Advertisement
MIRROR FOCUS

ಹವಾಮಾನ ಬದಲಾವಣೆಯು ಭವಿಷ್ಯದಲ್ಲಿ ಬಹುದೊಡ್ಡ ಆರ್ಥಿಕ ಪರಿಣಾಮ ಬೀರಲಿದೆ..! |

Share

ಹವಾಮಾನ ಬದಲಾವಣೆಯು ಪ್ರಪಂಚದಲ್ಲಿ ಬಹುದೊಡ್ಡ ಆರ್ಥಿಕವಾದ ಹೊಡೆತವು ಮುಂದಿನ 25 ವರ್ಷದಲ್ಲಿ ನೀಡಲಿದೆ ಎಂದು ಅಧ್ಯಯನವೊಂದು ಹೇಳಿದೆ.

Advertisement
Advertisement

ಹವಾಮಾನ ಬದಲಾವಣೆಯು ಮುಂದಿನ 25 ವರ್ಷಗಳಲ್ಲಿ ಭವಿಷ್ಯದ ಜಾಗತಿಕ ಆದಾಯವನ್ನು ಸುಮಾರು 20 ಶೇಕಡಾ ಕಡಿಮೆ ಮಾಡುತ್ತದೆ. ಜರ್ಮನಿಯ ಪಾಟ್ಸ್‌ಡ್ಯಾಮ್ ಇನ್‌ಸ್ಟಿಟ್ಯೂಟ್ ಫಾರ್ ಕ್ಲೈಮೇಟ್ ಇಂಪ್ಯಾಕ್ಟ್ ರಿಸರ್ಚ್‌ನ ಸಂಶೋಧಕರು ನೇಚರ್ ಜರ್ನಲ್‌ನಲ್ಲಿ ಪ್ರಕಟಿಸಿದ ಅಧ್ಯಯನ ವರದಿಯ ಪ್ರಕಾರ, ಹವಾಮಾನ ಬದಲಾವಣೆಯ ಆರ್ಥಿಕ ಕಡಿತವು 2049 ರ ವೇಳೆಗೆ ವರ್ಷಕ್ಕೆ ಸುಮಾರು $38 ಟ್ರಿಲಿಯನ್‌ಗೆ ತಲುಪಬಹುದು.

Advertisement

“ಹವಾಮಾನ ಬದಲಾವಣೆಯು ಮುಂದಿನ 25 ವರ್ಷಗಳಲ್ಲಿ ಪ್ರಪಂಚದಾದ್ಯಂತದ ಬಹುತೇಕ ಎಲ್ಲಾ ದೇಶಗಳಲ್ಲಿ ಭಾರಿ ಆರ್ಥಿಕ ಹಾನಿಯನ್ನು ಉಂಟುಮಾಡುತ್ತದೆ ಎಂದು ವಿಶ್ಲೇಷಣೆ ಹೇಳುತ್ತದೆ. ಜರ್ಮನಿ ಮತ್ತು ಯುಎಸ್‌ನಂತಹ ಹೆಚ್ಚು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ 11% ಮತ್ತು ಫ್ರಾನ್ಸ್‌ನ ಸರಾಸರಿ ಆದಾಯ ಕಡಿತ 13% ಇರಬಹುದು ಎಂದು ಅಧ್ಯಯನದ ಸಹ-ಲೇಖಕಿ, ಹವಾಮಾನ ವಿಜ್ಞಾನಿ ಲಿಯೋನಿ ವೆನ್ಜ್ ಹೇಳಿದ್ದಾರೆ.

ಕಳೆದ ಹನ್ನೆರಡು ವರ್ಷಗಳಿಂದ, ವಿಜ್ಞಾನಿಗಳು ಮತ್ತು ಇತರರು ಹೀಟ್‌ವೇವ್, ಪ್ರವಾಹಗಳು, ಬರಗಳು, ಚಂಡಮಾರುತಗಳು ಅತಿ ದೊಡ್ಡ ಹವಾಮಾನ ಪ್ರಭಾವ‌ದ ಮೇಲೆ ಕೇಂದ್ರೀಕರಿಸಿ ಅಧ್ಯಯನ ನಡೆಸಿದ್ದರು. ಆರ್ಥಿಕ ಹೊಡೆತಕ್ಕೂ ಕಾರಣ ನೀಡಿದ ಸಂಶೋಧಕರು,  ಮುಖ್ಯವಾಗಿ ಸರಾಸರಿ ತಾಪಮಾನ ಏರಿಕೆಯಿಂದಲೇ ಹೆಚ್ಚಿನ ಹಾನಿಗಳು ನಡೆಯುತ್ತವೆ. ಪ್ರಮುಖವಾಗಿ ಬೆಳೆಗಳಿಗೆ ಹಾನಿ ಮಾಡುತ್ತದೆ ಮತ್ತು ಕಾರ್ಮಿಕರಿಗೆ, ಸಾಮಾನ್ಯ ಜನರಿಗೆ ಸಂಬಂಧಿಸಿದ್ದಾಗಿರುತ್ತದೆ ಎಂದು ವರದಿಯಲ್ಲಿ ಹೇಳಿದ್ದಾರೆ.

Advertisement

ವಿಶ್ವದ ಬಡ ದೇಶಗಳು ಶ್ರೀಮಂತ ದೇಶಗಳಿಗಿಂತ 61% ದೊಡ್ಡ ಆದಾಯ ನಷ್ಟವನ್ನು ಅನುಭವಿಸುತ್ತವೆ ಎಂದು ಅಧ್ಯಯನವು ಲೆಕ್ಕಾಚಾರ ಮಾಡಿದೆ. ಬಡ ದೇಶಗಳು ಹೆಚ್ಚು ಪ್ರಮಾಣದ ನಷ್ಟವನ್ನು ಹವಾಮಾನದ ವೈಪರೀತ್ಯದ ಕಾರಣದಿಂದ ಅನುಭವಿಸುತ್ತಿವೆ. ಉತ್ಪಾದನೆ, ಉತ್ಪಾದಕತೆ ಎರಡೂ ಇಳಿಕೆಯಾಗುತ್ತಿದೆ.

ಹವಾಮಾನ ಬದಲಾವಣೆಯು ನಿಧಾನಪ್ರಕ್ರಿಯೆಯಲ್ಲ. ಅವು ತಕ್ಷಣವೇ ಗೋಚರವಾಗುತ್ತದೆ, ಪರಿಣಾಮಗಳು ನಿಧಾನವಾಗಿವೆ. ತಾಪಮಾನ ಹೆಚ್ಚಾದಂತೆಯೇ ಅದರ ನಿಯಂತ್ರಣದ ಮೇಲೆ ಕ್ರಮ ಕೈಗೊಳ್ಳದೇ ಹೋದರೆ ಅಪಾಯವೂ ಹೆಚ್ಚಾಗಲಿದೆ ಎಂದು ಪರಿಸರ ಅಧ್ಯಯನದ ಪ್ರಮುಖರು ಹೇಳಿದ್ದಾರೆ. ಅದಕ್ಕಾಗಿಯೇ ಈಗ ಹವಾಮಾನ ಬದಲಾವಣೆಯ ನಿಯಂತ್ರಣದ ಕಡೆಗೆ ಹೋರಾಡುವುದು ಇಂದಿನ ಅತೀ ತುರ್ತಿನ ಕೆಲಸವಾಗಿದೆ ಎಂದು ಅಧ್ಯಯನಕಾರರು ಎಚ್ಚರಿಸಿದ್ದಾರೆ.

Advertisement

Source :AP

Climate change is projected to have far-reaching economic consequences in the next 25 years. From increased natural disasters to decreased agricultural productivity, the financial toll of climate change is expected to be substantial. A recent report by the World Bank estimates that the global economy could shrink by as much as 5% by 2050 if no action is taken to mitigate climate change. Furthermore, developing countries are likely to be hit the hardest, as they often lack the resources to adapt to changing environmental conditions. It is imperative that world leaders take swift and decisive action to address climate change and protect the global economy from its devastating effects.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 04-07-2024 | ಕರಾವಳಿ ಜಿಲ್ಲೆಗಳಾದ್ಯಂತ ಮಳೆ | ಜು.9 ರಿಂದ ರಾಜ್ಯದಲ್ಲೂ ಮಳೆಯ ಕ್ಷೀಣಿಸುವ ಸಾಧ್ಯತೆ |

ಜುಲೈ 5ರ ನಂತರ ದುರ್ಬಲಗೊಂಡು ಸಾಂಪ್ರದಾಯಿಕ ಮುಂಗಾರು ಮಾರುತಗಳು ಬಲಗೊಳ್ಳುವ ಲಕ್ಷಣಗಳಿವೆ. ಜುಲೈ…

3 mins ago

ತಾತ್ಕಾಲಿಕವಾಗಿ ಸ್ಥಗಿತಗೊಂಡ ಕೇಂದ್ರ ಸರ್ಕಾರದ ಭಾರತ್‌ ರೈಸ್‌ ಮಾರಾಟ : ಭತ್ತದ ಉತ್ಪಾದನೆ ಕುಂಠಿತ : ಹೊಸ ನೀತಿ ಜಾರಿಗೆ ತರಲು ಚಿಂತನೆ

ಭತ್ತ ಬೆಳೆಯುವವರ(Paddy crop) ಸಂಖ್ಯೆ ಕಡಿಮೆಯಾಗಿದೆ. ಅಕ್ಕಿ ರೇಟ್‌(Rice rate) ಗಗನಕ್ಕೇರಿದೆ. ಹೀಗೆ…

52 mins ago

ಮಂಗಳೂರಿಗೆ ತನ್ನದೇ ಆದ ರೈಲ್ವೆ ವಿಭಾಗದ ಅಗತ್ಯವಿದೆ : ಸಂಪರ್ಕ ಮತ್ತು ಅಭಿವೃದ್ಧಿಯನ್ನು ಹೆಚ್ಚಿಸುವ ಕಾರಣಕ್ಕಾಗಿ ಈ ಕೆಲಸ ಮಾಡಿ

ಮಂಗಳೂರು(Mangaluru) ತನ್ನ ಹಲವಾರು ಧಾರ್ಮಿಕ ಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ(Kukke subrahmanya), ಶ್ರೀ ಕ್ಷೇತ್ರ…

1 hour ago

ಮರಳಿ ಮರುಕಳಿಸಲಿದೆ ಬಿದಿರಿನ ವೈಭವ : ಬೆಂಗಳೂರಿನಲ್ಲಿ ನಿರ್ಮಾಣವಾಗಲಿದೆ ದೇಶದ ಮೊದಲ ಬ್ಯಾಂಬೂ ಬಜಾರ್‌ ಮೆಟ್ರೋ ನಿಲ್ದಾಣ

ಸಿಮೆಂಟ್‌ - ಕಬ್ಬಿಣ(cement- Iron) ಬಂದ ಮೇಲೆ ಮೂಲೆ ಗುಂಪಾಗಿದ್ದ ಬಿದಿರಿಗೆ(Bamboo) ಇತ್ತೀಚೆಗೆ…

1 hour ago

ಹಲವು ವಿಶೇಷ ದಿನಗಳ ಆಷಾಡ ಮಾಸ : ದೇವರ ಕೃಪೆಗೆ ಪಾತ್ರರಾಗಲು ಹೆಚ್ಚು ಮಹತ್ವ ಇರುವ ಮಾಸ

ಹಿಂದೂ ಧರ್ಮದ ನಾಲ್ಕನೇಯ ಮಾಸವನ್ನು ಆಷಾಢ ಮಾಸ(Ashada Masa) ಎಂದು ಕರೆಯಲಾಗುತ್ತದೆ. ಈ…

2 hours ago

ನಾವು ಮತ್ತು ಅವರು….. : ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ ಮನಸ್ಸುಗಳ ಅಂತರಂಗದ ಚಳವಳಿ

ಅಧಿಕಾರದಲ್ಲಿ(Powerfull) ಇರುವವರ ಆಲೋಚನೆಗಳೇ ಬೇರೆ, ಕೆಲಸವಿಲ್ಲದ ನಮ್ಮಂತವರ(Common people) ಯೋಚನೆಗಳೇ ಬೇರೆ..... ಪ್ರಾಮಾಣಿಕವಾಗಿರಬೇಕು,…

3 hours ago