ವಿದೇಶಿ ಗೋವುಗಳ ತಳಿಯ ಹಾಲು ಮಕ್ಕಳಿಗೆ ಒಳ್ಳೆಯದಲ್ಲ..| ಆಯಾ ಪ್ರದೇಶದ ಹಸುಗಳ ಹಾಲು ಮಕ್ಕಳಿಗೆ ಅತೀ ಶ್ರೇಷ್ಠ |

June 1, 2024
1:51 PM

ಗುಜರಾತ್‌ನ ಜುಮ್ನಾರ್ಗ ಮೂಲದ ಆಯುರ್ವೇದ ಯೂನಿವರ್ಸಿಟಿಯ(Ayurvedic University) ಖ್ಯಾತ ಸಂಶೋಧಕ ಡಾ. ಹಿತೇಶ್ ಜಾನಿ, ಗೋವುಗಳ(Cattle) ಕುರಿತಂತೆ ನಡೆಸಿದ ಸಂಶೋಧನೆಯ(Research) ವರದಿ ವಿಶ್ವವ್ಯಾಪಿ ಚರ್ಚೆಯಾಗುತ್ತಿದೆ. ವಿಶ್ವದ ಖ್ಯಾತ ಸಂಶೋಧಕರು ಈ ಮಾಹಿತಿಯನ್ನು ಕಂಡು ಒಂದು ಕ್ಷಣ ಹೌಹಾರಿದ್ದಾರೆ. ಆ ವರದಿಯಲ್ಲಿ ವಿದೇಶಿ ತಳಿಗಳ ಹಾಲಿನಲ್ಲಿ ಬಿಸಿಎಂ-7 ಎಂಬ ರಾಸಾಯನಿಕ(Chemical) ಅಂಶವಿದ್ದು, ಇದರ ಸೇವನೆಯಿಂದ ದೇಹ ರೋಗಗಳ(Disease) ಗೂಡಾಗುತ್ತಿದೆ. ಅದರಲ್ಲೂ ಹೆಚ್ಚಾಗಿ ಮಕ್ಕಳ ಆರೋಗ್ಯದ(Children health) ಮೇಲೆ ಇದು ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತಿದೆ. ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ರೋಗಗಳಿಗೆ ಮಕ್ಕಳು ತುತ್ತಾಗುತ್ತಿದ್ದಾರೆ.

Advertisement
Advertisement

ವಯಸ್ಸಿಗೆ ಮೀರಿದ ದೇಹ ರಚನೆಯೂ ಸೇರಿ ಸಾಕಷ್ಟು ಕಿವಿ ಹಾಗೂ ಮಿದುಳಿಗೆ ಸಂಬಂಧಿಸಿದ ರೋಗಗಳಿಗೆ ಮಕ್ಕಳು ಮತ್ತು ವಯಸ್ಕರು ಒಳಗಾಗುತ್ತಿದ್ದಾರೆ. ಅದೇ ಭಾರತೀಯ ಗೋತಳಿಗಳ ಹಾಲಿನ ಸೇವನೆಯು ಎಲ್ಲ ರೀತಿಯಲ್ಲಿಯೂ ಆರೋಗ್ಯಕ್ಕೆ ಅತ್ಯುತ್ತಮವಾಗಿದ್ದು, ಇದರ ಹಾಲಿನಲ್ಲಿ ಯಾವುದೇ ರೀತಿಯ ಹಾನಿಕಾರಕ ಅಂಶ ಕಂಡುಬರುವುದಿಲ್ಲ.

Advertisement

ಹಾಗೆಯೇ, ನಮ್ಮ ನಮ್ಮ ಕ್ಷೇತ್ರದ ತಳಿಯ ಗೋವುಗಳು ಹಾಲು ಆಯಾ ಪ್ರದೇಶದ ಸಿಗುವ ಹಾಲು ಮಕ್ಕಳಿಗೆ ಅತೀ ಶ್ರೇಷ್ಠ. ಇದು ಭಾರತೀಯರಿಗೆ ಪಕೃತಿ ನೀಡಿದ ಕೊಡುಗೆ. ಉದಾಹರಣೆ, ಕರ್ನಾಟಕ-ಮಹಾರಾಷ್ಟ್ರ ಮದ್ಯ ಸಿಗುವ ಕಿಲಾರ, ಮಲ್ಲಾಡ ಗಿಡ್ಡ, ಮೈಸೂರು ಹಳ್ಳಿಕಾರ, ಅಮೃತಮಹಲ, ಹೈದರಾಬಾದ್-ಕರ್ನಾಟಕ ದೇವಣಿ, ಗುಜರಾತ ಗೀರ, ರಾಜಸ್ಥಾನದ ಕಾಂಗ್ರಿಜ, ಪಂಗನೂರ್, ಶಾಹಿವಾಲ, ಶಿಂದಿ, ತಾರಪಾರಕರ, ವೆಂಚುರ, ರಾಟಿ ಇಂತಹ ಹಲವಾರು ದೇಶಿಯ ಗೋತಳಿ ನಮ್ಮನ್ನು ಅನಾದಿ ಕಾಲದಿಂದ ರಕ್ಷಣೆ ಮಾಡಿಕೊಂಡು ಬಂದಿದೆ. ಯಾವಾಗ ಮಿಶ್ರ ತಳಿಯ ಉಗಮವಾಯಿತೋ ಅಲ್ಲಿಂದ ಆರೋಗ್ಯ, ಆರ್ಥಿಕ, ಸಂಸ್ಕೃತಿಕ ಅಧಃಪತನ ಆರಂಭವಾಯಿತು. ಕಾರಣ ನಮ್ಮ ನಮ್ಮ ಕ್ಷೇತ್ರದಲ್ಲಿ ಗೋತಳಿ ಸಾಕಿ ಪ್ರಾಕೃತಿಕ ಸಮತೋಲನ ಕಾಯ್ದುಕೊಳ್ಳಲು ಮತ್ತು ವೈವಿಧ್ಯಮಯ ಜೀವ ವೈವಿಧ್ಯತೆ ಕಾಪಾಡುವ ಜವಾಬ್ದಾರಿ ನಮ್ಮದಲ್ಲವೆ? ಆ ಮೂಲಕ ಸ್ಥಳೀಯ ವೈವಿಧ್ಯಮಯ ಗೋತಳಿ ಬೆಳೆಸಿ.. ಮಕ್ಕಳು ಹಾಗೂ ನಮ್ಮೆಲ್ಲರ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸಾಗೋಣ….

ಬರಹ :
ಕೆ.ಎನ್.ಶೈಲೇಶ್ ಹೊಳ್ಳ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 22.09.2024 | ರಾಜ್ಯದಲ್ಲಿ ಮತ್ತೆ ಕೆಲವು ಕಡೆ ಮಳೆ ಸಾಧ್ಯತೆ
September 22, 2024
11:50 AM
by: ಸಾಯಿಶೇಖರ್ ಕರಿಕಳ
ಅತೀವೃಷ್ಟಿಯಿಂದ ಹಾನಿಗೊಳಗಾದ ಪ್ರತಿಯೊಬ್ಬ ರೈತರಿಗೂ ಬೆಳೆ ಪರಿಹಾರಕ್ಕೆ ಸೂಚನೆ |
September 21, 2024
2:18 PM
by: ದ ರೂರಲ್ ಮಿರರ್.ಕಾಂ
ರಾಜ್ಯದಲ್ಲಿ ನೈಋತ್ಯ ಮುಂಗಾರು ದುರ್ಬಲ
September 21, 2024
2:15 PM
by: ದ ರೂರಲ್ ಮಿರರ್.ಕಾಂ
ಪ್ಲಾಸ್ಟಿಕ್ ಪೆಟ್, ಬಾಟಲ್ ಗಳ ಬಳಕೆ ನಿಷೇಧ | ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
September 21, 2024
2:10 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror