ಹವಾಮಾನ ಬಿಕ್ಕಟ್ಟಿನ ಪರಿಣಾಮ | ಆಹಾರ ಭದ್ರತೆಯ ಮೇಲೆ ಬೀರಲಿದೆ ಪರಿಣಾಮ | ವಾಣಿಜ್ಯ ಕೃಷಿಯಲ್ಲೂ ಇಳುವರಿ ಕುಸಿತ |

October 25, 2023
11:22 AM
ಹವಾಮಾನ ಬದಲಾವಣೆ ಈಗ ಬಹುದೊಡ್ಡ ಸವಾಲಾಗಿದೆ. ಹವಾಮಾನ ಬದಲಾವಣೆಯ ಕಾರಣದಿಂದ ಹಲವು ಕೃಷಿಗಳು ಸಂಕಷ್ಟದಲ್ಲಿದೆ. ಅಡಿಕೆ, ಭತ್ತ, ರಬ್ಬರ್‌, ಜೋಳ ಸೇರಿದಂತೆ ಎಲ್ಲಾ ಕೃಷಿಯಲ್ಲೂ ಈಗ ಹವಾಮಾನ ವೈಪರೀತ್ಯ ಸಮಸ್ಯೆಯಾಗಿದೆ. ಆಹಾರ ಭದ್ರತೆಯ ಮೂಲೂ ಹವಾಮಾನ ವೈಪರೀತ್ಯ ಮುಂದಿನ ದಿನಗಳಲ್ಲಿ ಸಮಸ್ಯೆಯಾಗಿ ಕಾಡಲಿದೆ.

ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಈಗ ಹವಾಮಾನ ವೈಪರೀತ್ಯ ಹೆಚ್ಚಾಗಿದೆ. ಇದರಿಂದ ಹಲವು ಸಮಸ್ಯೆಗಳು ಕಾಡಲು ಆರಂಭವಾಗಿದೆ. ಇದಕ್ಕಾಗಿಯೇ ಭಾರತದ ಸೇರಿದಂತೆ ವಿವಿಧ ದೇಶಗಳು ಹವಾಮಾನ ಸುಸ್ಥಿತಿಗೆ ಹಲವು ಪ್ರಯತ್ನ ನಡೆಸುತ್ತಿದ್ದಾರೆ. ಹವಾಮಾನ ಬದಲಾವಣೆಯ ಕಾರಣದಿಂದಲೇ ಆಹಾರ ಭದ್ರತೆ ಹಾಗೂ ಕೃಷಿ ವ್ಯವಸ್ಥೆಯ ಮೇಲೂ ಇದೀಗ ಪರಿಣಾಮ ಬೀರುತ್ತಿದೆ.

Advertisement
Advertisement

ಭಾರತದ ಆಹಾರ ಭದ್ರತೆಯು ಕವಲುದಾರಿಯಲ್ಲಿದೆ. ಹವಾಮಾನ ಬದಲಾವಣೆಯ ಅಪಾಯವು  ಕೃಷಿ ಆರ್ಥಿಕತೆಯ ಮೇಲೆ ಪ್ರತಿಧ್ವನಿಸುತ್ತಿದೆ.ತಾಪಮಾನ ಹೆಚ್ಚಾದಂತೆ, ಕೃಷಿ ಇಳುವರಿ ಕಡಿಮೆಯಾಗುತ್ತದೆ. ಈ ಬದಲಾಗುತ್ತಿರುವ ಪರಿಸರದಲ್ಲಿ ಕಳೆಗಳು ಮತ್ತು ಕೀಟಗಳ ಬೆಳವಣಿಗೆಗೆ ಸೂಕ್ತವಾದ ಅವಕಾಶವನ್ನು ಒದಗಿಸುತ್ತದೆ. ಹವಾಮಾನ ಬಿಕ್ಕಟ್ಟು ವ್ಯಾಪಕವಾಗಿ ಹರಡಿದೆ.ಕೇವಲ ಕೃಷಿ ಇಳುವರಿಯನ್ನು ಕುಗ್ಗಿಸುವುದು ಮಾತ್ರವಲ್ಲ,  ಕೃಷಿಯ ಅಗತ್ಯ ಮೂಲವಾದ ನೀರಿನ ಮೇಲೂ ಪರಿಣಾಮ ಬೀರುತ್ತಿದೆ. ಬದಲಾಗುತ್ತಿರುವ ಮಳೆಯ ಮಾದರಿಗಳು ಮತ್ತು ಮಳೆಯ ದಿನಗಳಲ್ಲಿನ ಕುಸಿತದಿಂದ ಉಂಟಾಗುವ ಅನಿಶ್ಚಿತತೆಗಳು ಗಮನಾರ್ಹ ಮತ್ತು ಆತಂಕಕಾರಿ ಸವಾಲನ್ನು ಒದಗಿಸುತ್ತವೆ. ಹೀಗಾಗಿ ಭತ್ತ ಸೇರಿದಂತೆ ಆಹಾರ ಬೆಳೆಗಳ ಮೇಲೆ ಬಹುದೊಡ್ಡ ಸಮಸ್ಯೆಯಾಗುತ್ತಿದೆ.

ಆಹಾರ ಭದ್ರತೆಯಲ್ಲಿ ಭಾರತವು ಮಹತ್ತರವಾದ ಪ್ರಗತಿಯನ್ನು ಸಾಧಿಸಿದ್ದರೂ, ಈಗ ಹಲವಾರು ಸವಾಲುಗಳನ್ನು ಎದುರಿಸಬೇಕಾಗಿದೆ. ಅಪೌಷ್ಟಿಕತೆ ಇನ್ನೂ ಒಂದು ಸಮಸ್ಯೆಯಾಗಿದೆ . ನೀರಿನ ಕೊರತೆ ಮತ್ತು ಕಡಿಮೆ ಫಸಲುಗಳ ಬಗ್ಗೆ ಆತಂಕ ಹೆಚ್ಚುತ್ತಿದೆ.  ಹವಾಮಾನ ಬಿಕ್ಕಟ್ಟು ಈಗ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಎಲ್ಲಾ ಸಮಯದಲ್ಲೂ ಭಾರತದ ಗ್ರಾಮೀಣ ಭಾಗದಲ್ಲಿ ಹವಾಮಾನ ವೈಪರೀತ್ಯ ಯಡೆದು ನಿಂತಿತ್ತು,  ಎಲ್ಲಾ ಸಮಯದಲ್ಲೂ  ಗ್ರಾಮೀಣ ಪ್ರದೇಶಗಳ ಆಹಾರ ಭದ್ರತೆಯನ್ನು ಖಾತ್ರಿಪಡಿಸುತ್ತಿತ್ತು. ಆದರೆ ಈಚೆಗಿನ ಕೆಲವು ಸಮಯದಲ್ಲಿ ಗ್ರಾಮೀಣ ಭಾರತವೂ ಹವಾಮಾನ ಬಿಕ್ಕಟ್ಟು ಎದುರಿಸುತ್ತಿದೆ.

ಏರುತ್ತಿರುವ ತಾಪಮಾನ, ಬದಲಾದ ಮಳೆಯ ವ್ಯವಸ್ಥೆ ಮತ್ತು ಬರ ಮತ್ತು ಪ್ರವಾಹಗಳಂತಹ ವಿಪರೀತ ಹವಾಮಾನ ಗ್ರಾಮೀಣ ಭಾಗದ ಕೃಷಿ ಉತ್ಪಾದನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ.ರಾಸಾಯನಿಕ ಒಳಹರಿವು ಹೆಚ್ಚಾದ ಕಾರಣದಿಂದ ಕೃಷಿಯಲ್ಲೂ ಹಿಡಿತ ಕಡಿಮೆಯಾಗಿದೆ.

ಹವಾಮಾನ ಬದಲಾವಣೆ ಆಹಾರ ಭದ್ರತೆ ಮಾತ್ರವಲ್ಲ ವಾಣಿಜ್ಯ ಬೆಳೆಗಳ ಮೇಲೂ ಪರಿಣಾಮ ಬೀರುತ್ತಿದೆ. ಅಡಿಕೆ, ರಬ್ಬರ್‌ ಸೇರಿದಂತೆ ಹಲವು ಬೆಳೆಗಳು ಇಳುವರಿ ಕೊರತೆಯನ್ನು ಅನುಭವಿಸುತ್ತಿವೆ. ರಬ್ಬರ್‌ ಕೂಡಾ ಸರಿಯಾದ ಇಳುವರಿ ಇಲ್ಲ, ಕಾರಣ ಹವಾಮಾನದ ವ್ಯತ್ಯಾಸ. ಅಡಿಕೆ ಬೆಳೆಯಲ್ಲೂ ವಿಪರೀತ ಬಿಸಿಲಿನ ಕಾರಣದಿಂದ ಅಡಿಕೆ ಬೀಳುವ ಪರಿಸ್ಥಿತಿ ಇದೆ. ಈ ನಡುವೆ ಹಿಂಗಾರ ಒಣಗುವಿಕೆ ಹೆಚ್ಚಾಗುತ್ತದೆ. ಅದರ ಜೊತೆಗೇ ಹವಾಮಾನ ಬದಲಾವಣೆಯ ಕಾರಣದಿಂದ ವಿವಿಧ ರೋಗಗಳೂ ಅಡಿಕೆಯನ್ನು ಕಾಡಲು ಆರಂಭಿಸಿದೆ.

Advertisement

ಹವಾಮಾನ ಬಿಕ್ಕಟ್ಟಿನಿಂದ ಭಾರತದ ಆಹಾರ ಭದ್ರತೆ ಹಾಗೂ ಕೃಷಿ ವ್ಯವಸ್ಥೆ  ಅಪಾಯದಲ್ಲಿದೆ. ಹಾಗಿದ್ದರೂ ಭಾರತದಲ್ಲಿ ಇನ್ನೂ ಭರವಸೆ ಇದೆ. ಸಮಗ್ರ ಕೃಷಿ ಪದ್ಧತಿ ಹಾಗೂ ಪರಿಸರ ಸ್ನೇಹಿಯಾದ ನಿರ್ಧಾರಗಳು, ಪರಿಸರ ಸಂರಕ್ಷಣೆಯಂತಹ ಕಾರ್ಯಗಳು ಹೆಚ್ಚಾಗಿ ಬಳಕೆ ಮಾಡಲು ಸಾಧ್ಯವಿದೆ. ಇದಕ್ಕಾಗಿಯೇ ಭಾರತದಲ್ಲಿ ಕೃಷಿ ವ್ಯವಸ್ಥೆ, ಗ್ರಾಮೀಣ ಭಾಗದ ಬೆಳವಣಿಗೆ ಅತೀ ಅಗತ್ಯವಾಗಿ ಆಗಬೇಕಿದೆ.

Climate Changes now increasing in various countries including India. Due to this, many problems have started in Agriculture Sector. This is why various countries including India are making many efforts to improve the climate. Due to climate change, food security and agricultural system are also affected.

Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡುಗೆಯ ಕಚ್ಚಾ ಎಣ್ಣೆಯ ಮೇಲಿನ ಆಮದು ಸುಂಕ ಕಡಿತ | ತೆಂಗಿಗಿಲ್ಲ ಆತಂಕ.. | ಧಾರಣೆ ಇಳಿಕೆಯ ಆತಂಕವಿಲ್ಲ |
June 4, 2025
11:06 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಅರಣ್ಯದ ಬಗ್ಗೆ ಹೊಸ ಪ್ರಜ್ಞೆಯನ್ನು ಜನರು ಜಾಗೃತಗೊಳಿಸಬೇಕು
June 4, 2025
7:27 AM
by: The Rural Mirror ಸುದ್ದಿಜಾಲ
ಒಂದು ಕ್ರೀಡಾ ಗೆಲುವಿಗೆ ಅಷ್ಟು ಅತಿರೇಕದ ಪ್ರತಿಕ್ರಿಯೆ ಒಳ್ಳೆಯ ಲಕ್ಷಣವಲ್ಲ……
June 4, 2025
7:21 AM
by: ವಿವೇಕಾನಂದ ಎಚ್‌ ಕೆ
ಸೂರ್ಯ-ಶನಿಯಿಂದ ಶಕ್ತಿಶಾಲಿ ಪಂಚಮಿ ಯೋಗ.. | ಏನಿದು ಯೋಗ..? ಯಾವ ರಾಶಿಗೆ ವಿಶೇಷವಾದ ಅನುಕೂಲ..?
June 4, 2025
6:45 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group