ಕಲೆ-ಸಂಸ್ಕೃತಿ

ಪುಣೆಯ ಸಾಫ್ಟ್ ವೇರ್  ಇಂಜಿನಿಯರ್ ವಿಶೇಷ ಸಾಧನೆ | ಚರಕಾದಿಂದ 7,00,000 ಪ್ಲಾಸ್ಟಿಕ್ ಹೊದಿಕೆ, ಬ್ಯಾಗ್ ಹಾಗೂ ಮ್ಯಾಟ್‌ಗಳನ್ನು ತಯಾರಿಸಿದ ಐಟಿ ಇಂಜಿನಿಯರ್ |

Share

ಸ್ವದೇಶಿ ಉಡುಪುಗಳನ್ನು ಉತ್ತೇಜಿಸಲು ನೂಲುವ ಚಕ್ರದ ಬಳಕೆ ಮಾಡಿ ಉದ್ಯಮವನ್ನಾಗಿಸಿದ್ದೂ ಅಲ್ಲದೆ ಸಾಕಷ್ಟು ಜನರು ಇಂತಹ ಬಟ್ಟೆ ತೊಡುವಂತೆ ಮಾಡಿದ್ದಾರೆ ಪುಣೆಯ ಸಾಫ್ಟ್ ವೇರ್  ಇಂಜಿನಿಯರ್. ಈ ವಿಶೇಷ ಕಾರ್ಯ ಗ್ರಾಮೀಣ ಅಭಿವೃದ್ಧಿಗೆ ಮಾದರಿಯೂ ಆಗಿದೆ.

Advertisement

ಮಹಾತ್ಮ ಗಾಂಧೀಜಿಯವರು ವಿದೇಶಿ ನಿರ್ಮಿತ ಉತ್ಪನ್ನಗಳನ್ನು ಬಹಿಷ್ಕರಿಸಲು ಮತ್ತು ಸ್ವದೇಶಿ ಉಡುಪುಗಳನ್ನು ಉತ್ತೇಜಿಸಲು ನೂಲುವ ಚಕ್ರದ ಬಳಕೆಯನ್ನು ಪ್ರಮುಖ ಸಾಧನವಾಗಿ ನಿಯೋಜಿಸಿದರು. ಆದರಂತೆ ಅದೇ ಸಂದೇಶವನ್ನು ಪ್ರಚಾರ ಮಾಡುವ ದೃಷ್ಟಿಯಲ್ಲಿ ಪುಣೆಯ ಸಾಫ್ಟ್ ವೇರ್  ಇಂಜಿನಿಯರ್ ಅಮಿತ್ ದೇಶಪಾಂಡೆ ಚರಕಾವನ್ನು ಬಳಸಿಕೊಂಡು ಉತ್ಪನ್ನಗಳನ್ನು ತಯಾರಿಸಿದ್ದಾರೆ.

ಬೃಹತ್ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯವು ನಗರ ಪ್ರದೇಶಗಳಲ್ಲಿ ಮಾತ್ರ ಉತ್ಪತ್ತಿಯಾಗುತ್ತದೆ. ಅಂತಹ ವಸ್ತುಗಳನ್ನು  ಮರುಬಳಕೆ ಮಾಡಬೇಕಾಗುತ್ತದೆ. ಆದರೆ ಗ್ರಾಮೀಣ ಜನರು ಬದುಕನ್ನು ಏರಿಸಲು ಅಲ್ಲಿನ ಕರಕುಶಲ ವಸ್ತುಗಳಿಗೆ ಮಾರುಕಟ್ಟೆ ಮಾಡಿಕೊಡಬೇಕಿದೆ. ಈ ಕಾರಣದಿಂದ ಗ್ರಾಮೀಣಾಭಿವೃದ್ಧಿಯ ಉದ್ಯಮಗಳು ಅಗತ್ಯವಾಗಿದೆ ಎನ್ನುವತ್ತಾರೆ ಅಮಿತ್.‌  ನಮ್ಮ ಗ್ರಾಮಗಳು ಒಂದು ಕಾಲದಲ್ಲಿ ಕರಕುಶಲ ವಸ್ತುಗಳಿಗೆ ಹೆಸರುವಾಸಿಯಾಗಿತ್ತು ಎನ್ನುತ್ತಾರೆ ಅವರು.

ಅಮಿತ್ ದೇಶಪಾಂಡೆ ಮೊದಲು ಚರಕಾದಿಂದ ಮಾಡಿದ ಉತ್ಪನ್ನಗಳಿಗೆ ಜನರು ಅಷ್ಟಾಗಿ ಗಮನ ಕೊಡಲಿಲ್ಲ. ಅದಕ್ಕಾಗಿ ಅಮಿತ್ ಅವರು ಎಕ್ಸ್ ಪೋಸ್, ವರ್ಕ್ ಶಾಪ್‌ಗಳು, ಪ್ರದರ್ಶನಗಳಲ್ಲಿ ವೀಡಿಯೋವನ್ನು ಪ್ಲೇ ಮಾಡಿದರು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವನ್ನು ಪ್ರಸಾರ ಮಾಡಿದೆ. ಇದು ಹೆಚ್ಚು ಪ್ರಯೋಜನವಾಯಿತು ಎಂದರು.

ಅದಾದ ಬಳಿಕ ಖಾದಿ ವಸ್ತುಗಳು, ಕರಕುಶಲ ಉತ್ಪನ್ನಗಳು ಕೆಲವು ಅಂಗಡಿಗಳ ಕಪಾಟಿನಲ್ಲಿ ಕಂಡುಬಂದವು ಮತ್ತು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ವಬ್‌ಸೈಟ್ ಅನ್ನು ಪ್ರಾರಂಭಿಸಿದರು. ಈಗ ಅಮಿತ್‌ ಅವರು ಕಾರ್ಪೊರೇಟ್ ಉಡುಗೊರೆಗಳನ್ನು ಸಹ ಪೊರೈಸುತ್ತಾರೆ. ಕಳೆದ ವರ್ಷದಿಂದ ಅಮಿತಾ ಅವರ ಪತಿ ಅಭಿಷೇಕ್ ಪರಂಜ್ವೆ ಕೂಡಾ ಸೇರಿಕೊಂಡರು. ಕಳೆದ ವರ್ಷ ಕೊರೋನಾ ಸಾಂಕ್ರಾಮಿಕ ರೋಗದ ನಂತರ ತನ್ನ ಆದಾಯವನ್ನು ಹೆಚ್ಚಿತು ಎನ್ನುತ್ತಾರೆ.

ಗ್ರಾಮೀಣ ಭಾಗಗಳಲ್ಲಿ ಇಂತಹ ಉದ್ಯಮಗಳು ಬೆಳೆದರೆ ಮಾತ್ರವೇ ಗ್ರಾಮೀಣಾಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಗ್ರಾಮೀಣ ಜನರ ಆದಾಯ ಹೆಚ್ಚಾಗುವುದು ಅಲ್ಲದೆ ಮಾರುಕಟ್ಟೆ ಕೂಡಾ ಬೆಳೆಯಲು ಸಾಧ್ಯವಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

2025 ರಲ್ಲಿ ಲಕ್ಷ್ಮಿ ನಾರಾಯಣ ಯೋಗ | ಮಹಾಸಪ್ತಮಿ ದಿನದ ವಿಶೇಷ ಲಾಭ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

2 hours ago

ಅಡಿಕೆಯ ನಾಡಿಗೆ ಬೇಕು ತರಕಾರಿ

https://youtu.be/6cCsJF4gW7g?si=57F6ddYN0stDBYbK

3 hours ago

ಹಬ್ಬದ ದಿನ 2 ಲಕ್ಷ ಸಸಿ ವಿತರಿಸಿದ ಅರಣ್ಯ ಇಲಾಖೆ

ಜಮ್ಮು ಮತ್ತು ಕಾಶ್ಮೀರದಾದ್ಯಂತ ಹಸಿರು ಹೊದಿಕೆಯನ್ನು ಹೆಚ್ಚಿಸುವ ಸಲುವಾಗಿ ಅರಣ್ಯ ಇಲಾಖೆಯು ಹಬ್ಬದ…

4 hours ago

ಹೊಸರುಚಿ | ಎಳೆಯ ಹಲಸಿನ ಕಾಯಿ ಪಕೋಡ

ಎಳೆಯ ಹಲಸಿನ ಕಾಯಿ ಪಕೋಡ(Tender Jack Fruit)ಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ…

4 hours ago

ಹವಾಮಾನ ಕೇಂದ್ರಗಳು, ಮಳೆ ಮಾಪನ ಕೇಂದ್ರಗಳನ್ನು ಸ್ಥಾಪಿಸುವಂತೆ ಮನವಿ

ಗ್ರಾಮ ಪಂಚಾಯತ್, ಹೋಬಳಿ ಮಟ್ಟದಲ್ಲಿ ಹವಾಮಾನ ಮತ್ತು ಮಳೆಮಾಪನ ಕೇಂದ್ರಗಳನ್ನು ಅಳವಡಿಸಿದರೆ  ಬೆಳೆಗಳಿಗೆ‌…

4 hours ago

ಮನೆಯೊಳಗೆ ನುಗ್ಗಿದ ಚಿರತೆ | ಸತತ 5 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ |

ಆನೇಕಲ್ ತಾಲೂಕಿನ ಜಿಗಣಿಯ ಕುಂಟ್ಲರೆಡ್ಡಿ ಬಡಾವಣೆಯ ವೇಂಕಟೇಶ್ ಎಂಬುವರ ಮನೆಗೆ ನಿನ್ನೆ ನುಗ್ಗಿದ್ದ…

19 hours ago