Advertisement
The Rural Mirror ವಾರದ ವಿಶೇಷ

ಹವಾಮಾನ ಬದಲಾವಣೆ | ಇತ್ತೀಚೆಗಿನ ಅಧ್ಯಯನ ಅಪಾಯದ ಮುನ್ಸೂಚನೆ ತಿಳಿಸಿದೆ | ಕಾಡಿನ ಒಳಗಿನ ಸಮಸ್ಯೆ ಏನಾಗುತ್ತಿದೆ..?

Share

ಹವಾಮಾನ ಬದಲಾವಣೆಯ ಬಗ್ಗೆ ಸಾಕಷ್ಟು ಆತಂಕ ಎಲ್ಲೆಡೆಯೂ ಕೇಳಿಬರುತ್ತಿದೆ. ಇಡೀ ಪ್ರಪಂಚವೇ ಈ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದೆ. ಈ ಬಗ್ಗೆ ಈಚೆಗೆ ನಡೆಸಿದ ಅಧ್ಯಯನ ವರದಿಯು ಆತಂಕವನ್ನು ಹೊರಹಾಕಿದೆ. ವಿಜ್ಞಾನಿಗಳು ಹೇಳುವಂತೆ ಈಗಿನ ಪುರಾವೆಗಳು, ಜಾಗತಿಕ ತಾಪಮಾನದ ಮತ್ತಷ್ಟು ಏರಿಕೆಯ ಸೂಚನೆ ತೋರಿಸುತ್ತವೆ ಮತ್ತು ಅದರ ಪರಿಣಾಮಗಳು ನಿರೀಕ್ಷೆಗಿಂತ ವೇಗವಾಗಿ ಬೆಳೆಯುತ್ತಿದೆ. ಕಾಡುಗಳಲ್ಲಿ ತನ್ನದೇ ಆದ ಮರಗಳನ್ನು ತಣಿಸಲು ಸಾಕಷ್ಟು ತೇವಾಂಶವನ್ನು ಉತ್ಪಾದಿಸಲು ಕಾಡಿನೊಳಗೆ ಸಾಧ್ಯವಾಗುತ್ತಿಲ್ಲ. ಇದೇ ರೀತಿ ಅರಣ್ಯ ನಾಶ, ಮಾಲಿನ್ಯಗಳು ಹೆಚ್ಚಿದರೆ ಪರಿಸರ ಭವಿಷ್ಯದ ಬಗ್ಗೆ ಆತಂಕವನ್ನು ವಿಜ್ಞಾನಿಗಳು ಹೊರಹಾಕಿದ್ದಾರೆ.…..ಮುಂದೆ ಓದಿ….

Advertisement
Advertisement
Advertisement
Advertisement

ಹವಾಮಾನ ಬದಲಾವಣೆಯ ಬಗ್ಗೆ ಇತ್ತೀಚೆಗೆ ಗಂಭೀರವಾಗಿ ವಿಜ್ಞಾನಿಗಳ ತಂಡವು ಅಧ್ಯಯನ ಮಾಡುತ್ತಿದೆ. ಈಗಾಗಲೇ ಪ್ರಪಂಚದ ತಾಪಮಾನವು 1.5 ಡಿಗ್ರಿಯಷ್ಟು ಏರಿಕೆಯಾಗಿದೆ. ಅಂದರೆ, ಕೈಗಾರಿಕೆಗಳು ವೇಗ ಪಡೆಯುವ ಪೂರ್ವದಲ್ಲಿನ ಸರಾಸರಿ ತಾಪಮಾನಕ್ಕಿಂತ 1.5 ಡಿಗ್ರಿ ಏರಿಕೆಯಾಗಿದೆ. 2024 ರಲ್ಲಿ ಜಾಗತಿಕ ತಾಪಮಾನ , ಹವಾಮಾನ ಬದಲಾವಣೆಯನ್ನು ನಿಯಂತ್ರಣ ಮಾಡುವ ಪ್ರಯತ್ನಗಳ ಬಗ್ಗೆ ಒತ್ತಡ ಹೆಚ್ಚಿದೆ. ಈ ವಿದ್ಯಮಾನವು  ಮತ್ತಷ್ಟು ಅಧ್ಯಯನಕ್ಕೆ ಕಾರಣವಾಯಿತು. ಈಗ  ವಿಜ್ಞಾನಿಗಳು ಹೇಳುವಂತೆ , ಇದುವರೆಗಿನ ಸಾಕ್ಷಿಗಳ ಪ್ರಕಾರ, ಜಾಗತಿಕ ತಾಪಮಾನ ಏರಿಕೆಯನ್ನು ತೋರಿಸುತ್ತವೆ ಮತ್ತು ಅದರ ಪರಿಣಾಮಗಳು ನಿರೀಕ್ಷೆಗಿಂತ ವೇಗವಾಗಿ ಹಬ್ಬುತ್ತಿದೆ. ಹೀಗಾಗಿ ದಿನದಿಂದ ದಿನಕ್ಕೆ ಹವಾಮಾನ ಬದಲಾವಣೆ ಕಾಣುತ್ತಿದೆ. ಇದು ಒಂದು ನಿರ್ಣಾಯಕ ಮಿತಿಯನ್ನು ಮೀರಿ ಬದಲಾಯಿಸಲಾಗದ ಮತ್ತು ತೀವ್ರವಾದ ಹವಾಮಾನ ಬದಲಾವಣೆಯ ಅಪಾಯದಲ್ಲಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

Advertisement

ಸಾಗರದಲ್ಲಿ ಹೆಚ್ಚಾಗುತ್ತಿರುವ ಉಷ್ಣತೆಯು ಪ್ರಬಲವಾದ ಅಟ್ಲಾಂಟಿಕ್ ಚಂಡಮಾರುತಗಳಿಗೆ ಉತ್ತೇಜನ ನೀಡುವುದಲ್ಲದೆ, ಚಂಡಮಾರುತಗಳು ಹೆಚ್ಚು ವೇಗವಾಗಿ ತೀವ್ರಗೊಳ್ಳಲು ಕಾರಣವಾಗುತ್ತವೆ. ಕೆಲವು ಬಾರಿ ವಾಯುಭಾರ ಕುಸಿತವೂ ಕೆಲವೇ ಗಂಟೆಗಳಲ್ಲಿ ಚಂಡಮಾರುತಕ್ಕೆ ತಿರುಗುತ್ತವೆ. ಅಕ್ಟೋಬರ್ 2024 ರಲ್ಲಿ, ಫ್ಲೋರಿಡಾದ ಪಶ್ಚಿಮ ಕರಾವಳಿಯನ್ನು ಅಪ್ಪಳಿಸುವ ಉಷ್ಣವಲಯದ ಚಂಡಮಾರುತದಿಂದ ಗಲ್ಫ್‌ನ ಎರಡನೇ ಅತ್ಯಂತ ಶಕ್ತಿಶಾಲಿ ಚಂಡಮಾರುತಕ್ಕೆ ತಿರುಗಿತು.  ಗಲ್ಫ್ ಆಫ್ ಮೆಕ್ಸಿಕೋದಲ್ಲಿ ಮಿಲ್ಟನ್ ಚಂಡಮಾರುತಕ್ಕೆ ಕೇವಲ ಒಂದು ದಿನ ಮಾತ್ರ ಬೇಕಾಗಿತ್ತು. ಬೆಚ್ಚಗಿನ ಗಾಳಿಯು ಹೆಚ್ಚು ತೇವಾಂಶವನ್ನು ಹಿಡಿದಿಟ್ಟುಕೊಳ್ಳುತ್ತದೆ, ಅವು ಬಿರುಗಾಳಿಗಳು ಒಯ್ಯಲು ಸಹಾಯ ಮಾಡುತ್ತದೆ . ಅದು ಹೆಚ್ಚಿನ ಮಳೆಯನ್ನು ಉಂಟು ಮಾಡುತ್ತವೆ.

ಜಾಗತಿಕ ತಾಪಮಾನ ಏರಿಕೆಯು  ಕಾಡುಗಳಿಂದ ತೇವಾಂಶವನ್ನು ಕಡಿಮೆ ಮಾಡುತ್ತದೆ. ಯುಎಸ್ ಪಶ್ಚಿಮ ಮತ್ತು ಕೆನಡಾದಿಂದ ದಕ್ಷಿಣ ಯುರೋಪ್ ಮತ್ತು ರಷ್ಯಾದ ದೂರದ ಪೂರ್ವದವರೆಗೆ ದೊಡ್ಡ ಮತ್ತು ಬಿಸಿಯಾದ ಕಾಳ್ಗಿಚ್ಚುಗಳಿಗೆ ಕಾರಣವಾಗುತ್ತದೆ. ಅಕ್ಟೋಬರ್‌ನಲ್ಲಿ ನೇಚರ್ ಕ್ಲೈಮೇಟ್ ಚೇಂಜ್‌ನಲ್ಲಿ ಪ್ರಕಟವಾದ ಸಂಶೋಧನೆಯು, 2010 ರಲ್ಲಿನ  ಕಾಳ್ಗಿಚ್ಚಿನ ಹೊಗೆಯೂ ಹವಾಮಾನ ಪರಿಣಾಮಕ್ಕೆ ಕಾರಣವೆಂದು ಲೆಕ್ಕಹಾಕಿದೆ. ಹೀಗಾಗಿ ಕಾಡಿನಲ್ಲಿ ಹೊತ್ತಿಕೊಳ್ಳುವ ಬೆಂಕಿಯೂ ಹವಾಮಾನ ಬದಲಾವಣೆಗೆ ಕಾರಣವಾಗುತ್ತಿದೆ.

Advertisement

ಜುಲೈ 2024 ರ ಅಧ್ಯಯನವು, ಕಾಳ್ಗಿಚ್ಚುಗಳಿಂದಾಗಿ ಹಿಂದೆ ಇದ್ದಂತೆ ವಾತಾವರಣದಿಂದ ಹೆಚ್ಚು ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಳ್ಳಲುಈಗ ಕಾಡುಗಳು  ವಿಫಲವಾಗಿವೆ ಎಂದು ಕಂಡುಹಿಡಿದಿದೆ. ಅಂದರೆ ದಾಖಲೆ ಪ್ರಮಾಣದ ಕಾರ್ಬನ್‌ ಡೈ ಆಕ್ಸೈಡ್ ವಾತಾವರಣವನ್ನು ಪ್ರವೇಶಿಸಿತು, ಇದು ಕೂಡಾ ಹವಾಮಾನದ ಮೇಲೆ ಪರಿಣಾಮ ಬೀರುತ್ತಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ದೆಹಲಿ ಚುನಾವಣೆ “ರಾಜಕೀಯ ಅಹಂಕಾರ”ಕ್ಕೆ ಉತ್ತರ | ರಚನಾತ್ಮಕ ವಿಪಕ್ಷವಾಗಿ ಕೆಲಸ ಮಾಡಬಹುದೇ ಎಎಪಿ..?

ಒಂದು ಹೋರಾಟದಿಂದ ರಾಜಕೀಯ ಪಕ್ಷವಾಗಿ ವೇಗವಾಗಿ ಬೆಳೆದಿರುವ ಆಮ್‌ ಆದ್ಮಿಪಕ್ಷ ಕೇವಲ 13…

4 hours ago

ದುಬೈಯಿಂದ ಅಡಿಕೆ ಕಳ್ಳಸಾಗಾಣಿಕೆ ದಂಧೆ | 1.47 ಕೋಟಿ ರೂಪಾಯಿ ಮೌಲ್ಯದ ಅಡಿಕೆ ವಶಕ್ಕೆ | 6 ಮಂದಿ ಬಂಧನ |

ದುಬೈಯಿಂದ ಒಣಖರ್ಜೂರ ಹೆಸರಿನಲ್ಲಿ ಅಡಿಕೆ ಕಳ್ಳಸಾಗಾಣಿಕೆಯ ಮತ್ತೊಂದು ಪ್ರಕರಣವನ್ನು ಡಿಆರ್‌ಐ ಪತ್ತೆ ಮಾಡಿದೆ.26.32…

6 hours ago

ಮುಳಬಾಗಿಲು ತಾಲೂಕಿನ ಎಲ್ಲಾ ಕೆರೆಗಳ ಒತ್ತುವರಿ ತೆರವು

ಹಸಿರು ನ್ಯಾಯಾಧೀಕರಣ ಆದೇಶ ಹಾಗೂ ಜಿಲ್ಲಾಧಿಕಾರಿ ಸೂಚನೆಯಂತೆ ಮುಳಬಾಗಿಲು ತಾಲೂಕಿನ ಎಲ್ಲಾ ಕೆರೆಗಳ…

18 hours ago

ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವಂತೆ ಒತ್ತಾಯಿಸಿ ಕಳಸ ಬಂದ್ |

ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವಂತೆ ಒತ್ತಾಯಿಸಿ  ಚಿಕ್ಕಮಗಳೂರು ಜಿಲ್ಲೆಯ ಕಳಸ ಪಟ್ಟಣದಲ್ಲಿ ಅಂಗಡಿ-ಮುಂಗಟ್ಟುಗಳನ್ನು…

18 hours ago

ಗ್ರಾಮೀಣ ಮಹಿಳೆಯರ ಸಶಕ್ತೀಕರಣ, ಡ್ರೋನ್ ದೀದಿ ನೆರವು | ಈವರೆಗೂ 500 ಡ್ರೋನ್ ಗಳ ವಿತರಣೆ

ಭವಿಷ್ಯದಲ್ಲಿ ದೇಶದ 6 ಲಕ್ಷ ಗ್ರಾಮಗಳಿಗೆ ತಲಾ 10 ಡ್ರೋಣ್ ಗಳನ್ನು ವಿತರಿಸುವ…

18 hours ago

ಮಹಿಳೆಯರಲ್ಲಿ ಗರ್ಭಕಂಠ ಕ್ಯಾನ್ಸರ್ ಪ್ರಕರಣಗಳು ಗಣನೀಯವಾಗಿ ಹೆಚ್ಚಳ

ಮಹಿಳೆಯರಲ್ಲಿ ಗರ್ಭಕಂಠ ಕ್ಯಾನ್ಸರ್ ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾಗುತ್ತಿದ್ದು, ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ, 30…

18 hours ago