ಸುದ್ದಿಗಳು

#KSRTC #RuralMirror | ಹೊಯ್ಸಳ ರಾಜವಂಶದ ಹೊಯ್ಸಳಲು ಗ್ರಾಮ | ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿ ಈ ಊರಿಗೆ ಬಂದ ಸರ್ಕಾರಿ ಬಸ್ …. ! |

Share

ನಮ್ಮ ಜಗತ್ತು ಎಷ್ಟು ಮುಂದುವರೆದಿದೆ ಎಂದರೆ ಮಂಗಳ ಅಂಗಳಕ್ಕೆ, ಇತ್ತ ಚಂದ್ರನ ಲೋಕಕ್ಕೆ, ಜನ ಸಾಮಾನ್ಯನೂ ವಿಮಾನದಲ್ಲಿ ಓಡಾಡಬೇಕು ಅನ್ನುವ ಯೋಜನೆಗಳು, ಕೆಲಸಕ್ಕೆ ರೋಬೋಗಳು ಒಂದಾ ಎರಡಾ.. ಇತ್ತೀಚೆಗೆ 1912ರಲ್ಲಿ ಮುಳುಗಿದ್ದ ಟೈಟಾನಿಕ್ ದೈತ್ಯ ಹಡಗು ನೋಡಲು ಸುಮಾರು 3800 ಕಿ ಮೀ ಆಳಕ್ಕೆ ಹೋಗಿ ಅದರ ಅವಶೇಷ ನೋಡಿ ಬರುವ ವ್ಯವಸ್ಥೆ ಕೂಡ ಇದೆ. ಆದರೆ ಇವೆಲ್ಲಾ ಕೇವಲ ಶ್ರೀಮಂತರ ಪಾಲಿಗೆ. ಅದೇ ಬಡವರ ಪಾಲಿಗೆ ಒಂದು ಸರ್ಕಾರಿ ಕೆಂಪು ಬಸ್ ಕೂಡ ಗತಿ ಇಲ್ಲ….!

ಕಾಂಗ್ರೆಸ್‍ ಸರ್ಕಾರ ಅಧಿಕಾರಕ್ಕೆ ಬಂದು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಜಾರಿಗೆ ತಂದಿದೆ. ಆದರೆ ಈ ಸರ್ಕಾರಗಳು ತಮಗೆ ಆಗುವ ಲಾಭ ನೋಡುತ್ತವೇ ವಿನಃ ಜನರ ಅನುಕೂಲ ನೋಡುವುದು ಬಹಳ ವಿರಳ. ಈ ದಿನಗಳಲ್ಲೂ ಅದೇಷ್ಟೋ ಹಳ್ಳಿಗಳು ಇಂದಿನವರೆಗೂ ಸರ್ಕಾರಿ ಬಸ್ ಕಾಣದೆ ಜೀವನ ನಡೆಸುತ್ತಿವೆ. ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ ಇದೆ. ಆದರೆ ಬಸ್ ವ್ಯವಸ್ಥೆಗಳೇ ಇಲ್ಲ. ಇಂತಹ ಸಮಸ್ಯೆಗಳನ್ನು ನೋಡಿ ಸರ್ಕಾರ ಎಂದೂ ಪರಿಹರಿಸಲು ಮುಂದಾಗುವುದಿಲ್ಲ. ಬಸ್ ಇಲ್ಲದ ಊರುಗಳಿಗೆ ದಿನದಲ್ಲಿ ಕನಿಷ್ಠ ಎರಡು ಬಾರಿಯಾದರು ಬಸ್ ವ್ಯವಸ್ಥೆ ಮಾಡಿದ್ರೆ ಅದೆಷ್ಟೋ ವಿದ್ಯಾರ್ಥಿಗಳು ತಮ್ಮ ಬದುಕು ಕಟ್ಟಿಕೊಳ್ಳುತ್ತಾರೆ. ಕೆಲಸಕ್ಕೆ ಹೊರಗೆ ಹೋಗುವ ಮಂದಿ, ಆಸ್ಪತ್ರೆಗೆ ಓಡಾಡುವ ಹಿರಿ ಜೀವಗಳು, ಗರ್ಭಿಣಿಯರಿಗೆ ಸಹಾಯವಾಗುತ್ತದೆ. ಇದೆಲ್ಲಾ ಬಿಟ್ಟು ಕೇವಲ ತಮ್ಮ ಅಧಿಕಾರದ ಲಾಲಾಸೆಗಾಗಿ ಉಚಿತಗಳನ್ನು ನೀಡಿ ಜನರನ್ನು ಓಲೈಸುತ್ತಿವೆ.

Advertisement

ಸ್ವಾತಂತ್ರ್ಯ ನಂತರ ಈ ಊರಿಗೆ ಮೊದಲ ಬಾರಿಗೆ ಸರ್ಕಾರಿ ಬಸ್ ಬಂದಿದೆ….! ನೀವೆ ಯೋಚಿಸಿ ಅಲ್ಲಿನ ಜನರ ಬದುಕು ಹೇಗಿದ್ದಿರಬಹುದು…? ಸರ್ಕಾರಿ ಬಸ್ ನೋಡಿ ಸಂಭ್ರಮಿಸಿದ ಗ್ರಾಮಸ್ಥರು, ಬಸ್​ನ್ನು ಅಲಂಕರಿಸಿ ಪೂಜೆ ಮಾಡಿದ್ದಾರೆ.

ಹೊಯ್ಸಳ ರಾಜವಂಶದ ಮೂಲವಾದ ಹೊಯ್ಸಳಲು ಗ್ರಾಮಕ್ಕೆ ಇದೇ ಮೊದಲ ಬಾರಿಗೆ ಸರ್ಕಾರಿ ಬಸ್ ಆಗಮಿಸಿದೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಹೊಯ್ಸಳಲು‌ ಗ್ರಾಮಕ್ಕೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರಿ ಬಸ್ ಆಗಮಿಸಿರುವುದನ್ನು ಕಂಡು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ, ಸರ್ಕಾರಿ ಬಸ್ ನೋಡಿ ಸಂಭ್ರಮಿಸಿದ ಗ್ರಾಮಸ್ಥರು ಬಸ್​ನ್ನು ಅಲಂಕರಿಸಿ ಪೂಜೆ ಮಾಡಿದ್ದಾರೆ.

ದಶಕಗಳಿಂದ ಬಸ್ ಸೌಕರ್ಯಕ್ಕಾಗಿ ಗ್ರಾಮಸ್ಥರು ಸರ್ಕಾರಕ್ಕೆ ಮನವಿ ಮಾಡುತ್ತಲೆ ಬಂದಿದ್ದರು. ಆದರೆ ಬಸ್ ಸೌಲಭ್ಯ ದೊರೆತಿರಲಿಲ್ಲ. ಬಸ್ ಇಲ್ಲದ ಕಾರಣ ಪ್ರತಿನಿತ್ಯ 5 ಕಿ.ಮೀ. ನಡೆದು ಶಾಲಾ ಮಕ್ಕಳು, ಗ್ರಾಮಸ್ಥರು ಮೂಡಿಗೆರೆಗೆ ತೆರಳುತ್ತಿದ್ದರು. ಹೊಯ್ಸಳಲು 200 ಜನರಿರುವ ಮಲೆನಾಡು ಭಾಗದ ಕುಗ್ರಾಮವಾಗಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಬೆಂಗಳೂರು ಫ್ರೆಶ್ ಥಾನ್ ಓಟ | ಕ್ಯಾನ್ಸರ್ ಮುಕ್ತ ಜಗತ್ತನ್ನು ಉತ್ತೇಜಿಸುವ ಕಾರ್ಯಕ್ರಮ |

ಕ್ಯಾನ್ಸರ್ ಮುಕ್ತ ಜಗತ್ತನ್ನು ಉತ್ತೇಜಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ಬೆಂಗಳೂರು ಫ್ರೆಶ್ ಥಾನ್ ಓಟ…

57 minutes ago

ಬೇಸಿಗೆ ಹಿನ್ನೆಲೆಯಲ್ಲಿ ಪ್ರಗತಿ ಪರಿಶೀಲನಾ ಸಭೆ | ದ ಕ ಜಿಲ್ಲೆಯ ಕುಡಿಯುವ ನೀರು, ಬೇಸಿಗೆ ಸಮಸ್ಯೆ ಕುರಿತು ಚರ್ಚೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಡಿಯುವ ನೀರು, ಬೇಸಿಗೆ ಸಮಸ್ಯೆ ಹಾಗೂ ಮಳೆಗಾಲವನ್ನು ಎದುರಿಸಲು…

1 hour ago

ರಾಜ್ಯದಲ್ಲಿ ಹೊಸದಾಗಿ 2 ಸಾವಿರ ಬಸ್ಸುಗಳನ್ನು ಖರೀದಿಸಲಾಗುತ್ತಿದೆ | ಸಚಿವ ರಾಮಲಿಂಗಾರೆಡ್ಡಿ

ರಾಜ್ಯದಲ್ಲಿ ಜನರ ಅನುಕೂಲಕ್ಕಾಗಿ ಎರಡು ಸಾವಿರ ಬಸ್ಸುಗಳನ್ನು ಖರೀದಿಸಲಾಗುತ್ತಿದೆ ಎಂದು ಸಾರಿಗೆ  ಸಚಿವ…

2 hours ago

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ |

ಮಾರ್ಚ್ 1 ರಿಂದ ಮಾರ್ಚ್ 20 ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ…

2 hours ago

ದೇಶದ ಮೊದಲ ವರ್ಟಿಕಲ್ ರೈಲ್ವೆ ಬ್ರಿಡ್ಜ್ ಲೋಕಾರ್ಪಣೆ | ಆಧುನಿಕ ತಂತ್ರಜ್ಞಾನಕ್ಕೆ ಸಾಕ್ಷಿಯಾಗಿರುವ ಪಂಬನ್‌ ಸೇತುವೆ |

ದಕ್ಷಿಣ ರೈಲ್ವೆಯು ರೈಲು ವಿಕಾಸ ನಿಗಮ ಸಹಯೋಗದೊಂದಿಗೆ 531 ಕೋಟಿ ರೂಪಾಯಿ ವೆಚ್ಚದಲ್ಲಿ…

2 hours ago

ಅಡುಗೆ ಗ್ಯಾಸ್ ಬೆಲೆ‌ ಸಿಲಿಂಡರ್‌ಗೆ 50 ರೂ. ಹೆಚ್ಚಳ

ಅಡುಗೆ ಅನಿಲ ಅಥವಾ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 50…

5 hours ago