Advertisement
The Rural Mirror ವಾರದ ವಿಶೇಷ

ಹವಾಮಾನ ಬದಲಾವಣೆಯು ಭಾರತದ ಆರ್ಥಿಕತೆಗೆ ಅಪಾಯವನ್ನು ಉಂಟುಮಾಡುತ್ತಿದೆ

Share

ಹವಾಮಾನ ಬದಲಾವಣೆಯು ಭಾರತದ ಆರ್ಥಿಕತೆಯ ಮೇಲೆ ಪರಿಣಾಮವನ್ನುಂಟು ಮಾಡುತ್ತಿದೆ   ಎಂದು ಇತ್ತೀಚೆಗಿನ ಅಧ್ಯಯನ ವರದಿ ಹೇಳಿದೆ.ಹೀಗಾಗಿ ಈಗ ಭಾರತದ ಪ್ರಾಕೃತಿಕ ಸ್ಥಿತಿಗತಿಗಳ ಮೇಲೆ ಹೆಚ್ಚು ಗಮನಹರಿಸುವ ಕೆಲಸ ನಡೆಯುತ್ತಿದೆ.

ವಿಶ್ವ ಆರ್ಥಿಕ ವೇದಿಕೆಯ ಇತ್ತೀಚಿನ ಅಧ್ಯಯನದ ಪ್ರಕಾರ ಹವಾಮಾನ ಬದಲಾವಣೆಯು ಭಾರತದಲ್ಲಿ ಪ್ರಕೃತಿ ಅವಲಂಬಿತ ಆರ್ಥಿಕತೆಗೆ ಅಪಾಯವನ್ನುಂಟುಮಾಡುತ್ತಿದೆ ಎಂದು ಹೇಳಿದೆ. ಅರಣ್ಯ, ಕೃಷಿ, ಮೀನುಗಾರಿಕೆ ಮತ್ತು ಜಲಚರ ಸಾಕಣೆ, ಆಹಾರ, ಪಾನೀಯಗಳು ಮತ್ತು  ನೀರಿನ ಉಪಯುಕ್ತತೆಗಳು ಮತ್ತು ನಿರ್ಮಾಣ ಸೇರಿದಂತೆ ಕೈಗಾರಿಕೆಗಳಿಗೆ ಭಾರತವು ಪ್ರಕೃತಿಯ ಮೇಲೆ ಹೆಚ್ಚು ಅವಲಂಬಿತವಾಗಿದೆ.

ಭಾರೀ ಮಳೆ ಮತ್ತು ವಿಪರೀತ ಪ್ರವಾಹವು ಭಾರತದಲ್ಲಿ ಈಗ ಪ್ರತಿ ವರ್ಷ ದೇಶದ ಮೇಲೆ ಪರಿಣಾಮ ಬೀರುತ್ತದೆ, ಸಾವಿರಾರು ಜನರಿಗೆ ಸಂಕಷ್ಟ ಉಂಟು ಮಾಡುತ್ತಿದೆ, ಕೆಲವು ಸಂದರ್ಭ ಸ್ಥಳಾಂತರಕ್ಕೂ ಕಾರಣವಾಗುತ್ತಿದೆ. ಜನರ ಜೀವನೋಪಾಯದ ಮೇಲೆ ಪರಿಣಾಮವನ್ನೂ ಉಂಟು ಮಾಡುತ್ತಿದೆ.

ದೇಶದ ಹಲವು ಕಡೆ ಹಿರಿಯ ಕೃಷಿಕರನ್ನು ಮಾತನಾಡಿಸಿದ ಅಧ್ಯಯನ ತಂಡವು ಅವರೆಲ್ಲರ ಅಭಿಪ್ರಾಯದ ಪ್ರಕಾರ,  ಈಚೆಗೆ ಕಡಿಮೆ ಸಮಯದಲ್ಲಿ ಹೆಚ್ಚು ಮಳೆಯಾಗುತ್ತಿದೆ ಅಥವಾ ಮಳೆಯೇ ಇಲ್ಲವಾಗುತ್ತಿದೆ. ಉತ್ತಮ ಮುಂಗಾರು ಮುನ್ಸೂಚನೆಯ ನಂತರ ಕೃಷಿಯಲ್ಲಿ ತೊಡಗಿದ ಬಳಿಕ ನಷ್ಟವಾಗಿದೆ. ಕಾರಣ, ಕೇವಲ ಎರಡು ದಿನ ಮಾತ್ರಾ ಮಳೆಯಾಯಿತು, ನಂತರ ನಿಂತುಹೋಯಿತು. ಆದ್ದರಿಂದ ಬೆಳೆಗಳು ವಿಫಲವಾಗುತ್ತದೆ. ಹಾಗೆಂದು ನಂತರ ಭಾರೀ ಮಳೆಯಾದಾಗ ಕೃಷಿ ಹಾನಿಯಾಗುತ್ತದೆ, ಫಲ ಬಿಡುವ ಸಮಯದಲ್ಲಿ ಅಗತ್ಯಕ್ಕಿಂತ ಹೆಚ್ಚು ಮಳೆಯಾದಾಗ ಕೊಳೆಯುತ್ತದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ದೇಶದ ಸುಮಾರು 84 ಶೇಕಡಾ ಕಡೆ ತೀವ್ರವಾದ ಬಿಸಿಯ ವಾತಾವರಣ ಕೃಷಿ ಹಾಗೂ ಪರಿಸರದ ಮೇಲೆ ಪರಿಣಾಮ ಬೀರಿತ್ತು. ನವದೆಹಲಿಯಲ್ಲಿ ಈ ವರ್ಷ ತಾಪಮಾನವು 50 ಡಿಗ್ರಿ ಸೆಲ್ಸಿಯಸ್ ತಲುಪಿದ್ದರೆ, ಪರಿಸರ, ಅರಣ್ಯ ಇರುವ ಕಡೆಯೂ ಈ ಬಾರಿ 40 ಡಿಗ್ರಿ ದಾಟಿತ್ತು, ಇದು ಕೂಡಾ ಕೃಷಿಯ ಮೇಲೆ ಹಾಗೂ ಕೃಷಿ ಅವಲಂಬಿತ ಉದ್ದಿಮೆಗಳ ಮೇಲೆ ಪರಿಣಾಮ ಬೀರಿತ್ತು.

ಕೈಗಾರಿಕೆಗಳ ಮೇಲೆ ಹವಾಮಾನ ಬದಲಾವಣೆ ಮತ್ತು ವಿಪರೀತ ಹವಾಮಾನದ ಪರಿಣಾಮಗಳು ದೇಶದ ರಾಷ್ಟ್ರೀಯ ಆದಾಯದ 10 ಶೇಕಡಾದಷ್ಟು ಇರಬಹುದು. ಆದರೆ ಇದು ಗಂಭೀರವಾದ ಪರಿಣಾಮಗಳನ್ನು ಉಂಟು ಮಾಡುತ್ತಿದೆ. ಕೆಲವೇ ಸಮಯದಲ್ಲಿ ಇದು ಅನೇಕ ಕೃಷಿ, ಕೃಷಿ ಉದ್ದಿಮೆಗಳನ್ನು ಸಂಕಷ್ಟಕ್ಕೆ ತಳ್ಳಬಹುದಾಗಿದೆ ಎನ್ನುವುದು ಅಧ್ಯಯನ ವರದಿಯ ಫಲಿತಾಂಶವಾಗಿದೆ.

ಭಾರತದಲ್ಲಿ  ಹವಾಮಾನ ನಿಯಂತ್ರಣದ ಮೇಲೆ ಕೈಗೊಳ್ಳುವ ಪ್ರಯತ್ನಗಳು ಸಾಕಾಗುತ್ತಿಲ್ಲ, ಭಾರತದ ಪ್ರಯತ್ನಗಳನ್ನು ‘ ಸಾಕಾಗುವುದಿಲ್ಲ’ ಎಂದು ಅಧ್ಯಯನ ವರದಿ ಹೇಳಿದೆ.

ಈ ಬಾರಿ ದೇಶದ ಶೇ. 84 ರಷ್ಟು ಭಾರತದ ಜಿಲ್ಲೆಗಳು ಹೀಟ್‌ ವೇವ್‌ ಗೆ ಒಳಗಾಗಿವೆ. ಶೇ 70 ರಷ್ಟು ಜಿಲ್ಲೆಗಳು ಮುಂಗಾರು  ಸಮಯದಲ್ಲಿ ವಿಪರೀತ ಮಳೆಗೂ ತುತ್ತಾಗಿವೆ. ಅಲ್ಲದೆ, ಗುಜರಾತ್, ರಾಜಸ್ತಾನ, ಉತ್ತರಾಖಂಡ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ, ಮೇಘಾಲಯ ಮತ್ತು ಮಣಿಪುರವು ವಿಪರೀತ ತಾಪಮಾನ ಮತ್ತು ವಿಪರೀತ ಮಳೆಯ ಪರಿಣಾಮಗಳನ್ನು ಎದುರಿಸುತ್ತಿದೆ.

1993 ರಿಂದ 2022 ರ ಅವಧಿಯಲ್ಲಿ ದೇಶದ ವಿವಿಧ ಪ್ರದೇಶಗಳಿಂದ ತಾಪಮಾನ ಮತ್ತು ಮಳೆಯ ದತ್ತಾಂಶದ ಮೌಲ್ಯಮಾಪನವನ್ನು ಆಧರಿಸಿ ಐಪಿಇ ಗ್ಲೋಬಲ್ ಮತ್ತು ಇಎಸ್‌ಆರ್‌ಐ ಇಂಡಿಯಾ ಜಂಟಿಯಾಗಿ ಮಾನ್ಸೂನ್ಸ್ ಇನ್ ಎ ವಾರ್ಮಿಂಗ್ ಕ್ಲೈಮೇಟ್ ಅನ್ನು ನಿರ್ವಹಿಸುವ  ವರದಿಯನ್ನು ತಯಾರಿಸಿದೆ. ಅಧ್ಯಯನದ ಪ್ರಕಾರ, ಈ ದಶಕಗಳಲ್ಲಿ, ತೀವ್ರತರವಾದ ತಾಪಮಾನ ಮತ್ತು ಮಳೆಯ ಘಟನೆಗಳಿಂದ ಅನಿಶ್ಚಿತತೆಯ ಹೆಚ್ಚಳ ಕಂಡುಬಂದಿದೆ.

ಹೀಗಾಗಿ ಭಾರತದಲ್ಲಿ ಹವಾಮಾನ ಬದಲಾವಣೆಯು ಈಗ ಗಂಭೀರವಾದ ಪರಿಣಾಮ ಉಂಟು ಮಾಡುತ್ತಿದೆ. ಇದಕ್ಕಾಗಿ ಈಗ ಹವಾಮಾನ ಬದಲಾವಣೆ ನಿಯಂತ್ರಣದ ಬಗ್ಗೆ ಚರ್ಚೆಗಳು ಆರಂಭವಾಗುತ್ತಿದೆ. ಪರಿಸರ, ಅರಣ್ಯ ಇತ್ಯಾದಿಗಳ ಕಡೆಗೆ ಚಿಂತನೆಗಳು ಹೆಚ್ಚಾಗಿದೆ.

According to a recent study report, climate change is impacting India’s economy. As a result, there is an increased focus on India’s natural conditions and efforts are being made to address this issue.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

2050 ರ ವೇಳೆಗೆ ಭೂಕುಸಿತದ ಅಪಾಯ ಮತ್ತಷ್ಟು ಹೆಚ್ಚಳ : ಮಳೆ ತೀವ್ರತೆ, ನಗರೀಕರಣವೇ ಪ್ರಮುಖ ಕಾರಣ – ಅಧ್ಯಯನ

2050ರ ವೇಳೆಗೆ ಮಳೆಯ ತೀವ್ರತೆ ಮತ್ತು ನಗರೀಕರಣದ ಪರಿಣಾಮವಾಗಿ ಭಾರತದ ಹಲವು ಗುಡ್ಡ…

19 hours ago

ಅಕಾಲದ ಹಸಿವು, ಅಸಮಯದ ನಿದ್ದೆ ದೇಹದ ಯಂತ್ರ ಕೆಟ್ಟಿರುವ ಸಂಕೇತ : ರಾಘವೇಶ್ವರ ಶ್ರೀ

ಅಕಾಲದ ಹಸಿವು ಮತ್ತು ಅಸಮಯದ ನಿದ್ದೆ ದೇಹದ ಯಂತ್ರದಲ್ಲಿ ಸಮಸ್ಯೆಯ ಸಂಕೇತ ಎಂದು…

20 hours ago

ಮತ್ತೆ ಚುರುಕುಗೊಂಡ ಮಳೆ | ಸುಳ್ಯ ಮಲೆನಾಡು ಭಾಗದಲ್ಲಿ ಬೆಳಗ್ಗಿನಿಂದ ಧಾರಾಕಾರ ಮಳೆ

ಸುಳ್ಯ ತಾಲೂಕಿನ ಮಲೆನಾಡು ಭಾಗದಲ್ಲಿ ಎರಡು ದಿನಗಳ ವಿರಾಮದ ಬಳಿಕ ಮತ್ತೆ ಭಾರೀ…

20 hours ago

ದೇಶದ ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕದ ಮೊದಲು – 75.47% ಉತ್ಪಾದನೆ, 71.56% ವಿಸ್ತೀರ್ಣದಲ್ಲಿ ಅಡಿಕೆ ಬೆಳೆ

ದೇಶದ ಅಡಿಕೆ ಉತ್ಪಾದನೆ ಹಾಗೂ ಬೆಳೆ ವಿಸ್ತೀರ್ಣದಲ್ಲಿ ಕರ್ನಾಟಕವೇ ಅಗ್ರಸ್ಥಾನದಲ್ಲಿದೆ ಎಂದು ಕೇಂದ್ರ…

1 day ago

ಕಳಪೆ ವಿದೇಶಿ ಅಡಿಕೆ ಆಮದು ನಿಯಂತ್ರಿಸಿ – ಕೋಟ ಶ್ರೀನಿವಾಸ ಪೂಜಾರಿ ಒತ್ತಾಯ

ವಿದೇಶದಿಂದ ಕಳಪೆ ಅಡಿಕೆ ಆಮದು ನಿಯಂತ್ರಿಸಿ ದೇಶೀಯ ಅಡಿಕೆ ಬೆಳೆಗಾರರನ್ನು ರಕ್ಷಿಸುವಂತೆ ಸಂಸದ…

1 day ago

ಹವಾಮಾನ ವರದಿ | 04-08-2026 | ರಾಜ್ಯದಲ್ಲಿ ಆಗಸ್ಟ್‌ 12 ರವರೆಗೆ ಮಳೆ ಸಾಧ್ಯತೆ – ಮುಂಗಾರು ದುರ್ಬಲವಾಗುವ ಲಕ್ಷಣ

ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್‌ 12ರವರೆಗೆ ಬಿಟ್ಟುಬಿಟ್ಟು ಮಳೆಯಾಗುವ ಸಾಧ್ಯತೆ ಇದೆ. ಜಪಾನ್ ಸಮೀಪದ…

2 days ago