ಕೃಷಿಯ ಮೇಲೆ ಹೆಚ್ಚುತ್ತಿರುವ ಹವಾಮಾನ ಬದಲಾವಣೆಯ ಪರಿಣಾಮ | ನಮಗೆ ಹವಾಮಾನ ನಿರೋಧಕ ಕೃಷಿ ಏಕೆ ಬೇಕು?

October 8, 2022
9:11 PM

ಜಾಗತಿಕವಾದ ಹವಾಮಾನ ಬದಲಾವಣೆ ಪರಿಣಾಮಗಳು ಈಚೆಗೆ ಗಂಭೀರವಾಗುತ್ತಿದೆ. ಎಲ್ಲಾ ಕೃಷಿಯ ಮೇಲೂ ಪರಿಣಾಮ ಬೀರುತ್ತಿದೆ. ತೋಟಗಾರಿಕಾ ಬೆಳೆಗಳ ಮೇಲೆ  ಹೆಚ್ಚಾಗಿ ಪರಿಣಾಮ ಬೀರಿದರೆ , ಅದರ ನಂತರ ಆಹಾರ ಧಾನ್ಯದ ಕೃಷಿಯ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಜಾಗತಿಕ ಆಹಾರ ಪೂರೈಕೆಯ ಮೇಲೆ ಹವಾಮಾನ ಬದಲಾವಣೆಯ ಪರಿಣಾಮ ಈಗ ಗಂಭೀರ ವಿಷಯವಾಗಿದೆ. ಹೀಗಾಗಿ ಈಗ ಹವಾಮಾನ ಬದಲಾವಣೆಯ ನಿರೋಧಕ ಕೃಷಿಯ ಬಗ್ಗೆ ಹೆಚ್ಚು ಚರ್ಚೆ ಆರಂಭವಾಗಿದೆ.

Advertisement
Advertisement

ಜಾಗತಿಕವಾಗಿ ಈಗ ಹವಾಮಾನ ಬದಲಾವಣೆಯ ಬಗ್ಗೆ ಚರ್ಚೆ ಆರಂಭವಾಗಿದೆ. ನಗರ ಪ್ರದೇಶಗಳಿಗಿಂತಲೂ ಗ್ರಾಮೀಣ ಭಾಗಗಳಲ್ಲಿ ಹವಾಮಾನ ಬದಲಾವಣೆಯ ಪರಿಣಾಮ ಗಂಭೀರ ಸ್ಥಿತಿಗೆ ಬರುತ್ತಿದೆ. ಮಳೆ ದೂರವಾಗಬೇಕಾದ ಕಾಲದಲ್ಲಿ ಭಾರೀ ಮಳೆ, ಗಾಳಿಯ ಅಬ್ಬರಗಳು, ವಿಪರೀತ ಬಿಸಿಲು, ನೀರಿನ ಕೊರತೆ ಇದೆಲ್ಲಾ ಕಾರಣಗಳಿಂದ ಕೃಷಿಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದೆ. ಈಚೆಗೆ ಭಾರೀ ಮಳೆ ಹಾಗೂ ಭಾರೀ ಬಿಸಿಲು ಎಲ್ಲಾ ಕೃಷಿಗೂ ಸಮಸ್ಯೆಯಾಗಿದೆ. ಕರ್ನಾಟಕದಲ್ಲಿ ಭಾರೀ ಬಿಸಿಲು ಈಗ ಬಹುದೊಡ್ಡ ಸಮಸ್ಯೆಯಾಗುತ್ತಿದೆ. ಇಡೀ ದೇಶದಲ್ಲೂ ಇದೇ ಸಮಸ್ಯೆ ಇದೆ. ಈ ಕಾರಣದಿಂದಲೇ ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಕಳೆದ ದಶಕಗಳಲ್ಲಿ ವಿಶ್ವ ನಾಯಕರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಗಳಲ್ಲಿ ಚರ್ಚೆಗಳ ಭಾಗವಾಗಿದೆ. ಆದರೆ ಇದು ಇನ್ನೂ ಎಲ್ಲರಲ್ಲೂ ಗಂಭೀರವಾದ ಎಚ್ಚರಿಕೆಯನ್ನು ಉಂಟು ಮಾಡಿಲ್ಲ.

ಇದೀಗ , ಹವಾಮಾನ ಬದಲಾವಣೆಯ ಕಾರಣದಿಂದ ಕೃಷಿಯು  ದುರ್ಬಲವಾಗುತ್ತಿದೆ. ಭಾರತದಲ್ಲೂ ಈ ಬಗ್ಗೆ ಗಂಭೀರವಾದ ಚಿಂತನೆ ಆರಂಭವಾಗಿದೆ. ಅಧ್ಯಯನದ ಪ್ರಕಾರ 2050 ರ ವೇಳೆಗೆ ಮಳೆಯಾಶ್ರಿತ ಅಕ್ಕಿಯ ಇಳುವರಿ ಶೇಕಡ 2.5  ಮತ್ತು ನೀರಾವರಿ ಅಕ್ಕಿಯ ಇಳುವರಿಯು ಶೇ.7 ರಷ್ಟು ಕಡಿಮೆಯಾಗುತ್ತದೆ ಎಂದು ಅಂದಾಜಿಸಿದೆ. 2100 ರ ವೇಳೆಗೆ ಗೋಧಿ ಮತ್ತು ಜೋಳದ ಇಳುವರಿಗಳ ಸಂಖ್ಯೆಗಳು ಕ್ರಮವಾಗಿ 6-25 ಪ್ರತಿಶತ ಮತ್ತು 18-23 ಪ್ರತಿಶತದಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ.  ಹವಾಮಾನ ಬದಲಾವಣೆಯ ಪರಿಣಾಮಗಳಿಂದ ತೋಟಗಾರಿಕಾ ಬೆಳೆಗಳೂ ಅಪಾಯದಲ್ಲಿದೆ. ಅನಿರೀಕ್ಷಿತವಾಗಿ ಹೆಚ್ಚಿನ ತಾಪಮಾನ ಮತ್ತು ಮಳೆಯ ಕಾರಣಗಳಿಂದ ಹಣ್ಣುಗಳು ಮತ್ತು ತರಕಾರಿಗಳ ಉತ್ಪಾದಕತೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಅಡಿಕೆ, ರಬ್ಬರ್‌ ಮೇಲೆಯೂ ಗಂಭೀರವಾದ ಪರಿಣಾಮ ಉಂಟಾಗುತ್ತದೆ. ತಾಪಮಾನ ಹೆಚ್ಚಳದ ಕಾರಣದಿಂದ ಕೆಲವು ಬೆಳೆಗಳು ವೇಗವಾಗಿ ಹಣ್ಣಾಗಲು ಕಾರಣವಾಗಬಹುದು, ಪರಾಗಸ್ಪರ್ಶದ ಮೇಲೂ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಅಡಿಕೆಯಂತಹ ಬೆಳೆಗಳಲ್ಲಿ ಕಾಯಿ ಕಟ್ಟದೇ ಇರಬಹುದು. ದ್ರಾಕ್ಷಿ,  ಕಲ್ಲಂಗಡಿಗಳಂತಹ ಹಣ್ಣುಗಳು ಬೇಗನೆ ಹಣ್ಣಾದರೆ, ಹೆಚ್ಚಿನ ತಾಪಮಾನ ಮತ್ತು ತೇವಾಂಶದ ಒತ್ತಡವು  ಕೆಲವು ಹಣ್ಣಗಳನ್ನು ಹಾಳು ಮಾಡುತ್ತದೆ. ರಬ್ಬರ್‌ ನಂತಹ ಕೃಷಿಯಲ್ಲಿ ಇಳುವರಿ ಕಡಿಮೆಯಾಗುತ್ತದೆ. ಭಾರತವು ಪ್ರಪಂಚದಲ್ಲಿ ಹಣ್ಣುಗಳು ಮತ್ತು ತರಕಾರಿಗಳ 2 ನೇ ಅತಿದೊಡ್ಡ ಉತ್ಪಾದಕನಾಗಿರುವುದರಿಂದ, ಹವಾಮಾನ ಬದಲಾವಣೆಯ ಸಮಸ್ಯೆಯನ್ನು ಈಗಲೇ ಗಮನಿಸದಿದ್ದರೆ ನಮ್ಮ ಕೃಷಿ ಆರ್ಥಿಕತೆಯು ಕುಸಿಯುವ ಅಪಾಯವಿದೆ ಎಂದು ವರದಿ ಹೇಳಿದೆ.

ಈಗ ನಮಗೆ ಹವಾಮಾನ-ನಿರೋಧಕ ಕೃಷಿ ಅಥವಾ ಹವಾಮಾನ ಬದಲಾವಣೆ ಒಗ್ಗಿಕೊಳ್ಳುವ ಕೃಷಿಯ ಅಗತ್ಯವಿದೆ.ಜಾಗತಿಕ ತಾಪಮಾನ ಏರಿಕೆಯು ದೀರ್ಘಾವಧಿಯ  ಪರಿಣಾಮಗಳನ್ನು ಉಂಟುಮಾಡುತ್ತದೆ. ಪ್ರಸ್ತುತ ಅಂತಹ ದೊಡ್ಡ ಪರಿಣಾಮಗಳು ಇಲ್ಲದೇ ಇರಬಹುದು, ಆದರೆ  ಮುಂಬರುವ ದಿನಗಳಲ್ಲಿ ಹವಾಮಾನ ವೈಪರೀತ್ಯವೇ ಕೃಷಿಗೆ ಬಹುದೊಡ್ಡ ಸಮಸ್ಯೆಯಾಗಬಹುದು. ಅದರಲ್ಲಿ ಆಹಾರ ಭದ್ರತೆಯೂ ಒಂದು. ಆಹಾರ ಭದ್ರತೆಯು ಈಗ  ಜಾಗತಿಕ ಕಾಳಜಿಯಾಗಿದೆ. ಹೀಗಾಗಿ ಈ ಬದಲಾವಣೆ ನಿಯಂತ್ರಣಕ್ಕೆ  ಸಂಘಟಿತ ಪ್ರಯತ್ನ ಅಗತ್ಯ ಇದೆ. ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸಲು ಅಥವಾ ತಗ್ಗಿಸಲು ಕೃಷಿ ಕಾರ್ಯಾಚರಣೆಗಳ ಮೇಲೆ ಪ್ರಮುಖ ನಿರ್ಧಾರಗಳ ಅಗತ್ಯ ಇದೆ. ಇದರ ಜೊತೆಗೆ ವಿಜ್ಞಾನ, ತಂತ್ರಜ್ಞಾನದ ಬಳಕೆಯ ಕಾರಣದಿಂದ ಕೃಷಿಯ ಉತ್ಪಾದನೆಯಲ್ಲಿ ಹೆಚ್ಚಿನ ಗುಣಮಟ್ಟ ಮತ್ತು ಇಳುವರಿ ಪ್ರಮಾಣ ಹೆಚ್ಚು ಮಾಡುವುದು ಮತ್ತು  ರಸಗೊಬ್ಬರಗಳು ಮತ್ತು ಕೀಟನಾಶಕಗಳ ಕಡಿಮೆ ಬಳಕೆಯ ಮೂಲಕ ಪರಿಸರದ ಮೇಲೆ ಕೃಷಿಯ ಒಟ್ಟಾರೆ ಪರಿಣಾಮವನ್ನು ಕಡಿಮೆ ಮಾಡಬೇಕು, ಇದು  ಅನಿಲಗಳ  ಹೊರಸೂಸುವಿಕೆ  ಕಡಿಮೆ ಮಾಡಿ ಮಣ್ಣು ಮತ್ತು ಜಲಮೂಲಗಳ ರಕ್ಷಣೆಗೂ ಕಾರಣವಾಗುತ್ತದೆ ಎನ್ನುವುದು  ಸಲಹೆಯಾಗಿದೆ.

ಹವಾಮಾನ ಬದಲಾವಣೆಯು ಒಬ್ಬರ ಸಮಸ್ಯೆ ಮಾತ್ರವಲ್ಲ. ಅದು ಎಲ್ಲರ ಸಮಸ್ಯೆ. ಹಾಗಾಗಿ ಇಲ್ಲಿ ಸಾಮೂಹಿಕವಾದ ನಿರ್ಧಾರಗಳು ಅಗತ್ಯವಿದೆ.  ಹವಾಮಾನ ಬದಲಾವಣೆಗಳ ಕಾರಣದಿಂದ ಕೃಷಿಯಲ್ಲಿ ರೋಗಗಳ ಮಟ್ಟವೂ ಏರಿಕೆಯಾಗುತ್ತಿದೆ. ಹೀಗಾಗಿ ಹಲವು ರೋಗಗಳು ನಿಯಂತ್ರಣಕ್ಕೂ ಬಾರದೇ ವಿಪರೀತ ಪ್ರಮಾಣದಲ್ಲಿ ವಿಷ, ರಾಸಾಯನಿಕ ಬಳಕೆ ಅನಿವಾರ್ಯವಾಗುತ್ತದೆ. ಇದು ಇನ್ನಷ್ಟು ಪರಿಸರ ಮಾಲಿನ್ಯ, ಹವಾಮಾನ ಉಷ್ಣತೆ ಏರಿಕೆಗೆ ಕಾರಣವಾಗುತ್ತದೆ. ಇದರ ನಿಯಂತ್ರಣಕ್ಕಾಗಿ ಯಾವುದೇ ಕೃಷಿ ರೋಗಗಳಲ್ಲಿ ಆರಂಭಿಕ ರೋಗದ ಮುನ್ಸೂಚನೆ ಮತ್ತು ಸ್ಥಳೀಯ ಹವಾಮಾನ ಮುನ್ಸೂಚನೆಯು ನಿಖರವಾದ ಮಾಹಿತಿಯ ಜೊತೆಗೆ ರೋಗ ತಡೆಗಟ್ಟಲು ಸಿದ್ಧವಾಗಬೇಕು. ಇದರಿಂದ ಕೃಷಿ ಉತ್ಪಾದಕತೆ ಮತ್ತು ಲಾಭದಾಯಕತೆಯನ್ನು  ಹೆಚ್ಚಿಸಲು ಸಲಹೆ ನೀಡುತ್ತದೆ ವರದಿಗಳು.

Advertisement

 

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

ಇದನ್ನೂ ಓದಿ

ಜೂನ್‌ ತಿಂಗಳಿನಲ್ಲಿ ಈ ರಾಶಿಯವರಿಗೆ ಅದೃಷ್ಟವೆಲ್ಲಾ ನಿಮ್ಮದೇ..!
May 31, 2025
6:33 AM
by: ದ ರೂರಲ್ ಮಿರರ್.ಕಾಂ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪರಾಧ ನಿಯಂತ್ರಣ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಮೊದಲ ಆದ್ಯತೆ-ಡಾ.ಅರುಣ್
May 31, 2025
12:05 AM
by: The Rural Mirror ಸುದ್ದಿಜಾಲ
ಜೂನ್ 2ರ ವರೆಗೆ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ | ಹವಾಮಾನ ಇಲಾಖೆ ಎಚ್ಚರಿಕೆ
May 30, 2025
11:52 PM
by: The Rural Mirror ಸುದ್ದಿಜಾಲ
ವಿಕಸಿತ ಕೃಷಿ ಸಂಕಲ್ಪ ಅಭಿಯಾನ |  ರೈತರ ಆದಾಯ ದ್ವಿಗುಣ ಉದ್ದೇಶದಿಂದ ಯೋಜನೆ
May 30, 2025
11:14 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group