದೂರದಲ್ಲಿ, ಜಾರ್ಖಂಡ್‌’ನ ಗೋಡಂಬಿ ನಗರ ಎಂದು ಕರೆಯಲ್ಪಡುವ ನಲಾ ಎಂಬ ಹಳ್ಳಿಯಿದೆ. ಈ ನಲಾ ಗ್ರಾಮದಲ್ಲಿ ಗೋಡಂಬಿಗಳನ್ನು ತರಕಾರಿಯಂತೆ ಪ್ರತಿ ಕೆಜಿ ಗೆ 20 ರಿಂದ 30 ರೂ ಗಳಿಗೆ ಮಾಡಲಾಗುತ್ತಿದೆ. ಅಂದರೆ ತರಕಾರಿಗಳನ್ನು ಮಾರಕಟ್ಟೆಯಿಂದ ಯಾವ ಕೆಜಿಗೆ ತೆಗೆದುಕೊಳ್ಳುತೇವೆ ಆದರಂತೆ ಇಲ್ಲಿ ಗೊಡಂಬಿಗಳನ್ನು ತೆಗೆದುಕೊಳ್ಳಲಾಗುತ್ತದೆ. ದೇಶದೆಲ್ಲೆಡೆ ದುಬಾರಿ ಬೆಲೆಗೆ ಗೋಡಂಬಿ ಮಾರಾಟವಾಗುತ್ತಿದ್ದೆ ಇಲ್ಲಿ ಮಾತ್ರಾ ಇಷ್ಟು ಕಡಿಮೆಗೆ ಹೇಗೆ ಗೋಡಂಬಿ ಮಾರಾಟ ಮಾಡುತ್ತಾರೆ..? ಇದು ಬಹಳ ಕುತೂಹಲ.

ಸಲಾ ಗ್ರಾಮದಲ್ಲಿ  50 ಎಕರೆಗೂ ಹೆಚ್ಚು ಭೂಮಿ ಗೋಡಂಬಿ ತೋಟಗಳಿಂದ ತುಂಬಿಕೊಂಡಿದ್ದು, ಈ ಗ್ರಾಮವನ್ನು ಭಾರತದ ಗೋಡಂಬಿ ನಗರ ಎಂದು ಕರೆಯಬಹುದಾಗಿದೆ ಕೂಡಾ. ಆದರೆ ಈ ಊರು ಅಷ್ಟೊಂದು ಅಭಿವೃದ್ಧಿ ಹೊಂದಿಲ್ಲದ ಕಾರಣ, ಗ್ರಾಮಸ್ಥರು ಗೋಡಂಬಿಯನ್ನು ಇಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ.

2010ರಲ್ಲಿ ಜಾರ್ಖಂಡ್ ಅರಣ್ಯ ಇಲಾಖೆ ನಲಾ ಗ್ರಾಮದ ಮಣ್ಣು ಮತ್ತು ಹವಾಮಾನ ಗೋಡಂಬಿ ಬೆಳೆಗೆ ಅತ್ಯಂತ ಸೂಕ್ತ ಎಂದು ಕಂಡುಹಿಡಿದಿತ್ತು. ಈ ಪ್ರದೇಶದಲ್ಲಿ ಲ್ಯಾಟರೈಟ್ ಮಣ್ಣು ಮಧ್ಯಮ ಮಳೆ, ಸೂರ್ಯನ ಬೆಳಕು ಮತ್ತು ತಾಪಮಾನ ಗೋಡಂಬಿ ಮರಗಳ ಬೆಳವಣಿಗೆಗೆ ಆದರ್ಶ. ಇದರಿಂದಾಗಿ ದೊಡ್ಡ ಪ್ರಮಾಣದಲ್ಲಿ ಗೋಡಂಬಿ ಉತ್ಪಾದನೆ ಆರಂಭವಾಯಿತು . ಈಗ ಗ್ರಾಮದಲ್ಲಿ ಸಾವಿರಾರು ಗೇರುಬೀಜದ ಮರಗಳು ಇದ್ದು, ಪ್ರತಿ ವರ್ಷ ಲಕ್ಷಾಂತರ ಕೆಜಿ ಗೊಂಡಂಬಿ ಉತ್ಪಾದನೆಯಾಗುತ್ತದೆ.

ಗೋಡಂಬಿಯ ಪೌಷ್ಟಿಕಾಂಶದ ಮೌಲ್ಯ ಮತ್ತು ಅದನ್ನು ಸ್ವಚ್ಛಗೊಳಿಸುವ ಮತ್ತು ಬಳಕೆಗೆ ಸಿದ್ಧಪಡಿಸುವ ಪ್ರಕ್ರಿಯೆಯಿಂದಾಗಿ, ಗೋಡಂಬಿ ಬೀಜಗಳ ಬೆಲೆ ಯಾವಾಗಲೂ ಗಗನಕ್ಕೇರುವಂತೆ ಮಾಡುತ್ತಿದೆ. ಸದ್ಯ ಗೋಡಂಬಿ ಪ್ರತಿ ಕಿಲೋಗ್ರಾಂಗೆ ಸುಮಾರು ₹800 ರಿಂದ ₹1000 ವರೆಗೆ ಇರುತ್ತದೆ. ಆದರೆ ಜಾರ್ಖಂಡ್‌ ಈ ಪ್ರದೇಶದಲ್ಲಿ ಮಾತ್ರಾ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ.

ಗೋಡಂಬಿಯನ್ನ ಇಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡಲು ಮುಖ್ಯ ಕಾರಣವೆಂದರೆ, 2010ರಲ್ಲಿ ಗೋಡಂಬಿ ತೋಟಗಳು ಎಲ್ಲರಿಗೂ ಇಲ್ಲಿ ಪರಿಚಿತವಾದವು. ಅದರ ನಂತರ, ಗೋಡಂಬಿ ಕೃಷಿ ದೊಡ್ಡ ಪ್ರಮಾಣದಲ್ಲಿ ಪ್ರಾರಂಭವಾಯಿತು. ಸಸ್ಯಗಳು ಗೋಡಂಬಿ ಹಣ್ಣುಗಳನ್ನ ನೀಡಿದ ತಕ್ಷಣ, ರೈತರು ಅವುಗಳನ್ನ ಸಂಗ್ರಹಿಸಿ ರಸ್ತೆಬದಿಯಲ್ಲಿ ಅಗ್ಗದ ಬೆಲೆಗೆ ಮಾರಾಟ ಮಾಡುತ್ತಾರೆ. ಈ ಸ್ಥಳವು ಹೆಚ್ಚು ಅಭಿವೃದ್ಧಿ ಹೊಂದಿಲ್ಲದ ಕಾರಣ, ಗ್ರಾಮಸ್ಥರು ಗೋಡಂಬಿಯನ್ನು ಇಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ತೆಂಗು ಬೆಳೆಗೆ ವಿಮೆ : ಕೇಂದ್ರದ ಮಹತ್ವದ ಉತ್ತರ

ತೆಂಗು ಬೆಳೆಯನ್ನು PMFBY ಅಥವಾ RWBCIS ಅಡಿಯಲ್ಲಿ ವಿಮಾ ವ್ಯಾಪ್ತಿಗೆ ತರುವ ಅಧಿಕಾರ…

16 minutes ago

ಹವಾಮಾನ ವರದಿ | 11-08-2026 | ಕರ್ನಾಟಕದ ಹವಾಮಾನದಲ್ಲಿ ಮುಂದಿನ ದಿನಗಳಲ್ಲಿ ಏನು ಬದಲಾವಣೆ ?

ಕರಾವಳಿ ಜಿಲ್ಲೆಗಳಲ್ಲಿ ಮಳೆಯ ನಡುವೆ ಹೆಚ್ಚಿನ ಬಿಡುವಿನ ಅವಧಿಯೊಂದಿಗೆ ಬಿಸಿಲು–ಮೋಡದ ವಾತಾವರಣ ಮುಂದುವರಿಯಲಿದ್ದು,…

60 minutes ago

ಬಿ.ಎಸ್‌ಸಿ. ಕೃಷಿ ನಂತರ ಏನು ? ಉದ್ಯೋಗ, ಉದ್ಯಮ ಮತ್ತು ಉನ್ನತ ಶಿಕ್ಷಣದ ಅತ್ಯುತ್ತಮ ಅವಕಾಶಗಳು ಇಲ್ಲಿವೆ

ಬಿ.ಎಸ್‌ಸಿ. ಕೃಷಿ ಪದವೀಧರರಿಗೆ ಸರ್ಕಾರಿ ಉದ್ಯೋಗ, ಖಾಸಗಿ ಕಂಪನಿಗಳು, ಬ್ಯಾಂಕಿಂಗ್, ಸಂಶೋಧನೆ ಮತ್ತು…

15 hours ago

ಅಡಿಕೆ–ಕಾಳುಮೆಣಸು ಬೆಳೆ ವಿಮೆ: ರೈತರ ನೋಂದಣಿಗೆ ಆ.17 ಅಂತಿಮ ದಿನ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2026-27ನೇ ಸಾಲಿನ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ ಅಡಿಕೆ…

15 hours ago

ಹವಾಮಾನ ವರದಿ | 10.08.2026 | ಕರ್ನಾಟಕದಲ್ಲಿ ಬಿಟ್ಟು ಬಿಟ್ಟು ಸಾಮಾನ್ಯ ಮಳೆ; ಆಗಸ್ಟ್‌ 12ರಂದು ಕರಾವಳಿಯಲ್ಲಿ ಮಳೆ ಹೆಚ್ಚಳ ಸಾಧ್ಯತೆ

ಮಧ್ಯಪ್ರದೇಶದಲ್ಲಿ ಹೊಸ ತಿರುವಿಕೆ ಪರಿಣಾಮ: ಕರಾವಳಿ, ಮಲೆನಾಡಿನಲ್ಲಿ ಮಳೆ ಚುರುಕು ಸಾಧ್ಯತೆ ಕರ್ನಾಟಕದ…

1 day ago

ಕಡಿಮೆ ನೀರು, ಕಡಿಮೆ ಗೊಬ್ಬರ… ಹೆಚ್ಚು ಇಳುವರಿ – ಕೃಷಿಯಲ್ಲಿ ಹೊಸ ಕ್ರಾಂತಿ

ಕಡಿಮೆ ಸಂಪನ್ಮೂಲ ಬಳಸಿ ಹೆಚ್ಚು ಉತ್ಪಾದನೆ ಪಡೆಯಲು ಸ್ಮಾರ್ಟ್ ಸಂಪನ್ಮೂಲ ನಿರ್ವಹಣೆ ಅಗತ್ಯವಾಗಿದೆ.…

2 days ago