Advertisement
ಅನುಕ್ರಮ

ಚಿಲಿಪಿಲಿ | ನೀಲಿ ನೊಣ ಹಿಡುಕ |

Share

ನೀಲಿ ನೊಣ ಹಿಡುಕ (Tickle blue fly catcher.Cyornis tickelliae Blyth.)  ಎರಡು ಹಕ್ಕಿಗಳು ವಿರುದ್ಧ ದಿಕ್ಕುಗಳಿಂದ ಅರಚುತ್ತಿದ್ದರೆ ಆಹಾರ ಹುಡುಕಿ ಕೊಂಡು ಬಂದ ಹಕ್ಕಿಗಳು ಪೂರ ಸಂಶಯದಿಂದ ಅತ್ತಿತ್ತ ನೋಡಲಾರಂಭಿಸಿದವು. ಹಕ್ಕಿಗಳ ಭಾಷೆ ತಿಳಿದವರಿಗೆ ಅರ್ಥವಾದೀತು ಮರಿಗಳ ರಕ್ಷಣೆಗೆ ಪಣತೊಟ್ಟ ಹಕ್ಕಿಗಳ ಉಪಾಯವೆಂದು..ಇದರ ಸಿಳ್ಳಿನಿಂದಲೇ ಹಕ್ಕಿಯ ಇರುವಿಕೆ ಗೊತ್ತಾಗುತ್ತದೆ.

ನೀಲಿ ನೊಣ ಹಿಡುಕ , ನೋಡಲು ಗುಬ್ಬಚ್ಚಿ ಗಾತ್ರದ ಹಕ್ಕಿಯಾಗಿದೆ( 14 cm) ಮೈ ಕಪ್ಪು ಮಿಶ್ರಿತ ನೀಲಿ ಬಣ್ಣ, ಹಣೆಯ ಮೇಲೆ ತೆಳು ನೀಲಿ ಪಟ್ಟೆಯಿದೆ. ಕುತ್ತಿಗೆ ಮತ್ತು ಎದೆ ಕಿತ್ತಳೆ ಬಣ್ಣ, ಹೊಟ್ಟೆಯ ಭಾಗ ಬಿಳಿ ಬಣ್ಣವಿದ್ದು, ಬಾಲದ ಕೆಳ ಭಾಗ ಕಿತ್ತಳೆ ಬಣ್ಣವಿರುತ್ತದೆ. ಪರ್ವತ ಹಾಗೂ ಬೆಟ್ಟಗುಡ್ಡಗಳ ತಪ್ಪಲುಗಳಲ್ಲಿ ಕಾಣಸಿಗುತ್ತದೆ. ನೀರಿನ ಆಶ್ರಯ ಇರುವ ಪ್ರದೇಶಗಳನ್ನು ಹೆಚ್ಚಾಗಿ ಇಷ್ಟ ಪಡುತ್ತವೆ. ಕೀಟಗಳೇ ಪ್ರಧಾನ ಆಹಾರವಾಗಿದೆ.
ಮಾರ್ಚ್ ನಿಂದ ಆಗಸ್ಟ್ ವರೆಗೆ ಗೂಡು ಕಟ್ಟುವ ಈ ಹಕ್ಕಿಗಳು ಒಮ್ಮೆಗೆ 3 ರಿಂದ 5 ಮೊಟ್ಟೆಗಳನ್ನಿಡುತ್ತದೆ. ಇವುಗಳು ಮಕ್ಕಳ ಕುರಿತು ತುಂಬಾ ಕಾಳಜಿ ವಹಿಸುತ್ತದೆ.‌ ಅವುಗಳಿಗೆ ಆಹಾರವನ್ನು ಬಹಳ ಜಾಗ್ರತೆಯಿಂದ ತಿನ್ನಿಸುತ್ತವೆ. ಈ ಹಕ್ಕಿ ನೋಡಲಷ್ಟೇ ಗಮನ ಸೆಳೆಯುವುದಲ್ಲ , ತನ್ನ ಇಂಪಾದ ದನಿಯಲ್ಲಿ ಸಿಳ್ಳಿನ ರಾಗಾಲಾಪನೆ ಮಾಡುತ್ತಾ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತವೆ. ಭಾರತ, ಬಾಂಗ್ಲಾದೇಶ,ಶ್ರೀ ಲಂಕಾ, ಬರ್ಮಾ ದೇಶಗಳಲ್ಲಿ ಈ ಹಕ್ಕಿಗಳು ಕಂಡು ಬರುತ್ತವೆ.
ಬರಹ:
ಅಶ್ವಿನಿಮೂರ್ತಿ ಅಯ್ಯನಕಟ್ಟೆ
ಛಾಯಾಚಿತ್ರ :ಪಿ.ಜಿ.ಕೃಷ್ಣಮೂರ್ತಿ ಅಯ್ಯನಕಟ್ಟೆ..
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಮುಂದುವರಿದ ಮಳೆ ಅಬ್ಬರ : ಆಗಸ್ಟ್‌ 4ರಂದು ದ ಕ -ಉಡುಪಿ-ಕಾಸರಗೋಡು ಜಿಲ್ಲೆಯ ಕೆಲವು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ಭಾರಿ ಮಳೆಯ ಹಿನ್ನೆಲೆಯಲ್ಲಿ ಆಗಸ್ಟ್‌ 4ರಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು…

52 minutes ago

ಯಡಕುಮೇರಿ ಹಳಿ ದುರಸ್ತಿ ಪೂರ್ಣ : ಮಂಗಳೂರು–ಬೆಂಗಳೂರು ರೈಲು ರೈಲು ಸಂಚಾರ ಪುನರಾರಂಭ

ಯಡಕುಮೇರಿ ಭೂಕುಸಿತ ಪ್ರದೇಶದಲ್ಲಿ ಮಣ್ಣು ತೆರವು ಹಾಗೂ ಹಳಿ ದುರಸ್ತಿ ಕಾಮಗಾರಿ ಪೂರ್ಣಗೊಂಡಿದ್ದು,…

1 hour ago

ಹಗಲು ನಿದ್ರೆ ಅನೇಕ ರೋಗಗಳಿಗೆ ಆಹ್ವಾನ ; ಔಷಧಿಗಿಂತ ಉತ್ತಮ ಜೀವನಶೈಲಿಯೇ ಪರಿಹಾರ: ರಾಘವೇಶ್ವರ ಶ್ರೀ

ಹಗಲು ನಿದ್ರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ರಾಘವೇಶ್ವರ ಶ್ರೀ ಎಚ್ಚರಿಸಿದ್ದಾರೆ.…

3 hours ago

ಕೇರಳದಲ್ಲಿ ಭಾರಿ ಮಳೆ ಆರ್ಭಟ : ಮಲಪ್ಪುರಂನಲ್ಲಿ ಸರಣಿ ಭೂಕುಸಿತ , ಸಂಚಾರ ಸಂಪೂರ್ಣ ಸ್ಥಗಿತ

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ರಾಜ್ಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿ ವಾಹನ…

6 hours ago