ಭೂಕಂಪನದಿಂದ ಸುದ್ದಿಯಾದ ಚೆಂಬು ಪ್ರದೇಶದಲ್ಲಿ ಈ ಸ್ಥಿತಿ ಇದೆ….! | ಮೂಲಭೂತ ಆವಶ್ಯಕತೆಗಳ ಕಡೆಗೆ ಗಮನ ಅಗತ್ಯ… !

July 6, 2022
2:27 PM

ಕಳೆದ ಎರಡು ವಾರಗಳಿಂದ ಕೊಡಗು ಜಿಲ್ಲೆಯ ಚೆಂಬು ಭೂಕಂಪನದ ಮೂಲಕ ಗಮನ ಸೆಳೆಯಿತು. ಚೆಂಬು, ಸಂಪಾಜೆ ಸೇರಿದಂತೆ ಆಸುಪಾಸಿನ ಪ್ರದೇಶಗಳು ರಾಜ್ಯಾದ್ಯಂತ ಸುದ್ದಿಯಾಯಿತು. ಆದರೆ ಇಂದಿಗೂ ಆ ಊರಿನ ಕೆಲವು ಕಡೆ ಮೂಲಭೂತ ಸೌಲಭ್ಯಗಳ ಆವಶ್ಯಕತೆ ಇದೆ.  ಚೆಂಬು ಗ್ರಾಮದ ಕಟ್ಟಪಲ್ಲಿ ಎಂಬಲ್ಲಿನ ಹೊಳೆ ದಾಟಲು ಜನರು ಸಂಕಷ್ಟ ಪಡುತ್ತಿದ್ದಾರೆ. ಜೀಪೊಂದು ನೀರು ದಾಟಿ ಹೋಗುವ ಈ ವಿಡಿಯೋ ಈಗ ಗಮನಸೆಳೆದಿದೆ.

ಕೊಡಗು ಜಿಲ್ಲೆಯ ಚೆಂಬು ಹಾಗೂ ಸುಳ್ಯ ತಾಲೂಕಿನ ಸಂಪಾಜೆ ಮೊದಲಾದ ಪ್ರದೇಶಗಳೂ ಭೂಕಂಪನದ ಮೂಲಕ ಸುದ್ದಿಯಾಯಿತು. ಭೂಕಂಪನಕ್ಕೆ ವಿವಿಧ ಕಾರಣಗಳನ್ನು  ಹೇಳಲಾಯಿತು. ಚೆಂಬು, ಸಂಪಾಜೆ ಪ್ರದೇಶದಲ್ಲಿ ಕೃಷಿಯೇ ಪ್ರಮುಖವಾದ ಆದಾಯದ ಮೂಲ. ಆದರೆ ಅಡಿಕೆ ಹಳದಿ ಎಲೆ ರೋಗದ ನಂತರ ಅಡಿಕೆ ಕೃಷಿ ಕಡಿಮೆಯಾಗಿದೆ. ಅದರ ಬದಲಾಗಿ ರಬ್ಬರ್‌ ಕೃಷಿ ವಿಸ್ತಾರವಾಗಿದೆ. ಗುಡ್ಡದಿಂದ ಹಿಡಿದು ತೋಟವದರೆಗೂ ರಬ್ಬರ್‌ ಕೃಷಿ ಇದೆ. ಇಲ್ಲಿನ ಕೃಷಿ ಸಮಸ್ಯೆ , ಕೃಷಿಪಲ್ಲಟದ ಜೊತೆಗೆ ಇಲ್ಲಿ  ಮೂಲಭೂತ ಆವಶ್ಯಕತೆಗಳ ಕೊರತೆ ಜನರನ್ನು ಕಾಡುತ್ತಿದೆ. ಚೆಂಬು ಗ್ರಾಮದ ಕಟ್ಟಪಲ್ಲಿ ಎಂಬಲ್ಲಿ  ಸುಮಾರು 25 ಮನೆಗಳು ಇವೆ. ಇಲ್ಲಿ  ಹರಿಯುವ ಹೊಳೆಯ ಕಾರಣದಿಂದ ಮಳೆಗಾಲ ದಾಟಲು ಸಮಸ್ಯೆಯಾಗುತ್ತದೆ. ಹೊಳೆ ದಾಟಿದ ಮುಂದೆ ಉಂಬಳ್ಳೆ ಎಂಬ ಪ್ರದೇಶ ಇದೆ. ಹಲವಾರು ಸಮಯಗಳಿಂದಲೂ ಇಲ್ಲಿನ ಜನ ಈ ಸಮಸ್ಯೆ ಅನುಭವಿಸುತ್ತಿದ್ದಾರೆ. ಇಲ್ಲಿ ಹೆಚ್ಚು ನೀರು ಹರಿದಾಗ ಯಾವುದೇ ವಾಹನ ದಾಟುವುದಿಲ್ಲ, ಈ ಸಂದರ್ಭ ಸುತ್ತು ಬಳಸಿ ಪರ್ಯಾಯ ದಾರಿ ಬಳಸುತ್ತಾರೆ ಕಟ್ಟಪಲ್ಲಿಯ ಜನರು. ಈ ಪ್ರದೇಶದಲ್ಲಿ  ಮಲೆಕುಡಿಯ ಸಮುದಾಯದ ಕುಟುಂಬಗಳು ಹೆಚ್ಚಿದೆ.

ಭೂಕಂಪನದ ಸುದ್ದಿಯ ಜೊತೆಗೆ ಮೂಲಭೂತ ಸಮಸ್ಯೆಗಳ ಬಗ್ಗೆಯೂ ಈಗ ಜನರು ಮಾತನಾಡುತ್ತಿದ್ದಾರೆ. ಒಂದು ವೇಳೆ ತುರ್ತಾಗಿ ಇಲ್ಲಿಂದ ಸ್ಥಳಾಂತರವಾಗಬೇಕಾಗಿ ಬಂದರೆ ಸಂಪರ್ಕ ಹೇಗೆ ಎನ್ನುವುದು  ಕೂಡಾ ಪ್ರಶ್ನೆಯಾಗಿದೆ ಎಂದು  ಕೇಳುತ್ತಾರೆ ಇಲ್ಲಿನ ಜನರು.ಸದ್ದಿಲ್ಲದೆ ಸುದ್ದಿಯಾದ ಭೂಕಂಪನ ಬಳಿಕ ಚೆಂಬು ಗ್ರಾಮ ಸುದ್ದಿಯಾಗಿದೆ. ಇದೀಗ ಗ್ರಾಮೀಣ ಭಾಗದ ಇಂತಹ ಮೂಲಭೂತ ಸಮಸ್ಯೆಗಳ ಕಡೆಗೂ ಆಡಳಿತ ಗಮನಿಸಬೇಕಿದೆ.

 

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮ್ಯಾನ್ಮಾರ್‌ನಿಂದ ಭಾರತಕ್ಕೆ ಅಕ್ರಮ ಅಡಿಕೆ ಜಾಲ | ಮೂರು ಹಂತದ ಕಳ್ಳಸಾಗಣೆ ಜಾಲವನ್ನು ಬಯಲಿಗೆಳೆದ ಇಡಿ
August 7, 2026
7:34 AM
by: ದ ರೂರಲ್ ಮಿರರ್.ಕಾಂ
‘ಅನ್ನಂ ಬ್ರಹ್ಮ’ ಭಾವದಿಂದ ಆಹಾರ ಸೇವಿಸಿದರೆ ಮುಕ್ತಿಯ ಸಾಧನ – ರಾಘವೇಶ್ವರ ಶ್ರೀ
August 6, 2026
11:04 PM
by: ದ ರೂರಲ್ ಮಿರರ್.ಕಾಂ
ಕೃಷಿ ಅಧಿಕಾರಿ ನೇಮಕಾತಿ ಪರೀಕ್ಷೆ ತಾತ್ಕಾಲಿಕ ಮುಂದೂಡಿಕೆ | ಪ್ರತಿಭಟನಾನಿರತ ವಿದ್ಯಾರ್ಥಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ
August 6, 2026
9:23 PM
by: ದ ರೂರಲ್ ಮಿರರ್.ಕಾಂ
ಕರ್ನಾಟಕದಲ್ಲಿ ಅತ್ಯಾಧುನಿಕ ‘ಸಂಯೋಜಿತ ಡಿಜಿಟಲ್ ಬೆಳೆ ಸಮೀಕ್ಷೆ’ | ಉಪಗ್ರಹ, ಡ್ರೋನ್‌, AI ತಂತ್ರಜ್ಞಾನ ಬಳಕೆಗೆ ಸರ್ಕಾರದ ಚಾಲನೆ
August 6, 2026
9:10 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror