ಸುಳ್ಯ ತಾಲೂಕಿನ ಚೊಕ್ಕಾಡಿಯ ಶ್ರೀರಾಮ ದೇವಾಲಯದಲ್ಲಿ ಮಾ.16 ರಂದು ಲೋಕಕಲ್ಯಾಣಾರ್ಥವಾಗಿ ಅಹರ್ನಿಶಿ ರುದ್ರ ಪಾರಾಯಣ ನಡೆಯಲಿದೆ. ರಾಮಸ್ಮರಣ-ರುದ್ರಪಠನ ಕಾರ್ಯಕ್ರಮದ ಮೂಲಕ ರುದ್ರಾಧ್ಯಾಯಿಗಳು ನಿರಂತರ ರುದ್ರಪಾರಾಯಣ ಮಾಡುವರು ಎಂದು ಚೊಕ್ಕಾಡಿಯ ಶ್ರೀರಾಮ ದೇವಾಲಯದ ಶ್ರೀರಾಮ ಸೇವಾ ಸಮಿತಿ ಅಧ್ಯಕ್ಷ ಮಹೇಶ್ ಭಟ್ ಚೂಂತಾರು ತಿಳಿಸಿದ್ದಾರೆ.
ಶ್ರೀ ರಾಮಚಂದ್ರಾಪುರ ಮಠದ ಅಧೀನ ಸಂಸ್ಥೆಯಾದ ಚೊಕ್ಕಾಡಿಯ ಶ್ರೀ ರಾಮ ದೇವಾಲಯದಲ್ಲಿ ಲೋಕಕಲ್ಯಾಣಾರ್ಥವಾಗಿ ನಿರಂತರ ರುದ್ರಪಠಣ ನಡೆಯಲಿದೆ. ಶಿವೋಪಾಸನೆಯ ಈ ಕಾರ್ಯದಲ್ಲಿ 24 ಗಂಟೆಗಳ ಕಾಲ ನಿರಂತರವಾಗಿ ರುದ್ರ ಪಠಣ ನಡೆಯಲಿದೆ. ಊರಿನ ಹಾಗೂ ಪರವೂರಿನ ರುದ್ರಾಧ್ಯಾಯಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರುದ್ರ ಪಠಣ ನಡೆಸುವರು. ಅತ್ಯಂತ ವಿಶಿಷ್ಟ ಹಾಗೂ ಅಪರೂಪದ ಈ ಕಾರ್ಯಕ್ರಮಕ್ಕೆ ಸಿದ್ಧತೆಗಳು ಈಗಾಗಲೇ ಆರಂಭಗೊಂಡಿದೆ. ಮಾರ್ಚ್ 16 ರ ಸೂರ್ಯೋದಯದಿಂದ ಆರಂಭವಾಗಿ ಮಾರ್ಚ್ 17 ಸೂರ್ಯೋದಯದವರೆಗೆ ಈ ರುದ್ರ ಪಠಣ ನಡೆಯಲಿದೆ.
ಲೋಕಕಲ್ಯಾಣ ಹಾಗೂ ಶ್ರೀ ಕ್ಷೇತ್ರದ ಅಭಿವೃದ್ಧಿಯ ಸಂಕಲ್ಪದೊಂದಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ ರುದ್ರ ಪಾರಾಯಣ ನಡೆಸುವ ಭಕ್ತರು ಚೊಕ್ಕಾಡಿಯ ಶ್ರೀ ರಾಮ ದೇವಾಲಯದ ಶ್ರೀರಾಮ ಸೇವಾ ಸಮಿತಿಯನ್ನು ಸಂಪರ್ಕ ಮಾಡಬಹುದು. ಅಂದು ರುದ್ರ ಪಠಣವು ಸೇವಾ ರೂಪದಲ್ಲಿ ನಡೆಯಲಿದ್ದು ಶ್ರೀ ದೇವತಾ ಕಾರ್ಯಗಳೆಲ್ಲವೂ ಸೇವಾ ರೂಪದಲ್ಲಿ ನಡೆಯಲಿದೆ ಎಂದು ಮಹೇಶ್ ಭಟ್ ಚೂಂತಾರು ತಿಳಿಸಿದ್ದಾರೆ.
“ಅರ್ಧ ಎಕರೆ ಇದ್ದರೂ ಕುಟುಂಬ ಜೀವನ ಮಾಡಬಹುದು” ಎನ್ನುವ ರೈತನ ಮಾತು, ಭೂಮಿ…
ಭಾರತ ಯುವ ದೇಶವಾಗಿದ್ದರೂ ಕೃಷಿಕರ ಸರಾಸರಿ ವಯಸ್ಸು 50–55 ವರ್ಷವಾಗಿದ್ದು, ಗ್ರಾಮೀಣ ಯುವಕರಲ್ಲಿ…
ಹಸು ಕರು ಹಾಕಿದ ಬಳಿಕ ಸಿಗುವ ಪ್ಲಾಸೆಂಟಾ ಅಥವಾ ‘ಮಾಸ’ವನ್ನು ತ್ಯಾಜ್ಯವಾಗಿ ಬಿಸಾಡದೆ,…
ಸೆ.8 ರಿಂದ 10ರವರೆಗೆ ಕರಾವಳಿಯಲ್ಲಿ ಮೋಡ ಹೆಚ್ಚಾಗಿ ಅಲ್ಲಲ್ಲಿ ತುಂತುರು ಅಥವಾ ಸಾಮಾನ್ಯ…
ಉಡುಪಿ ಜಿಲ್ಲೆಯ ಹೆಬ್ರಿ ಸಮೀಪ ಗೋಡಂಬಿ ಸಂಸ್ಕರಣಾ ತ್ಯಾಜ್ಯದಿಂದ ಜೈವಿಕ ಇಂಧನ ಮತ್ತು…
ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಅಡಿಕೆ ತಟ್ಟೆ, ಪೇಪರ್ ಕಪ್, ಪೇಪರ್ ಪ್ಲೇಟ್ ಸೇರಿದಂತೆ…