ಅನುಕ್ರಮ

ಚಿಲಿಪಿಲಿ | ಈ ಜಾಗದ ಒಡೆಯ ಯಾರೆಂದು ಬಲ್ಲಿರೇನು? |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ತನ್ನ ಸ್ವರದಿಂದ ಸುತ್ತಮುತ್ತಲು ಪರಿಚಿತವಾಗಿರುವ ಹಕ್ಕಿ ಈ ಗೊರವಂಕ, ಮೈನಾ(Common Myna, Indian Myna) ಎಂಬಿತ್ಯಾದಿ ಹೆಸರುಗಳಿಂದ ಗುರುತಿಸಿಕೊಳ್ಳುವುದು. ಈ ಹಕ್ಕಿಯ ಮೂಲ ಏಶಿಯಾ. ಸಾಮಾನ್ಯವಾಗಿ ಭಾರತ, ಇರಾನ್, ಕಜಖಸ್ತಾನದಿಂದ ಮಲೇಶಿಯ ಹಾಗೂ ಚೀನಾದಲ್ಲಿ ಕಂಡುಬರುವುದಾದರೂ ಪ್ರಪಂಚದ ಇನ್ನಿತರ ಪ್ರದೇಶಗಳಲ್ಲೂ ಇದರ ವಾಸ್ತವ್ಯ ವಿಸ್ತರಿಸಿದೆ.

Advertisement

ಕಪ್ಪಗಿನ ಮಿರುಗುವ. ಮೈ ಬಣ್ಣ, ಚೆಂದದ, ಗಟ್ಟಿಯಾದ ಕೇಸರಿ ಕೊಕ್ಕು, ಕಣ್ಣಿನ ಸುತ್ತ ಕೇಸರಿಯ ವೃತ್ತ, ಕಣ್ಣಿನ ಕೆಳಭಾಗದಲ್ಲಿ ಹಾಗೂ ಹಿಂಬದಿ ಅರಶಿನ ಬಣ್ಣದ ಚಿತ್ತಾರ ಕಾಲುಗುರಿನ ಬಣ್ಣವೂ ಕೇಸರಿ ‌ರೆಕ್ಕೆಯ ಕೆಳಭಾಗದಲ್ಲಿ ಸಣ್ಣಕಿರುವ ಬಿಳಿಯ ಬಣ್ಣದ ಮಚ್ಚೆಯಂತ ಪುಟ್ಟ ಪುಕ್ಕಗಳು ಇದು ಗೊರವಾಂಕ ಹಕ್ಕಿ. ಈ ಹಕ್ಕಿಯು ಸುಮಾರು 29 ಸೆ.ಮೀ ನಷ್ಟು ಉದ್ದವಾಗಿರುತ್ತವೆ.  ಸಂಸ್ಕೃತ ದಲ್ಲಿ ಶಾರಿಕಾ, ಸಾರಿಕಾ ಗೋರಾಟಿಕಾ,ತೆಲುಗಿನಲ್ಲಿ ಗೊರಿಂಕಾ ಎಂದೂ, ಹಲಸಿನ ಹಕ್ಕಿ, ಉಣ್ಣೆ ಗೊರವಾ, ಕಾಮಳ್ಳಿ ಹಕ್ಕಿ, ಪೀತ ನೇತ್ರ ಮೊದಲಾದ ಹೆಸರುಗಳಿಂದ ಗುರುತಿಸಿ ಕೊಂಡಿದೆ.ಜನವಸತಿ ಪ್ರದೇಶದಲ್ಲೇ ಹೆಚ್ಚಾಗಿ ಇರ ಬಯಸುವ ಹಕ್ಕಿ ಇದಾಗಿದೆ. ಭಯಂಕರ ಸ್ವರದ ಹಕ್ಕಿ ಇದು. ಎಲ್ಲಿದೆಯೋ ಅಲ್ಲಿ ದೊಡ್ಡ ಸ್ವರದಲ್ಲಿ ಕಿರುಚುವ ಈ ಹಕ್ಕಿ ತನ್ನಿರವನ್ನು ಎಲ್ಲರ ಅರಿವಿಗೆ ಬರುವಂತೆ ಮಾಡುತ್ತದೆ.

ಹುಳು ಹುಪ್ಪಟೆ ಮುಖ್ಯ ಆಹಾರ. ಹುಳಗಳು ಸಿಕ್ಕಿಲ್ಲವೆಂದರೆ ಧಾನ್ಯಗಳನ್ನೇ ಹುಡುಕಿ ತಿನ್ನುತ್ತವೆ. ಈ ಹಕ್ಜಿ ಪೂರ್ತಿ ಶಾಕಾಹಾರಿಯೂ ಅಲ್ಲ, ಮಾಂಸಾಹಾರಿಯೂ ಅಲ್ಲ, ಮಿಶ್ರಾಹಾರಿ. ಹಾಗಾಗಿ ಹೊಸ ಪ್ರದೇಶಕ್ಕೆ ಸುಲಭವಾಗಿ ಹೊಂದಿಕೊಳ್ಳುತ್ತವೆ. ಆಹಾರ ಸಮಸ್ಯೆ ಕಾಡದು. ನೆಲದಲ್ಲಿ ಬಿದ್ದಿರುವ ಕಸಕಡ್ಡಿಗಳು, ನಾರು ಮತ್ತಿತರ ವಸ್ತುಗಳನ್ನು ಉಪಯೋಗಿಸಿ ಗೂಡು ಕಟ್ಟುತ್ತವೆ. ಬೇಸಿಗೆಯಲ್ಲಿ ಮೊಟ್ಟೆ ಇಡುತ್ತವೆ. ಶತ್ರುಗಳಿಂದ ಮೊಟ್ಟೆಯನ್ನು ಕಾಪಾಡಲು ತಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತವೆ.

Advertisement

# ಅಶ್ವಿನಿಮೂರ್ತಿ ಅಯ್ಯನಕಟ್ಟೆ
# ಛಾಯಾಚಿತ್ರ : ಯು ರಾಧಾಕೃಷ್ಣ ರಾವ್ ಬಾಳಿಲ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ದರ್ಶಿತ್‌ ಕೆ ಎಸ್

ದರ್ಶಿತ್‌ ಕೆ ಎಸ್‌, 3 ನೇ ತರಗತಿ, ಜ್ಞಾನಗಂಗಾ ಸೆಂಟ್ರಲ್‌ ಸ್ಕೂಲ್‌, ಬೆಳ್ಳಾರೆದರ್ಶಿತ್‌…

3 hours ago

ಕೋವಿಡ್ ಲಸಿಕೆಯಿಂದ ಹೃದಯಾಘಾತ ಸಂಭವಿಸುತ್ತಿಲ್ಲ | ಸಚಿವ ದಿನೇಶ್ ಗುಂಡೂರಾವ್

ರಾಜ್ಯದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳ ಕುರಿತು ವರದಿ ನೀಡಲು ರಚಿಸಲಾಗಿದ್ದ ತಜ್ಞರ ಸಮಿತಿ…

4 hours ago

ಮೆಕ್ಕೆಜೋಳ ಸಮಾವೇಶ | ಕನಿಷ್ಠ ಬೆಂಬಲ ಬೆಲೆ ಮೂಲಕ ರೈತರ ಹಿತರಕ್ಷಣೆ

ದೇಶದಲ್ಲಿ ಮೆಕ್ಕೆಜೋಳ ಉತ್ಪಾದನೆ ಹೆಚ್ಚಳ ಮತ್ತು ಅಭಿವೃದ್ದಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಕನಿಷ್ಠ…

4 hours ago

ಘಾಟಿ ಸುಬ್ರಹ್ಮಣ್ಯ ದೇವಸ್ಥಾನ ಪ್ರದೇಶ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟ ನಿಷೇಧ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರಸಿದ್ದ ಯಾತ್ರಾ ಸ್ಥಳ ಘಾಟಿ ಕ್ಷೇತ್ರದ…

5 hours ago

ಚಾರ್ಮಾಡಿ ಘಾಟ್‌ನಲ್ಲಿ ದಟ್ಟ ಮಂಜು | ವಾಹನ ಸವಾರರಿಗೆ ಎಚ್ಚರಿಕೆಯಿಂದ ಸಂಚರಿಸುವಂತೆ ಸೂಚನೆ

ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿ ಮಳೆ ಹಾಗು ದಟ್ಟ ಮಂಜು ಆವರಿಸಿದ…

5 hours ago

ತಾಳಮದ್ದಳೆ ಸಪ್ತಾಹ ಸಮಾರೋಪ | ಕುರಿಯ ಪ್ರಶಸ್ತಿ ಪ್ರದಾನ ಪ್ರಶಸ್ತಿ ಪಡೆವ ಕಲಾವಿದನ ಬದುಕು ಆದರ್ಶವಾಗಿರಬೇಕು

ಓರ್ವ ಕಲಾವಿದ ಸಮಾಜಮುಖಿಯಾಗಿ, ಕಲಾತ್ಮಕವಾಗಿ ಹೇಗೆ ಬದುಕಬೇಕೆನ್ನುವುದನ್ನು ಹಾಸ್ಯಗಾರ್ ದಿ.ಪೆರುವಡಿ ನಾರಾಯಣ ಭಟ್ಟರು…

5 hours ago